ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಶ್ರೀ ರೇಣುಕಾಂಭ ಎಲ್ಲಮ್ಮ ದೇವಿಯ

ಕೆ.ಆರ್.ಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ಶ್ರೀ ರೇಣುಕಾಂಭ ಎಲ್ಲಮ್ಮ ದೇವಿಯ 12ನೇ ವರ್ಷದ ಪೂಜಾ ಮಹೋತ್ಸವ..

ಸಾಮೂಹಿಕ ಅನ್ನಸಂತರ್ಪಣೆ..ಸಾವಿರಾರು ಜನರು ಭಾಗಿ...   ಕೃಷ್ಣರಾಜಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಶ್ರೀರೇಣುಕಾ ಎಲ್ಲಮ್ಮದೇವಿ ದೇವಸ್ಥಾನದಲ್ಲಿ 12ನೇ ವರ್ಷದ ಪೂಜಾ ಮಹೋತ್ಸವ, ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು...ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಡಾ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಅನಂತು ಮುಖಂಡರಾದ ರಾಮಸ್ವಾಮಿ, ಚಿನಕುರಳಿ ನಾಗರಾಜು, ಪ್ರಕಾಶ,ನಂಜುಂಡ, ಮಂಜುನಾಥ್ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು... ರಾಜ್ಯಪ್ರಶಸ್ತಿ ಪುರಸ್ಕೃತ ಜನಪದ ಗಾಯಕ ತಿಪಟೂರು ತಾಲೂಕಿನ ಬುಜಗೂರಿನ ಚೌಡಿಕೆ ಎಲ್ಲಯ್ಯ ಮತ್ತು ತಂಡದವರಿಂದ ದೇವಿಗೆ ಪ್ರಿಯವಾದ ಚೌಡಿಕೆ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಭಕ್ತಾಧಿಗಳು 12ನೇ ವರ್ಷದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿ ಎಲ್ಲಮ್ಮ ದೇವಿಯ ಕೃಪೆಗೆ ಪಾತ್ರರಾದರು...

Last modified on 08/03/2019

Share this article

About Author

Super User
Leave a comment

Write your comments

Visitors Counter

304169
Today
Yesterday
This Week
This Month
Last Month
All days
120
231
351
8449
15162
304169

Your IP: 216.73.217.5
2025-06-23 09:48

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles