Madhu
ವರದಿಗಾರನ ಮೇಲೆ ಪೋಲಿಸರಿಂದ ಹಲ್ಲೆ...
.ದಿನೆ ದಿನೆ ಹೇಚ್ಚುತ್ತಿರುವ ವರದಿಗಾರ ಮೇಲೆ ಹಲ್ಲೆ ,ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಪೊಲೀಸರ ದರ್ಪ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.
ವಿಜಯಪುರ: ನಗರದ ಭೂತನಾಳ ಕೆರೆ ರಸ್ತೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಖಾಸಗಿ ವಾಹಿನಿ(TV5) ಕ್ಯಾಮರಾಮನ್ ಸುರೇಶ ಚಿನಗುಂಡಿ ಮೇಲೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.ಭೂತನಾಳ ರಸ್ತೆಯಲ್ಲಿ ಮನೆಯಿಂದ ಕಚೇರಿಗೆ ತೆರಳುತ್ತಿದ್ದ ವೇಳೆ ಕ್ಯಾಮರಾಮನ್ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಐ.ಆರ್.ಬಿ ವ್ಯಾನ್ ಮೈಮೇಲೆ ಹತ್ತಿಸಲು ಯತ್ನಿಸಿದ ಚಾಲಕ,ಈ ಕುರಿತು ಪ್ರಶ್ನಿಸಿದ ಸುರೇಶ ಮೇಲೆ ನಾಲ್ವರು ಪೊಲೀಸ್ ಪೇದೆಗಳು ಐ.ಆರ್.ಬಿ ವ್ಯಾನ್ನೊಳಗೆ ಎಳೆದೊಯ್ದು ಹಲ್ಲೆ ನಡೆಸಿ ದರ್ಪ ತೋರಿದ ಪೊಲೀಸರು.ಮುಖಕ್ಕೆ ಹಾಗೂ ಬೆನ್ನಿನ ಮೇಲೆ ಹಲ್ಲೆ, ಮೂಗಿನಿಂದ ರಕ್ತಸ್ರಾವ ಗಾಯಗೊಂಡ ಕ್ಯಾಮರಾಮನ್ ಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿ ಘಟನೆ.
ಕೆ.ಆರ್.ಪೇಟೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಸಾರ್ವಜನಿಕರ.ಪುರಸಭೆ ಮುಂದೆ ಪ್ರತಿಭಟನೆ.
ಕೆ.ಆರ್.ಪೇಟೆ ಮತ್ತು ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಹೆದರಿದ ಜನಸಾಮಾನ್ಯರ.ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆಯ ಎಚ್ಚರಿಕೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಹೊಸಹೊಳಲು ಗ್ರಾಮದ ಪಿಗ್ಮಿ ಕಲೆಕ್ಟರ್ ರಾಜು ಅವರ ಪುತ್ರನಿಗೆ, ಹೂವು ಮಾರುವ ಕಮಲಮ್ಮಗೆ, ಧನಂಜಯ ಹಾಗೂ ರಾಮಯ್ಯ ಎಂಬುವವರಿಗೆ ನಾಯಿ ಕಡಿದ ಪರಿಣಾಮವಾಗಿ ಕೂಡಲೇ ನಾಯಿಗಳನ್ನು ಹಿಡಿದು ಮಕ್ಕಳನ್ನು ರಕ್ಷಣೆ ಮಾಡುವಂತೆ ರಾಜು ಮತ್ತು ಗೆಳೆಯರು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ಮಾಡಿದರು. ಕೂಡಲೇ ನಾಯಿಗಳನ್ನು ಹಿಡಿಯದ್ದಿದರೆ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು .ಕೂಡಲೇ ನಾಯಿಗಳನ್ನು ಹಿಡಿದು ಸಾರ್ವಜನಿಕರನ್ನು ರಕ್ಷಿಸುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಆಗ್ರಹಿಸಿದ್ದಾರೆ.
ಕೊಡಗು ಮತ್ತು ಕೇರಳದ ನಿರಾಶ್ರಿತರ ಪರಿಹಾರ ನಿದಿಗೆ ೩೦೦೦೦ರೂ ಹಣ ನೀಡಿ ಮಾನವೀಯತೆ ಮೇರೆದ ರೈತ.
130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ಮಾರಿ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿ 28860ರೂ ನೀಡದ ಮಳವಳ್ಳಿ ರೈತ ಹೆಚ್ ಬಸವರಾಜು.
ಮಳವಳ್ಳಿ: ತಾನು ಕಷ್ಟಪಟ್ಟು ಬೆಳೆದ ರೇಷ್ಮೆಗೂಡುನ್ನು ಮಾರಿ ಮಹಾಮಳೆಯಿಂದ ಕಂಗಾಲಾಗಿ ನಿರಾಶ್ರಿತರರಾಗಿರುವ ಕೊಡುಗು ಹಾಗೂ ಕೇರಳದಜನತಯೆ ಮುಖ್ಯ ಮಂತ್ರಿ ಪರಿಹಾರ ನಿಧಿಗಾಗಿ ರೈತನೊಬ್ಬ ತಹಸೀಲ್ದಾರ್ ಮೂಲಕ ಡಿಡಿ ನೀಡಿ ಮಾನವೀಯತೆ ಮೆರೆದರು .ಕಳೆದ ಒಂದು ವಾರದ ಹಿಂದೆ ಮಳವಳ್ಳಿಪಟ್ಟಣದ ಪೇಟೆ ಬೀದಿ ಹೆಚ್.ಬಸವರಾಜು ರವರು 130 ಚಂದ್ರಿಕೆಯಲ್ಲಿ ಬೆಳೆದ ರೇಷ್ಮೆಗೂಡುನ್ನು ನೆರೆಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಇಂದು ಕೊಡುಗು ನಿರಾಶ್ರಿತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗಳ ಮೂಲಕ 28860ರೂ ಗಳನ್ನು ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ 2000 ರೂ ಡಿಡಿ ಯನ್ನು ತಹಸೀಲ್ದಾರ್ ದಿನೇಶ್ ಚಂದ್ರರವರ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಮಹದೇವ,ಮಧು, ನಾಗರಾಜು, ಸೇರಿದಂತೆ ಮತ್ತಿತರರು ಇದ್ದರು.
ಮೈಸೂರು ದಸರಾ 2018ರ ಅಧಿಕೃತ ಲಾಂಛನ ಬಿಡುಗಡೆ!
ಜಿಲ್ಲಾಡಳಿತದಿಂದ ನಾಡಹಬ್ಬ ಮೈಸೂರು ದಸರಾ 2018ರ ಅಧಿಕೃತ ಲಾಂಛನ ಬಿಡುಗಡೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2018 ನೇ ಸಾಲಿನ ದಸರಾ ಮಹೋತ್ಸವದ ಲಾಂಛನ ಜಿಲ್ಲಾಡಳಿತದಿಂದ ಬಿಡುಗಡೆ ಮಾಡಿದೆ 'MysuruDasara2018' ಟ್ವಿಟರ್ ಖಾತೆ ಮೂಲಕ ಪ್ರಕಟಣೆ ಮೈಸೂರು ದಸರಾವನ್ನು ಈ ಬಾರಿ ಸರಳ ವ್ಯಕ್ತಿ ಸುಧಾಮೂರ್ತಿಯವರು ಚಾಲನೆ ನೀಡಲ್ಲಿದ್ದಾರೆ ಅ.10ರಿಂದ 19 ರವರೆಗೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ.
ಯುವತಿಯನ್ನು ಅಪಹರಿಸಿ ಅತ್ಯಾಚಾರ.
ಯುವತಿಯೊಬ್ಬರನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ಎಸುಗಿ ವಾಪಸ್ ಕಳುಹಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಅನುವಿನಕೋಡಿ ಗ್ರಾಮದ ಸಂಜು, ಮಹೇಶ್ ಸೇರಿದಂತೆ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ. ತಾಲೂಕಿನ ಯುವತಿ ತಮ್ಮ ಗ್ರಾಮದಿಂದ ಪಟ್ಟಣಕ್ಕೆ ಬರಲು ಕಳೆದ ಮಂಗಳವಾರ ಗ್ರಾಮದ ಸಮೀಪದಲ್ಲಿರುವ ಗೇಟ್ ಬಳಿ ಬಸ್ಸಿಗೆ ಕಾಯುತ್ತಿರುವಾಗ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಯಿಗೆ ಬಟ್ಟೆ ತುರುಕಿ ಪಾಂಡವಪುರದ ತನಕ ಕರೆದೊಯ್ದಿದ್ದಾರೆ. ಅಲ್ಲಿಂದ ಮಂಡ್ಯಕ್ಕೆ ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸಂಜು ಮತ್ತು ಮಹೇಶ್ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನ ಕೆಂಗೇರಿಯ ರೂಮ್ ಒಂದರಲ್ಲಿ ಕೂಡಿ ಹಾಕಿ, ಸಂಜು ಎಂಬುವರ ಅತ್ಯಾಚಾರ ಎಸಗಿ ಕೆ.ಆರ್.ನಗರದ ಸಂಬಂಧಿಕರ ಮನೆಗೆ ಬಿಟ್ಟು ಹೋಗಿದ್ದಾರೆ ಎಂದು ಯುವತಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದಲ್ಲದೆ, ಮಗಳು ಕಾಣುತ್ತಿಲ್ಲ ಎಂದು ಕಿಡ್ನಾಪ್ ಆದ ದಿನ ಪೋಷಕರು ಮಿಸ್ಸಿಂಗ್ ದೂರನ್ನು ನೀಡಿದ್ದರು. ಈ ಸಂಬಂಧ ಎರಡು ಪ್ರಕರಣಗಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿರುವ ಪ್ರಕರಣದ ತನಿಖೆಯನ್ನು ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶಯ್ಯ ನಡೆಸುತ್ತಿದ್ದು, ಸಂಜು, ಮಹೇಶ್ ಸೇರಿದಂತೆ ಪ್ರಕರಣಕ್ಕೆ ಸಹಕರಿಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಶ್ರೀ ಆಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹ.
ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಶ್ರೀ ಆಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹ.
ತುಮಕೂರು: ಕೊಡಗು ನೆರೆ ಸಂತ್ರಸ್ತರಿಗೆ ತುಮಕೂರು ಜಿಲ್ಲೆಯ ಚಿಕ್ಕಸೀಬಿ ಗ್ರಾಮದಯುವಕರು ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ಗೆಳೆಯರ ಬಳಗದ ವತಿಯಿಂದ ದೇಣಿಗೆ ಸಂಗ್ರಹಿಸಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಅವರ ಸ್ನೇಹಿತರ ಪಾಲ್ಗೊಂಡ ಸಂತ್ರಸ್ತರಿಗೆ ಸಹಾಯ ಮಾಡಿದರು.
ಶೌಚಾಲಯ ಉದ್ಘಾಟನಾ ನಾಮಪಲಕಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪ.
ಮಳವಳ್ಳಿ ಸಾರ್ವಜನಿಕ ಶೌಚಾಲಯ ಉದ್ಘಾಟನಾ ನಾಮಪಲಕ್ಕೆ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪ.
ಮಳವಳ್ಳಿ: ಶಂಕುಸ್ಥಾಪನೆ ನಾಮಪಲಕ ಹಾಕದೆ ಉದ್ಘಾಟನೆ ನಾಮಫಲಕ ಮಾತ್ರ ಹಾಕಿ ಮಾಜಿ ಶಾಸಕ ನರೇಂದ್ರಸ್ವಾಮಿರವರ ಹೆಸರನ್ನು ಕೈಬಿಟ್ಟು ಪುರಸಭೆ ಆಡಳಿತ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟನೆ ಮಾಡಲು ತಂತ್ರ ನಡೆಸಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.ಮಳವಳ್ಳಿಪಟ್ಟಣದ ಕೊಳ್ಳೇಗಾಲ ರಸ್ತೆಯಲ್ಲಿ 10 ಲಕ್ಷ ರೂ ವೆಚ್ಚದ ಸಾರ್ವಜನಿಕ ಶೌಚಾಲಯವನ್ನು ಈ ಹಿಂದೆ ಇದ್ದ ಶಾಸಕ ಪಿ. ಎಂ ನರೇಂದ್ರಸ್ವಾಮಿರವರಾಗಿದ್ದಾಗ. ಗುದ್ದಲಿಪೂಜೆ ನೇರವೆರಿಸಿದ್ದರು. ಇಂದು ಈಗಿನ ಶಾಸಕ ಡಾ.ಕೆ.ಅನ್ನದಾನಿರವರು ಉದ್ಘಾಟನೆ ಮಾಡುತ್ತಿದ್ದು, ಇದಕ್ಕೆ ಶಂಕುಸ್ಥಾಪನೆ ನಾಮಫಲಕವನ್ನು ಹಾಕದೆ ಉದ್ಘಾಟನೆ ಮಾಡಲು ಹೊರಟಿದ್ದು, ಇದನ್ನು ಕೆಲವು ಕಾಂಗ್ರೆಸ್ ಪಕ್ಷದ ಮುಖಂಡರು , ಪುರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಯಾವುದೇ ಸರ್ಕಾರಿ ಕಟ್ಟಡದ ಉದ್ಘಾಟನೆ ಯಾದರೆ ಶಂಕುಸ್ಥಾಪನೆ ನಾಮಫಲಕ ಹಾಗೂ ಉದ್ಘಾಟನೆ ನಾಮಫಲಕ ಎರಡು ಇರುತ್ತದೆ. ಆದರೆ ಇಂದು ಉದ್ಘಾಟನೆ ಯಾಗುತ್ತಿರುವ ಸಾರ್ವಜನಿಕ ಶೌಚಾಲಯ ಕ್ಕೆ ಕೇವಲ ಉದ್ಘಾಟನೆ ನಾಮಫಲಕ ವನ್ನು ಮಾತ್ರ ಹಾಕಿ ಉದ್ಘಾಟನೆ ಮಾಡುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಒಂದು ವೇಳೆ ಶಂಕುಸ್ಥಾಪನೆ ನಾಮಫಲಕವನ್ನಯ ಹಾಕದೆ ಉದ್ಘಾಟನೆ ಮಾಡಿದರೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ತಿಳಿಸಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಪೋಟೊಕಾಲ್ ಪ್ರಕಾರ ಹಾಕದೆ ಶಾಸಕ ಡಾ.ಕೆ ಅನ್ನದಾನಿ ದುರಾಢಳಿತ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿದ್ದರೂ ಈ ರೀತಿ ನಡೆದುಕೊಂಡಿರುವುದು ಅವರ ಘನತೆಗೆ ಗೌರವವಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ ಆರೋಪಿಸಿದರು. ಪುರಸಭೆ ಸಾಮಾನ್ಯ ಸಭೆಗೆ ತರದೆ ಏಕಾಏಕಿ ಶೇ 3 ರ ಅನುದಾನದಲ್ಲಿ ವಿಕಲಚೇತನರಿಗೆ ಸ್ಕೂಟರ್ ವಿತರಣೆ ಮಾಡಲು ಶಾಸಕರುಹಾಗೂ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಹೊರಟಿದ್ದಾರೆ ಇದು ಸರಿಯಲ್ಲ ಎಂದು ಪುರಸಭೆ ಸದಸ್ಯ ಕಿರಣ್ ಶಂಕರ್ ಆರೋಪಿಸಿದರು. ಸಭೆಯಲ್ಲಿ ಯಾವುದೇ ಪಟ್ಟಿ ಆಯ್ಕೆಯಾಗದೆ ಈ ರೀತಿ ವಿತರಣೆ ಮಾಡಿರುವ ಬಗ್ಗೆ ಈಗಾಗಲೇ ಸಂಬಂದಪಟ್ಟ ಪೌರಾಢಳಿತ ಇಲಾಖೆಗೆ ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಮೊರೆಹೋಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾರೇಹಳ್ಳಿ ಬಸವರಾಜು, ಕೃಷ್ಣಪ್ಪ ಸೇರಿದಂತೆ ಅನೇಕರು ಇದ್ದರು.
ಮಳವಳ್ಳಿ ಪಟ್ಟಣದಲ್ಲಿ ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟ.
ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ನೆಡೆದ ಹೋಬಳಿ ಮಟ್ಟದ ಕ್ರೀಡಾ ಕೂಟ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಭಾಗಿಯಾಗಿದ್ದರು ಪ್ರೌಢಶಾಲಾ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮಳವಳ್ಳಿ ಪಟ್ಟಣದ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಬಹುಪಾಲು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.10 ನೇ ತರಗತಿಯ. ತ್ರಿವಿಧ ಜಿಗಿತದಲ್ಲಿ ಕೆ. ಶಿವಕುಮಾರ. ಪ್ರಥಮ ಸ್ಥಾನ ಬಹುಮಾನ ಪಡೆದರೆ, 200 ಮೀಟರ್ ಎತ್ತರಜಿಗಿತದಲ್ಲಿ ಮಹಮ್ಮದ್ ಶೋಹಬ್ ಪ್ರಥಮಸ್ಥಾನ ಬಹುಮಾನ, 4# 100 ರಿಲೇ ತಂಡ ಮಹಮ್ಮದ್ ನಿಯಾಜ್, ಶಿವಕುಮಾರ್ .ಕೆ, ಶೋಹಿಬ್, ಶ್ರೀನಿವಾಸ್ ಪ್ರಥಮಸ್ಥಾನ, ನಡಿಗೆ ಓಟದಲ್ಲಿ ಡಿ.ರಘುರಾಜ್ (ಪ್ರಥಮ), ಉದ್ದಜಿಗಿತದಲ್ಲಿ ಶಿವಕುಮಾರ್ ಕೆ,(ಪ್ರಥಮಸ್ಥಾನ) ಎಸ್.ಎಲ್ ಶಶಾಂಕ್ ಚಕ್ರ ಎಸೆತದಲ್ಲಿ ದ್ವಿತೀಯ ಹಾಗೂ ಭರ್ಜಿ ಎಸೆತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು, ಚೇತನ್ ಕುಮಾರ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಡಿ.ಎಸ್ ಆನಂದ್ 400 ಮೀಟರ್ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ,, ಶ್ರೀನಿವಾಸ್ ತ್ರಿವಿಧ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಬಹುಮಾನಗಳ ಬಹುಪಾಲ ಆದರ್ಶ ಪ್ರೌಢಶಾಲಾ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ತಮ್ಮ ಶಾಲೆಗೆ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಆಡಳಿತಾಧಿಕಾರಿ ವೈ.ಎಸ್ ಚಲುವರಾಜು, ಮುಖ್ಯ ಶಿಕ್ಷಕ ರಮೀಜ್ ಪಾಷ, ದೈಹಿಕ ಶಿಕ್ಷಕ ಬಿ.ಶಿವಕುಮಾರ ಹಾಗೂ ಶಿಕ್ಷಕರು ಅಭಿನಂದಿಸಿದ್ದರು.
ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆ.
ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಭಾಗ್ಯಮ್ಮ ರಂಗಸ್ವಾಮಿ ಅವಿರೊದವಾಗಿ ಆಯ್ಕೆಯಾದರು.ಒಟ್ಟು ಎಂಟು ಜನ ನಿರ್ದೇಶಕರು ಗಳಲ್ಲಿ ಯಾರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಕಾರಣ ಭಾಗ್ಯಮ್ಮ ಅವಿರೊದವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಜಾತ ಆಯ್ಕೆಯಾದರು ಮತ್ತು ನಿರ್ದೇಶಕರಾಗಿ ಸಣ್ಣತಾಯಮ್ಮ, ಸುನಂದಮ್ಮ, ರಂಗಮ್ಮ , ದೇವಮ್ಮ,ನೀಲಮ್ಮ, ಸಾವಿತ್ರಮ್ಮ ಆಯ್ಕೆಯಾದರು.
ಸಿದ್ದಮ್ಮ ಎಂಬ ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿದ ಶಾಸಕ ಡಾ.ಅನ್ನದಾನಿ.
ಗ್ರಾಮ ವಾಸ್ತವ್ಯ ಹೂಡುವುದರಿಂದ ಜನರ ನಿಜಜೀವನ ಕಷ್ಟಸುಖಗಳನ್ನು ಹತ್ತಿರದಿಂದ ನೋಡುವುದಕ್ಕಾಗಿ ಮಾಡುತ್ತಿದ್ದೇನೆ ಬುಟಾಟಿಕೆಯಿಂದಲ್ಲ ಎಂದು ಶಾಸಕ ಡಾ.ಅನ್ನದಾನಿ ತಿಳಿಸಿದರು.
ಮಳವಳ್ಳಿ: ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಸಿದ್ದಮ್ಮ ಎಂಬು ಬಡವರ ಮನೆಯಲ್ಲಿ ವಾಸ್ತವ್ಯ ಹೂಡಿ ನಂತರ ಪತ್ರಕರ್ತರ ಜೊತೆ ಮಾತನಾಡಿದ ಶಾಸಕ ಡಾ.ಅನ್ನದಾನಿ ಇದುವರೆಗೂ ನಾನು ಶಾಸಕನಾದ ನಂತರ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದು ಬೀದಿಬೀದಿಗಳ ಜನರ ಕಷ್ಟಗಳನ್ನು ತಿಳಿಯಬಹುದು, ನಮ್ಮ ನಾಯಕ ಹೆಚ್.ಡಿ ಕುಮಾರಸ್ವಾಮಿರವರು ತಾಯಿ ಹೃದಯ ವುಳ್ಳವರು ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದವರು ತಮ್ಮ ಸಹೋದರರಂತೆ ಕಾಣುತ್ತಾರೆ. ಕಾಂಗ್ರೆಸ್ ರವರು ಸೇರಿ ಸಂಮಿಶ್ರ ಸರ್ಕಾರವನ್ನು ರಚಿಸಿದ್ದಾರೆ ಎಂದರು. ಸಿದ್ದರಾಮಯ್ಯರವರು ಮುಂದಿನ ಮುಖ್ಯ ಮಂತ್ರಿಯಾಗುವ ಹೇಳಿಕೆಗೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಈಗಾಗಲೇ ರಾಹುಲ್ ಗಾಂಧಿರವರು ಮುಂದಿನ 5 ವರ್ಷಗಳ ಕಾಲ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದಾರೆ ಸಿದ್ದರಾಮಯ್ಯ ಹೇಳಿಕೆಗೆ ಉತ್ತರ ಕೊಡುವ ಮಟ್ಟಕ್ಕೆ ನಾನು ಬೆಳೆದಿಲ್ಲ , ಅವರಿಗೆ ಮೇಲೆಮಟ್ಟದ ನಾಯಕರಾದ ದೇವೇಗೌಡಜೀ, ಕುಮಾರಣ್ಣ ಉತ್ತರ ನೀಡುತ್ತಾರೆ. ಸಮನ್ವಯ ಸಮಿತಿಯಲ್ಲಿ ಮೂಡಿದರೆ ಎಂಬ ಪ್ರಶ್ನೆಗೆ ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷದವರು ಇದ್ದಾರೆ ಎಂದಷ್ಟೇ ಹೇಳಿದರು. ನಾಲೆಗಳಿಗೆ ನೀರು ಬಿಟ್ಟಿಲ್ಲ ಎಂಬ ಮಾತು ಕೇಳು ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಅನ್ನದಾನಿರವರು ಸಮಸ್ಯೆಗಳನ್ನು ತಿಳಿದುಕೊಳ್ಳಲು ಈ ಗ್ರಾಮ ವಾಸ್ತವ್ಯ ಕೆಲವರು ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಬರುತ್ತಾರೆ. ನಾನು ಗೆದ್ದ ನಂತರ ಪ್ರತಿ ಗ್ರಾಮಗಳಿಗೂ ತೆರಳಿ ನಮ್ಮ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಸಾಧ್ಯವಾದರೆ ಸ್ಥಳದಲ್ಲಿಯೇ ಬಗೆಹರಿಸಲು ಅಧಿಕಾರಗಳ ತಂಡವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದರು .
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ನಟೇಶ್, ಮಾಜಿ ಸದಸ್ಯ ಪ್ರಕಾಶ್, ಜಯರಾಜು, ಕೃಷ್ಣಮೂರ್ತಿ, ಶೇಖರ್, ಹೂವಿನಕೊಪ್ಪಲು ಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.