ಪ್ರಾಥಮಿಕ ಶಾಲೆ 75 ವರ್ಷದ ವಜ್ರ ಮಹೋತ್ಸವ.

 ಮಾನವನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಅದಕ್ಕಾಗಿ ವಿದ್ಯಾಭ್ಯಾಸ ವನ್ನು ಪ್ರತಿಯೊಬ್ಬರು  ಮಾಡುವಂತೆ  ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಹಾಗೂ  ಡಾ.ಲೋಹಿಯಾ ರಾಮಮನೋಹರ ವಿಚಾರ ವೇದಿಕೆಯ ಸಂಸ್ಥಾಪಕ ಡಾ.ದಡದಪುರ ಶಿವಣ್ಣ  ತಿಳಿಸಿದರು. 

ಮಳವಳ್ಳಿ: ತಾಲ್ಲೂಕಿನ ದಡದಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  75 ವರ್ಷದ ವಜ್ರ ಮಹೋತ್ಸವ ಹಾಗೂ 4 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು  ಡಾ.ದಡದಪುರ ಶಿವಣ್ಣ  ಉದ್ಘಾಟಿಸಿ ಮಾತನಾಡಿ,  ಗ್ರಾಮೀಣ ಪ್ರದೇಶದ ಜನರಿಗೂ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾಗಿದೆ. ಹಳ್ಳಿಗಾಡು ಅಭಿವೃದ್ಧಿ ಯಾದರೆ ಮಾತ್ರ ದೇಶ ಪ್ರಗತಿಯಾಗುತ್ತದೆ. ಎಂದ ಅವರು   ತಾನು ಓದಿದ ಶಾಲೆಯ ಸಮಾರಂಭದಲ್ಲೇ  ನಾನು ಸತ್ತ ಮೇಲೆ   ನನ್ನ ಸರ್ವಾಂಗ ದೇಹವನ್ನು ಧಾನ ಮಾಡುವುದಾಗಿ ಘೋಷಣೆ ಮಾಡಿದ್ದು ಅದಲ್ಲದೆ ಶಾಲಾ ವತಿಯಿಂದ ಮಾಡುವ ಸನ್ಮಾನ ವನ್ನು  ಮಾಡಿಸಿಕೊಳ್ಳದೆ ಅದನ್ನು ತನ್ನ ತಾಯಿಗೆ ಸ್ವತಃ ಅವರ ಕೈಯಲ್ಲಿ ಸನ್ಮಾನ‌ಮಾಡಿ ಕಾಲಿಗೆ ನಮಸ್ಕಾರ ಮಾಡುವ  ಮೂಲಕ  ಮಾನವೀಯತೆ ಮೆರದರು.   ಇನ್ನೂ  ಶಾಲಾ ಅಭಿವೃದ್ಧಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುವುದಾಗಿ ಜೊತೆ ಗ್ರಾಮದ ಅಭಿವೃದ್ಧಿ ಗೂ  ಸಹಕಾರ ನೀಡುವುದಾಗಿ  ತಿಳಿಸಿದರು  ಈ ಶಾಲೆಯಲ್ಲಿ ಓದಿದ್ದಂತಹ ಹಾಗೂ  ನನ್ನಂತಹ ವಿದ್ಯಾರ್ಥಿಗಳು ಬಹಳ ಮಂದಿ ಇದ್ದಾರೆ ಅವರು ಸಾಕಷ್ಟು ಆರ್ಥಿಕವಾಗಿ ಪ್ರಗತಿ ಕಂಡಿದ್ದಾರೆ  ಅವರು ಸಹ  ಹಳ್ಳಿಗಾಡಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವಂತಹ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಅವರು  ನಾನು ಹಾಗೂ ಒಬ್ಬ ಉನ್ನತ ಅಧಿಕಾರಿ ಸೇರಿ ಬೆಂಗಳೂರಿನಲ್ಲಿ  ಐಎಎಸ್ ಹಾಗೂ ಕೆಎ ಎಸ್  ತರಬೇತಿ ಪ್ರಾರಂಭ ಮಾಡಿದ್ದೇವೆ  ಇದರಿಂದ  ಪ್ರತಿಯೊಬ್ಬರು ಉನ್ನತ ಅಧಿಕಾರಿಯಾಗಲಿ ಎನ್ನುವುದೇ ನಮ್ಮ ಉದ್ದೇಶ ಎಂದರು   ಇನ್ನೂ ಕಾರ್ಯಕ್ರಮ ದಲ್ಲಿ ಶಾಲಾ ಪ್ರಗತಿಗೆ ಕಾರಣ ಶಾಲಾ ಶಿಕ್ಷಕರಿಗೆ ದಡದಪುರಶಿವಣ್ಣರವರು ಸನ್ಮಾನಿಸಿ ಗೌರವ ಸೂಚಿಸಿದರು   ಇನ್ನೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.      

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ತಾ.ಪಂ ಮಾಜಿ ಚಿಕ್ಕಲಿಂಗಯ್ಯ, ಮರೀಗೌಡ, ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಸರ್ಕಾರಿ ಶಾಲಾ ಶಿಕ್ಷಕರಸಂಘದ ನಿರ್ದೇಶಕ ರುಗಳು ಸೇರಿದಂತೆ ಅನೇಕ ಅನೇಕ ಗಣ್ಯರು  ಉಪಸ್ಥಿತರಿದ್ದರು

Share this article

About Author

Madhu
Leave a comment

Write your comments

Visitors Counter

295936
Today
Yesterday
This Week
This Month
Last Month
All days
216
194
2708
216
15162
295936

Your IP: 216.73.216.151
2025-06-01 20:10

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles