ಶ್ರೀ ಶ್ರೀ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿಯವರು ೨೪ ವರ್ಷದ ಹುಟ್ಟು ಹಬ್ಬ....
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದ ಶ್ರೀ ಶ್ರೀ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿಯವರು ೨೪ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಚಾಲನೆ ಮಾಡಿದರು .
ನಂತರ ಮಾತನಾಡಿದ ಶ್ರೀ ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ ಯವರು ಎಲ್ಲ ಧರ್ಮಗಳು ಒಗ್ಗೂಡಬೇಕು ಅವರವರ ಧರ್ಮಗಳಲ್ಲಿ ಎಲ್ಲ ಸಮಾನತೆಯಿಂದ ನೋಡಿಕೊಳ್ಳಬೇಕು .ಧರ್ಮವನ್ನು ಒಡೆಯಲು ಯಾರೂ ಹೋಗಬಾರದು . ಅತಿ ಹೆಚ್ಚು ಶರಣರು ಹುಟ್ಟಿ ಬಂದಿರುವುದು ಉತ್ತರ ಕರ್ನಾಟಕದಲ್ಲಿ ಆದರೆ ಈಗ ದುಃಖದ ಸಂಗತಿ ಎದುರಾಗಿದೆ .ವರುಣನ ಆರ್ಭಟದಿಂದ ಕರ್ನಾಟಕ ತತ್ತರಿಸಿ ಹೋಗಿದೆ .ನೆರೆ ಸಂತ್ರಸ್ತರಿಗೆ ನಮ್ಮ ಮಠದಿಂದ ೫೦ಸಾವಿರ ಧನ ಸಹಾಯ ಮಾಡುತ್ತಿದ್ದೇವೆ,ಭಕ್ತಾದಿಗಳು ಸಹ ಹೆಚ್ಚಿನ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು .ನೆರೆ ಸಂತಸ್ತರಲ್ಲಿ ಸತ್ತವರಿಗೆ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು .ಪಾಂಡವಪುರ ತಾಲ್ಲೂಕಿನ ಎಲ್ಲ ಅಖಿಲ ಭಾರತ ವೀರಶೈವ ಲಿಂಗಾಯಿತ ಪದಾಧಿಕಾರಿಗಳಿಗೆ ಗುರುಸಿದ್ದೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಎಲ್ಲರಿಗೂ ಸನ್ಮಾನವನ್ನು ಮಾಡಲಾಯಿತು .
೫೦೦ ಹೆಚ್ಚು ಭಕ್ತಾದಿಗಳು ಹಾಜರಿದ್ದರು ಎಲ್ಲರಿಗೂ ಮಠದಿಂದ ಉಪಹಾರವನ್ನು ಮಾಡಿಸಲಾಯಿತು..ಇದೇ ಸಂದರ್ಭದಲ್ಲಿ ಅಕ್ಕಪಕ್ಕದ ಊರಿನ ಭಕ್ತಾದಿಗಳು ಹಾಜರಿದ್ದರು .
ಸಮಾಜ ಸೇವಕ ಅಮಚಹಳ್ಳಿ ಮಹೇಶ್ ಶಾಲ ಮಕ್ಕಳಿಗೆ.... Featured
ಕೆ ಆರ್ ಪೇಟೆ: ಶಾಲ ಮಕ್ಕಳಿಗೆ ಅವಶ್ಯವಿರುವ ಟೇಬಲ್ ಚೇರ್ ಮತ್ತು ಪುಸ್ತಕಗಳನ್ನು ಸಮಾಜ ಸೇವಕ ಅಮಚಹಳ್ಳಿ ಮಹೇಶ್ ವಿತರಣೆ ಮಾಡಿದರು.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಮಚಹಳ್ಳಿ ಗ್ರಾಮದಲ್ಲಿ 73 ಸ್ವತಂತ್ರ ದಿನವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು..
ಶಾಲಾಸಮಿತಿ ಅದ್ಯಕ್ಷ ಮೋಹನ್ ಧ್ವಜಾರೋಹಣ ಮಾಡಿ ನಂತರ ಮಕ್ಕಳಿಗೆ ದೇಶದ ಬಗ್ಗೆ ಮತ್ತು ಸ್ವತಂತ್ರ ಹೋರಾಟಗಾರರ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು..
ನಂತರ ಶಾಲ ಮುಖ್ಯ ಶಿಕ್ಷಕ ಮೋಹನ್ ಮಾತನಾಡಿ ಮಕ್ಕಳಿಗೆ ದೇಶ ಪ್ರೇಮದ ಬಗ್ಗೆ ತಿಳಿಹೇಳಿದರು.
ನಂತರ ಸಮಾಜ ಸೇವಕ ಮಹೇಶ್ ಶಾಲಾಮಕ್ಕಳಿಗೆ ಉಪಯುಕ್ತ ಬೆಂಚ್ ಮತ್ತು ಟೇಬಲ್ ವಿತರಣೆ ಮಾಡಿದರು..
ಆನಂತರ ಗ್ರಾಮದ ಬಸವೇಶ್ವರ ಯುವಕ ಮಂಡಳಿ ವತಿಯಿಂದ ಮಕ್ಕಳಿಗೆ ಬುಕ್, ಪೆನ್ ವಿತರಣೆ ಮಾಡಲಾಯಿತು. ಮತ್ತು ಗ್ರಾಮದ ಮಂಜೇಗೌಡ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು ..
ಕಾರ್ಯಕ್ರಮದಲ್ಲಿ ,ಶ್ರೀಮತಿ ರೇಖಾ,ರಂಜನ್ ,ಮಂಜೇಗೌಡ,ಗೀರಿಶ್ ,ಅನಿತ ಮತ್ತು ಶಾಲಮಕ್ಕಳು ಗ್ರಾಮಸ್ಥರು ಹಾಜರಿದ್ದರು...
ನಾಯಸಿಂಗನಹಳ್ಳಿ ಶಾಲೆಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ.. Featured
ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.
ಸಂತೇಬಾಚಹಳ್ಳಿ:ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ 73 ಸ್ವಾತಂತ್ರ ದಿನವನ್ನು ಸಡಗರ ಸಂಭ್ರಮದಿಂದ ಅಚರಣೆ ಮಾಡಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಾರತಿ ಶ್ರೀಧರ್ ರವರು ಧ್ವಜಾರೋಹಣ ಮಾಡಿದರು.
ಗ್ರಾಮದ ಹಿರಿಯ ಮರಿಲಿಂಗೇಗೌಡರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದಿದೆ ನಮ್ಮ ದೇಶದ ಉನ್ನತಿಗೆ ಮಕ್ಕಳ ದೇಶಪ್ರೆಮವನ್ನು ತಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.
ನಂತರ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನ ತಮ್ಮ ಪ್ರಾಣವನ್ನು ಸಮರ್ಪಣೆ ಮಾಡಿದ್ದಾರೆ ಮತ್ತು ಅವರ ಬಲಿದಾನದಿಂದ ಇಂದು ನಾವು 73 ಸ್ವಾತಂತ್ರ್ಯ ದಿನ ಅಚರಣೆ ಮಾಡುತ್ತಿದ್ದವೆ . ಎಂದು ಮಕ್ಕಳಿಗೆ ಸ್ವತಂತ್ರ ಹೊರಟಗಾರ ಬಗ್ಗೆ ತಿಳಿಸಿಕೊಟ್ಟರು.
ಗ್ರಾಮದ ಮಂಜೇಗೌಡ ಪುತ್ರ ಪ್ರಸನ್ನ ಶಾಲಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡಿದರು.ನಂತರ ಎಲ್ಲಾ ಮಕ್ಕಳಿಗೆ ಸಿಹಿ ತಿನಿಸು ವಿತರಣೆ ಮಾಡಲಾಯಿತು .
ಕಾರ್ಯಕ್ರಮದಲ್ಲಿ: ಶಾಲೆ ಸಹ ಶಿಕ್ಷಕಿ ಮಂಜುಳ, ಅಂಗನವಾಡಿ ಶಿಕ್ಷಕಿ ಸುಕನ್ಯಾ, ಮಂಜುಳಮ್ಮ,ಲಕ್ಷ್ಮಮ್ಮ, ಭಾಗ್ಯಮ್ಮ,ಶೊಭ,ಮತ್ತಿತರ ಗ್ರಾಮಸ್ಥರು ಹಾಜರಿದ್ದರು..
ಭಾರತದ ಸಮಸ್ತ ಜನತೆಗೆ ೭೩ ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು
ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ರಾಮನಹಳ್ಳಿ ಶುಭಾರವೀಂದ್ರ ಆಯ್ಕೆ. Featured
ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ರಾಮನಹಳ್ಳಿ ಶುಭಾರವೀಂದ್ರ ಆಯ್ಕೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಹಿಳೆ ಅದ್ಯಕ್ಷರ ಸ್ಥಾನ ತೆರವು ಆಗಿದ್ದ ಕಾರಣ ಇಂದು ಚುನಾವಣೆ ನಿಗಧಿಯಾಗಿತ್ತು.
ಚುನಾವಣೆ ಶುಭ ರವೀಂದ್ರ ರವರನ್ನು ವರತುಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಶುಭಾ ರವೀಂದ್ರ ರವನ್ನು ಅವಿರೋಧವಾಗಿ ಅದ್ಯಕ್ಷರು ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಶುಭಾರವೀಂದ್ರ ರವರ ಬೆಂಬಲಿಗರು ಅದ್ಯಕ್ಷರಾದ ಇನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷ ಮಾಣಿಕನಹಳ್ಳಿ ಕೃಷ್ಣೇಗೌಡ, ಸದಸ್ಯರಾದ ಶೆಟ್ಟಹಳ್ಳಿ ಕೃಷ್ಣೇಗೌಡ, ಸಿದ್ದಾಪುರ ನಾರಾಯಣ್, ಕೃಷ್ಣಾಪುರ ಗಿರೀಶ್, ಕಾರಿಗನಹಳ್ಳಿ ಜಯರಾಮು, ಮತ್ತು ಮಹಿಳಾ ಸದಸ್ಯರುಗಳು ನೂತನ ಅದ್ಯಕ್ಷರಿಗೆ ಶುಭಕೋರಿದರು.
ಪ್ರವಾಹದ ಪರಿಣಾಮ: ಕೇರಳದಲ್ಲಿ 76 ಮತ್ತು, ಕರ್ನಾಟಕದಲ್ಲಿ 42 ಜನ ಬಲಿ.
ವರುಣನ ಕೋಪವು ಕೇರಳದಲ್ಲಿ 76 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಸುಮಾರು 2.87 ಲಕ್ಷ ಜನರು ರಾಜ್ಯದಾದ್ಯಂತ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಐವತ್ತೆಂಟು ಜನರು ಕಾಣೆಯಾಗಿದ್ದಾರೆ, ಅವರಲ್ಲಿ 50 ಮಂದಿ ಮಲಪ್ಪುರಂನಲ್ಲಿದ್ದಾರೆ,
ಆಗಸ್ಟ್ 8 ರಿಂದ ಕೇರಳದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಪ್ರವಾಹದಿಂದ ಇದುವರೆಗೆ 42 ಜನರು ಸಾವನ್ನಪ್ಪಿದ್ದಾರೆ
'ಪ್ರವಾಹ ಪೀಡಿತ ರಾಜ್ಯಗಳನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
“ಇದು ವಯನಾಡಕ್ಕೆ ಮಾತ್ರವಲ್ಲ, ಕೇರಳ ಮತ್ತು ಇತರ ಕೆಲವು ದಕ್ಷಿಣ ರಾಜ್ಯಗಳಿಗೂ ಒಂದು ದುರಂತ. ಕೇಂದ್ರ ಸರ್ಕಾರವು ಈ ರಾಜ್ಯಗಳ ಜನರನ್ನು ಗಮನ ಹರಿಸಬೇಕು ಮತ್ತು ಪರಿಹಾರ ಬೆಂಬಲಿಸಬೇಕು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು.
ಕರ್ನಾಟಕ ಸಿಎಂ ಬಿ.ಎಸ್.ಯಡಿಯುರಪ್ಪ ದಕ್ಷಿಣ ಕನ್ನಡದ ಬೆಲ್ತಂಗಡಿ ಭೇಟಿ ನೀಡಿ ಅಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
"ಜಿಲ್ಲೆಯ ಪ್ರವಾಹದಲ್ಲಿ ಐದು ಸೇತುವೆಗಳು ಮತ್ತು 300 ಮನೆಗಳು ಹಾನಿಗೊಳಗಾದ ಅಥವಾ ಸಂಪೂರ್ಣವಾಗಿ ನಾಶವಾಗಿವೆ. ಈ ಕುಟುಂಬಗಳಿಗೆ ತಲಾ 5 ಲಕ್ಷ ರೂ. ತುರ್ತು ಪರಿಹಾರವಾಗಿ ಸಂತ್ರಸ್ತರಿಗೆ 10,000 ರೂ. ವಿತರಿಸಲಾಗುವುದು ”ಎಂದು ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕದ ಬೆಳಗಾವಿಯಲ್ಲಿ ಪ್ರವಾಹ ಪೀಡಿತ ರಾಯ್ ಭಾಗ್ ತಾಲ್ಲೂಕಿನ ಮನೆಯ ಛಾಾವಣಿಯಲ್ಲಿ ಮೊಸಳೆಯನ್ನು ಗುರುತಿಸಲಾಗಿದೆ.
ಕರ್ನಾಟಕ ಪ್ರವಾಹದಲ್ಲಿ ಸೋಮವಾರ ಸಾವನ್ನಪ್ಪಿದವರ ಸಂಖ್ಯೆ 42 ಕ್ಕೆ ಏರಿದೆ. ಕನಿಷ್ಠ 12 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಈವರೆಗೆ ಸುಮಾರು 5.8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಬಲವಾದ ನೀರಿನ ಪ್ರವಾಹದಿಂದಾಗಿ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರವಾಹ ರಕ್ಷಣಾ ತಂಡದ ಕನಿಷ್ಠ ನಾಲ್ವರು ಸದಸ್ಯರು ಕೊಚ್ಚಿಹೋಗಿದ್ದು, ಓರ್ವ ಸದಸ್ಯನನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಅನ್ನು ಬಳಸಿ ಅವರನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಕಾರವಾರ ಬಳಿಯ ಭೂಕುಸಿತದಿಂದಾಗಿ ಕರ್ನಾಟಕದ ಎಲ್ಲಾ ಕೊಂಕಣ ರೈಲ್ವೆಯ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂತೇಬಾಚಹಳ್ಳಿಯಲ್ಲಿ Featured
ಸಂತೇಬಾಚಹಳ್ಳಿ : ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂತೇಬಾಚಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಮಸೀದಿ ಆವರಣದಿಂದ ಸಾಮೂಹಿಕ ಮೆರವಣೆಗೆ ಹೊರಟ ಮುಸಲ್ಮಾನ್ ಬಾಂಧವರು ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರು ಇರುವ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪರಸ್ಪರ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಜಲಾ ಪ್ರವಾಹದಿಂದ ನಲುಗುತ್ತಿರುವ ನಾಡಿನ ಜನರನ್ನು ರಕ್ಷಿಸಬೇಕು. ಮುಂದೆ ಯಾವುದೇ ಅನಾಹುತ ಸಂಭವಿಸದಿರಲೆಂದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಸಲ್ಮಾನ್ ಬಾಂಧವರು ಬಕ್ರೀದ್ ಶುಭಾಶಯ ಕೋರಿದರು.
ನಿಮಿರುವಿಕೆಯ ದುರ್ಬಲತೆಯನ್ನು ನಿವಾರಿಸಲು ದಾಳಿಂಬೆ ರಸವನ್ನು ಕುಡಿಯಿರಿ
ನಿಮಿರುವಿಕೆಯ ದುರ್ಬಲತೆಯನ್ನು ನಿವಾರಿಸಲು ವಯಾಗ್ರವನ್ನು ಮರೆತು, ದಾಳಿಂಬೆ ರಸವನ್ನು ಕುಡಿಯಿರಿ
ದಾಳಿಂಬೆ ವ್ಯಾಪಕವಾಗಿ ತಿನ್ನುವ ಹಣ್ಣಾಗಿದ್ದು, ಇದು ದಪ್ಪ ಚರ್ಮ ಮತ್ತು ಮಾಣಿಕ್ಯ-ಕೆಂಪು ರತ್ನದಂತಹುಗಳನ್ನು ಒಳಗೊಂಡಿದೆ. ದಾಳಿಂಬೆಯ ರುಚಿ ಮತ್ತು ಆರೋಗ್ಯದ ಪ್ರಯೋಜನಗಳಿಗಾಗಿ ಇದನ್ನು ಪ್ರಶಂಸಿಸಲಾಗುತ್ತದೆ. ದಾಳಿಂಬೆಯು ಉತ್ಕರ್ಷಣ ನಿರೋಧಕಗಳು ಮತ್ತು ಅನೇಕ ಪ್ರಯೋಜನಕಾರಿ ಜೈವಿಕ ಸಕ್ರಿಯ ಸಂಯುಕ್ತಗಳೊಂದಿಗಿದೆ. ನಿಮಿರುವಿಕೆಯ ಕ್ರಿಯೆ ಮತ್ತು ದುರ್ಬಲತೆಯ ವಿರುದ್ಧ ಹೋರಾಡಲು ದಾಳಿಂಬೆಯು ಬಹಳ ಸಹಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? ದಿನಕ್ಕೆ ಒಂದು ಲೋಟ ದಾಳಿಂಬೆ ರಸವು ನಿಮಿರುವಿಕೆಯ ಕ್ರಿಯೆಗೆ ಸಹಾಯ ಮಾಡುತ್ತದೆ. ಪುರುಷ ಲೈಂಗಿಕ ಕ್ರಿಯೆಯನ್ನು ಸರಿಪಡಿಸಲು ಹಣ್ಣು ಹೇಗೆ ಸಹಾಯ ಮಾಡುತ್ತದೆ ಎಂದು ನೀವು ತಿಳಿದುಕೊಳ್ಳಲು ಬಯಸಿದರೆ, ಮುಂದೆ ಓದಿ...
ನಿಮಿರುವಿಕೆ ಆಗದಿರುವುದು ಪುರುಷ ದುರ್ಬಲತೆ ಎಂದೂ ಕರೆಯುತ್ತಾರೆ, ಇದು ಲೈಂಗಿಕ ಸಮಸ್ಯೆಯಾಗಿದ್ದು, ಅಲ್ಲಿ ಮನುಷ್ಯನು ನಿಮಿರುವಿಕೆಯನ್ನು ಪಡೆಯಲು ವಿಫಲನಾಗುತ್ತಾನೆ. ಇದು ಮಾನಸಿಕ ಸಮಸ್ಯೆ ಅಥವಾ ದೈಹಿಕ ಸಮಸ್ಯೆಯಾಗಿರಬಹುದು. ಇದು ಮುಖ್ಯವಾಗಿ ಪುರುಷರ ಜನನಾಂಗಗಳ ಕಡೆಗೆ ರಕ್ತದ ಹರಿಯುವಿಕೆಯಿಂದಾಗಿ ಉಂಟಾಗುತ್ತದೆ. ರಕ್ತವು ಶಿಶ್ನದ ಅಂಗಾಂಶಗಳ ಕಡೆಗೆ ಹರಿಯದಿದ್ದಾಗ, ಪುರುಷರು ನಿಮಿರುವಿಕೆಯನ್ನು ಸಾಧಿಸುವಲ್ಲಿ ವಿಫಲರಾಗುತ್ತಾರೆ. ಹೃದಯ ಸಮಸ್ಯೆ ಅಥವಾ ಮಧುಮೇಹದಂತಹ ಆರೋಗ್ಯ ಪರಿಸ್ಥಿತಿಗಳಿಂದ ನಿಮಿರುವಿಕೆಯ ಈ ಸಾಮಾನ್ಯ ಕ್ರಿಯೆ ಉಂಟಾಗದಿದ್ದರೆ, ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ದಾಳಿಂಬೆಯನ್ನು ಬಳಸಬಹುದು.
ದಾಳಿಂಬೆಯನ್ನು ನೈಸರ್ಗಿಕ ವಯಾಗ್ರ ಎಂದು ಕರೆಯಲಾಗುತ್ತದೆ, ಅಂದರೆ, ಇದನ್ನು ನಿಮಿರುವಿಕೆಯ ಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಬಳಸಬಹುದು. ದಿನಕ್ಕೆ ಒಂದು ಲೋಟ ದಾಳಿಂಬೆ ರಸವು ಪುರುಷರಿಗೆ ದುರ್ಬಲತೆಯನ್ನು ಸೋಲಿಸಲು ಮತ್ತು ಲೈಂಗಿಕ ಜೀವನವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ಕೆಲವು ಸ್ಪಷ್ಟ ಪ್ರಯೋಜನಗಳಿವೆ ಎಂದು ಅಧ್ಯಯನಗಳು ತೋರಿಸಲು ಸಾಧ್ಯವಾಗಿದೆ.
ದಾಳಿಂಬೆಯಲ್ಲಿರುವ ಸಮೃದ್ಧ ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ ಗಳು ರಕ್ತ ಪರಿಚಲನೆಗೆ ಅಡ್ಡಿಯಾಗದಂತೆ ತಡೆಯುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ದಾಳಿಂಬೆ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಅಪಧಮನಿಗಳಿಂದ ಪ್ಲೇಕ್ ರಚನೆಯನ್ನು ತೆಗೆದುಹಾಕುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ನಿಮಿರುವಿಕೆಯನ್ನು ಸಾಧಿಸಲು ಉತ್ತಮ ರಕ್ತಪರಿಚಲನೆಯು ಮುಖ್ಯವಾದ ಕಾರಣ, ನಿಮಿರುವಿಕೆಯ ಸಾಮಾನ್ಯ ಕ್ರಿಯೆಗೆ ದಾಳಿಂಬೆ ಏಕೆ ಒಂದು ಉತ್ತಮ ಪರಿಹಾರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ದಾಳಿಂಬೆ ರಸವು ರಕ್ತದಲ್ಲಿನ ನೈಟ್ರಿಕ್ ಆಕ್ಸೈಡ್ ಸಿಂಥೇಸ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನೈಟ್ರೇಟ್ಗಳ ಮೂಲವಲ್ಲದಿದ್ದರೂ, ಇದು ಮಾನವನ ದೇಹದಲ್ಲಿ ನೈಟ್ರೇಟ್ಗಳ ಸಾಂದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ನೈಟ್ರೇಟ್ಗಳು ನೈಟ್ರಿಕ್ ಆಕ್ಸೈಡ್ ಅನ್ನು ರಚಿಸುತ್ತವೆ, ಇದು ರಕ್ತನಾಳಗಳ ಹಿಗ್ಗುವಿಕೆ ಮತ್ತು ರಕ್ತದ ಸರಿಯಾದ ಹರಿವಿಗೆ ಸಹಾಯ ಮಾಡುತ್ತದೆ.
ಹೇಮಾವತಿ ನದಿಯ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ Featured
ಹೇಮಾವತಿ ನದಿಯ ನಡದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬವನ್ನು ಹೇಮಾವತಿ ನದಿಯ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಸ್ಥಳಾಂತರಗೊಳಿಸಿದರು...ಹೇಮಾವತಿ ನದಿಗೆ 1,0008ಸಾವಿರ ಕ್ಯೂಸೆಕ್ಸ್ ನೀರನ್ನು ಗೊರೂರು ಜಲಾಶಯದಿಂದ ಹರಿಯಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಯಿತು...
ಈ ದಿನ ಮಂಡ್ಯ ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗಮಂಗಲ ಉಪ ವಿಭಾಗದ ಡಿ.ವೈ.ಎಸ್. ಪಿ ರವರಾದ ಶ್ರೀ ವಿಶ್ವನಾಥ್ ರವರು, ಕಿಕ್ಕೇರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ ಚಂದ್ರಶೇಖರ್ ರವರು ಹಾಜರಿದ್ದರು.