ರಾಜ್ಯಸುದ್ದಿ

Rate this item
(0 votes)

ಮುಂದಿನ 15 ವರ್ಷದಲ್ಲಿ ಈ ರಾಜ್ಯವೂ ಜಗತ್ತಿನಲ್ಲೇ ಮದ್ಯಪಾನದಲ್ಲಿ ಪ್ರಥಮಸ್ಥಾನಕ್ಕೆ ಬರಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ .    

ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ  ವೀರಶೈವ ರು ಹಾಗೂ ಸರ್ವಜನಾಂಗದವರು ಸಮಿತಿ ವತಿಯಿಂದ ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ .ತ್ರಿವಿಧ ದಾಸೋಹಿ ಲಿಂಗೈಕ  ಪರಜಪೂಜ್ಯ ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ  ಕಾರ್ಯಕ್ರಮವನ್ನು ಕನಕಪುರ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ.ಶ್ರೀಗಳ ಇನ್ನೂ ನಮ್ಮ ಮನಸ್ಸಿನಲ್ಲಿ ಇದ್ದು ಅವರು ಅಮರರಾಗಿರುತ್ತಾರೆ. ಶ್ರೀಗಳ ಜೊತೆಗೆ ಯೋದ ಗುರು ರವರ ನೆನಪು ಮಾಡಿಕೊಳ್ಳುತ್ತಿರುವುದು ಮಳವಳ್ಳಿ ಜನರ ದೊಡ್ಡಗುಣವನ್ನು ತೋರಿಸುತ್ತದೆ.  ಅದರಲ್ಲೂ ಎಲ್ಲಾ ಸಮಾಜ ಮುಖಂಡರಗಳನ್ನು ಒಂದೇ ವೇದಿಕೆಯಲ್ಲಿ  ಸೇರಿಸಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ ನಡೆದಾಡುವ ದೇವರು  ಶ್ರೀಗಳ ಮೇಲೆ  ಗೌರವವಿದ್ದರೆ ರಾಜ್ಯದಲ್ಲಿ ಮದ್ಯಪಾನ ರದ್ದು ಪಡಿಸಿ ಎಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿಕೊಂಡರು .ಈಗ ರಾಜ್ಯದಲ್ಲಿ ಮದ್ಯಪಾನ ವನ್ನು ಮಾಡುವವರು ಕೇವಲ  ಶೇ 30 ರಷ್ಟು ಇದ್ದರೂ ಮುಂದಿನ ದಿನಗಳಲ್ಲಿ ಶೇ 70 ರಷ್ಠು  ಮಂದಿ  ಮದ್ಯಪಾನಗಳಾಗುವ ಸಾಧ್ಯತೆವಿದೆ ರಾಜ್ಯಸರ್ಕಾರಕ್ಕೆ ಮದ್ಯಪಾನ ದಿಂದ ಆದಾಯ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇದರಿಂದ ಜನರ ಮೇಲೆ ಯಾವರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು  ಸರ್ಕಾರ  ಅರ್ಥ ಮಾಡಿಕೊಳ್ಳಬೇಕು.    ಮದ್ಯಪಾನ ಮುಕ್ತ ಮಾಡಲು ಮಳವಳ್ಳಿ ಯಿಂದ ಹೋರಾಟ ನಡೆಸುವಂತೆ ಕರೆ ನೀಡಿದರು.       

ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾಸೋಹ  ಹಾಗೂ  ಇದೇ ಸಂದರ್ಭದಲ್ಲಿ ಸಾಲು ಮರನಾಗರಾಜು ರವರ ನೇತೃತ್ವದಲ್ಲಿ   ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ 111  ಸಸಿಗಳನ್ನು  ವೇದಿಕೆಯಲ್ಲಿದ್ದ ಗಣ್ಯರ ಮೂಲಕ ವಿತರಿಸಿದರು. ವೇದಿಕೆಯಲ್ಲಿ ಹಿಂದೂ .ಮುಸ್ಲಿಂ.ಕೈಸ್ತ ಜನಾಂಗದ ಗುರುಗಳು  ಸೇರಿದಂತೆ  ತಾಲ್ಲೂಕಿನ ಮಠಾದೀಶರು ಇದ್ದರು.

 

Last modified on 22/02/2019
Rate this item
(0 votes)

ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವ. ದೇವರ ಉತ್ಸವಮೂರ್ತಿಗೆ ಹೆಗಲುಕೊಟ್ಟು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದ ಶಾಸಕ ಡಾ.ನಾರಾಯಣಗೌಡ. ಮುಗಿಲು ಮುಟ್ಟಿದ ಜಯಘೋಷಗಳು.ಗರುಡಪಕ್ಷಿಯಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರದಕ್ಷಿಣೆ.

ಕೃಷ್ಣರಾಜಪೇಟೆ : ತಾಲ್ಲೂಕಿನ ಪುರಾಣ ಪ್ರಸಿದ್ಧ ಅಕ್ಕಿಹೆಬ್ಬಾಳು ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಗರುಡ ಪಕ್ಷಿಯು ಆಗಸದಲ್ಲಿ ಕಾಣಿಸಿಕೊಂಡು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ವಿಪ್ರ ಬಾಂಧವರು ಉಘೇ ನರಸಿಂಹ.ಉಘೇ ಗೋವಿಂದ. ಗೋವಿಂದ ಎಂಬ ಜಯಘೋಷಗಳನ್ನು ಕೂಗುತ್ತಿದ್ದರು. ಭಕ್ತಿಯ ಪರಾಕಾಷ್ಠೆಯು ಮುಗಿಲು ಮುಟ್ಟಿತ್ತು.

ಶಾಸಕ ಡಾ.ನಾರಾಯಣಗೌಡ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಸದ್ಬಕ್ತರಂತೆ ಹೆಗಲಮೇಲೆ ಹೊತ್ತು ಮೆರೆದಿದ್ದು ವಿಶೇಷವಾಗಿತ್ತು.  ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಕೃತಾರ್ಥರಾದರು.ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಹೇಮಾವತಿ ಹೊನ್ನಾರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು, ತಾಲ್ಲೂಕು ಪಂಚಾಯತ ಸದಸ್ಯೆ ವಿನುತಾಸುರೇಶ್, ಮಾಜಿಸದಸ್ಯೆ ರೇಣುಕಾಕಿಟ್ಟು, ಸ್ಥಳೀಯ ಮುಖಂಡರಾದ ಎ.ಆರ್.ರಘು, ಎ.ಎಸ್.ನಾಗರಾಜು, ಜಿ.ಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು.

Last modified on 22/02/2019
Rate this item
(0 votes)

ತಾಲ್ಲೂಕಿನ ಹೆಮ್ಮೆಯ ಮಗನಿಗೆ ಒಲಿದ ಅಂತರ ರಾಷ್ಟ್ರೀಯ ಪ್ರಶಸ್ತಿ.ತಾಲ್ಲೂಕಿನ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ

ಕೃಷ್ಣರಾಜಪೇಟೆ: ತಾಲ್ಲೂಕಿನ ಹೆಮ್ಮೆಯ ಮಗ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಲಭಿಸಿದೇ. ಫೆಬ್ರವರಿ 23 ರಂದು ಸಿಂಗಾಪುರ್ ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭ.ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಹಾಗೂ ಪರಮಪೂಜ್ಯ ಶ್ರೀ. ಶ್ರೀ. ಶ್ರೀ. ನಿರ್ಮಲಾನಂದನಾಥ ಸ್ವಾಮಿಗಳಿಂದ ಪ್ರಶಸ್ತಿ ಸ್ವೀಕಾರ.ಸಾಮಾನ್ಯ ರೈತನ ಮಗನಾಗಿ, ಶಿಕ್ಷಕನಾಗಿ ಸಂಘಟನೆಯ ಮೂಲಕ ರಾಜ್ಯ.ರಾಷ್ಟ್ರೀಯ.ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ತಾಲ್ಲೂಕಿನ ಹೆಮ್ಮೆಯ ಪುತ್ರ.ಸರ್ಕಾರಿ ನೌಕರರ ಭವನ.ಸರ್ಕಾರಿ ನೌಕರರಿಗೆ ನಿವೇಶನ ನೀಡಿಕೆ.ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಸ್ಥಾಪನೆ.ಗ್ರಾಜುಯೇಟ್ ಕೋ.ಆಪರೇಟಿವ್ ಸೊಸೈಟಿ ಸ್ಥಾಪನೆ.ಮಂಡ್ಯ ಮತ್ತು ಮೈಸೂರಿನ ಹಲವು ಸಂಘಸಂಸ್ಥೆಗಳ ಮುಖ್ಯಸ್ಥರಾಗಿ. ಸಲಹೆಗಾರರಾಗಿ.ಮಾರ್ಗದರ್ಶಕರಾಗಿ ಸೇವೆನಿವೃತ್ತಿ ನಂತರವೂ ದಣಿವರಿಯದ ದಂಡನಾಯಕ ನಂತೆ ಕಾರ್ಯ ನಿರ್ವಹಣೆ.

 

Rate this item
(0 votes)

ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ.

ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವು ಪಟ್ಟಣದ ಕುರುವಿನಶೆಟ್ಟಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾದಸ್ವರದೊಂದಿಗೆ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಯವರ ಬಾವಚಿತ್ರವನ್ನು ಮೆರವಣಿಗೆ ನೆಡೆಯಿತು.ನಂತರ ಸ್ವಾಮಿಜಿಯ ಬಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ಥಳಿಯ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು.

ಈ‌ ಸಂದರ್ಭದಲ್ಲಿ ಸಂಘದ ಗೌರವದ್ಯಕ್ಷ ಕೃಷ್ಣಮೂರ್ತಿ, ಅದ್ಯಕ್ಷ ಮಂಜು, ಉಪಾದ್ಯಕ್ಷ ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮನು ಸೇರಿದಂತೆ ನೂರಾರು ಕಲಾವಿಧರು ಭಾಗವಹಿಸಿದ್ದರು.

Last modified on 22/02/2019
Rate this item
(0 votes)

  ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರನ್ನು ಮಚ್ಚು ಲಾಂಗ್ ಗಳಿಂದ ಕೊಚ್ಚಿಕೊಲೆ 

ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದ ಗ್ರಾಪಂ ಸದಸ್ಯ ತಿಮ್ಮೇಗೌಡ (೫೦) ಕೊಲೆಯಾಗಿರುವ ವ್ಯಕ್ತಿ. ಸೋಮವಾರ ಮಧ್ಯರಾತ್ರಿ ಗ್ರಾಮದಲ್ಲಿ ಗ್ರಾಮದೇವತೆ ದೇವಿರಮ್ಮನ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಾಲ್ವರು ಕೃತ್ಯ ನಡೆಸಿದ್ದಾರೆ. ಅದೇಗ್ರಾಮದ ದೇವೇಗೌಡ, ಯೋಗೇಗೌಡ, ಪುತ್ರ ಮಧನ್, ಕುಮಾರ್, ಚಂದು ಅವರಿಂದ ಕೃತ್ಯ ನಡೆಸಿರುವ ಆರೋಪಿಗಳು.ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಗಿರೀಗೌಡ ಪುತ್ರ ಗೌತಮ್, ವಿನಾಯಕ, ಮಹೇಶ್ ಅವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಘಟನೆ.ಮೃತ ವ್ಯಕ್ತಿ ತಿಮ್ಮೇಗೌಡ ದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Last modified on 22/02/2019
Rate this item
(0 votes)

ಶಿಕ್ಷಣ ಜ್ಞಾನದ ಬೆಳಕಿನ ಶಕ್ತಿ ಶಿಕ್ಷಣಕ್ಕೆ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿಯಿದೆ.ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು.ಶಾಸಕ ಡಾ.ನಾರಾಯಣಗೌಡ.

ಕೃಷ್ಣರಾಜಪೇಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಿಸಿರುವ ಒಂದೂವರೆ ಕೋಟಿ ರೂ ವೆಚ್ಚದ ಹೈಟೆಕ್ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಿ ನಂತರ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ಮಲ್ಲಿಗೆಸಿರಿ ಬಿಡುಗಡೆ ಮಾಡಿದ ಶಾಸಕ ನಾರಾಯಣಗೌಡರು. ನಂತರ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತರಾಗಬೇಕು.ಶಿಕ್ಷಣಕ್ಕೆ ಸಾಮಾಜಿಕ ಅಸಮಾನತೆಗಳನ್ನು ಹೊಡೆದೋಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಶಕ್ತಿಯಿಂದ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ. ಕ್ಷೇತ್ರದ ಶಾಸಕನಾಗಿ ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಿದ್ದೇನೆ. ಮಕ್ಕಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು.ಶಾಸಕ ನಾರಾಯಣಗೌಡ ಕರೆ ನೀಡಿದರು.

ಜಿಲ್ಲಾ ಪಂಚಾಯತ ಎಂಜಿನಿಯರ್ ಉಪವಿಭಾಗದ ಎಇಇ ಬಸವರಾಜು, ಪ್ರಥಮದರ್ಜೆ ಗುತ್ತಿಗೆದಾರ ಅರಳಕುಪ್ಪೆ ಮೋಹನ್, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಸದಸ್ಯರಾದ ಡಾ.ಕೆ.ಎಸ್.ರಾಜೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಕಾಲೇಜಿನ ಹಿರಿಯ ಉಪನ್ಯಾಸಕರಾದ ಕರೀಗೌಡ, ಮಧುಕರ್, ಅನುರಾಧ, ಚಂದ್ರಶೇಖರ್, ಸತ್ಯನಾರಾಯಣ, ಗ್ರಂಥಪಾಲಕ ಶಂಭೂ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


 

 

Last modified on 18/02/2019
Rate this item
(0 votes)

  ನಿಗೂಢ ಕಾಯಿಲೆಯಿಂದ  ಕಳೆದ ಒಂದು ವಾರದಿಂದ ಒಂದೇ ಮನೆಯ  25 ಕ್ಕೂ ಹೆಚ್ಚು ಮೇಕೆಗಳ ಸಾವು ಕಂಗಾಲಾಗಿರುವ  ರೈತ ಕುಟುಂಬ.  

ಮಳವಳ್ಳಿ:ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ  ನಾರಾಯಣ ಎಂಬುವವರಿಗೂ ಸೇರಿದ ಮೇಕೆಗಳು ಸಾಯುತ್ತಿದ್ದು. ಪಶು ವೈದ್ಯಾಧಿಕಾರಿಗಳಿಗೆ  ಸವಾಲಾಯಾಗಿರುವ ಕಾಯಿಲೆ ಇದ್ದಾಗಿದ್ದು  ಪ್ರತಿನಿತ್ಯ 2 ರಿಂದ 3 ಮೇಕೆಗಳು ಸಾಯುತ್ತಿದೆ ಇದರಿಂದಲೇ ಜೀವನ ಸಾಗಿಸುತ್ತಿದ್ದ  ಕಳೆದ ವಾರದಿಂದ   ಸಾಕಷ್ಟು ನಷ್ಷವಾಗಿದ್ದು   ಪರಿಹಾರಕ್ಕೆ ಆಗ್ರಹ  ಪಡಿಸಿದ್ದಾರೆ .  ಸ್ಥಳಕ್ಕೆ ಮಂಡ್ಯ ಜಿಲ್ಲಾ ಪಶು ಸಂಗೋಪನೆ ಇಲಾಖೆ  ಉಪನಿರ್ದೇಶಕ.  ಡಾ ಪದ್ಮನಾಭ,  ಮಂಡ್ಯ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ  ಡಾ.ಸಿ ವೀರಭದ್ರಯ್ಯ  ಜಿ.ಪಂ ಸದಸ್ಯೆ ಸುಷ್ಮಾರಾಜು , ತಾ.ಪಂ ಅಧ್ಯಕ್ಷ ನಾಗೇಶ್ , ತಾ.ಪಂಸದಸ್ಯ ಪುಟ್ಟಸ್ವಾಮಿ ಬೇಟಿ  ಪರಿಶೀಲನೆ . ಇದು  ಮೈಕಾಪ್ಲಾಸ್ಮ ಎಂಬ ‌ಕಾಯಿಲೆ ಎಂದು  ದೃಡ ಪಡಿಸಿದ ಉಪ ನಿರ್ದೇಶಕ  ಜಿಲ್ಲೆಯಲ್ಲೇ ಪ್ರಥಮವಾಗಿ ಹಬ್ಬಿದ ಕಾಯಿಲೆ  ಈ ಕಾಯಿಲೆ ಬಂದರೆ ಉಳಿಯುವುದು ಅಸಾಧ್ಯ  ಎಂದ  ಉಪನಿರ್ದೇಶಕ  ಡಾ.ಪದ್ಮನಾಭ  ತಿಳಿಸಿದರು. ಈಗಲೇ ಈ ಕಾಯಿಲೆ ಹರಡದಂತೆ  ಅಗತ್ಯ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು ಇನ್ನೂ ಜಿ.ಪಂ ಸದಸ್ಯೆ ಸುಷ್ಮಾ ರಾಜು  ಮಾತನಾಡಿ .ಕೂಡಲೇ  ಪರಿಹಾರ ನೀಡಲು  ಜಿ.ಪಂ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು  ಕಂಗಾಲಾಯಾಗಿದ್ದ ರೈತನಿಗೆ  ತಾ.ಪಂ ಅಧ್ಯಕ್ಷ ನಾಗೇಶ. ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿ  ಈ ಕಾಯಿಲೆ ಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು  ಮತ್ತಷ್ಟು ಹರಡದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು ತಾ.ಪಂ ಸದಸ್ಯ ಪುಟ್ಟಸ್ವಾಮಿ  ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ . ಸೇರಿದಂತೆ  ಬೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು.

 

Rate this item
(0 votes)

ಮಳವಳ್ಳಿ ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ.

ಮಳವಳ್ಳಿ: ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ. ಮುತ್ತುರಾಜು 35 ವರ್ಷ ಮೃತಪಟ್ಟ ದುರ್ದೈವಿ. ಈತ ಸುಮಾರು ನಾಲ್ಕು ಎಕರೆ ಜಮೀನನ್ನು ಹೊಂದಿದ್ದರು. ವ್ಯವಸಾಯ ಮಾಡುವ ಸಲುವಾಗಿ ಭತ್ತ,ಬಾಳೆ, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಬ್ಯಾಂಕಿನಿಂದ ಮೂರು ಲಕ್ಷ ಸಾಲ ಮಾಡಿ ಬೇಸಾಯ ಮಾಡಿದ್ದರು, ತಾನು ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲವಾದ್ದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಸಹ ಪಾವತಿಸಲಾಗುತ್ತಿಲ್ಲ, ಎ ಮನನೊಂದು ತಮ್ಮ ಜಮೀನಿನ ಬಳಿ ನೇಣು ಬಿಗಿದು ಸಾವನ್ನಪ್ಪಿದ್ದಾನೆ.ಮೃತರಿಗೆ ತಾಯಿ, ಪತ್ನಿ ಪುಟ್ಟಲಕ್ಷ್ಮಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಬಿ.ಎಸ್. ಶಿವರುದ್ರ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.

Page 16 of 41

Visitors Counter

228093
Today
Yesterday
This Week
This Month
Last Month
All days
67
270
847
4494
6704
228093

Your IP: 3.147.47.59
2024-05-15 10:16

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles