ರಾಜ್ಯಸುದ್ದಿ
ಕೃಷ್ಣರಾಜಪೇಟೆ ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿ.ಗಮನಿಸಿದ ಭರತ್ ಪಕ್ಷಿಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದಬ್ಬೇಘಟ ಗ್ರಾಮದ ಭರತ್ ಎಂಬುವರ ತೋಟದಲ್ಲಿ ಕಾಯಿಲೆ ಇಂದ ಬಳಗುತ್ತಿದ್ದ ನವಿಲು ಪಕ್ಷಿಯನ್ನು ಗಮನಿಸಿದ ಭರತ್ ಪಕ್ಷಯನ್ನು ರಕ್ಷಿಸಿ ಪಶು ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ನೀಡಿಸಿ ಆರೈಕೆ ಮಾಡಿದರು.ನಂತರ ಸ್ಥಳಕ್ಕೆ ಬೇಟಿ ನೀಡಿದ ಅರಣ್ಯ ಅಧಿಕಾರಿಗಳು ಕಾಯಿಲೆಯಿಂದ ಬಳಗುತ್ತಿರು ನವಿಲು ಪಕ್ಷಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ಚಿಕಿತ್ಸೆ ನೀಡಿಸಲು ಕೃಷ್ಣರಾಜಪೇಟೆ ತಾಲ್ಲೂಕಿನ ಅರಣ್ಯ ಇಲಾಖೆ ಕೊಂಡೈದರು.
ಸ್ಥಳದಲ್ಲಿ ಕಿಕ್ಕೇರಿ ವೈದ್ಯರಾದ ರಾಮಕೃಷ್ಣೇಗೌಡ. ಅರಣ್ಯ ಇಲಾಖೆಯ ಶಿವುಕುಮಾರ್, ರೈತ ಭರತ್ ಎಂ ಮಾಸ್ತಿ. ಮಂಜು ಮತ್ತಿತ್ತರು ಇದ್ದರು.
ಮಹಾನ್ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಅಂಗವಾಗಿ ಸಿಪಿಐ(ಎಂ) ವತಿಯಿಂದ ದುಡಿಯುವ ವರ್ಗ ಮತ್ತು ಮಾಕ್ಸ್೯ ಸಿದ್ದಾಂತ ಕುರಿತು ವಿಚಾರ ಸಂಕಿರಣ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಕ್ರಾಂತಿ ಕಾರಿ ಯುಗಪುರುಷ ಹಾಗೂ ಕಾಲ್ ೯ಮಾಕ್ಸ್ ೯ ರವರ ದ್ವಿಶತಮಾನೋತ್ಸವ ಹಾಗೂ ಅವರ ಮೇರುಕೃತಿ ಬಂಡವಾಳ ದ 150 ನೇ ವರ್ಷಾಚರಣೆ ಸಂಕಿರಣವನ್ನು ಸಿಪಿಐ(ಎಂ) ರಾಜ್ಯ ಸಂಚಾಲಕ ಉಮೇಶ ಚಾಲನೆ ನೀಡಿ ಮಾತನಾಡಿ, ಮಾಕ್ಸ್ ೯ವಾದ ವನ್ನು ವಿದೇಶ ವಾದ ಎಂದು ಅಪಪ್ರಚಾರ ಮಾಡಿರುವುದನ್ನು ಖಂಡಿಸಿದ ಅವರು ಮಾಕ್ಸ್೯ರವರು ಸರಿ ತಪ್ಪು ಗಳ ಬಗ್ಗೆ ವಾದ ಮಾಡಿದರು ಅವರು ಕ್ರಾಂತಿಕಾರಿ ಯುಗಪುರುಷ. ಜಗತ್ತಿನಲ್ಲಿರುವವರು ಎಲ್ಲರೂ ಒಂದಾಗಬೇಕು ಎಂದು ಸಾರಿದರು ಎಂದರು .
ಕಾರ್ಯಕ್ರಮ ದಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾದ್ಯಕ್ಷೆ ದೇವಿ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಎಲ್ ಭರತ್ ರಾಜು, ಸುಶೀಲ, ಸುನೀತಾ .ತಿಮ್ಮೇಗೌಡ. ಮಂಜುಳ ಸೇರಿದಂತೆ ಮತ್ತಿತ್ತರರು ಇದ್ದರು.
ದುಷ್ಕರ್ಮಿಗಳ ಗುಂಪುಯೊಂದು ಯಾರು ಇಲ್ಲದ ಒಂಟಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 4 ಸಾವಿರ ನಗದು ಸೇರಿದಂತೆ 2 ಲಕ್ಷ ರೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಮಳವಳ್ಳಿ ಪಟ್ಟಣದ ಎನ್.ಇ ಎಸ್ ಬಡಾವಣೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್.ಇ.ಎಸ್ ಬಡಾವಣೆಯ ಶೆಟ್ಟಿಹಳ್ಳಿ ರಸ್ತೆಯಲ್ಲಿರುವ ಕಂದಾಯ ಇಲಾಖೆಯ ಮಹೇಶ ಎಂಬುವವರ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಮನೆಯ ಮುಂದಿನ ಬಾಗಿಲು ಡೋರ್ ಲ್ಯಾಕ್ ಮುರಿದು, ಮನೆಯೊಳಗಿನ ಬೀರುನಲ್ಲಿದ್ದ 30 ಗ್ರಾಂ ಚೈನ್, 15 ಗ್ರಾ 2 ಉಂಗುರ, 6 ಗ್ರಾಂ ಡಾಲರ್ , ಅರ್ಥ ಕೆಜಿ ಬೆಳ್ಳಿ ಪದಾರ್ಥಗಳು ಹಾಗೂ ಸಿಲೆಂಡರ್ ಸಹ ಕಳ್ಳತನವಾಗಿದ್ದು, ಸುಮಾರು ರಾತ್ರಿ 12 ರಿಂದ 1 ವೇಳೆಯಲ್ಲಿ ಕಳ್ಳತನ ವಾಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳ್ಳಚ್ಚು ತಜ್ಞರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನವು ಮನೆಯಿಂದ ಮಂಡ್ಯ ರಸ್ತೆಯಲ್ಲಿರುವ ಕೆಎಸ್ ಆರ್ ಟಿ ಸಿ ಚಾಲಕ ತರಬೇತಿ ಕಚೇರಿ ಬಳಿಯವರೆಗೂ ಹೋಗಿದ್ದು , ಬೆರಳ್ಳಚ್ಚು ತಜ್ಞರು ಸಹ ಬೆರಳುಗುರುತು ಸಂಗ್ರಹ ಮಾಡಿದ್ದಾರೆ.
ಈ ಸಂಬಂದ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿ.ಎಲ್ ದೇವರಾಜ್ ಗೆ ಶಿಷ್ಟಚಾರ ಪಾಲಿಸದ ಹಿನ್ನಲೆ ಶಿಕ್ಷಣ ಇಲಾಖೆಯ ಬಿಇಒಗೆ ನೀವು ಬಿಇಒ ನೇ ಅಲ್ಲ ಎಂದು ಜಿಪಂ ಸದಸ್ಯ ದೇವರಾಜು ಕಿಡಿಕಾರಿದರು.
ಸುದ್ದಿಜಾಲ ಕೆ.ಆರ್.ಪೇಟೆ :ಪಟ್ಟಣದ ಶತಮಾನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬುಧವಾರ ೧೦:೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆ ಹಮ್ಮಿಕೊಂಡು ಶಾಸಕ ನಾರಾಯಣಗೌಡರನ್ನು ಉದ್ಘಾಟಕರಾಗಿ, ಜಿಪಂ ಸದಸ್ಯರು ಸೇರಿದಂತೆ ಶಿಷ್ಟಚಾರದ ಪ್ರಕಾರ ಹಲವು ಗಣ್ಯರನ್ನು ಅಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿ.ಪಂ ಸದಸ್ಯ ದೇವರಾಜು ಸರಿಯಾದ ಸಮಯಕ್ಕೆ ಆಗಮಿಸಿದ್ದರು. ಶಾಸಕ ನಾರಾಯಣಗೌಡ ಬೇರೆ ಕಾರ್ಯಕ್ರಮಗಳ ಹಿನ್ನಲೆ ಸ್ವಲ್ಪ ತಡವಾಗಿ ಬಂದಿದ್ದರಿಂದ ಸ್ವಲ್ಪ ತಡವಾಗಿ ಆಗಮಿಸಿದ್ದರು. ಇದರಿಂದ ದೇವರಾಜು ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಕಾದಿದ್ದರು. ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಿರೂಪಣೆ ಮಾಡುತ್ತಿದ್ದ ಶಿಕ್ಷಣ ಸಂಯೋಜಕ ಚಂದ್ರಶೇಖರ್ ಶಾಸಕರನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಂತೆ ಕೋರಿದರು. ಶಾಸಕರು ಮಾತನಾಡಿ ಬೇರೆ ಕಾರ್ಯಕ್ರಮವಿದೆ ಎಂದು ವೇದಿಕೆಯಿಂದ ತೆರಳಿದರು. ಶಾಸಕರ ಜತೆಯಲ್ಲಿ ವೇದಿಕೆಯಲ್ಲಿದ್ದ ಹಲವರು ಶಾಸಕರೊಂದಿಗೆ ವೇದಿಕೆಯಿಂದ ನಿರ್ಗಮಿಸಿದರು. ವೇದಿಕೆ ಖಾಲಿ ಆದಂತೆ ಕಂಡ ಪೋಷಕರು ಎದ್ದು ಹೋಗಲು ಆರಂಭಿಸಿದರು. ಇದರಿಂದ ಕುಪಿತಗೊಂಡ ಜಿಪಂ ಸದಸ್ಯ ದೇವರಾಜು ವೇದಿಕೆಯಿಂದ ಕೋಪದಿಂದ ನಿರ್ಗಮಿಸಿದರು. ಬಿಇಒ ರೇವಣ್ಣ ಅವರನ್ನು ತಡಗಟ್ಟಿ ಸಮಾಧಾನ ಮಾಡಲು ಪ್ರಯತ್ನಸಿದರು. ಕೆಲ ಸಮಯ ಇವರಿಬ್ಬರ ನಡುವೆ ಮಾತಿನ ಚಕಾಮುಕಿ ನಡೆಯಿತು. ಬಿಇಒ ಅವರನ್ನು ನೀವು ನನ್ನಾ ಪ್ರಕಾರ ಬಿಇಒ ನೇ ಅಲ್ಲಾ. ಒಂದು ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬುದು ಗೊತ್ತಿಲ್ಲ. ಕಾರ್ಯಕ್ರಮಕ್ಕೆ ಕರಸಿ ಗಂಟಾನುಗಂಟೆ ಕಾಯಿಸಿ ಸುಮ್ನೇ ಕಳಿಸೊದಾದ್ರೆ. ನಮ್ಮನ್ನ ಏಕೆ ಕರೆಯಬೇಕು ಎಂದು ಪ್ರಶ್ನಿಸಿದರು. ಇದು ನಿರೂಪಕರಿಂದ ತಪ್ಪಾಗಿದೆ ಎಂದು ಹೇಳಿದಾಗ. ದೇವರಾಜು ನಿರೂಪಕ ಶಿಕ್ಷಣ ಸಂಯೋಜಕ ಚಂದ್ರಶೇಖರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು. ಇದೊಂದು ಬಾರಿಯಲ್ಲ. ಹಲವು ಬಾರಿ ಚಂದ್ರಶೇಖರ್ ಹೀಗೆ ಮಾಡಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡರು. ಕೆಲ ಸಮಯದ ಬಳಿಕ ಅವರ ಮನವೊಲಿಸಿ ವೇದಿಕೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರು. ಕಡೆಗೆ ಮಾತನಾಡಿ ಮಕ್ಕಳಿಗೆ ಶುಭಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು.
ತಾಲೂಕಿನ ಅಘಲಯ ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬರದ ಕಾರಣ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ರದ್ದು ಪಡಿಸಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾದ ಹಿನ್ನಲೆ ಸಭೆಯಲ್ಲಿದ್ದ ಗ್ರಾಮಸ್ಥರು ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿದರು.ಅಲ್ಲದೆ ಸಭೆಗೆ ಪಂಚಾಯಿತಿ ಅಧ್ಯಕ್ಷೆ ಭಾರತಿಶ್ರೀಧರ್ ಕೂಡ ಬರದಿರುವುದು ಗ್ರಾಮಸ್ಥರು ಇನ್ನಷ್ಟು ಕೋಪಗೊಳ್ಳಲು ಕಾರಣವಾಯಿತು. ಬಳಿಕ ಮಾತನಾಡಿದ ಗ್ರಾಮದ ಯುವಮುಖಂಡ ಲಕ್ಷ್ಮೀಶ್, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಚರಂಡಿ ವ್ಯವಸ್ಥೆ ಸರಿಯಿಲ್ಲ. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಗ್ರಾಮದಲ್ಲಿ ಕಳೆದ ಮೂರು ವರ್ಷದಿಂದ ಗ್ರಾಮದೊಳಗೆ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಸರ್ಕಾರದಿಂದ ಬಂದಿರುವ ಹಣ ಮಾತ್ರ ಖರ್ಚುಗಿದೆ. ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಬೀದಿ ದೀಪಗಳು ಸುಟ್ಟು ಹೋದರೆ ಬದಲಾವಣೆ ಮಾಡಲ್ಲ. ಲಕ್ಷಾಂತರ ರೂ ಖರ್ಚು ಮಾಡಿ ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ಖರೀದಿ ಮಾಡುತ್ತಿದ್ದಾರೆ. ದೀಪ ಬದಲಾವಣೆ ಆದ ಮೂರ್ನಾಲ್ಕು ದಿನದಲ್ಲಿ ದೀಪಗಳು ಮತ್ತೇ ಸುಟ್ಟು ಹೋಗುತ್ತವೆ. ಸರಿಯಾಗಿ ದೀಪಗಳ ಬದಲಾವಣೆ ಮಾಡದೆ. ರಾತ್ರಿ ಸಮಯ ಜನರು ಹೊರ ಬರಲು ಹೆದರುತ್ತಿದ್ದಾರೆ ಎಂದು ದೂರಿದರು.
ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್ ಸಭೆಗೆ ನೋಡಲ್ ಅಧಿಕಾರಿಯಾಗಿ ಬಂದಿದ್ದರು. ಸಭೆ ರದ್ದಾದರಿಂದ ಅವರು ಕೂಡ ನಿರ್ಗಮಿಸಿದರು. ಪಂಚಾಯಿತಿ ಸದಸ್ಯರು ಕೂಡ ಸಭೆಯಲ್ಲಾದ ಗದ್ದಲಗಳಿಂದ ನಿರ್ಗಮಿಸಿದರು. ಸಭೆಯಲ್ಲಿ ಕಾಲಭೈರವೇಶ್ವರ ಯುವಕರ ಸಂಘದ ಸದಸ್ಯರು, ಶಿವಲಿಂಗೇಗೌಡ, ವಿಜಯ್, ಗಣೇಶ್, ವಿಶ್ವನಾಥ್, ಸೇರಿದಂತೆ ಹಲವರಿದ್ದರು.
ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ಸಾಲಭಾದೆ ತಾಳಲಾರದೆ ರೈತ ಕುಟುಂಬ ಆತ್ಮಹತ್ಯೆಗೆ ಶರಣು.ಗ್ರಾಮದ ನಂದೀಶ್ ೩೭ ವರ್ಷ ಮತ್ತು ಹೆಂಡತಿ ಕೋಮಲ ೩೩ ವರ್ಷ. ಮಗ ಮನೋಜ್ ೧೩ ಮಗಳು ಚಂದನ ೧೫ ವರ್ಷ. ಮೂಲತ ಗ್ರಾಮದ ಹೊರಭಾಗದ ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದು, ರಾತ್ರಿ ನಂದೀಶ್ ಮಾಂಸಾಹಾರದಲ್ಲಿ ವಿಷ ಬೆರಸಿ ಎಲ್ಲಾರೂ ಸೇವಿಸಿದಾರೆ ಎಂದು ತಿಳಿದು ಬಂದಿದೆ.ಆಹಾರ ಸೇವಿಸಿದ ಮೇಲೆ ಹೊಟ್ಟೆ ನೋವು ತಾಳಲಾರದೆ ಮನೆಯಿಂದ ಆಚೆ ಬಂದು ನರಳಡಿ ಜೀವ ಬಿಟ್ಟಿದಾರೆ ಎಂದು ತಿಳಿದು ಬಂದಿದೆ.
ನಂದೀಶ್ ಲೇವಾದೇವಿದಾರರ ಬಳಿ ಸೇರಿ ಇತರ ಖಾಸಗಿ ಕಂಪನಿಯಲ್ಲಿ ಸಾಲ ಮಾಡಿ ಹಿಂತಿರುಗಿಸದ ಹಿನ್ನೇಲೆ ಆತ್ಮಹತ್ಯೆ ಮಾಡಿಕೊಂಡಿದಾರೆ ಎಂದು ಹೇಳಲಾಗುತ್ತಿದೆ.ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸಾಲಗಾರರಿಂದ ಮುಕ್ತಿ ದೊರಕಿಸಿಕೊಡುವಂತೆ ನಂದೀಶ್ ಮನವಿ ಮಾಡಿದ್ರು.ಬಳಿಕ ಸಿಎಂ ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ನಂತರ ಡಿಸಿ ತಹಸೀಲ್ದಾರ್ ಗೆ ಸೂಕ್ತ ಗಮನಹರಿಸುವಂತೆ ನಿರ್ದೇಶನ ನೀಡಿದ್ದರು. ನಂದೀಶ್ ೧ ಎಕರೆ ಮಾರಾಟ ಮಾಡಿ ಅಲ್ಪಸ್ವಲ್ಪ ಸಾಲ ತೀರಿಸಿದ್ದರು.ಉಳಿದ ಸಾಲಕ್ಕಾಗಿ ಲೇವಾದೇವಿದಾರರಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಇಷ್ಟಾದರೂ ಪರಿಹಾರ ಸಿಗದ ಕಾರಣ ನಂದೀಶ್ ಕುಟುಂಬ ಊರಿನ ಹೊರಗಡೆ ಮಾಂಸಾಹಾರದಲ್ಲಿ ವಿಷ ಮಿಶ್ರಣ ಮಾಡಿ ಸೇವಿಸಿ ಆತ್ಮಹತ್ಯೆಗೆ ಶರಣು. ಗ್ರಾಮದಲ್ಲಿ ಆವರಿಸಿದ ಸೂತಕದ ಛಾಯೆ.ಇನ್ನು ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ವೈದ್ಯ ಅಯುತ್ತು ನಕಲಿ ಶಿಕ್ಷಕ ಅಯುತ್ತು ಇವಾಗ ನಕಲಿ ಲಾಯರ್ ಕಥೆ! ನೀವು ನಕಲು ದಾಖಲೆ ಸೃಷ್ಟಿ ಮಾಡೊ ವಕೀಲರನ್ನು ನೊಡಿರತ್ತಿರಾ ಅದರೆ ಇಲ್ಲಿ ಬರಿ ದಾಖಲೆಗಳು ಮಾತ್ರವಲ್ಲ ವಕೀಲ ನೇ ನಕಲಿ !!!!
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ವಕೀಲರೊಬ್ಬರ ಕಥೆ ಇದು ಮಡವಿನಕೋಡಿ ಗ್ರಾಮದ ಗ್ರಾ.ಪಂ.ನಿವೃತ್ತ ಕಾರ್ಯದರ್ಶಿ ಚಂದ್ರಶೇಖರ್ ಮಗ ಎಂ.ಸಿ. ಪ್ರವೀಣ್ ಕುಮಾರ್ ನಕಲಿ ವಕೀಲ ಅಂತಿಮ ವರ್ಷದ ಪರೀಕ್ಷೆ ಬರೆಯದೆ ಅಂಕಪಟ್ಟಿ ಪಡೆದಿರುವ ಆರೋಪ ಮೈಸೂರು ವಿವಿಯಿಂದ ನಕಲಿ ಪದವಿ ದಾಖಲೆ ವಿತರಣೆ ಮಾಡಲಾಗಿದೆ. ನಕಲಿ ಪದವಿ ಪಡೆದು ತಾಲೂಕಿನ ನ್ಯಾಯಾಲಯದಲ್ಲಿ ವಕೀಲಗಿರಿ ನಡೆಸುತ್ತಿದ್ದರು.ಇವರ ಸಹದ್ಯೋಗಿ ವಕೀಲರಗಳೇ ನಕಲಿ ಪದವಿ ಬಯಲಿಗೆಳೆದಿದ್ದಾರೆ. ಇವರು ೧೯೯೮ ರಲ್ಲಿ ಕಾನೂನು ಪದವಿಗೆ ಸೇರ್ಪಡೆಗೊಂಡಿದ್ದಾರೆ. ನಂತರದಲ್ಲಿ ೨೦೧೫ ರಲ್ಲಿ ಕಾನೂನು ಪದವಿ ಮುಗಿದಿದೆ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ರಾಜೇಶ್ ಆರೋಪಿಸಿದ್ದಾರೆ.ಇವರ ಕಾನೂನು ಪದವಿ ದಾಖಲೆಗಳನ್ನೂ ರಾಜೇಶ್ ನೇತೃತ್ವದಲ್ಲಿ ಹಲವು ವಕೀಲರು ಕಾಲೇಜು ಮತ್ತು ವಿಶ್ವವಿದ್ಯಾನಿಲಯದಲ್ಲಿ ಪಡೆದು ನಂತರ ಇವರು ನಕಲಿ ಕಾನೂನು ಪದವಿ ಅಂಕಪಟ್ಟಿಗಳು ಎಂದು ತಿಳಿದು ಬಂದಿದೆ.
ಇವರ ಮೇಲೆ ಇನ್ನೊಂದು ಆರೋಪ ಸಹ ಇದೆ ನಕಲಿ ದಾಖಲೆ ಜೊತೆಗೆ ಎಸ್.ಸಿ.ಜಾತಿ ಸುಳ್ಳು ದೃಢಿಕರಣ ಪತ್ರ ಪಡೆದಿರುವ ವಕೀಲ ಮೂಲತಃ ಒಕ್ಕಲಿಗ ಜಾತಿಗ ಸೇರಿದ ಇವರು, ಕಾನೂನು ಪದವಿಗೆ ಸೇರಲು ಸುಳ್ಳು ಜಾತಿ ದೃಡಿಕರಣ ಪತ್ರ ನೀಡಿ ದಾಖಲಾಗಿದ್ದಾರೆ ಎಂದು ವಕೀಲ ಜಿ.ಜೆ.ಲೋಕೇಶ್ ಆರೋಪಿಸಿದ್ದಾರೆ. ಈ ಸಂಬಂಧ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ೪೨೦ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.ನ್ಯಾಯ ಎಲ್ಲಿದೆ ನ್ಯಾಯ ಕೂಡಿಸುವ ವಕೀಲರೇ ನಕಲಿ ಇನ್ನೂ ನ್ಯಾಯದ ಕಥೆ ದೇವರೆ ಗತಿ....
ಅಪಘಾತ ದಿಂದ ಸಾವನ್ನಪ್ಪಿದ ಗುತ್ತಿಗೆದಾರ ಶ್ರೀನಿವಾಸ್ ರವರ ಪತ್ನಿ ಸವಿತಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು
ನಾಗಮಂಗಲ : ಶ್ರೀ ರಾಮಕೃಷ್ಣ ಎಲೆಕ್ಟ್ರಿಕಲ್ಸ್ ನ N R ಶ್ರೀನಿವಾಸ್ ವಾಹನ ಅಪಘಾತದಿಂದ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.N R ಶ್ರೀನಿವಾಸ್ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ H.K ಸವಿತಾ ರವರಿಗೆ ನಾಗಮಂಗಲದ ಅವರ ಮನೆಯೆಲ್ಲೇ ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಎ.ಎನ್ ಹಾಗೂ ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು ನಾಗಮಂಗಲ ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಸವಿತಾ ರವರಿಗೆ ವಿತರಣೆ ಮಾಡಿದರು.