ರಾಜ್ಯಸುದ್ದಿ
ಕೆ.ಆರ್.ಪೇಟೆ ತಾಲೂಕಿನ ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸಲು ಸೆಸ್ಕ್ ಎಂಡಿ ಗೋಪಾಲಕೃಷ್ಣ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಹುಡುಕಿದ ಶಾಸಕ ಡಾ. ನಾರಾಯಣಗೌಡ..ಗ್ರಾಮೀಣ ಪ್ರದೇಶಕ್ಕೆ ನಿಗಧಿತವಾಗಿ ಗುಣಮಟ್ಟದ ವಿದ್ಯುತ್ ನೀಡಲು ಮುಂದಾಗಿ ಶಾಸಕ ನಾರಾಯಣಗೌಡ ಕರೆ...
ನಮ್ಮ ಸರ್ಕಾರ ರೈತರ ಪರ ಸರ್ಕಾರ ರೈತರಿಗೆ ಸಕಾಲದಲ್ಲಿ ಸವಲತ್ತುಗಳ ಸಿಗುವಂತಾಗಬೇಕು ಅದಕ್ಕಾಗಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಡಾ.ಕೆ ಅನ್ನದಾನಿ ಎಚ್ಚರಿಸಿದರು
ಮಳವಳ್ಳಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮ ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ ರವರು ತಾಲ್ಲೂಕಿನ ರೈತರ ಆತ್ಮಹತ್ಯೆಯ ವಿವರವನ್ನು ಸಭೆ ಮಂಡಿಸಿದರು, ಇದೇ ಸಂದರ್ಭದಲ್ಲಿ ಚೊಟ್ಟನಹಳ್ಳಿ ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ನಮ್ಮ ತಾಲ್ಲೂಕಿನ ಮಳೆ ಇಲ್ಲದೆ ಇದ್ದರೂ ಇನ್ನೂ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು ಇದಕ್ಕೂ ಉತ್ತರಿಸಿದ ಅಧಿಕಾರಿ ನಾವು ವರದಿ ನೀಡಿದ್ದೇವೆ ಆದರೂ ನಮ್ಮ ವರದಿಗೆ ಮನ್ನಣೆಯನ್ನು ನೀಡುವುದಿಲ್ಲ ಅವರು ಸೆಟಲೈಟ್ ವರದಿ ಆಧಾರದ ಮೇಲೆ ಬರಪೀಡಿತ ಘೋಷಣೆ ಮಾಡುತ್ತಾರೆ ಎಂದರು. ಶಾಸಕರು ಸಹ ನಾನು ಸರ್ಕಾರದ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು, ಇನ್ನೂ ಅಬಕಾರಿ ಇಲಾಖೆ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡು ನೀವು ತಾಲ್ಲೂಕಿನಲ್ಲಿ ಏನು ಕೆಲಸ ಮಾಡುತ್ತಿಲ್ಲ ತಾಲ್ಲೂಕಿನ ಹಳ್ಳಿಹಳ್ಳಿಯಲ್ಲೂ ಅಂಗಡಿಗಳಲ್ಲೂ ಮಧ್ಯ ಮಾರಾಟ ನಡೆಯುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಇನ್ನೂ ಶುದ್ದ ಕುಡಿಯುವ ನೀರು ವಿಷಯಕ್ಕೆ ಬರುತ್ತಿದ್ದಂತೆ ಜಿ.ಪಂ ಸದಸ್ಯೆ ಸುಷ್ಮಾರಾಜು ರವರು ಒಂದು ಕುಡಿಯುವ ನೀರಿನ ಘಟಕವನ್ನು ಎಷ್ಷು ಭಾರಿ ಉದ್ಘಾಟನೆ ಮಾಡುತ್ತಾರೆ ತಿಳಿಸಿದರು. ಮದ್ಯಪ್ರವೇಶ ಮಾಡಿದ ಶಾಸಕರು ಯಾವುದು ಆ ರೀತಿಯಾಗಿಲ್ಲ ಎಂದರು ಈ ಮಧ್ಯೆ ತಾ.ಪಂ ಅಧ್ಯಕ್ಷ. ನಾಗೇಶರವರು ಗುಂಡಾಪುರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಗೆ ನನ್ನ ಆಹ್ವಾನಸಿಲ್ಲ ಏಕೆ ಎಂದಾಗ. ಇಂಜಿನಿಯರ್ ಸೋಮಶೇಖರ್ ರವರು ರಾತ್ರಿ ಕಾರ್ಯಕ್ರಮ ನಿಗದಿಯಾಯಿತು ಎಂದಾಗ. ನನಗೆ ಪೋನ್ ಮಾಡಬೇಕಾಗಿತ್ತು, ಶಿಷ್ಟಾಚಾರದ ಬಗ್ಗೆ ತಿಳಿದುಕೊಳ್ಳಿ ಎಂದು ತರಾಟೆ ತೆಗೆದುಕೊಂಡರು. ಶಾಸಕರು ಇನ್ನೂ ಮುಂದೆ ಈ ರೀತಿಯಾಗದೆ ನಾನು ನೋಡಿಕೊಳ್ಳತ್ತೇನೆ ಎಂದು ತಾ.ಪಂ ಅಧ್ಯಕ್ಷರನ್ನು ಸಮಾದಾನಪಡಿಸಿದರು.
ಸಭೆಯಲ್ಲಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ರವಿ, ಜಿ.ಪಂ ಸದಸ್ಯರಾದ ಚಂದ್ರಕುಮಾರ, ಸುಜಾತಸುಂದ್ರಪ್ಪ, ಜಯಕಾಂತ, ಸುಷ್ಮಾರಾಜು, ಸುಜಾತಪುಟ್ಟು, ತಾ.ಪಂ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಮಾಧು, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ, ತಾ.ಪಂ ಇಒ ಸತೀಸ್, ತಹಸೀಲ್ದಾರ್ ಚಂದ್ರಮೌಳಿ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು
ಬೀರೇಶ್ವರ ದೇವಸ್ಥಾನದ ಹತ್ತಿರ ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಪುರಸಭೆಯಿಂದ ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ .
ಮಳವಳ್ಳಿ: ಪಟ್ಟಣದ ಪುರಸಭೆ ಆವರಣದಲ್ಲಿ ಸರ್ವೇ ನಂ 26,27 ರ ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಪುರಸಭೆಯಿಂದ ಹಕ್ಕು ದಾಖಲಿಸಿ ನಮೂನೆ 3 ರನ್ನು ನೀಡುವ ಸಮಾರಂಭ ಕಾರ್ಯಕ್ರಮವನ್ನು ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಕೆ. ಅನ್ನದಾನಿ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ರವರನ್ನು ಮಂತ್ರಿ ಕೊಡಿ ಎಂದು ಕೇಳಿದೆ ಆದರೆ ಅವರು ದೇವರಾಜು ಅರಸು ನಿಗಮಮಂಡಳಿ ಅಧ್ಯಕ್ಷ ನೀಡಿದರು ಇದರಿಂದ ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಜನರನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಕಳೆದ 10 ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ವೇಳೆಯಲ್ಲಿ ಹಂಚಿದ್ದ ಹಕ್ಕುಪತ್ರದ ಬಗ್ಗೆ ಯಾವುದೇ ಕ್ರಮಗೊಂಡಿಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಈ ದಿನ ನಿವೇಶನ ನೀಡುವುದಾಗಿ ನಮೂನೆ 3 ರನ್ನು ನೀಡುತ್ತಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದರು. ನಮ್ಮ ದೋಸ್ತಿ ಕಾಂಗ್ರೆಸ್ ಪಕ್ಷದವರು ಮಂಡ್ಯದಲ್ಲಿ ನಡೆದ ಮುಖ್ಯಮಂತ್ರಿರವರು ಮಾಡಿದ 1300 ಕೋಟಿ ಚಾಲನೆ ಬೋಗಸ್ ಅಂತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನರಿಗೆ ಗೊತ್ತಿದೆ ನಾವು ಏನು ಕೆಲಸ ಮಾಡುತ್ತಿದ್ದೇವೆ, ನಾನು ಮೇಟಿ ಅಷ್ಟೇ ಸರ್ಕಾರದ ಅನುದಾನ ಬಂದೆ ಬರುತ್ತೆ ಅದನ್ನು ಜನರಿಗೆ ತಲುಪಿಸುತ್ತೇವೆ ಎಂದರು. ಮುಂದಿನದಿನಗಳಲ್ಲಿ ಸ್ಲಂ ಬೋರ್ಡ್ ನಿಂದ ಮನೆ ಕಟ್ಟಲು 500 ಮನೆಗಳ ನಿರ್ಮಾಣ ಮಾಡಲು ಮಂಜೂರುಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ 33 ಎಕರೆ ಜಮೀನನ್ನು ಫಲಾನುಭವಿಗಳಿಗೆ ಹಂಚಲಾಗುತ್ತದೆ ಪಟ್ಟಣದಲ್ಲಿ ಇನ್ನೂ ಎರಡುವರ್ಷಗಳಲ್ಲಿಪ್ರತಿಯೊಬ್ಬರಿಗೂ ನಿವೇಶನ ಹಂಚಿ, ನಿವೇಶನರಹಿತ ಪಟ್ಟಣ ಮಾಡಲಾಗುವುದು ಎಂದರು ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶಾಸಕರು ಹಂಚಿದರು .ಇನ್ನೂ ಪುರಸಭೆ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ರಿಯಾಜಿನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಬಹುತೇಕ ಪಕ್ಷೇತರ ಸದಸ್ಯರ ಗೈರುಹಾಜರಿ ಎದ್ದುಕಾಣುತ್ತಿತ್ತು.
ಕಾರ್ಯಕ್ರಮ ದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮನಾಗೇಶ್,ಮುಖ್ಯಾಧಿಕಾರಿ ಗಂಗಾಧರ್,ಪುರಸಭೆ ಸದಸ್ಯರಾದ ಮೆಹಬೂಬ್ ಪಾಷ, ಚಿಕ್ಕರಾಜು, ಮಹೇಶ , ಸರೋಜಮ್ಮ, ರಾಜಣ್ಣ, ಸವಿತರಾಜು ನಾಗೇಶ ಸೇರಿದಂತೆ ಮತ್ತಿತ್ತರು ಇದ್ದರು