ನಿಗೂಢ ಕಾಯಿಲೆಯಿಂದ ಕಳೆದ ಒಂದು ವಾರದಿಂದ ಒಂದೇ ಮನೆಯ 25 ಕ್ಕೂ ಹೆಚ್ಚು ಮೇಕೆಗಳ ಸಾವು ಕಂಗಾಲಾಗಿರುವ ರೈತ ಕುಟುಂಬ.
ಮಳವಳ್ಳಿ:ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ನಾರಾಯಣ ಎಂಬುವವರಿಗೂ ಸೇರಿದ ಮೇಕೆಗಳು ಸಾಯುತ್ತಿದ್ದು. ಪಶು ವೈದ್ಯಾಧಿಕಾರಿಗಳಿಗೆ ಸವಾಲಾಯಾಗಿರುವ ಕಾಯಿಲೆ ಇದ್ದಾಗಿದ್ದು ಪ್ರತಿನಿತ್ಯ 2 ರಿಂದ 3 ಮೇಕೆಗಳು ಸಾಯುತ್ತಿದೆ ಇದರಿಂದಲೇ ಜೀವನ ಸಾಗಿಸುತ್ತಿದ್ದ ಕಳೆದ ವಾರದಿಂದ ಸಾಕಷ್ಟು ನಷ್ಷವಾಗಿದ್ದು ಪರಿಹಾರಕ್ಕೆ ಆಗ್ರಹ ಪಡಿಸಿದ್ದಾರೆ . ಸ್ಥಳಕ್ಕೆ ಮಂಡ್ಯ ಜಿಲ್ಲಾ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ. ಡಾ ಪದ್ಮನಾಭ, ಮಂಡ್ಯ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ ಡಾ.ಸಿ ವೀರಭದ್ರಯ್ಯ ಜಿ.ಪಂ ಸದಸ್ಯೆ ಸುಷ್ಮಾರಾಜು , ತಾ.ಪಂ ಅಧ್ಯಕ್ಷ ನಾಗೇಶ್ , ತಾ.ಪಂಸದಸ್ಯ ಪುಟ್ಟಸ್ವಾಮಿ ಬೇಟಿ ಪರಿಶೀಲನೆ . ಇದು ಮೈಕಾಪ್ಲಾಸ್ಮ ಎಂಬ ಕಾಯಿಲೆ ಎಂದು ದೃಡ ಪಡಿಸಿದ ಉಪ ನಿರ್ದೇಶಕ ಜಿಲ್ಲೆಯಲ್ಲೇ ಪ್ರಥಮವಾಗಿ ಹಬ್ಬಿದ ಕಾಯಿಲೆ ಈ ಕಾಯಿಲೆ ಬಂದರೆ ಉಳಿಯುವುದು ಅಸಾಧ್ಯ ಎಂದ ಉಪನಿರ್ದೇಶಕ ಡಾ.ಪದ್ಮನಾಭ ತಿಳಿಸಿದರು. ಈಗಲೇ ಈ ಕಾಯಿಲೆ ಹರಡದಂತೆ ಅಗತ್ಯ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು ಇನ್ನೂ ಜಿ.ಪಂ ಸದಸ್ಯೆ ಸುಷ್ಮಾ ರಾಜು ಮಾತನಾಡಿ .ಕೂಡಲೇ ಪರಿಹಾರ ನೀಡಲು ಜಿ.ಪಂ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು ಕಂಗಾಲಾಯಾಗಿದ್ದ ರೈತನಿಗೆ ತಾ.ಪಂ ಅಧ್ಯಕ್ಷ ನಾಗೇಶ. ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿ ಈ ಕಾಯಿಲೆ ಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು ಮತ್ತಷ್ಟು ಹರಡದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು ತಾ.ಪಂ ಸದಸ್ಯ ಪುಟ್ಟಸ್ವಾಮಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ . ಸೇರಿದಂತೆ ಬೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು.