ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ ಕೃಷ್ಣ (30) ಯುವಕ ಆತ್ಮಹತ್ಯೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಗನ ಹೊಸಹಳ್ಳಿ ಗ್ರಾಮದ ಕೃಷ್ಣ (30) ಎಂಬಾತ ಕುಟುಂಬದ ಕಲಹದ ಹಿನ್ನೆಲೆ ತನ್ನ ಜಮೀನಿನ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಡೆದಿದೆ.ಗಂಡ ಹೆಂಡಿತಿ ಜಗಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದ ಗ್ರಾಮಸ್ಥರು ಹೇಳುತ್ತಿದ್ದು.ಆತ್ಮಹತ್ಯೆಗೆ ನಿಕರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಿಕ್ಕೇರಿ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರು ಭೇಟಿ ನೀಡಿ ಮುಂದಿನ ತನಿಖೆ ಕೈಕೊಂಡಿದ್ದಾರೆ.