Rate this item
(1 Vote)

 ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ಆದೇಶದ ಮೇರೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕು ಲೋಕ ಶಿಕ್ಷಣ ಸಮಿತಿಯ ವತಿಯಿಂದ ಗ್ರಾಮ ಲೋಕ ಶಿಕ್ಷಣ ಸಮಿತಿ ಬೀರವಳ್ಳಿ. ಅಕ್ಕಿಹೆಬ್ಬಾಳು. ಆಲಂಬಾಡಿ ಕಾವಲ್ ಶೀಳನೆರೆ ಗ್ರಾ.ಪಂ ಹಂತದಲ್ಲಿ ಬೋಧಕರ ತರಬೇತಿ ಕಾರ್ಯಕ್ರಮ ನಡೆಯಿತು.

ಕೆ.ಆರ್.ಪೇಟೆ: ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಸಂಯೋಜಕ ಮರುವನಹಳ್ಳಿ ಬಸವರಾಜು ನಮ್ಮ ತಾಲ್ಲೂಕಿನಲ್ಲಿ 2011ರ ಜನಗಣತಿಯಂತೆ 27829 ಜನ ಅನಕ್ಷರಸ್ಥರು ಇದ್ದು , ಇದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಆದ್ದರಿಂದ ಎಲ್ಲಾ ಬೋಧಕರು ತಮ್ಮ ತಮ್ಮ ವ್ಯಾಪ್ತಿಯ ಅನಕ್ಷರಸ್ಥರ ಬಾಳಿಗೆ ಅಕ್ಷರ ಕಲಿಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು ಆ ಮೂಲಕ ಸಂಪೂರ್ಣ ಸಾಕ್ಷರತೆಯ ಪಂಚಾಯತಿಯನ್ನಾಗಿ ಘೋಷಣೆ ಮಾಡಲು ಕಟಿಬದ್ದರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಮಾತನಾಡಿ ನಿಮಗೆ ಗುರುಗಳ ಗುರುಮಾತೆಯ ಸ್ಥಾನ ನೀಡಲಾಗಿದ್ದು ಅನಕ್ಷರಸ್ಥರ ಮನವೊಲಿಸಿ ಅವರ ಬಿಡುವಿನ ವೇಳೆಯಲ್ಲಿ ಅವರಿಗೆ ಕಲಿಸುವುದರ ಮೂಲಕ ಹೆಬ್ಬೆಟ್ಟಿನ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ತಾವುಗಳು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸ್ವಯಂ ಸೇವಕರಾಗಿಅಕ್ಷರ ಕಲಿಸುವ ಗುರುತರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪುಣ್ಯದ ಕೆಲಸ ಮಾಡಬೇಕು. ಇದೇ ನೀವು ಉತ್ತಮ ಸಮಾಜಕ್ಕೆ ನೀಡುವ ಕೊಡುಗೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿಡಿಓಗಳಾದ ಬೀರವಳ್ಳಿ ಅರವಿಂದ್.ಅಕ್ಕಿಹೆಬ್ಬಾಳು ಪಿಡಿಓ.ರವಿಕುಮಾರ್. ಆಲಂಬಾಡಿ ಪಿಡಿಓ ರವಿ. ಪ್ರೇರಕರಾದ ರವಿಕುಮಾರ್. ಕಾವ್ಯ. ತೇಜಸ್ವಿನಿ.ಆಶಾ.ಹೇಮಾ.ಭಾರತಿ.ಸಿ.ಆರ್.ಪಿ.ಲೋಕೇಶ್. ಮುಖ್ಯಶಿಕ್ಷಕರಾದ ಗೋವಿಂದರಾಜು.ಕುಮಾರಸ್ವಾಮಿ. ರವಿ.ಸಂಪನ್ಮೂಲ ಶಿಕ್ಷಕರಾದ ಜಿ.ಎಸ್.ಮಂಜು.ಜೆ.ವಿ.ರಾಮಚಂದ್ರ.ರಾಘವೇಂದ್ರ. ಹೆಚ್.ಎಸ್.ನಾರಾಯಣ. ರಾಜೇಶ್ ಎಸ್.ಬಿ. ಹಾಗೂ ಬೋಧಕರು ಗಳು ಹಾಜರಿದ್ದರು.

ಮುಳುವಾಗುತ್ತಾ ಕುಟುಂಬ ರಾಜಕಾರಣ!?ಪ್ರಜ್ವಲ್ ನಿಂತ್ರೆ ಬಿಜೆಪಿಗೆ ಹೋಗ್ತೀನಿ ಎ.ಮಂಜು
 
ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಭಾರಿ ಲೆಕ್ಕಾಚಾರ ನಡೆಯುತ್ತಿದ್ದು, ಜೆಡಿಎಸ್ ವಲಯದಲ್ಲಿ ದೇವೇಗೌಡರ ಮೊಮ್ಮಗನಿಗೆ ಕ್ಷೇತ್ರವನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ಆರು ಬಾರಿ ಸ್ಪರ್ಧಿಸಿದ್ದ ದೇವೇಗೌಡ್ರು ಈ ಬಾರಿಯೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲಿ ಎನ್ನುವುದು ನನ್ನ ಅಭಿಲಾಷೆ ಎಂದು ಮೊನ್ನೆ ಮೊನ್ನೆ ತಾನೆ ಜಿಲ್ಲಾ ಉಸ್ತುವಾರಿ ಸಚಿವರ ಪತ್ನಿ ಭವಾನಿ ರೇವಣ್ಣ ಕೂಡ ಬೇಲೂರಿನಲ್ಲಿ ಮಾತನಾಡಿದ್ದರು.
Rate this item
(1 Vote)

 ಮಾನವನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಅದಕ್ಕಾಗಿ ವಿದ್ಯಾಭ್ಯಾಸ ವನ್ನು ಪ್ರತಿಯೊಬ್ಬರು  ಮಾಡುವಂತೆ  ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ  ಡಾ.ಲೋಹಿಯಾ ರಾಮಮನೋಹರ ವಿಚಾರ ವೇದಿಕೆಯ ಸಂಸ್ಥಾಪಕ ಡಾ.ದಡದಪುರ ಶಿವಣ್ಣ  ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ದಡದಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  75 ವರ್ಷದ ವಜ್ರ ಮಹೋತ್ಸವ ಹಾಗೂ 4 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು  ಡಾ.ದಡದಪುರ ಶಿವಣ್ಣ  ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಪ್ರದೇಶದ ಜನರಿಗೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಹಳ್ಳಿಗಾಡು ಅಭಿವೃದ್ಧಿ ಯಾದರೆ ಮಾತ್ರ ದೇಶ ಪ್ರಗತಿಯಾಗುತ್ತದೆ. ಎಂದ ಅವರು   ತಾನು ಓದಿದ ಶಾಲೆಯ ಸಮಾರಂಭದಲ್ಲೇ  ನಾನು ಸತ್ತ ಮೇಲೆ   ನನ್ನ ಸರ್ವಾಂಗ ದೇಹವನ್ನು ಧಾನ ಮಾಡುವುದಾಗಿ ಘೋಷಣೆ ಮಾಡಿದ್ದು ಅದಲ್ಲದೆ ಶಾಲಾ ವತಿಯಿಂದ ಮಾಡುವ ಸನ್ಮಾನ ವನ್ನು  ಮಾಡಿಸಿಕೊಳ್ಳದೆ ಅದನ್ನು ತನ್ನ ತಾಯಿಗೆ ಸ್ವತಃ ಅವರ ಕೈಯಲ್ಲಿ ಸನ್ಮಾನ‌ಮಾಡಿ ಕಾಲಿಗೆ ನಮಸ್ಕಾರ ಮಾಡುವ  ಮೂಲಕ  ಮಾನವೀಯತೆ ಮೆರದರು.   ಇನ್ನೂ  ಶಾಲಾ ಅಭಿವೃದ್ಧಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುವುದಾಗಿ ಜೊತೆ ಗ್ರಾಮದ ಅಭಿವೃದ್ಧಿ ಗೂ  ಸಹಕಾರ ನೀಡುವುದಾಗಿ  ತಿಳಿಸಿದರು  ಈ ಶಾಲೆಯಲ್ಲಿ ಓದಿದ್ದಂತಹ ಹಾಗೂ  ನನ್ನಂತಹ ವಿದ್ಯಾರ್ಥಿಗಳು ಬಹಳ ಮಂದಿ ಇದ್ದಾರೆ ಅವರು ಸಾಕಷ್ಟು ಆರ್ಥಿಕವಾಗಿ ಪ್ರಗತಿ ಕಂಡಿದ್ದಾರೆ  ಅವರು ಸಹ  ಹಳ್ಳಿಗಾಡಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು  ನಾನು ಹಾಗೂ ಒಬ್ಬ ಉನ್ನತ ಅಧಿಕಾರಿ ಸೇರಿ ಬೆಂಗಳೂರಿನಲ್ಲಿ  ಐಎಎಸ್ ಹಾಗೂ ಕೆಎ ಎಸ್  ತರಬೇತಿ ಪ್ರಾರಂಭ ಮಾಡಿದ್ದೇವೆ  ಇದರಿಂದ  ಪ್ರತಿಯೊಬ್ಬರು ಉನ್ನತ ಅಧಿಕಾರಿಯಾಗಲಿ ಎನ್ನುವುದೇ ನಮ್ಮ ಉದ್ದೇಶ ಎಂದರು   ಇನ್ನೂ ಕಾರ್ಯಕ್ರಮ ದಲ್ಲಿ ಶಾಲಾ ಪ್ರಗತಿಗೆ ಕಾರಣ ಶಾಲಾ ಶಿಕ್ಷಕರಿಗೆ ದಡದಪುರಶಿವಣ್ಣರವರು ಸನ್ಮಾನಿಸಿ ಗೌರವ ಸೂಚಿಸಿದರು   ಇನ್ನೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.      

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ತಾ.ಪಂ ಮಾಜಿ ಚಿಕ್ಕಲಿಂಗಯ್ಯ, ಮರೀಗೌಡ, ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಸರ್ಕಾರಿ ಶಾಲಾ ಶಿಕ್ಷಕರಸಂಘದ ನಿರ್ದೇಶಕ ರುಗಳು ಸೇರಿದಂತೆ ಅನೇಕ ಅನೇಕ ಗಣ್ಯರು  ಉಪಸ್ಥಿತರಿದ್ದರು

ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ: ಇನ್ನು ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, sಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.ಇನ್ನೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಒಂದು ವೇಳೆ ನಿಯಮ ಮೀರಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಎಲೆಕ್ಷನ್ ಪ್ರಚಾರ ನಡೆಸಿದ್ರೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.

ಚುನಾವಣಾ ಆಯೋಗದ ಹೆಲ್ಪ್ ಲೈನ್ ಸಂಖ್ಯೆ '1950' ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸಲಿದೆ. ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿದ್ರೆ ಮೊಬೈಲ್ ಮೂಲಕ ದೂರು ನೀಡಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರಿಸಲಾಗುವುದು. ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ಹೇಳಿದ್ದಾರೆ.ಇನ್ನು ಪಾನ್ ಕಾರ್ಡ್ ನಂಬರ್ ನಮೂದಿಸದಿದ್ದರೆ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲಾಗುವುದು. ದಿವ್ಯಾಂಗರು ಮತ ಚಲಾಯಿಸಲು ವೀಲ್ ಚೇರ್ ವ್ಯವಸ್ಥೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ತಲಾ 14 ಕ್ಷೇತ್ರಗಳಿಗೆ 2 ಹಂತಗಳಲ್ಲಿ ಮತದಾನ ನಡೆಯಲಿದೆ.

 

17 ನೇ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟಣೆ.

ಒಟ್ಟು 07 ಹಂತಗಳಲ್ಲಿ ಚುನಾವಣೆ

ಮೊದಲನೇ ಹಂತದ ಮತದಾನ 11ನೇ ಎಪ್ರಿಲ್

ಕೊನೆಯ ಹಂತದ ಮತದಾನ 19ನೇ ಮೇ

ಕರ್ನಾಟಕದಲ್ಲಿ 2ನೇ ಹಂತದಲ್ಲಿ ಚುನಾವಣೆ

ಕರ್ನಾಟಕದಲ್ಲಿ ಮತದಾನದ ದಿನಾಂಕ :18/04/2019

ಚುನಾವಣೆ ಫಲಿತಾಂಶ ಪ್ರಕಟಣೆ ದಿನಾಂಕ : 23/05/2019

ಚುನಾವಣೆ ನೀತಿ ಸಂಹಿತೆ ದಿನಾಂಕ : 10/03/2019 ರಿಂದ ದಿನಾಂಕ :27/05/2019ರವರೆಗೆ ಜಾರಿಯಲ್ಲಿ ಇರುತ್ತದೆ.

Rate this item
(0 votes)

ತಾಲೂಕಿನ ಸಾಸಲು ಪುಣ್ಯಕ್ಣೇತ್ರದಿಂದ ಮಂಡ್ಯ ಲೋಕಸಭಾ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಂದ ಪ್ರಚಾರ ಆರಂಭ.ಶ್ರೀ ಶಂಭುಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ರಣಕಹಳೆ ಮೊಳಗಿಸಲಿರುವ ನಿಖಿಲ್ ಕುಮಾರಸ್ವಾಮಿ.... 

Last modified on Sunday, 10 March 2019 13:22
Rate this item
(0 votes)

ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ.

Rate this item
(0 votes)

ಕೃಷ್ಣರಾಜಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶ್ರಮದಾನ ಶಿಬಿರಕ್ಕೆ ಚಾಲನೆ..

Rate this item
(0 votes)

ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರಜಾವಾಣಿ ದಿನಪತ್ರಿಕೆಯ ನೇತೃತ್ವದಲ್ಲಿ ನಡೆದ ನಗೆಹಬ್ಬದಲ್ಲಿ ಮಿಂದೆದ್ದ ನಾಗರೀಕರು..ನಗೆಯ ರಸದೌತಣ ಬಡಿಸಿದ ಹಾಸ್ಯ ದಿಗ್ಗಜರು....

Last modified on Saturday, 09 March 2019 15:11
Rate this item
(0 votes)

ಕೆ.ಆರ್.ಪೇಟೆ ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲು ಸೆಸ್ಕ್ ಎಂಡಿ ಗೋಪಾಲಕೃಷ್ಣ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಹುಡುಕಿದ ಶಾಸಕ ಡಾ. ನಾರಾಯಣಗೌಡ..ಗ್ರಾಮೀಣ ಪ್ರದೇಶಕ್ಕೆ ನಿಗಧಿತವಾಗಿ ಗುಣಮಟ್ಟದ ವಿದ್ಯುತ್ ನೀಡಲು ಮುಂದಾಗಿ ಶಾಸಕ ನಾರಾಯಣಗೌಡ ಕರೆ...

Page 8 of 27

Visitors Counter

221704
Today
Yesterday
This Week
This Month
Last Month
All days
69
682
959
4809
4244
221704

Your IP: 18.191.5.239
2024-04-24 05:23

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles