Madhu

Madhu

ಸಂಪೂರ್ಣ ಸಾಕ್ಷರತೆ ಸಾಧಿಸಲು ಕರಾರುವಕ್ಕಾದ ಯೋಜನೆ ಹಾಕಿಕೊಂಡು ಕೆಲಸ ಮಾಡುವಂತೆ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ಖಡಕ್ ಸೂಚನೆ.

ಮಂಡ್ಯ: ಮಂಡ್ಯದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವಿಜಯ್ ನಿಮಗೆ ನೀಡುತ್ತಿರುವ ಹಣ ಸಾರ್ವಜನಿಕರ ತೆರಿಗೆಯ ಹಣವಾಗಿದ್ದು ಒಂದೊಂದು ರೂಪಾಯಿ ಯನ್ನು ಅನಕ್ಷರಸ್ಥರ ಕಲಿಕೆಯ ಉಪಯೋಗಕ್ಕೆ ಬಳಸಬೇಕು. ಶೇಕಡಾ 100 ಗುರಿಯನ್ನು ಸಾಧಿಸಲು ಅಗತ್ಯವಾದ ಯೋಜನೆಯನ್ನು ಹಾಕಿಕೊಂಡು ಕಾರ್ಯಕ್ರಮದ ಸಾಧನೆಗಾಗಿ ತಾಲ್ಲೂಕು ಹಂತದ ಅಧಿಕಾರಿಗಳ ಸಹಕಾರದಿಂದ ಸಾಧಿಸಬೇಕಾದ ಗ್ತಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಸಂಪೂರ್ಣ ಸಾಕ್ಷರತಾ ಗ್ರಾಮ /ಪಂಚಾಯತಿ ಎಂದು ಘೋಷಿಸಿ ಕಾರ್ಯ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ನುಖರಾಗಬೇಕು ಎಂದು ತಿಳಿಸಿದರು. ಈಗಾಗಲೇ ಮೊದಲ ಹಂತದಲ್ಲಿ ಹಣಕಾಸನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದು ತಾಲ್ಲೂಕು ಹಂತಕ್ಕೂ ಹಣ ನೀಡಲಾಗಿದೆ ಸಮೀಕ್ಷೆಯಂತೆ ಮ್ಯಾಚಿಂಗ್ ಬ್ಯಾಚಿಂಗ್ ಪಟ್ಟಿ ಬೋಧಕರ ಪಟ್ಟಿ. ಮುಖ್ಯ ತರಬೇತುದಾರರಿಗೆ ತರಬೇತಿ. ಬೋಧಕರ ತರಬೇತಿ ಕಲಿಕಾ ಕೇಂದ್ರಗಳ ಪ್ರಾರಂಭ ಹೀಗೆ ಶಿಸ್ತು ಬದ್ದವಾಗಿ ಕೆಲಸ ಮಾಡಿ ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡುವ ಮೂಲಕ ಪುಣ್ಯದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯ ಸಂಪನ್ಮೂಲ ಅಧಿಕಾರಿ ವೆಂಕಟೇಶ್. ಅಕೌಂಟ್ ಆಫೀಸರ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರಿಜ್ವಾನಾ ಕೌಸರ್ ಜಿಲ್ಲಾ ಕಾರ್ಯಕ್ರಮ ಸಹಾಯಕ ರಮೇಶ್ ಹಾಗೂ ಎಲ್ಲಾ ತಾಲ್ಲೂಕಿನ ಸಂಯೋಜಕರು ಹಾಜರಿದ್ದರು.

ಕೆ.ಆರ್.ಪೇಟೆ ಹಿಂದೂಪರ ಸಂಘಟನೆಗಳಿಂದ ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ . ಮಾನವಸರಪಳಿ ರಚಿಸಿ ರಸ್ತೆ ತಡೆ.ಪಾಪಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ದೇಶಭಕ್ತರು. 

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಹಿಂದೂ ಪರಸಂಘಟನೆಗಳಿಂದ ಹುತಾತ್ಮ ಯೋಧರ ಪರವಾಗಿ ಪಂಜಿನ ಮೆರವಣಿಗೆ ನಡೆಸಿ ಪಾಕಿಸ್ತಾನದ ಪಾಪಿ ಕೃತ್ಯದ ವಿರುದ್ಧ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ದೇಶಭಕ್ತರು.ಶಿಖಂಡಿಯಂತೆ ಮೋಸದಿಂದ ಆರ್ ಡಿ ಎಕ್ಸ್ ಸ್ಪೋಟಕಗಳಿಂದ ತುಂಬಿದ್ದ ವಾಹನವನ್ನು ಸಿಆರ್ ಪಿಎಫ್ ಯೋಧರು ಸಾಗುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡಿಸಿ 50ಕ್ಕೂ ಹೆಚ್ಚಿನ ಯೋಧರ ಮಾರಣ ಹೋಮ ನಡೆಸಿದ ಪಾಕಿಸ್ತಾನದ ಕೃತ್ಯವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಾಲು, ನಟರಾಜು, ಹೆಚ್.ಬಿ. ಮಂಜುನಾಥ ಮತ್ತು ಡಾ. ಕೆ.ಆರ್.ನೀಲಕಂಠ ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಪಂಜನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದುರ್ಗಾಭವನ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಯುವಜನರು ಹಾಗೂ ದೇಶಭಕ್ತರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಪಾಕಿಸ್ತಾನದ ಪಾಪಿಕೃತ್ಯವನ್ನು ಖಂಡಿಸಿದರು. ಪಟ್ಟಣ ಪೋಲಿಸರು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಸಂತೇಬಾಚಹಳ್ಳಿ ಹೋಬಳಿಯ ಸೊಮೇನಹಳ್ಳಿ ಗ್ರಾಮದಲ್ಲಿ ವೃದನ ಮೇಲೆ ಚಿರತೆ ದಾಳಿ ಗಂಭೀರ ಗಾಯ.ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ಸೋಮೇನಹಳ್ಳಿ ಗ್ರಾಮದ ಶಿವಣ್ಣ (೬೨) ಎಂಬ ವೃದನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗಾಳಾಗಿದ್ಧು ತುಂಬ ರಕ್ತಸ್ರಾವ ವಾಗಿದ್ದು ತಾಲ್ಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ .ರವಿ ಮತ್ತು ಶಿವಣ್ಣ ಎಂಬ ಇಬ್ಬರೂ ರೈತರು ತಮ್ಮ ಜಮೀನಲ್ಲಿ ಮೇಕೆ ಮೆಯುಸುತ್ತಿದ್ದಾಗ ಮೇಕೆಗಳ ಮೇಲೆ ಎರಡು ಚಿರತೆಗಳು ದಾಳಿಮಾಡಿದ್ದು ರವಿ ತಕ್ಷಣ ಮಚ್ಚಿನಿಂದ ಹೊಡೆಯಲು ಹೋದಾಗ ರವಿ ಮೇಲೆ ಎರಗಿದ ಚಿರತೆ ಕೈಮತ್ತು ಕಾಲುಗಳಿಗೆ ಪರಚಿ ಹೊಡಿಹೊಗಿದೆ ಇನ್ನೊಂದು ಚಿರತೆ ಅಲ್ಲೆ ಪಕ್ಕ ಪಕ್ಕದಲ್ಲಿ ಇದ್ದ ವೃದ ಶಿವಣ್ಣನ ಮೇಲೆ ಎರಗಿ ಕಾಲು ಕುತ್ತಿಗೆ ಕೈ ತೊಡೆಯ ಭಾಗಕ್ಕೆ ಹಲ್ಲೆಮಾಡಿ ವೃದನನ್ನು ಎಳೆದುಕೊಂಡು ಹೊಗತ್ತಿದ್ದಾಗ ಪಕ್ಕದಲ್ಲಿ ಇದ್ದ ರವಿ ಅಕ್ಕಪಕ್ಕದ ಜನರನ್ನು ಕೂಗಿ ಕರೆದು ಚಿರತೆಯನ್ನು ದೊಣ್ಣೆ ಮತ್ತು ಮಚ್ಚುಗಳಿಂದ ಎದುರಿಸಿ ಹೊಡಿಸಿದ್ದಾರೆ ನಂತರ ವೃದನನ್ನು ಅಂಬೂಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರೆ ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾ ಅರಣ್ಣ ಇಲಾಖೆ ಇಷ್ಟು ದಿನ ದನಕರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಗಳು ಇಂದು ನರಮಾನವರ ಮೇಲೆ ಹಲ್ಲೆಗೆ ಮುಂದಾಗಿ .ಚಿರತೆ ಗಳನ್ನು ಹಿಡಿಯುವ ಅರಣ್ಯ ಅಧಿಕಾರಿಗಳು ಕ್ರಮ ಕೈಗೋಳತ್ತಾರ ಕಾದು ನೊಡಬೇಕಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ದನಕರುಗಳ ಮೇಲೆ ದಾಳಿ ಮಾಡಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ

ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ .

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರು ಮತ್ತು ಪ್ರೆಸ್ ಕ್ಲಬ್ ವತಿಯಿಂದ ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ. ನಂತರ ತಹಶೀಲ್ದಾರ್ ಕಛೇರಿಗೆ ತೆರಳಿ ದೇಶದ್ರೋಹಿಗಳಾದ ಉಗ್ರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್ಮ ಹದೇವೇಗೌಡ, ಪತ್ರಕರ್ತರಾದ ಮಾಕವಳ್ಳಿರವಿ, ಸಿಂಕಸುರೇಶ್, ಕೆ.ಆರ್.ನೀಲಕಂಠ, ಹೆಚ್.ಬಿ.ಮಂಜುನಾಥ್, ಹೊಸಹೊಳಲು ರಾಜೇಶ್, ಸಯ್ಯದ್ ಖಲೀಲ್ ಸೇರಿದಂತೆ ರೈತಮುಖಂಡರು, ಪ್ರಗತಿಪರ ಚಿಂತಕರು ಉಪಸ್ಥಿತರಿದ್ದರು.

 ಟಿಎಪಿಸಿಎಂಎಸ್ ವತಿಯಿಂದ ನೂತನ ಪೆಟ್ರೋಲ್ ಬಂಕ್  ಶಂಕುಸ್ಥಾಪನೆ.

ಮಳವಳ್ಳಿ : ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯರಸ್ತೆಯ ಟಿಎಪಿಸಿಎಂಎಸ್  ಹಳೆಯ ಕಟ್ಟಡದಲ್ಲಿ  ನೂತನ ಪೆಟ್ರೋಲ್ ಬಂಕ್  ಶಂಕುಸ್ಥಾಪನೆಯನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಡಾ ಚೌಡೇಶ್ ರವರು ನೇರವೇರಿಸಿದರು.  ಮಳವಳ್ಳಿ ಪಟ್ಟಣದ ಮದ್ದೂರು ಮುಖ್ಯ ರಸ್ತೆ ಗೆ ಹೊಂದಿಕೊಂಡಂತೆ ಟಿಎಪಿಸಿಎಂಎಸ್ ಜಾಗದಲ್ಲಿ ಪೆಟ್ರೋಲ್ ಬಂಕ್  ತೆರಯಲು  ಕಮಿಟಿಯಲ್ಲಿ ತೀರ್ಮಾನಿಸಲಾಗಿತ್ತು ಅಂತೆಯೇ ಇಂದು  ಟಿಎಪಿಸಿಎಂಎಸ್ ಅಧ್ಯಕ್ಷ ಡಾ. ಚೌಡೇಶ್ ರವರು  ಶಂಕುಸ್ಥಾಪನೆ ನೇರವರಿಸಿದರು. ನಂತರ ಮಾತನಾಡಿ  ನಮ್ಮ ಟಿಎಪಿಸಿಎಂಎಸ್  ಸಾಕಷ್ಟು ಬೆಳೆದಿದೆ, ಈಗಾಗಲೇ  ಟಿಎಪಿಸಿಎಂಎಸ್ ಮಳಿಗೆ, ತೆರೆದಿದ್ದು, ಅಕ್ಕಿ ಸಂಗ್ರಹ  ಗೋದಾಮು  ಉದ್ಘಾಟಿಸಿದ್ದು.  ಹಂತಹಂತವಾಗಿ  ಪ್ರಗತಿ ಕಾಣುತ್ತಿದೆ  ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ನಿರ್ವಹಣೆ ಮಾಡುವುದಾಗಿ ತಿಳಿಸಿದರು.     

ಕಾರ್ಯಕ್ರಮ ದಲ್ಲಿ ಟಿಎಪಿಸಿಎಂಎಸ್  ಉಪಾಧ್ಯಕ್ಷ ಬಸವರಾಜು, ನಿರ್ದೇಶಕ ರಾದ ಕನ್ನಳ್ಳಿಸುಂದ್ರಪ್ಪ,  ಕೆ.ಜೆ ದೇವರಾಜು, ಚಿಕ್ಕರಾಜು  ಸೇರಿದಂತೆ ಮತ್ತಿತ್ತರು ಇದ್ದರು

ದೇಶದ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ಕೃತ್ಯ  ದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದು, 18 ಯೋಧರ ಸ್ಥಿತಿ ಗಂಭೀರ .78 ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯೋಧರು 100 ಮೀಟರ್ ದೂರಕ್ಕೆ ಹಾರಿತು ದೇಹ!

ಕೃತ್ಯ ನಡೆದಿದ್ದು ಹೇಗೆ?

ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‌ಪಿಎಫ್‌ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 42 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದಾರೆ.

ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಸೈನಿಕರ ವಾಹನವನ್ನು ಉಗ್ರರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸುಗಳು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿದೆ. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.

ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ 2016ರ ಸೆಪ್ಟೆಂಬರ್ 18ರಂದು ನಾಲ್ವರು ಉಗ್ರರು ದಾಳಿ ನಡೆಸಿ 18 ಮಂದಿ ಯೋಧರನ್ನು ಹತ್ಯೆ ಮಾಡಿದ್ದರು. ಭಾರತೀಯ ಸೇನೆ ಸಮವಸ್ತ್ರ ಧರಿಸಿ ಅಕ್ರಮವಾಗಿ ಒಳ ನುಗ್ಗಿದ್ದ ಈ ಪಾಪಿಗಳು ಯೋಧರು ಮಲಗಿದ್ದಾಗ ದಾಳಿ ನಡೆಸಿ ಕೃತ್ಯ ಎಸಗಿದ್ದರು. ಇಲ್ಲಿಯವರೆಗೆ ದೇಶದ ಇತಿಹಾಸಲ್ಲಿ ಅತಿ ದೊಡ್ಡ ದಾಳಿ ಎಂಬ ಕುಖ್ಯಾತಿ ಗಳಿಸಿತ್ತು. ಈಗ ಇದಕ್ಕಿಂತಲೂ ಅತಿ ದೊಡ್ಡ ದಾಳಿ ನಡೆದಿದ್ದು ಉಗ್ರರ ಪಾಪಿ ಕೃತ್ಯಕ್ಕೆ ಅಮಾಯಕ 42ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ  ಕೃಷ್ಣ (30) ಯುವಕ ಆತ್ಮಹತ್ಯೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ ಕೃಷ್ಣ (30) ಎಂಬಾತ ಕುಟುಂಬದ ಕಲಹದ ಹಿನ್ನೆಲೆ ತನ್ನ ಜಮೀನಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ.ಗಂಡ ಹೆಂಡಿತಿ ಜಗಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದ ಗ್ರಾಮಸ್ಥರು ಹೇಳುತ್ತಿದ್ದು.ಆತ್ಮಹತ್ಯೆಗೆ ನಿಕರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಿಕ್ಕೇರಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಭೇಟಿ ನೀಡಿ ಮುಂದಿನ ತನಿಖೆ ಕೈಕೊಂಡಿದ್ದಾರೆ.

 

 

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಶರಣಶ್ರದ್ಧಾಕೇಂದ್ರ ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾಗಿ ಮಠದ ಅರ್ಚಕರಿಗೆ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಪೀಠಕ್ಕೆ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು.ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳೆಂದು ಹೊಸದಾಗಿ ನಾಮಕರಣ .

ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಶರಣ ಶ್ರದ್ಧಾಕೇಂದ್ರವಾದ ಕಾಪನಹಳ್ಳಿ ಗವಿಮಠದ ನೂತನ ಪೀಠಾಧಿಪತಿಗಳಾಗಿ ಶ್ರೀ.ಸ್ವತಂತ್ರ ಚನ್ನವೀರ ಸ್ವಾಮೀಜಿಗಳ ನೇಮಕ.ಶ್ರೀಮಠದ ವ್ಯಾಪ್ತಿಯ ಒಂಭತ್ತು ಹಳ್ಳಿಗಳ ಸದ್ಭಕ್ತರ ಸಮ್ಮುಖದಲ್ಲಿ ಕೆಂಗೇರಿಯ ಬಂಡೆಮಠದ ಶ್ರೀಗಳಿಂದ ಸ್ವಾಮೀಜಿಗಳಾಗಿ ಧೀಕ್ಷೆ ಸ್ವೀಕರಿಸಿದ ಗವಿಮಠದ ಅರ್ಚಕ ಚನ್ನವೀರಯ್ಯ.ಅರ್ಚಕ ಚನ್ನವೀರಯ್ಯ ಅವರನ್ನು ಶ್ರೀ ಸ್ವತಂತ್ರ ಚನ್ನವೀರಸ್ವಾಮಿಗಳಾಗಿ ಬದಲಾದ ನಾಮಕರಣ.ಗವಿಮಠದ ಸೇವಕನಾಗಿ ನಿಷ್ಠೆಯಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಖಾಲಿ ಉಳಿದಿದ್ದ ಶ್ರೀಮಠದ ಪೀಠಾಧಿಪತಿಗಳ ಸ್ಥಾನ.ಹಾರನಹಳ್ಳಿ ಕೋಡಿಮಠದ ಶಾಖಾಮಠವೆಂದು ಕೆ.ಆರ್.ಪೇಟೆ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಕೋಡಿಶ್ರೀಗಳು.ಗವಿಮಠದ ಸದ್ಭಕ್ತರು ಹಾಗೂ ಸ್ವತಂತ್ರ ಸಿದ್ಧಲಿಂಗೇಶ್ವರರ ಪ್ರೇರಣೆಯಂತೆ ಗವಿಮಠದ ಶ್ರೀಗಳಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ವೇದ, ಮಂತ್ರ ಸಂಸ್ಕೃತಾಭ್ಯಾಸ ಮಾಡಿಲ್ಲ.ಆದರೆ ಕಳೆದ 18ವರ್ಷಗಳಿಂದ ಶ್ರೀಮಠದಲ್ಲಿ ಅರ್ಚಕನಾಗಿ ಕೆಲಸ ಮಾಡಿದ ಅನುಭವವಿದೆ. ಶ್ರೀ ಮಠದ ಅಭಿವೃದ್ಧಿಯೇ ನನ್ನ ಮೂಲಮಂತ್ರವಾಗಿದೆ. ಗವಿಮಠವನ್ನೇ ಜನತೆ ಹಾಗೂ ಭಕ್ತರ ಮನೆಬಾಗಿಲಿಗೆ ಕೊಂಡೊಯ್ದು ಬಿಕ್ಷೆಬೇಡಿಕೊಂಡು ಜೋಳಿಗೆಯಲ್ಲಿ ಬಂದ ಹಣದಿಂದ ಶ್ರೀಮಠವನ್ನು ಮುನ್ನಡೆಸುತ್ತೇನೆ. ಕಾಪನಹಳ್ಳಿ ಗವಿಮಠದಲ್ಲಿ ಕೇವಲ ಸಾಮಾನ್ಯ ಅರ್ಚಕನಾಗಿದ್ದ ನಾನು ಮಠದ ಸ್ವಾಮೀಜಿಯಾಗುತ್ತೇನೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.ಎಲ್ಲಾ ಸಿದ್ಧಲಿಂಗಪ್ಪನ ಇಚ್ಛೆ.ಹೊಸವಿವಾದ ಹುಟ್ಟು ಹಾಕಿದ ಗವಿಮಠದ ಉತ್ತರಾಧಿಕಾರಿ ನೇಮಕ.ಈ ಹಿಂದೆ ಮಠದ ಪೀಠಾಧ್ಯಕ್ಷರಾಗಿದ್ದ ದಿವಂಗತ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಸಹೋದರ ಬಸವರಾಜಸ್ವಾಮಿಗಳಿಂದ ನಡೆದ ಪೀಠಾಧಿಪತಿ ನೇಮಕ.ಸ್ಥಳೀಯಚಮುಖಂಡರ ಬೆಂಬಲ ಹಾಗೂ ಮನದಾಸೆಯನ್ನು ಪುರಸ್ಕರಿಸಿ ಅರ್ಚಕ ಚನ್ನವೀರಯ್ಯ ಅವರನ್ನೇ ಸ್ವಾಮೀಜಿಗಳಾಗಿ ಧೀಕ್ಷೆ ನೀಡಿ ಖಾವಿಬಟ್ಟೆ ಹಾಕಿಸಿ ಹೊಸದಾಗಿ ಶ್ರೀ ಸ್ವತಂತ್ರ ಚನ್ನವೀರಸ್ವಾಮೀಜಿಗಳೆಂದು ನಾಮಕರಣ ಮಾಡಿ ಪೀಠಾಧಿಪತಿ ಸ್ಥಾನದಲ್ಲಿ ಕೂರಿಸಿದ ಕೆಂಗೇರಿಯ ಬಂಡೆಮಠದ ಶ್ರೀಗಳು. ಗವಿಮಠದ ಸದ್ಭಕ್ತರಲ್ಲಿ ಬುಗಿಲೆದ್ದ ಭಿನ್ನಮತ.ಕೋಡಿಮಠದ ಶ್ರೀಗಳ ನಡೆ ಇನ್ನೂ ನಿಗೂಢ.

  ನಡೆದಾಡುವ ದೇವರು , ಕರ್ನಾಟಕ ರತ್ನ  ಪರಮಪೂಜ್ಯ ಶ್ರೀ ಶ್ರೀ ಶ್ರೀ  ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆಯನ್ನು ಸರ್ವಜನಾಂಗ ಸೇರಿ  ಇದೇ ಫೆ 19 ರಂದು ಮಳವಳ್ಳಿ ಪಟ್ಟಣದಲ್ಲಿ  ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು

ಮಳವಳ್ಳಿ: ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ  ತಾಲ್ಲೂಕು ಅಧ್ಯಕ್ಷ. ಕುಂದೂರು ಮೂರ್ತಿ ರವರ ಅಧ್ಯಕ್ಷತೆಯಲ್ಲಿ ಶ್ರೀ ಗಳ   ಪುಣ್ಯಸ್ಮರಣೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಯಜಮಾನ ವೆಂಕಟಪ್ಪರವರು ಮಾತನಾಡಿ ವೀರಶೈವ ಜನಾಂಗದವರು  ಎಲ್ಲಾ ಸಮಾಜವನ್ನು ಒಗ್ಗೂಡಿಸಲು ಮುಂದಾಗಿರುವುದು  ಸಂತಸದ ವಿಷಯ   ನಾವೆಲ್ಲರೂ ಎಂದಿಗೂ ಜೊತೆಯಾಗಿ ಪಟ್ಟಣ ಹಾಗೂ ತಾಲ್ಲೂಕು ಅಭಿವೃದ್ಧಿ ಮಾಡೋಣ ಎಂದರು. ಇನ್ನೂ  ಹಿರಿಯ ಮುಖಂಡ ಎಂ.ಹೆಚ್ ಕೆಂಪಯ್ಯ  ಮಾತನಾಡಿ , ವೀರಶೈವ ಜನಾಂಗದವರು   ಎಲ್ಲಾ ಜನಾಂಗದ  ಜೊತೆಗೂಡಿ ಶ್ರೀ ಗಳ   ಪುಣ್ಯಸ್ಮರಣೆ  ಮಾಡೋಣ ಎಂದರು ವೀರಶೈವ ಅಭಿವೃದ್ಧಿ ದೃಷ್ಟಿಯಿಂದ  ರಾಜಕೀಯ ಬಿಡುವಂತೆ ಮುಖಂಡರನ್ನು ಮನವಿ ಮಾಡಿದರು  ಶ್ರೀಗಳ  ನೆನಪು ಮಾಡುವ ಕಾರ್ಯಕ್ರಮದಲ್ಲಿ  ನಾವು ಭಾಗವಹಿಸುತ್ತವೆ ಎಂದರು. ಕಾರ್ಯಕ್ರಮಕ್ಕೆ ಸರ್ವಧರ್ಮದ ಜನಾಂಗದ ಸ್ವಾಮೀಜಿ , ಹಿಂದೂ .ಮುಸ್ಲಿಂ , ಕೈಸ್ತ  ಧರ್ಮದ  ಮುಖಂಡರು ಕರೆಯುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ  ತಾ.ಪಂ ಉಪಾಧ್ಯಕ್ಷ ಮಾಧು, ವೀರಶೈವ ನೌಕರರ ಸಂಘದ ಅಧ್ಯಕ್ಷ ಗಂಗಾಧರ್,  ಕುಂದೂರು ಪ್ರಕಾಶ, ಪುರಸಭೆ ಸದಸ್ಯರಾದ  ಚಿಕ್ಕರಾಜು, ನಾಗೇಶ್, ಸೇರಿದಂತೆ ಮತ್ತಿತ್ತರು ಇದ್ದರು.

ಶಾಸಕ ನಾರಾಯಣಗೌಡರು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರನ್ನು ಆಪರೇಷನ್ ಕಮಲ ಮಾಡಲು ಯಡಿಯೂರಪ್ಪ ಅವರಿಂದ ಸಾಧ್ಯವಿಲ್ಲ.ಯಡಿಯೂರಪ್ಪ ಮತ್ತೆ ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ ಎಪಿಎಂಸಿ ಮಾಜಿಅಧ್ಯಕ್ಷ ಕೆ.ಎನ್.ಕೃಷ್ಣ ಆಕ್ರೋಶ.

ಕೆ.ಆರ್.ಪೇಟೆ : ಕೃಷ್ಣರಾಜಪೇಟೆ ಶಾಸಕ ಡಾ.ನಾರಾಯಣಗೌಡ ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ.ಅವರು ಅನಾರೋಗ್ಯದಿಂದಾಗಿ ಸದನಕ್ಕೆ ಹಾಜರಾಗಿಲ್ಲ.ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿರುವಂತೆ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ.ಬಿಜೆಪಿ ಮುಖಂಡರು ಶಾಸಕ ನಾರಾಯಣಗೌಡರ ವಿರುದ್ಧ ಅಪಪ್ರಚಾರ ಮಾಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಚ್ಚರಿಕೆ. ತಂದೆ-ತಾಯಿಗಳನ್ನು ಕಳೆದುಕೊಂಡಿರುವ ಶಾಸಕ ನಾರಾಯಣಗೌಡರು ಮಾಜಿಪ್ರಧಾನಿ ದೇವೇಗೌಡರು ಮತ್ತು ಚನ್ನಮ್ಮ ಅವರನ್ನು ತಂದೆತಾಯಿಗಳ ರೂಪದಲ್ಲಿ ಕಾಣುತ್ತಿದ್ದಾರೆ ಎಂದು ಕೃಷ್ಣ ತಿಳಿಸಿದರು. ಕೆ.ಆರ್.ಪೇಟೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಅಪಪ್ರಚಾರಗಳಿಗೆ ಕಿವಿಗೊಡದೇ ಜೆಡಿಎಸ್ ಪಕ್ಷದ ಬಲವರ್ಧನೆ ಹಾಗೂ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನಾಗರಾಜೇಗೌಡ ನಿರ್ದೇಶಕರಾದ ಲೋಕೇಶ್, ಐನೋರಹಳ್ಳಿ ಮಲ್ಲೇಶ್ ಉಪಸ್ಥಿತರಿದ್ದರು.

 

Page 10 of 28

Visitors Counter

225561
Today
Yesterday
This Week
This Month
Last Month
All days
303
285
827
1962
6704
225561

Your IP: 18.190.152.38
2024-05-07 23:28

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles