Madhu

Madhu

ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಮಳವಳ್ಳಿಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಆಚರಿಸಲಾಯಿತು.

ಮಳವಳ್ಳಿ:  ಮಳವಳ್ಳಿ ಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ  ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್ ರವರು ಮಾತನಾಡಿ ಜಂತುಹುಳು ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ತಾಲ್ಲೂಕು ವೈದ್ಯಾಧಿಕಾರಿ  ಡಾ.ವೀರಭದ್ರಪ್ಪ ಮಾತನಾಡಿ , ಸಣ್ಣ ಮಕ್ಕಳಿಂದ 19 ವರ್ಷದೊಳಗೆ ಮಕ್ಕಳಿಗೆ  ಜಂತುಹುಳು ನಿವಾರಣೆ ಗೆ ವರ್ಷಕ್ಕೆ ಎರಡು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ದೇಶವ್ಯಾಪ್ತಿ ಫೆಬ್ರವರಿ ಹಾಗೂ ಆಕ್ಟೋಬರ್ ತಿಂಗಳನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಸಲಾಗುತ್ತಿದೆ.  ಈ ಹಿಂದೆ ಬಯಲು ಶೌಚಾಲಯ ದಿಂದ ಜಂತುಹಳು ಮನುಷ್ಯನನ್ನು ಬೇಗ ಅವರಿಸಿಕೊಳ್ಳುತ್ತಿತ್ತು. ಇಂದಿನಿಂದ ಆರು ದಿನಗಳ ಕಾಲ ಈ  ಜಂತುಹುಳು ನಿವಾರಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ ತಾಲ್ಲೂಕಿನ ಎಲ್ಲಾ  ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳನ್ನು ಉಚಿತವಾಗಿ ನೀಡುತ್ತವೆ  ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣಾಧಿಕಾರಿ ವೀರಣ್ಣಗೌಡ ,ಕಾಲೇಜ ಸಿಬ್ಬಂದಿ ಮತ್ತು ಮಕ್ಕಳು ಸೇರಿದಂತೆ ಮತ್ತಿತ್ತರು ಹಾಜರಿದ್ದರು.

 

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್ ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು.

ಮಳವಳ್ಳಿ : ಮಳವಳ್ಳಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್.ಶರತ್ ಕುಮಾರ್ ರವರು ಇಂದು ಅಧಿಕಾರ ಸ್ವೀಕರಿಸಿದರು. ಕಳೆದ ಸಾಮಾನ್ಯ ಸಭೆಯಲ್ಲಿ  ಒಪ್ಪಂದದಂತೆ   ಈ ಹಿಂದೆ ಇದ್ದ ಸ್ಥಾಯಿ ಸಮಿತಿಯ ಅಧ್ಯಕ್ಷ ದೊಡ್ಡಯ್ಯ ರಾಜೀನಾಮೆ ನೀಡಿದ್ದ ಹಿನ್ನೆಲೆ  ಸಭೆಯಲ್ಲಿ  ಶರತ್ ಕುಮಾರ್ ರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಇಂದು ಅಧಿಕಾರವನ್ನು ಸ್ವೀಕರಿಸಿದ ಹಿನ್ನಲೆಯಲ್ಲಿ  ತಾ.ಪಂ ಅಧ್ಯಕ್ಷ ನಾಗೇಶ್ ,ಉಪಾಧ್ಯಕ್ಷ ಮಾಧು,  ಸದಸ್ಯರಾದ ಪುಟ್ಟಸ್ವಾಮಿ, ರತ್ನಮ್ಮ,  ಮುಖಂಡರಾದ ಗವಿಸಿದ್ದಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸಹ ಅಭಿನಂದಿಸಿದರು.

ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 10ನೇ ವರ್ಷದ ರಂಗ ಗೀತೆಗಳ ಉತ್ಸವ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ ಗ್ರಾಮದಲ್ಲಿ ನಡೆಸಲಾಯಿತು.

ಮಳವಳ್ಳಿ:  ತಾಲ್ಲೂಕಿನ ಪೂರಿಗಾಲಿ ಗ್ರಾಮದ ಸ ಹಿ ಪ್ರಾ.ಶಾ ಆವರಣದಲ್ಲಿ ನಡೆದ  ಕಾರ್ಯಕ್ರಮವನ್ನು ರಾಜ್ಯ ಲೆಕ್ಕ ಪತ್ರ ಇಲಾಖೆಯ ನಿವೃತ್ತ ಲೆಕ್ಕಾಧಿಕಾರಿಗಳಾದ ಶ್ರೀಯುತ ನಾಗರಾಜು ರವರು ಉದ್ಘಾಟಿಸಿದರು.ನಂತರ ಮಾತನಾಡಿದ ನಾಗರಾಜು ರವರು ಪ್ರಸ್ತುತ ದಿನಗಳಲ್ಲಿ ಚಿತ್ರೋಧ್ಯಮ.ಟಿ.ವಿ. ವ್ಯಾಟ್ಸಪ್.ಫೇಸ್ ಬುಕ್ ಮೊದಲಾದ ಮಾಧ್ಯಮಗಳಿಂದ ಗ್ರಾಮೀಣ ಕಲೆಗಳಾದ ರಂಗ ನಾಟಕ.ರಂಗ ಗೀತೆಗಳು.ಜಾನಪದ ಗೀತೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ತೀರ ಕಡಿಮೆಯಾಗುತ್ತಿದೆ.ಮಕ್ಕಳು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವರ್ಗದ ಜನರು ಟಿ.ವಿ ಮತ್ತು ಚಲನಚಿತ್ರ ಮೊದಲಾದ ಮನರಂಜನೆ ಕಾರ್ಯಕ್ರಮಕ್ಕೆ ಆಕರ್ಷಿತರಾಗಿದ್ದಾರೆ .ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಈ ನಾಡಿನ ಗ್ರಾಮೀಣ ಕಲೆಗಳಾದ  ರಂಗಗೀತೆ.ಜಾನಪದ ಗೀತೆಗಳು ತುಂಬ ಕಡಿಮೆಯಾಗುತ್ತಿದೆ ಆದ್ದರಿಂದ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು  ಪ್ರೋತ್ಸಾಹ ಸಿಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ವೆಂಕಟರಾಜು ರವರು ವಹಿಸಿದ್ದರು.ತಾ.ಪಂ.ಉಪಾಧ್ಯಕ್ಷ ಮಾಧು.ಗ್ರಾ.ಪಂ.ಅಧ್ಯಕ್ಷೆ ಪುಟ್ಟಮ್ಮಣ್ಣಿ.ತಾ.ಪಂ.ಸದಸ್ಯೆ ಆಶಾ ಪ್ರಭುಸ್ವಾಮಿ.ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಜಯರಾಜು.ನಿವೃತ್ತ ಪ್ರಾಂಶುಪಾಲ ಮಂಚಯ್ಯ.ಡಾ.ಪ್ರಸಾದ್. ಮೊದಲಾದವರು ಉಪಸ್ಥಿತರಿದ್ದರು.

ಸದನಕ್ಕೆ ಗೈರು ಅನಾರೋಗ್ಯದ ನೆಪ.ಜೆಡಿಎಸ್ ನಾಯಕರ ಸಂಪರ್ಕಕ್ಕೂ ಸಿಗದೆ ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಪೊನ್ ನಾಟ್​ ರಿಚೇಬಲ್.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಅನಾರೋಗ್ಯದ ನೆಪದಲ್ಲಿ ಸದನಕ್ಕೆ ಗೈರಾಗಿರುವ ಹಿನ್ನೆಲೆ. ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು ಶಾಸಕನ ಮನೆ ಸರ್ಚಿಂಗ್ ಮಾಡಿ ಶಾಸಕ ಸಿಗದೆ ಬರೀ ಕೈಯಲ್ಲಿ ವಾಪಸ್ಸಾದ ಸಚಿವ. ತೆನೆ ಇಳಿಸಲು ನಿರ್ಧರಿಸಿದರ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ.ಅತೃಪ್ತ ಕೈ ಶಾಸಕರಿಗೆ ಜೆಡಿಎಸ್ ಶಾಸಕನ ಹೋಟೆಲ್ ನಲ್ಲೇ ಆತಿಥ್ಯ!.ಬಾಂಬೆಯಲ್ಲಿ ಹೋಟೆಲ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಶಾಸಕ.ಸಿಎಂ ಹೆಚ್ಡಿಕೆ ನಿರ್ಲಕ್ಷ್ಯಕ್ಕೆ ಬೇಸತ್ತಿದ್ದ ನಾರಾಯಣ ಗೌಡ.ಬಿಜೆಪಿ ಜೊತೆ ಸಂಪರ್ಕದಲ್ಲಿರೋ ಶಂಕೆ.ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪರನ್ನ ಹೊಗಳಿದ್ದ ನಾರಾಯಣ ಗೌಡ.ಕ್ಷೇತ್ರದ ಅಭಿವೃದ್ಧಿಗಾಗಿ 40ಕೋಟಿ ಅನುದಾನ ಕೇಳಿದ್ದ ಶಾಸಕ.ಅಭಿವೃದ್ಧಿ, ಚುನಾವಣಾ ಪೂರ್ವ ಭರವಸೆಯಂತೆ ಮನೆ ನಿರ್ಮಾಣಕ್ಕೆ ಅನುದಾನ ಕೇಳಿದ್ದ ಶಾಸಕ.ಪಕ್ಕದ ಮೇಲುಕೋಟೆ ಕ್ಷೇತ್ರಕ್ಕೆ ನೂರಾರು ಕೋಟಿ ಬಿಡುಗಡೆ.ಕೆ.ಆರ್.ಪೇಟೆ ಕ್ಷೇತ್ರ ನಿರ್ಲಕ್ಷ್ಯಕ್ಕೆ ಬೇಸತ್ತಿರೋ .ದಿಢೀರ್ ಬಾಂಬೆಯತ್ತ ತೆರಳಿರುವ ನಾರಾಯಣ ಗೌಡ.ಅತೃಪ್ತ ಶಾಸಕನ ಕರೆ ತರುವ ಹೊಣೆ ಹೊತ್ತ ಸಣ್ಣ ನೀರಾವರಿ ಖಾತೆ ಸಚಿವ ಸಿ.ಎಸ್.ಪುಟ್ಟರಾಜು.ಸದ್ಯಕ್ಕೆ ಶಾಸಕ ನಾರಾಯಣಗೌಡ ನಾಟ್ ರಿಚಬಲ್.

 

 

ಜಿ.ಪಂ. ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಜಿ.ಪಂ.ಸದಸ್ಯ ಎಚ್.ಟಿ.ಮಂಜು ಮಾಲೀಕತ್ವದ ಜಲ್ಲಿ ಕ್ರಷರ್ ಅಕ್ರಮ ಎಂದು ಅಕ್ಕಪಕ್ಕದ ಗ್ರಾಮಸ್ಥರಿಂದ ಪ್ರತಿಭಟನೆ.ಶಿವಪುರ ಗ್ರಾಮದ ನಾಗರಾಜು ನೇತೃತ್ವದಲ್ಲಿ ಅಕ್ಕಪಕ್ಕದ ಗ್ರಾಮಗಳಾದ ಶಿವಪುರ, ಬೇಲದಕೆರೆ, ಚಟ್ಟೇನಹಳ್ಳಿ ಮತ್ತು ಕಾಗೆಪುರ ಗ್ರಾಮಸ್ಥರಿಂದ ಪ್ರತಿಭಟನೆ.ಪ್ರತಿಭಟನಾಕಾರ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಮಾತನಾಡಿದ ನಾಗರಾಜು, ಕ್ವಾರೆ ನಡೆಸುತ್ತಿರುವ ಜಾಗ ಹಿಂದೆ ಸ್ಮಾಶನಕ್ಕೆ ಮೀಸಲಿಟ್ಟಿದ್ದು,ಕಲ್ಲು ಕ್ರಷರ್ ಶಿವಪುರ ಗ್ರಾಮದ ಹಳೆ ಗ್ರಾಮ ಠಾಣಾ ಆಗಿದ್ದು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಅಕ್ರಮವಾಗಿ ನಡೆಯುತ್ತಿರುವ ಕ್ರಷರ್ ಅನ್ನು ನಿಲ್ಲಿಸುವಂತೆ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

 

 

 

ಕೆ.ಆರ್.ಪೇಟೆ ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಬಂಡಿಹೊಳೆ ನಾಗೇಶ್ ಅವಿರೋಧ ಆಯ್ಕೆ.

 ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಬಂಡಿಹೊಳೆ ಗ್ರಾಮದ ಕಾಂಗ್ರೆಸ್ ಮುಖಂಡ ನಾಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನಕ್ಕೆ ಬಂಡಿಹೊಳೆ ನಾಗೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರನ್ನು ಮಾಜಿಶಾಸಕ ಡಾ.ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್, ಕೆ.ಆರ್.ರವೀಂದ್ರಬಾಬು, ಮುಖಂಡರಾದ ಚೇತನಾ ಮಹೇಶ್, ಹರಳಹಳ್ಳಿ ವಿಶ್ವನಾಥ, ಡಾ.ಕೆ.ಎಸ್.ಬಸವೇಗೌಡ, ಕೆ.ಬಿ.ರವಿ ಮತ್ತಿತರರು ಅಭಿನಂದಿಸಿದರು.

 

ಮಳವಳ್ಳಿತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು

ಮಳವಳ್ಳಿ: ತಾಲ್ಲೂಕಿನ ಸುಜ್ಜಲೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾಗಿ ಜಯಲಕ್ಷ್ಮಿನಾಗರಾಜು ರವರು ಅವಿರೋಧವಾಗಿ ಆಯ್ಕೆಯಾದರು .ಹಿಂದೆ ಇದ್ದ ಶಿವಮ್ಮರವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ತಿಂಗಳಗಳಿಂದ ತೆರುವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾಲ್ಲೂಕು ಪಂಚಾಯಿತಿ ಇಒ ಹಾಗೂ ಚುನಾವಣಾಧಿಕಾರಿ ಸತೀಸ್ ರವರು ಚುನಾವಣೆ ನಿಗಧಿ ಪಡಿಸಿದ್ದರು.  ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಗಿದ್ದು   ಒಟ್ಟು 20 ಸದಸ್ಯರ ಪೈಕಿ ಜಯಲಕ್ಷ್ಮಿ ನಾಗರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು . ಈ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಸತೀಸ್ ರವರು ಜಯಲಕ್ಷ್ಮಿ ನಾಗರಾಜು ರವರು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಜಿ.ಪಂಸದಸ್ಯರು ತಾಲ್ಲೂಕುಪಂಚಾಯಿತಿ ಉಪಾಧ್ಯಕ್ಷ ಮಾಧು ,ಮುಖಂಡ ಚನ್ನಪಿಳ್ಳೆಕೊಪ್ಪಲುಸಿದ್ದೇಗೌಡರು ಸೇರಿದಂತೆ ಗ್ರಾಮದ ಮುಖಂಡರು ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿದರು.

ಭತ್ತ ಖರೀದಿ ಕೇಂದ್ರ ತೆರೆವಂತೆ ಒತ್ತಾಯಿಸಿ  ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ. ಮಳವಳ್ಳಿ ತಹಸೀಲ್ದಾರ್ ಕಚೇರಿ ಮುಂದೆ  ಪ್ರತಿಭಟನೆ ನಡೆಸಲಾಯಿತು.  

 ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ  ಭತ್ತ ಖರೀದಿ ಕೇಂದ್ರ  ತೆರೆವಂತೆ ಒತ್ತಾಯಿಸಿ  ಭತ್ತ ಬೆಳೆಗಾರರ ಹೋರಾಟ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ  ಪ್ರತಿಭಟನೆ ನಡೆಸಲಾಯಿತು ಪ್ರತಿಭಟನಾಕಾರರು  ಸರ್ಕಾರ ವಿರುದ್ದ ಘೋಷಣೆ ಕೂಗಿದ್ದರು.  ರೈತನೊಬ್ಬ ಸ್ಥಳೀಯ ಶಾಸಕರು ರೈತರ ಮೇಲೆ ಕಾಳಜಿ ಇಲ್ಲ  ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಮಯದವರೆಗೂ ಪ್ರತಿಭಟನಾ ಸ್ಥಳಕ್ಕೆ ಬರದಿದ್ದ ಕಾರಣ ರೊಚ್ಚಿಗೆದ್ದ ರೈತರು ತಹಸೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನಿಸಿದರು ಈ ಸಂದರ್ಭದಲ್ಲಿ. ಪೊಲೀಸರು ಹಾಗೂ ಪ್ರತಿಭಟನಾಕಾರ ನಡುವೆ  ಮಾತಿನ ಚಕಮುಕಿ ನಡೆಯಿತು ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರಮೇಶ್ ರವರು ಶಾಂತಿಯುತ ಪ್ರತಿಭಟನೆ ಮಾಡಿ  ಬೀಗ ಹಾಕಲು ಯತ್ನಿಸಿದರೆ ಕಾನೂನು ರೀತಿ ನಿಮ್ಮ ಮೇಲೆ ಕೇಸು ಹಾಕಬೇಕಾಗುತ್ತದೆ ಎಂದಾಗ. ಪ್ರತಿಭಟನಾಕಾರರು  ರೈತರಿಗೆ ಭತ್ತ ಖರೀದಿ ಮಾಡುತ್ತೇನೆ ಎಂದು ನೊಂದಾಣಿ ಮಾಡಿಸಿಕೊಂಡ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಾಗೂ  ಮುಖ್ಯಮಂತ್ರಿಗಳ ನಮಗೆ ವಂಚನೆ ಮಾಡಿದ್ದಾರೆ ಅವರ ಮೇಲೆ 420 ಕೇಸು ಹಾಕಿ  ಎಂದಾಗ. ದೂರು ನೀಡಿ ಕೇಸು ಹಾಕುತ್ತೇನೆ ಎಂದರು. ಇದೇ ಸಮಯಕ್ಕೆ  ಪ್ರತಿಭಟನಾ  ಸ್ಥಳಕ್ಕೆ ತಹಸೀಲ್ದಾರ್ ಚಂದ್ರಮೌಳಿ ಬೇಟಿ ಮನವೊಲಿಕೆ ಯತ್ನಿಸಿದರು. ಸ್ಥಳದಲ್ಲೇ ಭತ್ತ ಖರೀದಿಸಲು ಪ್ರತಿಭಟನಾಕಾರ ಒತ್ತಾಯ ಮಾಡಿದರು. ನಂತರ ಮಾತನಾಡಿದ ತಹಸೀಲ್ದಾರ್ ಚಂದ್ರಮೌಳಿ  ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಭೆಯೂ ನಡೆಯುತ್ತಿದೆ ಈಗಾಗಾಲೇ ಕಿರುಗಾವಲು ಗ್ರಾಮದಲ್ಲಿ ಭತ್ತ ಖರೀದಿಸಲು ಕೇಂದ್ರ ತೆರೆದಿದೆ ಇನ್ನೂ ಎರಡು ಮೂರು ದಿನಗಳಲ್ಲಿ ಇನ್ನೂ ಮೂರು ಕೇಂದ್ರಗಳನ್ನು ತೆರೆಯಲಾಗುವುದು ಎಂದರು.ನಂತರ ಈ ತಕ್ಷಣ ಭತ್ತವನ್ನು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಬೇಕು ಹಾಗೂ ಜೊತೆಗೆ ಒಬ್ಬ ರೈತರಿಗೆ 40 ಕ್ವೀಟಾಲ್ ಮಾತ್ರ ಭತ್ತ ಖರೀದಿಸಲು ಷರತ್ತುಯನ್ನು ವಾಪಸ್ಸು ಪಡೆಯಬೇಕು ಎಂದರು ಒತ್ತಾಯಿಸಿದರು. ಸರಿ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಹಸೀಲ್ದಾರ್ ತಿಳಿಸಿದ ನಂತರ. ಪತ್ರಿಭಟನಾಕಾರರು ಪ್ರತಿಭಟನೆ ಕೈಬಿಡಲಾಯಿತು.

 

 ಮಾಳಗೂರು ಗ್ರಾಮದಲ್ಲಿ ಹಸು ಒಂದು ಎರಡು ಕರುಗಳಿಗೆ ಜನ್ಮ ನೀಡಿದೆ ಎರಡು ಕರುಗಳು ಆರೋಗ್ಯವಾಗಿವೆ .

ಮಂಡ್ಯ ಜಿಲ್ಲೆಯ ಕೆ.ಅರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಮಾಳಗೂರು ಗ್ರಾಮದಲ್ಲಿ ಒಂದು ಅಚ್ಚರಿ ನಡೆದಿದೆ. ನಾವು ಮೇಕೆ ಮತ್ತು ಕುರಿಗಳು ಎರಡು ಕರುಗಳನ್ನು ಹಾಕುವುದನ್ನು ನೊಡಿರತ್ತೆವೆ ಅದರೆ ಇಲ್ಲಿ ಹಸು ಎರಡು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ. ಇ ಹಸು ಗ್ರಾಮದ ಶೇಕರ್ ಎಂಬುವರಿಗೆ ಸೇರಿದ್ದು  ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಕರುವಾಗಿದ್ದು ಎರಡು ಕರುಗಳು ಆರೋಗ್ಯ ವಾಗಿದ್ದು ಹಸು ಕೂಡಾ ಆರೋಗ್ಯ ವಾಗಿದೆ .ಇ ಅಚ್ಚರಿಯನ್ನು ನೊಡಲು ಗ್ರಾಮಸ್ಥರು ಮುಗಿಬಿದ್ದಿದಾರೆ.

 ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದ ಬಿ.ಆರ್.ಸಿ.ಕೇಂದ್ರದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಮುಖ್ಯ ತರಬೇತಿದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಮಾನ್ಯ ತಹಶಿಲ್ದಾರ್ ಎಂ.ಶಿವಮೂರ್ತಿ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ತಹಶಿಲ್ದಾರ್  ಶಿವಮೂರ್ತಿ ರವರು  ಮುಖ್ಯ ತರಬೇತಿದಾರರು ಬೋಧಕರಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲು ತಾವು ಸಂಪನ್ಮೂಲ ಶಿಕ್ಷಕರಾಗಿ ಉತ್ತಮವಾದ ಅಂಶಗಳನ್ನು ತರಬೇತಿಯ ಸಮಯದಲ್ಲಿ ಪಡೆದುಕೊಂಡು ಅವುಗಳನ್ನು ವ್ಯವಸ್ಥಿತವಾಗಿ ಮತ್ತು ಸೂಕ್ತ ವಾತಾವರಣದಲ್ಲಿ ಬೋಧಕರಿಗೆ ತರಬೇತಿ ನೀಡಿ. ಗ್ರಾಮ ಮಟ್ಟದಲ್ಲಿ  ಅನಕ್ಷರಸ್ಥರಿಗೆ ಒಳ್ಳೆಯ ಕಲಿಕಾ ವಾತಾವರಣ ನಿರ್ಮಿಸಿ ಅವರ ಬಿಡುವಿನ ವೇಳೆಯಲ್ಲಿ ಕಲಿಕೆ ಮಾಡಿಸುವ ಮೂಲಕ ಅವರನ್ನು ನವ ಸಾಕ್ಷರರನ್ನಾಗಿ ಮಾಡಿ ಅವರನ್ನು  ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನೂ  ತೃಪ್ತಿಕರವಾಗಿ ನಿರ್ವಹಿಸಬೇಕು, ಆ ಮೂಲಕ ಸಂಪೂರ್ಣ ಸಾಕ್ಷರತೆಯ ಗ್ರಾಮವಾಗಲು ಗಮನ ಹರಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಜಿಲ್ಲಾ ಲೋಕಶಿಕ್ಷಣ ಸಮಿತಿಯ ಸದಸ್ಯ ಅಂ.ಚಿ. ಸಣ್ಣಸ್ವಾಮಿಗೌಡ. ಕ್ಷೇತ್ರ ಸಮನ್ವಯಾಧಿಕಾರಿ. ಲಿಂಗರಾಜು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅದ್ಯಕ್ಷ ಪಿ.ಜೆ.ವೆಂಕಟರಾಮು. ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ಮರುವನಹಳ್ಳಿ ಬಸವರಾಜು ಮತ್ತು ಪಾಂಡವಪುರ ತಾಲ್ಲೂಕು ವಯಸ್ಕರ ಶಿಕ್ಷಣಾಧಿಕಾರಿ ರಾಘವೇಂದ್ರ. ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು.

Page 12 of 28

Visitors Counter

224141
Today
Yesterday
This Week
This Month
Last Month
All days
160
382
1486
542
6704
224141

Your IP: 13.59.82.167
2024-05-02 11:51

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles