ಮಾಹಿತಿ

ನಿಮ್ಮ ಮನೆಯಲ್ಲೇ ಸಿಗುವ ಈ ನುಗ್ಗೆ ಸೊಪ್ಪನ್ನು ತಿನ್ನೋದರಿಂದ 300 ಕ್ಕೂ ಹೆಚ್ಚು ರೋಗ ನಿಮ್ಮ ಹತ್ತಿರ ಸುಳಿಯಲ್ಲಾ..!!!!! ಡಾಕ್ಟರ್ ಬಳಿ ಹೋಗುವ ಕಷ್ಟವೇ ಇಲ್ಲಾ.!!!

 ನಾವು ಜ್ವರ, ನೆಗಡಿ ಬಂತು ಅಂದ ತಕ್ಷಣ ನಾವು ಡಾಕ್ಟರ್ ಬಳಿ ಹೋಗಿ ಕೆಲವು ಮಾತ್ರೆಗಳುಹಾಗು ಟಾನಿಕ್ ಗಳನ್ನೂ ತಂದು ಊಟದ ನಂತರ ಸೇವಿಸುತ್ತೇವೆ, ಇದರಿಂದ ನಿಮಗೆ ಬಂದಿರುವ ಜ್ವರವೇನೋ ಕಡಿಮೆ ಆಗುತ್ತದೆ ಆದರೆ ನಿಮ್ಮ ದೇಹದ ಮೇಲೆ ಪ್ರಭಾವ ಬಿರುವ ಅಂಶಗಳು ಅದರಲ್ಲಿರುತ್ತದೆ.ಈಗ ನಾವು ಹೇಳುವ ಈ ಸೊಪ್ಪನ್ನ ನೀವು ಸೇವಿಸುವುದರಿಂದ ಅನೇಕ ರೋಗಗಳನ್ನೂ ನೀವು ಕಡಿಮೆ ಮಾಡಿಕೊಳ್ಳಬಹುದು, ಹಾಗಾದರೆ ಆ ಸೊಪ್ಪು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನುಗ್ಗೆ ಸೋಪ್ಪು, ನೀವೂ ನುಗ್ಗೆ ಸೊಪ್ಪನ್ನು ದಿನ ತಿನ್ನೋದರಿಂದ ನೀವು 300 ತರಹದ ರೋಗವನ್ನು ನಿವಾರಿಸಿಕೊಳ್ಳಬಹುದು, ನಿಮಗೆ ಈ ನುಗ್ಗೆ ಸೊಪ್ಪನ್ನ ದಿನ ತಿನ್ನಲು ಕಷ್ಟವಾದರೆ ವಾರಕ್ಕೆ ಒಮ್ಮೆಯಾದರೂ ನುಗ್ಗೆ ಸೊಪ್ಪಿನ ಪದಾರ್ಥ ಮಾಡಿ ತಿನ್ನಿ. ಈ ಸೊಪ್ಪಿನಲ್ಲಿ ಇರುವ ರೋಗ ನಿರೋಧಕ ಶಕ್ತಿಯಿಂದ ನಿಮ್ಮ ದೇಹದಲ್ಲಿರುವ ವಿಷ ಪದಾರ್ಥಗಳನ್ನುಇದು ಹೊರಗೆ ತೆಗೆದು ಹಾಕುತ್ತದೆ,.

ಇನ್ನು ಇದರ ಜೊತೆಗೆ ನಿಮ್ಮ ಹೊಟ್ಟೆಯ ಬಗೆಗಿನ ಎಲ್ಲ ಸಮಸ್ಯೆಗಳಿಗೂ ನುಗ್ಗೆ ಸೊಪ್ಪು ರಾಮಬಾಣವಾಗಿದೆ.ಅಲ್ಸರ್, ಗ್ಯಾಸ್ಟ್ರಿಕ್ ಹಾಗೆ ಇನ್ನಿತರ ಹೊಟ್ಟೆಯ ಸಮಸ್ಯೆ ಗಳು ಬರದಂತೆ ನುಗ್ಗೆ ಸೊಪ್ಪು ಸಹಾಯಕವಾಗಿದೆ, ಇನ್ನು ಇದನ್ನು ಮಕ್ಕಳಿಗೆ ತಿನಿಸಿದರೆ ತುಂಬಾ ಒಳ್ಳೆಯದು ಯಾಕೆಂದರೆ ಹೆಚ್ಚಿನ ಮಕ್ಕಳು ಊಟ ಮಾಡಲು ಹಿಂಜರಿಯುತ್ತಾರೆ ಅಂಥವರಿಗೆ ಇದನ್ನು ತಿನಿಸೋದರಿಂದ ನುಗ್ಗೆ ಸೊಪ್ಪು ಹೆಚ್ಚು ಹಸಿವಾಗುವಂತೆ ಮಾಡುತ್ತದೆ.

ಇನ್ನು ನಿಮ್ಮ ಕೂದಲು ಉದುರುತ್ತಿದ್ದರೆ ಇದನ್ನು ಹಾಕಿಕೊಳ್ಳುವುದರಿಂದ ನಿಮ್ಮ ಕೂದಲು ಬಲವಾಗಿ ಬೆಳೆಯುತ್ತದೆ ಹಾಗೆ ಯಾವುದೇ ಕೂದಲು ಉದುರುವಿಕೆ ಸಮಸ್ಯೆ ಎದುರಾಗಲ್ಲ ಹಾಗೆ ನಿಮ್ಮ ಮುಖದ ಕಾಂತಿ ಕೂಡ ಹೆಚ್ಚಿರುತ್ತೆ.ನಿಮ್ಮ ದೇಹದಲ್ಲಿ ಉಂಟಾಗುವ 300 ರಕ್ಕೂ ಹೆಚ್ಚುರೋಗಗಳಿಗೆ ಈ ನುಗ್ಗೆ ಸೊಪ್ಪು ರಾಮಬಾಣವಾಗಿದೆ, ಆ 300 ರೋಗಗಳಲ್ಲಿ ಭಯಾನಕ ರೋಗಗಳಾದ ಕ್ಯಾನ್ಸರ್ ಅನ್ನು ಸೆದೆ ಬಡಿಯುವ ಶಕ್ತಿ ಈ ನುಗ್ಗೆ ಸೊಪ್ಪಿಗೆ ಇರುತ್ತದೆ..

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಡಿದೆ.ಹಣ ತೆಗೆಯೋ  ಮುನ್ನ ಎಚ್ಚರ.!

ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಸೂಕ್ಷ್ಮವಾಗಿಸಲು ಆಯೋಗ ನೋಟಿಸ್ ನೀಡಿದೆ. ಈ ಪ್ರಕಾರ ಖಾತೆಯಿಂದ 1 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡುವ ಖಾತೆದಾರರ ಮಾಹಿತಿಯನ್ನ ಚುನಾವಣಾ ಸಿಬ್ಬಂದಿ ಪಡೆಯಲಿದ್ದಾರೆ. ಹಾಗೇ 10 ಲಕ್ಷಕ್ಕಿಂತ ಹೆಚ್ಚು ಹಣವನ್ನ ವಾಪಸ್ ಪಡೆದರೆ ತೆರಿಗೆ ಇಲಾಖೆಗೆ ನೇರವಾಗಿ ಮಾಹಿತಿ ಹೋಗುತ್ತದೆ.ಈ ಪ್ರಕಾರ ಮುಂದಿನ ಒಂದುವರೆ ತಿಂಗಳು ಖಾತೆಗಳ ಮೇಲೆ ನಿಗಾ ಇಡಲಾಗುತ್ತದೆ. ಇನ್ನು ಅಭ್ಯರ್ಥಿಗಳ ದೈನಂದಿನ ಖರ್ಚನ್ನ ನೇರವಾಗಿ ಚುನಾವಣಾ ಕ್ಯಾಮಾರಾ ಸಿಬ್ಬಂದಿ ಸೆರೆ ಹಿಡಿದ ದೃಶ್ಯಗಳ ಆಧಾರದಲ್ಲಿ ಆಡಿಟ್ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚು ಖರ್ಚು ಮಾಡಿದರೆ 24 ಗಂಟೆಯೊಳಗೆ ಕಠಿಣ ಕ್ರಮ ವಹಿಸಲಾಗುತ್ತದೆ.ಒಂದು ವೇಳೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಡ್ರಾ ಮಾಡಿದರೆ ಆದಾಯ ಇಲಾಖೆ ಖಾತೆದಾರರನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಯಾವ ಖರ್ಚಿಗೆ ಹಣ ಡ್ರಾ ಮಾಡಿದ್ದೀರ, ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದೀರಾ? ಎಂದು ಅವರ ಬಳಿ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗುತ್ತದೆ.

ಸಂಕಲ್ಪ ಮಾಡಿ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಪೂಜಿಸಿದರೇ  ಸಾಕು. ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ನೆರವೇರಿಸಿಕೊಡುತ್ತಾನೆ ಭೂವರಹನಾಥ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಸಮೀಪದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಹೇಮಾವತಿ ನದಿ ದಡೆಯಲ್ಲಿ ಭೂವರಹನಾಥಸ್ವಾಮಿ ನೆಲೆನಿಂತಿದ್ದಾನೆ. ಭೂವರಹನ ದೇಹ ಮನುಷ್ಯನದು, ಮುಖ ಪ್ರಾಣಿಯದಾಗಿದೆ. ಅಜಾನುಬಾವಾಗಿರುವ ಭೂವರಹ ಭಕ್ತರು ಕಷ್ಟ ಆಲಿಸಿ, ಕ್ಷಣಾರ್ಧದಲ್ಲಿ ದೂರಮಾಡತ್ತಾನೆ, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ಸಿದ್ಧಿಸುತ್ತದೆ. ದೇವಸ್ಥಾನದ ಪಕ್ಕದಲ್ಲಿ ನದಿಯಿದೆ. ಇಲ್ಲಿ ಜ್ಯೋತಷ್ಯದಲ್ಲಿ ಹೇಳಿರುವಂತೆ ರಾಹು, ಕೇತು ದೋಷಗಳು ನಿವಾರಣೆ ಆಗುತ್ತವೆ. ಯಾವ ವ್ಯಕ್ತಿ ದೋಷಗಳಿಂದ ಬಳಲುತ್ತಿರುತ್ತಾನೆ, ಆತ ದೇವಸ್ಥಾನದಲ್ಲಿ ಸಂಕಲ್ಪ ಮಾಡಿಸಿ ಕರಿ ಉದ್ದಿನ ಕಾಳನ್ನು ನದಿ ಎದರು ನಿಂತು ಮೈಮೇಲಿಂದ 17 ಬಾರಿ ನಿವ್ವಳಿಸಿ(ದೃಷ್ಟಿ ತಕ್ಕೊಂಡು) ನದಿಗೆ ಹಾಕಿ, ದೇವಸ್ಥಾನವನ್ನು 11 ಪ್ರದಕ್ಷಿಣೆ ಹಾಕಿದ ನಂತರ ದೋಷ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಭೂಮಿಗೆ ಸಂಬಂಧಿಸಿದ ಮನೆ ಕಟ್ಟಲಾಗದಿರುವುದು, ನಿವೇಶನ ಖರೀದಿಗೆ, ಜಮೀನು ಖರೀದಿ, ನ್ಯಾಯಾಲಯದಲ್ಲಿ ಜಮೀನು ಸಂಬಂಧ ತೊಂದರೆ ಅನುಭವಿಸುತ್ತಿರುವವರು ಇಲ್ಲಿಗೆ ಬಂದು ಇಲ್ಲಿನ ಮಣ್ಣನ್ನು ಅರಿಸಿನ ಬಟ್ಟೆಯಲ್ಲಿ ಹಾಖಿಕೊಂಡು ಮಣ್ಣಿಗೆ ದೇವರನ್ನು ಆಹ್ವಾನೆ ಮಾಡಿಸಿಕೊಂಡು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿ ಭೂಮಿ ಸಮಸ್ಯೆ ನಿವಾರಣೆ ಆದ ಮೇಲೆ ದೇವರಿಗೆ ಹರಿಕೆ ತೀರಿಸಿ ಬಂದು ಮನೆಯಲ್ಲಿರುವ ತುಳಿಸಿ ಗಿಡಕ್ಕೆ ಮಣ್ಣನ್ನು ವಿಸಜರ್ಿಸುತ್ತಾರೆ.ಭೂಮಿ ಕಾರ್ಯಕ್ಕೆ ನಿವಿಘ್ರ್ನವಾಗಿ ಏನೇ ಸಂಕಲ್ಪ ಮಾಡಿದರೇ ನೆರವೇರಿಸಿಕೊಡುತ್ತಾನೆ. ಇಲ್ಲಿ ಪೂಜಿಸಿ ಒಂದು ಮಣ್ಣಿನ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟುವ ಜಾಗದ ಈಶಾನ್ಯ ಮೂಲೆಗೆ ಕಟ್ಟುವುದರಿಂದ ಮನೆ ಬೇಗ ನಿಮರ್ಾಣಗೊಳ್ಳತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಸ್ಥಾನದ ದರ್ಶನ ಪಡೆದ ಭಕ್ತರಿಗೆ ವೈಬ್ರೇಷನ್ ಅನುಭವ ಆಗುತ್ತದೆ. ಇದು ದೇವರು ಇರುವುದಕ್ಕೆ ಸಾಕ್ಷಿ ಎನ್ನುತ್ತಾರೆ. ಇಲ್ಲಿನ ಭಕ್ತರು.

ಸ್ಥಳ ಪುರಾಣ : ದೇವಸ್ಥಾನದ ಪಕ್ಕದಲ್ಲಿರುವ ನದಿಗೆ ಹಿಂದೆ ಪ್ರಹಾವ ಬರುತ್ತದೆ. ಈ ಪ್ರದೇಶ ಜಲಾವೃತಗೊಂಡು ಇಲ್ಲಿನ ಜನರು ಊರನ್ನು ಖಾಲಿ ಮಾಡುತ್ತಾರೆ. ಆದರೇ ದೇವರು ಮಾತ್ರ ಉಳಿಯುತ್ತಾನೆ. ತನ್ನ ಶಕ್ತಿಯಿಂದ ನೀರಿಂದ ಎದ್ದು ಬಂದು ಭೂಮಿಯ ಮೇಲೆ ನೆಲೆ ನಿಲ್ಲುತ್ತಾನೆ. ಪ್ರವಾಹ ನಿಂತ ನಂತರ ಕಣ್ಮರೆ ಆಗುತ್ತಾನೆ. ಗಿಡ, ಮರ ಬೆಳೆದು ಕಾಡಾಗುತ್ತದೆ. ವಿಷ್ಣವರ್ಧನನ ಮಗ ವೀರ ಬಲ್ಲಾಳ ಭೇಟೆಗೆಂದು ಇಲ್ಲಿಗೆ ಬರುತ್ತಾನೆ. ಇವನ ಭೇಟೆ ನಾಯಿಗಳು ಮೊಲಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇಲ್ಲಿ ದಿಣ್ಣೆ ಕಾಣುತ್ತದೆ. ಅಲ್ಲಿ ಮೊಲಗಳು ಉಗ್ರ ಸ್ವರೂಪ ತಾಳಿ ಭೇಟೆ ನಾಯಿಗಳನ್ನ ಬೆನ್ನಟ್ಟಿ ಹೊಡಿಸಿ ಕಳಿಸುತ್ತವೆ. ಆಗ ವೀರಬಲ್ಲಾಳನಿಗೆ ಅಲ್ಲಿ ಏನೋ ದೈವ ಶಕ್ತಿಯಿದೆ ಎಂದು ಅರಿತು ಆ ಜಾಗವನ್ನು ಅಗೆಸುತ್ತಾನೆ. ಆಗ ಅಲ್ಲಿ ಮನುಷ್ಯ ದೇಹ, ಪ್ರಾಣಿ ಮುಖ ಇರುವ ಬರಹನಾಥನ ವಿಗ್ರಹ ಸಿಗುತ್ತದೆ. ಆತ ಅಲ್ಲೇ ದೇವಸ್ಥಾನ ಕಟ್ಟಿಸಿ ವರಹನಾಥಸ್ವಾಮಿಗೆ ಪೂಜೆ ಶುರು ಮಾಡಿಸಿದನಂತೆ.

ಈ ದೇವಸ್ತಾನವನ್ನು 2500 ವರ್ಷಗಳ ಹಿಂದೆ ಗೌತಮ ಋಷಿಗಳು ಮಾಡಿದ್ದಾರೆ. ಭೂವರಹನ ಮೂತರ್ಿಯ ಎಡೆತೊಡೆಯ ಮೇಲೆ ಭೂದೇವಿ ಕುಳಿತ್ತಿದ್ದಾಳೆ. ಹಸ್ತದಲ್ಲಿ ಕಮಲದ ಹೂವಿದೆ. ಮಧ್ಯೆ ಸುದರ್ಶನ ಚಕ್ರವಿದ್ದು, ಏಕಶಿಲೆಯ ಸಾಲಿಗ್ರಾಮ ಶಿಲೆಯಾಗಿದೆ. ಪಾದದಿಂದ ಕಿರೀಟ 15 ಅಡಿ, ಪೀಠ 3 ಅಡಿಯಿದೆ. ಹಿಂದೆ ವಿಜಯನಗರದ ಸಾಮ್ರಾಜ್ಯದ ರಾಜರು ಸ್ವಾಮಿಯ ಶಕ್ತಿ ಅರಿತು, ರಾಜ ಲಾಂಛನವನ್ನಾಗಿ ಮಾಡಿಕೊಂಡಿದ್ದರು. ರಾಜರ ಗುರುಗಳ, ಋಷಿಗಳ ಮಾತಿನಂತೆ ಲಾಂಚನವನ್ನ, ಆ ಸಮಯದಲ್ಲಿ ನಾಣ್ಯದ ಮೇಲೆ ವರಹನಾಥನ ಚುಹ್ನೆ ಹಾಕುತ್ತಿದ್ದರು. ಅಲ್ಲದೆ ನಾಣ್ಯವನ್ನು ವರಹ ಎಂದು ಕರೆಯುತ್ತಿದ್ದರು ಎಂಬ ಇತಿಹಾಸವಿದೆ.

ಭೂವರಹ ಅಂದರೇ ಭೂಮಿಯ ಒಡೆಯ.ಭೂಮಿಯ ಮೇಲೆ ಇರುವ ಸಕಲ ಕಷ್ಟಗಳನ್ನು ನಿವಾರಣೆ ಮಾಡಿ ಭಕ್ತರನ್ನ ಕಾಪಾಡುತ್ತಿರುವ ಭೂವರಹನಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅರಿದು ಬರುತ್ತಿದ್ದಾರೆ. ಅಮಾವಸೆಯಲ್ಲಿ ಪೂಜೆ ಸಲ್ಲಿಸಿದರೇ ಹೆಚ್ಚಿನ ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಅಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ: ಇನ್ನು ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, sಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.ಇನ್ನೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಒಂದು ವೇಳೆ ನಿಯಮ ಮೀರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಎಲೆಕ್ಷನ್ ಪ್ರಚಾರ ನಡೆಸಿದ್ರೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.

ಚುನಾವಣಾ ಆಯೋಗದ ಹೆಲ್ಪ್ ಲೈನ್ ಸಂಖ್ಯೆ '1950' ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿದೆ. ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ರೆ ಮೊಬೈಲ್ ಮೂಲಕ ದೂರು ನೀಡಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರಿಸಲಾಗುವುದು. ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಹೇಳಿದ್ದಾರೆ.ಇನ್ನು ಪಾನ್ ಕಾರ್ಡ್ ನಂಬರ್ ನಮೂದಿಸದಿದ್ದರೆ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗುವುದು. ದಿವ್ಯಾಂಗರು ಮತ ಚಲಾಯಿಸಲು ವೀಲ್ ಚೇರ್ ವ್ಯವಸ್ಥೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ತಲಾ 14 ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ.

 

 ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

ಮಹಾ ಶಿವರಾತ್ರಿ: ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ! ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.  ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು,

ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧ ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು? ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.  ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು! ಮಹಾಶಿವರಾತ್ರಿ ಹಬ್ಬದ ಮಹತ್ವ ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ. 


ಕೇಬಲ್ ಟಿವಿ ಆಪರೇಟರ್ಸ್ ದಾರಿ ತಪ್ಪಿಸುತ್ತಿದ್ದಾರೆ. ಎಚ್ಚರ ಗ್ರಾಹಕರೇ ಎಚ್ಚರ!!

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬಂದಿದ್ದು. ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ.

 ಕೇಬಲ್ ಟಿವಿ ಆಪರೇಟರ್ಸ್  ನಿಮಗೆ ಸರಿಯಾದ ಮಾಹಿತಿ ಕೊಡದೇ ನಿಮಗೆ ಕೇಂದ್ರ ಸರಕಾರದ ಮಹತ್ತರ ಸುಧಾರಣೆಯೊಂದರ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ನಿಮಗೆ ಕೇಂದ್ರ ಸರಕಾರದ ಬಗ್ಗೆ ಕೋಪ ಬರುವಂತೆ ಮಾಡುತ್ತಿದ್ದಾರೆ. ಅದು ಏನು ಎಂದು ವಿವರಿಸುತ್ತೇನೆ. ನಿಮ್ಮ ಮನೆಯ ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಕೇಬಲ ಮೂಲಕ ನಿಮ್ಮ ಮನೆ ತಲುಪುತ್ತಿದ್ದರೆ ನೀವು ಈ ಜಾಗೃತ ಅಂಕಣವನ್ನು ಓದಲೇಬೇಕು ಮತ್ತು ಇತರರಿಗೂ ತಿಳಿಸಬೇಕು. ನೀವು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ್ತು ಬೇರೆಯವರಿಗೆ ತಿಳಿಸಿದರೆ ಉಳಿಯುವುದು ನಿಮ್ಮದೇ ಹಣ ವಿನ: ನನಗೇನೂ ವೈಯಕ್ತಿಕ ಲಾಭವಿಲ್ಲ. ಬರುವ ತಿಂಗಳಿನಿಂದ ನೀವು ನಿಮ್ಮ ಆಯ್ಕೆಯ ಚಾನೆಲ್ ಗಳನ್ನು ಮಾತ್ರ ವೀಕ್ಷಿಸಿ ಅದಕ್ಕೆ ತಗಲುವ ಹಣವನ್ನು ಮಾತ್ರ ನೀಡಿದರೆ ಸಾಕು ಎನ್ನುವ ವಿಷಯ ನಿಮ್ಮ ಗಮನಕ್ಕೆ ಖಂಡಿತ ಬಂದಿರುತ್ತದೆ. ಕೇಬಲ್ ಆಪರೇಟರ್ಸ್ ಏನು ಹೇಳುತ್ತಿದ್ದಾರೆ ಎಂದರೆ “ನೂರಾ ಮೂವತ್ತು ರೂಪಾಯಿ ಮತ್ತು ಜಿಎಸ್ ಟಿ ಇಪ್ಪತ್ತೆರಡು ರೂಪಾಯಿ ಒಟ್ಟು ಮಿನಿಮಮ್ 152 ರೂಪಾಯಿ ಕಟ್ಟಿದ್ರೆ ನಿಮಗೆ ನೂರು ಫ್ರೀ ಚಾನೆಲ್ ಗಳು ಕೊಡುತ್ತೇವೆ. ಇನ್ನು ಪೇ ಚಾನೆಲ್ ಗಳು ಬೇಕಾದರೆ ಅದರ ಗೊಂಚಲನ್ನು ಪಡೆಯುವ ಮೂಲಕ ಅದರ ಹಣವನ್ನು ಪ್ರತ್ಯೇಕ ನೀಡಬೇಕು. ಹಿಂದೆ ನಾವು ಮುನ್ನೂರು ರೂಪಾಯಿಗಳಿಗೆ ಲೆಕ್ಕವಿಲ್ಲದಷ್ಟು ಚಾನೆಲ್ ಗಳನ್ನು ನೀಡುತ್ತಿದ್ದೇವು. ಇನ್ನು ನಿಮಗೆ ಅಷ್ಟು ಚಾನೆಲ್ಸ್ ಬೇಕಾದರೆ ಐನೂರು ರೂಪಾಯಿ ತನಕ ಹೋಗುತ್ತದೆ. ಮೋದಿ ಸರಕಾರ ನಿಮ್ಮ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ” ಎಂದು ಹೇಳುತ್ತಿದ್ದಾರೆ.

ಇಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ನೀವು ಜಿಎಸ್ ಟಿ ಸೇರಿಸಿ ಕಟ್ಟಲಿರುವ 152 ರೂಪಾಯಿಗಳಲ್ಲಿಯೇ ನಿಮಗೆ ಪೇ ಚಾನೆಲ್ ಗಳನ್ನು ಕೂಡ ನೋಡುವ ಅವಕಾಶ ಇದೆ. ಅದು ಹೇಗೆ ಎನ್ನುವುದನ್ನು ಹೇಳುತ್ತೇನೆ. ನಾವೆಲ್ಲ ಅಂದುಕೊಂಡದ್ದು ಏನೆಂದರೆ 130 ಪ್ಲಸ್ ಜಿಎಸ್ ಟಿ ಮಿನಿಮಮ್. ಅದರ ನಂತರ ಯಾವುದೇ ಪೇ ಚಾನೆಲ್ ಬೇಕಾದರೆ ಹೆಚ್ಚುವರಿ ಹಣ ಕೊಡಬೇಕು. ಆದರೆ ವಿಷಯ ಹಾಗಲ್ಲ. ನಿಮಗೆ 130 ಪ್ಲಸ್ ಜಿಎಸ್ ಟಿ ಒಳಗೆನೆ ಪೇ ಚಾನೆಲ್ ನೋಡುವ ಹಕ್ಕನ್ನು ಟ್ರಾಯ್ ನೀಡಿದೆ. ಉದಾಹರಣೆಗೆ ನೀವು ಸ್ಟಾರ್ ಪ್ಲಸ್ ಮತ್ತು ಝೀ ಹಿಂದಿ ಚಾನೆಲ್ ನೋಡಬೇಕು ಎಂದು ಬಯಸುತ್ತಿದ್ದಿರಿ ಎಂದು ಅಂದುಕೊಳ್ಳೋಣ. ಆ ಚಾನೆಲ್ ಗಳ ದರ ತಲಾ 19 ರೂಪಾಯಿ. ಅದರೊಂದಿಗೆ ಕಲರ್ಸ್ ಕನ್ನಡ ಬೇಕು ಎಂದಾದರೆ ಅದಕ್ಕೆ ಹತ್ತು ರೂಪಾಯಿ ಇರಬಹುದು. ಇನ್ನು ಕೆಲವು ಚಾನೆಲ್ ಗಳು ಒಂದೆರಡು ರೂಪಾಯಿಗಳಿಗೆ ಸಿಗುತ್ತವೆ. ಇಷ್ಟೆಲ್ಲಾ ಪೇ ಚಾನೆಲ್ ಸೇರಿ ಒಟ್ಟು 12 ಪೇ ಚಾನೆಲ್ ನೀವು ಪಟ್ಟಿ ಮಾಡಿ ಆಯ್ಕೆ ಮಾಡಿದ್ದೀರಿ ಎಂದು ಇಟ್ಟುಕೊಳ್ಳೋಣ. ಅದು ನೂರಾ ಮೂವತ್ತು ರೂಪಾಯಿ ಒಳಗೆನೆ ಬಂದಿರುತ್ತದೆ. ಅದರ ಅರ್ಥ ಒಟ್ಟು 100 ಚಾನೆಲ್ ಗಳಲ್ಲಿ 12 ಪೇ ಚಾನೆಲ್ ನೀವೆ ಆಯ್ಕೆ ಮಾಡಿದರೆ ಉಳಿದ 88 ಫ್ರೀ ಏರ್ ಚಾನೆಲ್ ನಿಮಗೆ ಸಿಕ್ಕಿ ಒಟ್ಟು ನೂರು ಚಾನೆಲ್ ಆಗುತ್ತದೆ. ಆದರೆ ಕೇಬಲ್ ಟಿವಿ ಆಪರೇಟರ್ಸ್ ಏನು ಹೇಳುತ್ತಾರೆ ಎಂದರೆ ನೀವು ಸ್ಟಾರ್ ನವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು. ಝೀ, ಸೋನಿಯವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು, ಸಿಂಗಲ್ ಸಿಗಲ್ಲ ಎನ್ನುತ್ತಾರೆ. ಇದು ಅಪ್ಪಟ ಸುಳ್ಳು.

ಟ್ರಾಯ್ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಇದ.

ನಿಮಗೆ ಐದು ಪೇ ಚಾನೆಲ್, ಉದಾಹರಣೆಗೆ ಒಂದು ಝೀ ಕನ್ನಡ, ಒಂದು ಝೀ ನ್ಯೂಸ್, ಒಂದು ಸೋನಿ, ಒಂದು ಸ್ಟಾರ್ ಪ್ಲಸ್ ಮತ್ತು ಒಂದು ಕಲರ್ಸ್ ಕನ್ನಡ ಮಾತ್ರ ಬೇಕಾದರೆ ಅಷ್ಟು ಮಾತ್ರ ತೆಗೆದುಕೊಂಡು 130 ಪ್ಲಸ್ ಜಿಎಸ್ ಟಿ 22 ರೂಪಾಯಿ ಕೊಟ್ಟರೆ ಮುಗಿಯಿತು. ಅದರ ಮೇಲೆ ಹತ್ತು ರೂಪಾಯಿ ಕೂಡ ಜಾಸ್ತಿ ಕೊಡಬೇಕಾಗಿಲ್ಲ. ಇದನ್ನು ಕೇಬಲ್ ಟಿವಿ ಆಪರೇಟರ್ಸ್ ಮುಚ್ಚಿಡುತ್ತಿದ್ದಾರೆ. ಕೇಂದ್ರ ಸರಕಾರ ಜನರು ಕಡಿಮೆ ಹಣದಲ್ಲಿ ಕೇಬಲ್ ಟಿವಿ ಖರ್ಚು ಮುಗಿಸಲಿ ಎಂದು ಬಯಸಿ ಇಂತಹ ಉತ್ತಮ ಯೋಜನೆ ನೀಡುತ್ತಿದ್ದರೆ ಕೇಬಲ್ ಟಿವಿ ಆಪರೇಟರ್ಸ್ ಇಷ್ಟು ವರ್ಷ ಸುಲಿಗೆ ಮಾಡಿದ್ದು ಸಾಕಾಗಲಿಲ್ಲ ಎಂದು ಅದನ್ನು ಮುಂದುವರೆಸಿಕೊಂಡು ಹೋಗುವ ತಂತ್ರದಲ್ಲಿದ್ದಾರೆ. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ “ಟ್ರಾಯ್” ಅವರ ವೆಬ್ ಸೈಟ್ ನೋಡಬಹುದು. ಇನ್ನೂ ಹೆಚ್ಚಿನ ವಿಷಯ ಬೇಕಾದರೆ ಕಂಪ್ರೈಸಸ್ ಆಫ್ ಇಂಟೆಲ್ ಕನೆಕ್ಷನ್ ರೆಗ್ಯೂಲೇಶನ್ 2017 ಇದರಲ್ಲಿ ಕ್ವಾಲಿಟಿ ಆಫ್ ಸರ್ವಿಸ್ ಎಂಡ್ ಕನ್ಸೂಮರ್ ಪ್ರೋಟೇಕ್ಷನ್ ರೆಗ್ಯೂಲೇಶನ್ 2017 ಇದನ್ನು ಓದಿಬಿಡಿ. ಕೇಬಲ್ ಟಿವಿ ಆಪರೇಟರ್ಸ್ ಗಳ ಅಸಲಿಯತ್ತು ಬಯಲಿಗೆ ಬಂದು ಬಿಡುತ್ತದೆ!..

 

ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಶಂಭುಲಿಂಗೇಶ್ವರ-ಸೋಮೇಶ್ವರ ನಾಗಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಬಯಲುಸೀಮೆಯ ಕುಕ್ಕೆ’ ಎಂದೇ ಕರೆಯುವ ಸಾಸಲು ಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದು ಬಂದಿತ್ತು  ಪವಿತ್ರಕೊಳದಲ್ಲಿ ಮಿಂದು ಸರತಿಯ ಸಾಲಿನಲ್ಲಿ ನಿಂತು ಶಂಭುಲಿಂಗೇಶ್ವರನ ದರ್ಶನ ಭಾಗ್ಯ ಪಡೆದು ನಾಗರಹೊನಕ್ಕೆ ಪೂಜೆ ಸಲ್ಲಿಸಿಸಿದರು.ಈ ಕ್ಷೇತ್ರದಲ್ಲಿ ಭಕ್ತಿ ಹಾಗೂ ಮಹಿಮೆಯ ಆಗರವಾಗಿದೆ. ಸರ್ಪಸುತ್ತು, ಚರ್ಮವ್ಯಾಧಿ, ಬಂಜೆತನ ನಿವಾರಣೆಗೆ ನಂಬುಗೆಯ ದೇವರ ಕ್ಷೇತ್ರ ಇದು. ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ಕ್ಷೇತ್ರದ ಮಹಿಮೆಗೆ ಸಾಕ್ಷಿ.ಚರ್ಮವ್ಯಾಧಿಗೆ ಸಿದ್ಧೌಷಧ ಸಾಸಲು ಕ್ಷೇತ್ರ.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಕಾರ್ತೀಕ ಮಾಸದ ಜಾತ್ರೆ, ಮಹಾಶಿವರಾತ್ರಿ ಪೂಜೆ, ಜೋಡಿ ರಥೋತ್ಸವ, ದೀಪಾವಳಿ ಹಬ್ಬದಲ್ಲಿ ಜರಗುವ ಸಗಣಿ ಹಬ್ಬ, ಕೈಲಾಸ ಬಸವೇಶ್ವರ, ನಿರ್ಮಾಣದ ಹಂತದಲ್ಲಿರುವ ಭೈರವರಾಜರ ಗುಡಿ ಕ್ಷೇತ್ರದ ಪ್ರಮುಖ ಆಕರ್ಷಣೆಗಳಾಗಿವೆ.ಎಲ್ಲ ಧರ್ಮದವರು ದೇಗುಲಕ್ಕೆ ಆಗಮಿಸುವುದು ಇಲ್ಲಿನ ವಿಶೇಷ.ಕ್ಷೇತ್ರದಲ್ಲಿ ದುರ್ಮುಖಿನಾಮನಾಮ ಸಂವತ್ಸರ, ವಸಂತ ಋತುವಿನ ಚೈತ್ರಮಾಸದ ತದಿಗೆ ಯಂದು ಸೋಮೇಶ್ವರ, ಶಂಭುಲಿಂಗೇಶ್ವರ, ಸೋಹೋದರಿ ಕುದುರೆ ಮಂಡಮ್ಮನವರ ಜೋಡಿ ಬ್ರಹ್ಮರಥೋತ್ಸವ ನಡೆಯಲಿದೆ. ರಥದ ಹಿಂದೆ ಸಾಗುವ ಕುರಿಗಳ ಮಂದೆಯ ಸಾಲು, ಹರಕೆ ಹೊತ್ತ ಬಾಯಿಬೀಗ ಭಕ್ತರ ಸಂಗಮ ಜಾತ್ರೆಗೆ ಮತ್ತಷ್ಟು ಮೆರಗು ನೀಡುತ್ತದೆ.

ಸೌರಾಷ್ಟ್ರದಿಂದ ಬಂದು ನೆಲೆಸಿರುವ ಸೋಮೇಶ್ವರ, ಶಂಭುಲಿಂಗೇಶ್ವರ ದೇವರು ಲಿಂಗರೂಪಿಯಾಗಿದ್ದು, ದೇವಾಲಯವು ಕ್ರಿ.ಶ. 1043ರಲ್ಲಿ ಹೊಯ್ಸಳ ದೊರೆ ತ್ರಿಭುವನ ಮಲ್ಲನ ಕಾಲದಲ್ಲಿ ನಿರ್ಮಾನವಾಗಿದೆ.ವರ್ತಕರಾದ ಆದಿಶೆಟ್ಟಿ ಹಾಗೂ ಕೋರಿಶೆಟ್ಟಿ ಮುತ್ತಿನ ವ್ಯಾಪಾರ ಮಾಡುತ್ತಾ ಇಲ್ಲಿಗೆ ಆಗಮಿಸಿದ್ದರು. ಸೌದೆ ಕಡಿಯುವಾಗ ಉದ್ಭವಲಿಂಗಕ್ಕೆ ಪೆಟ್ಟು ಬಿದ್ದು ವರ್ತಕರ ಪರಿವಾರದವರು ಮರಣ ಹೊಂದಿದರು. ನಂತರ ವರ್ತಕರ ಕನಸಿನಲ್ಲಿ ಕಾಣಿಸಿಕೊಂಡ ಶಿವನ ನುಡಿಯಂತೆ ಗುಡಿಯನ್ನುನಿರ್ಮಿಸಿ ಪೂಜಿಸಲು ಮುಂದಾದರು


 

ಪವಾಡ ಸದೃಶ: ದೇಗುಲದ ಬಳಿಯೇ ನಿರ್ಮಿತವಾಗಿರುವ ಕಲ್ಯಾಣಿಯಲ್ಲಿ ಸ್ನಾನ ಮಾಡುವ ಜತೆಗೆ ದೇವಾಲಯದಲ್ಲಿ ನೀಡುವ ಪವಿತ್ರ ವಿಭೂತಿ ಪ್ರಸಾದ ಸ್ವೀಕರಿಸಿದರೆ ಕಜ್ಜಿ, ತುರಿಯಂತಹ ಹಲವು ಚರ್ಮವ್ಯಾಧಿಗಳು ನಿವಾರಣೆಯಾಗಲಿವೆ. ಭೈರವರಾಜ ಜಂಗಮರು ಕೈಲಾಸಕ್ಕೆ ಹೋಗುವಾಗ ಸೋಮೇಶ್ವರ ದೇವಾಲಯದಲ್ಲಿ ಬಿಟ್ಟು ಹೋಗಿರುವ ವಿಭೂತಿ ಘಟ್ಟಿಯನ್ನು ಹಾವು ಕಚ್ಚಿದ ಸ್ಥಳಕ್ಕೆ ಇಟ್ಟಲ್ಲಿ ವಿಷ ನಿವಾರಣೆಯಾಗಲಿದೆ ಎಂಬುದು ನಂಬಿಕೆ.ದೇಗುಲದ ಲಿಂಗದ ಮುಂದೆ ಜೋಡಿ ಬಸವಣ್ಣ ಮೂರ್ತಿ ಇರುವುದು ದೇಗುಲದ ವಿಶೇಷತೆಗಳಲ್ಲಿ ಒಂದು. ಮೇಲುಗಡೆ ದೇವಾಲಯ ಎನ್ನುವ ಶಂಭುಲಿಂಗೇಶ್ವರ ದೇಗುಲದ ಬಳಿ ಇರುವ ನಾಗಬನ, ನಾಗರಕಲ್ಲುಗಳಿವೆ.

ಕೆಲ ಗ್ರಾಮಸ್ಥರು ಮಾತನಾಡಿ ಈ ದೇವಾಲಯು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲ್ಲಿ ಆದಾಯವನ್ನು ಮಾತ್ರ ನೀರಿಕ್ಷೆ ಮಾಡುವ ಮುಜರಾಯಿ ಇಲಾಖೆ ಇಲ್ಲಿಗೆ ಬರುವ ಭಕ್ತರಿಗೆ  ರಾಜಗೋಪುರ, ಸ್ನಾನಘಟ್ಟ, ಯಾತ್ರಿ ನಿವಾಸ, ಉದ್ಯಾನವನ, ನಿತ್ಯ ಅನ್ನದಾಸೋಹ ಕಾರ್ಯಕ್ಕೆಸೂಕ್ತ ವ್ಯವಸ್ತೆ ಕುಡಿಯು ನೀರುಗಳನ್ನು ಒದಗಿಲ್ಲ ಎಂದು ಅಸಕ್ರೋಷ ವ್ಯಕ್ತಪಡಿಸಿದರು.ದೇವಾಲಯಕ್ಕೆ ಬಂದ ಭಕ್ತರಿಗೆ ದಾಸೋಹ ಸಮಿತಿ ವತಿಂದ ಗ್ರಾಮಸ್ಥರಿದ ಸುಮಾರು 50 ಕ್ವೀಟಲ್ ಅನ್ನ ಸಾಂಬಾರ್ ಮಜ್ಜಿಗೆ ತಯಾರಿಸಿ ಭಕ್ತರ ಅಸಿವು ನೀಗಿಸಲಾಯಿತು.

ಯಾವುದೇ ದುರ್ಘಟನೆಗಳು ನೆಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಕಿಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಸಿಬ್ಬಂದಿ ನಿಂಗರಾಜು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.ಬಯಲು ಸೀಮೆಯ ಸುಬ್ರಹ್ಮಣ್ಯನ ದರುಶಣ ಪಡೆಯು ಸುಮಾರು 70 ರಂದ 80 ಸಾವಿರ ಜನರು ಭಾಗವಹಿಸಿದ್ದರು.

 

 

 Xavier Institute of Management and Entrepreneurship, Bangalore hosted a workshop on Waste Management Rules 2016 in collaboration with CII and the Ministry of Environment, Forests and Climate Change (MoEFCC), Government of India.

Bangalore: Xavier Institute of Management and Entrepreneurship, Bangalore hosted a workshop on Waste Management Rules 2016 in collaboration with CII and the Ministry of Environment, Forests and Climate Change (MoEFCC), Government of India.

The purpose of the workshop was to facilitate a discussion between Industry members  of the CII and the MoEFCC on compliance with the Plastic Waste Management Rules 2016 and the implementation of Extended Producer Responsibility.

Industry representation was strong with the 69 participants (amongst others) consisting of senior management representatives like Mr. Pradeep Banerjee, Executive Director-Supply Chain, Hindustan Unilever Limited, Mr. Nandan Bhatia, Head- Facilities Management, Brittania. Senior Managers from Tata Chemicals, Mondelex India Foods Pvt.Ltd, Hindustan Coca Cola,Toyota and other corporates actively engaged in the discussions. Other stakeholders in the waste management area like  Saahas Zero Waste, Binbag expressed their perspectives.

The MoEFCC was represented by the Joint Secretary, Mr. Ritesh Kumar Singh  and Mr. Thiru Shambhu Kallolikar, Principal Secretary, Govt of Tamil Nadu and Chairman, Tamil Nadu Pollution Control Board. Karnataka State Pollution Control Board and Puducherry Pollution Control Board had sent senior scientists for the workshop. XIME, Bangalore was represented by their Director, Dr. Rony Kurien,  and Provost, Dr. Anantharaman.

The 2 day program concluded with workshop in groups on suggesting a way forward on Extended Producer Responsibility and it’s implementation in compliance with the Waste Management Rules notified in 2016. XIME as the academic partner will be helping the MoEFCC undertake and outcome analytics of the workshop.

 

Page 1 of 3

Visitors Counter

220407
Today
Yesterday
This Week
This Month
Last Month
All days
125
274
2024
3512
4244
220407

Your IP: 3.138.116.20
2024-04-19 16:24

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles