ಮಂಡ್ಯ

Rate this item
(0 votes)

 ಶಾಸಕ ನಾರಾಯಣಗೌಡರ ವಿರುದ್ಧ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ಆಕ್ರೋಶ. ಟೀಕೆ ಮಾಡಿದರೆ ತಕ್ಕಪಾಠ ಕಲಿಸುವ ಎಚ್ಚರಿಕೆ ನೀಡಿದ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು.

ಕೃಷ್ಣರಾಜಪೇಟೆ: ಶಾಸಕ ಡಾ.ನಾರಾಯಣಗೌಡ ಅವರ ಕಾರ್ಯವೈಖರಿ ಕುರಿತು ಜೆಡಿಎಸ್ ಭಿನ್ನಮತೀಯ ಮುಖಂಡರು ಡಿಸಿಸಿ ಬ್ಯಾಂಕಿನ ಮಾಜಿಅಧ್ಯಕ್ಷ, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ತಪ್ಪಿದರೂ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಅವರ ಪರವಾಗಿ ನಾನು ಮತ್ತು ನನ್ನ ಬೆಂಬಲಿಗರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜೆಡಿಎಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇವೆ. ನಾವು ಪಕ್ಷದ್ರೋಹ ಮಾಡಿರುವುದಕ್ಕೆ ಏನಾದರೂ ದಾಖಲೆಗಳಿದ್ದರೆ ನಮ್ಮ ವಿರುದ್ಧ ಪಕ್ಷದ ಮುಖಂಡರಿಗೆ ದೂರು ನೀಡಿ ನಮ್ಮನ್ನು ಹೊರಹಾಕಿಸಲಿ, ಅದನ್ನು ಬಿಟ್ಟು ನಮ್ಮ ವಿರುದ್ಧ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದರೆ ಶಾಸಕರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ. ಕಳೆದ ಬಜೆಟ್ ಅಧಿವೇಶನಕ್ಕೆ ಹಾಜರಾಗದೇ ಅನಾರೋಗ್ಯದ ನಾಟಕವಾಡಿದ್ದು ತಾಲೂಕಿನ ಜನತೆಗೆ ಗೊತ್ತಿದೆ, ಇಷ್ಟಾದರೂ ನಮ್ಮ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಶಾಂತವಾಗಿದ್ದಾರೆ. ನಾರಾಯಣಗೌಡ ರಿಗೆ ತಾಖತ್ತಿದ್ದರೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ ನಾನೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಯಾರ ಬಳಿ ಮತಗಳಿವೆ ಎಂಬುದು ಗೊತ್ತಾಗಲಿದೆ. ಶಾಸಕರು ವಿನಾಕಾರಣ ಟೀಕೆ ಟಿಪ್ಪಣಿ ಮಾಡುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿಗೆ ದುಡಿಯಲಿ, ತಾಲ್ಲೂಕಿನ ಅಭಿವೃದ್ಧಿಗೆ ಯಾರೇ ಅನುದಾನ ತಂದರೂ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುವುದು ನಮ್ಮ ತಾಲೂಕಿನಲ್ಲಿ ಎಂಬ ಸತ್ಯವನ್ನು ಶಾಸಕರು ತಿಳಿಯಬೇಕು ಎಂದು ಕಿವಿಮಾತು ಹೇಳಿದ ದೇವರಾಜು. ಕಳೆದ 40ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಟಿಕೆಟ್ ವಂಚಿತನಾಗಿದ್ದರೂ ಪಕ್ಷದ್ರೋಹ ಮಾಡದೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ದುಡಿದಿದ್ದೇನೆ. ಸಚಿವ ರೇವಣ್ಣ ಅವರು ಕೆ.ಆರ್.ಪೇಟೆಗೆ ಬಂದಿದ್ದಾಗ ಅವರೊಂದಿಗೆ ರೋಡ್ ಷೋನಲ್ಲಿ ಭಾಗವಹಿಸಿದ್ದೇನೆ. ನಾನು ಮತ್ತು ನನ್ನ ಬೆಂಬಲಿಗರ ಊರಿನ ಬೂತ್ ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳು ಬಂದಿವೆ. ನಾವು ಪಕ್ಷದ್ರೋಹ ಮಾಡಿದ್ದರೆ ನಮ್ಮ ಬೂತ್ ಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚು ಮತಗಳು ಬರುತ್ತಿದ್ದವೇ ಎಂಬುದನ್ನು ಯೋಚಿಸಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದೇವರಾಜು ಗುಟುರು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ನೋಟರಿ ಎಂ.ಎಲ್‌.ಸುರೇಶ್, ಜಿ.ಪಂ ಸದಸ್ಯ ರಾಮದಾಸು, ಮುಖಂಡ ಬಸ್ ಕೃಷ್ಣೇಗೌಡ, ಗದ್ದೇಹೊಸೂರು ದರ್ಶನ್, ಕಂಠಿಕುಮಾರ್, ಆಲಂಬಾಡಿ ಕಾವಲು ರಾಜು, ಹರೀಶ್ ಮತ್ತಿತರರು ಭಾಗವಹಿಸಿದ್ದರು.

Rate this item
(0 votes)

ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ   ಮಳವಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.       

ಮಳವಳ್ಳಿ:  ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ  ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ  ಮೌನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಯಿಂದ ಹೊರಟ ಪ್ರತಿಭಟನಾಕಾರರು  ಪ್ರಮುಖಬೀದಿಗಳಲ್ಲಿ  ಮೌನ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ. ನಂತರ ಬೌದ್ಧ ಮಹಾಸಭಾ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಎಂ .ಎನ್ ಜಯರಾಜು ಮಾತನಾಡಿ,  ಕೇಂದ್ರಸರ್ಕಾರವು ಸಂವಿಧಾನದ 370  ಅಧಿಸೂಚನೆ ಯಲ್ಲಿ  ವಿಶೇಷ ಸ್ಥಾನ ಮಾನವನ್ನು ಜಾರಿಗೆ ತರುವಾಗ  ಡಾ.ಬಿ.ಆರ್ ಅಂಬೇಡ್ಕರ್ ರವರು 70 ವರ್ಷಗಳ ಹಿಂದೆಯೇ  ಮುಂದಿನ ದಿನಗಳಲ್ಲಿ ಈ ರೀತಿ ಆಗಬಹುದು ಅದಕ್ಕಾಗಿ ಈ ಅಧಿಸೂಚನೆ ಮಾಡಬಾರದು ಎಂದು ವಿರೋಧಿಸಿದರೂ ಸಹ  ಅಂಬೇಡ್ಕರ್ ಮಾತಿಗೆ   ಬೆಲೆ ಕೊಡದೆ  ಈಗ ಈ ಪರಿಣಾಮ ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೂಡಲೇ  ಸಂವಿಧಾನ 370 ಅಧಿಸೂಚನೆ ಯನ್ನು  ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು  ಶಿರೆಸ್ತೆದ್ದಾರ್  ಚನ್ನವೀರಭದ್ರಯ್ಯ ರವರಿಗೆ  ಮನವಿ ಸಲ್ಲಿಸಿದರು.   

ಪ್ರತಿಭಟನೆಯಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ  ದುಗ್ಗನಹಳ್ಳಿನಾಗರಾಜು, ಡಾ.ಪ್ರಸಾದ  ಬೌದ್ಧ ಮಹಾಸಭಾದ ಅಧ್ಯಕ್ಷ ರಾಚಯ್ಯ, ಪುರಸಭೆ ಸದಸ್ಯ ಮಹೇಶ್,  ಸಾಹಿತಿ ಮ.ಸಿ ನಾರಾಯಣ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವನಂಜು,  ಮಂಚಯ್ಯ,  ದೊಡ್ಡಬೂವಳ್ಳಿ ನಾಗರಾಜು ಸೇರಿದಂತೆ ಮತ್ತಿತ್ತರು ಇದ್ದರು.

 

Last modified on 22/02/2019
Rate this item
(0 votes)

ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ.ಸಮಾಜದಲ್ಲಿ ತುಳಿತಕ್ಕೊಳಗಾದವರು ಶಿಕ್ಷಣದ ಶಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಬೇಕು.ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ.

ಕೃಷ್ಣರಾಜಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಲಕ್ಕಮ್ಮ ಲಕ್ಷ್ಮೀದೇವಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ಕನಕಗುರು ಪೀಠದ ಕೆ.ಆರ್.ನಗರ ಶಾಖಾ ಮಠದ ಶ್ರೀ ಶಿವಾನಂದ ಪುರಿ ಶ್ರೀಗಳ ದಿವ್ಯಸಾನಿಧ್ಯದಲ್ಲಿ  ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ಧರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಇಂದಿನ ಒತ್ತಡದ ಜೀವನದಲ್ಲಿ ದೇವರು  ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದು. ಹಾಲುಮತ ಕುರುಬ ಸಮಾಜದ ಬಂಧುಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯದ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ರಾಜ್ಯದ ಯಾವುದೇ ಹಳ್ಳಿಗಳಿಗೆ ಹೋದರೂ ನಮ್ಮ ತಂದೆಯವರನ್ನು ಗೌರವಿಸುತ್ತಾರೆ. ಅವರೂ ರಾಜ್ಯದ ಮುಖ್ಯಮಂತ್ರಿ ಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸ ಕಂಡು ಹೃದಯ ತುಂಬಿ ಬಂದಿದೆ ಎಂದು ಯತೀಂದ್ರ ಅಭಿಮಾನದಿಂದ ಹೇಳಿದರು.

 ಶಾಸಕ ಡಾ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆದಿಹಳ್ಳಿ ಗ್ರಾಮವು ಪುಟ್ಟಗ್ರಾಮವಾಗಿದ್ದರೂ ಇಲ್ಲಿನ ಜನರ ಧಾರ್ಮಿಕ ಜಾಗೃತಿ ಹಾಗೂ ಶ್ರದ್ಧಾ ಭಕ್ತಿಯು ಎಲ್ಲರಿಗೂ ಮಾದರಿಯಾಗಿದೆ.ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶವಾದ ಸಂತೇಬಾಚಹಳ್ಳಿ ಹೋಬಳಿಯ ಜನರು ಕಷ್ಠಜೀವಿಗಳಾಗಿದ್ದು ದುಡಿಮೆಯನ್ನೇ ದೇವರೆಂದು ನಂಬಿದ್ದಾರೆ. ಅಲ್ಲದೇ ಈ ನೆಲಕ್ಕೆ ಅದ್ಭುತವಾದ ಶಕ್ತಿಯಿದೆ. ಆದ್ದರಿಂದಲೇ ನಾನು ಕ್ಷೇತ್ರದ ಶಾಸಕನಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದೇನೆ. ಹೋಬಳಿಯ ಜನರು ಕಷ್ಟಜೀವಿಗಳಾಗಿದ್ದು. ಇಡೀ ನಾಗರಿಕ ಸಮಾಜವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ ಎಂದು ಶಾಸಕರು ಆದಿಹಳ್ಳಿ ಗ್ರಾಮಸ್ಥರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ  ಕೆ.ಬಿ.ಚಂದ್ರಶೇಖರ್, ಜಿ.ಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ತಾ.ಪಂ ಉಪಾಧ್ಯಕ್ಷ ಜಾನಕೀರಾಂ, ಸದಸ್ಯ ಮೋಹನ್, ಡಾಲು ರವಿ , ಕೆ.ಶ್ರೀನಿವಾಸ್, ರವೀಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿರಮೇಶ್ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.

Last modified on 22/02/2019
Rate this item
(0 votes)

ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ 1ಕೋಟಿ ರೂಗಳ ವೆಚ್ಚದಲ್ಲಿ ಆಲಂಬಾಡಿ ಗ್ರಾಮದ ಸಮಗ್ರ ಅಭಿವೃದ್ಧಿ. ಶಾಸಕ ನಾರಾಯಣಗೌಡ.

ಕೃಷ್ಣರಾಜಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ಗ್ರಾಮದ ಸಮಗ್ರವಾದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ನಾರಾಯಣಗೌಡ ಭೂಮಿಪೂಜೆ ನೆರವೇರಿಸಿದರು.ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ನಮ್ಮೂರಿನಲ್ಲಿ ಬರ ಬಂದಿದ್ದಾಗ ಬಾಲ್ಯದಲ್ಲಿ ನಾನು ಆಲಂಬಾಡಿ ಗ್ರಾಮಕ್ಕೆ ಬಂದು ಜಮೀನನ್ನು ವಾರ ಮಾಡ್ತಿದ್ದೆ.ಆರ್ಕಾ, ದೊಡ್ಡಿ ಭತ್ತವನ್ನು ಬೆಳೆದು ಶ್ರಮದಿಂದ ಊಟ ಮಾಡ್ತಿದ್ದೆವು. ನನಗೂ ಆಲಂಬಾಡಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಊರಿನ ಜನರ ಋಣ ತೀರಿಸುವ ಜೊತೆಗೆ ಹುತಾತ್ಮ ವೀರಯೋಧ ಸತೀಶ್ ನೆನಪಿನಲ್ಲಿ ಗ್ರಾಮವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಲಂಬಾಡಿ ಕಾವಲು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್, ತಾ.ಪಂ ಸದಸ್ಯ ವೆಂಕಟೇಶ್, ಮುಖಂಡರಾದ ತುಳಸೀರಾಂ, ಕೃಷ್ಣೇಗೌಡ, ಶ್ರೀಕಂಠಮೂರ್ತಿ ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್ ಸಿದ್ಧಲಿಂಗಪ್ಪ ಸೇರಿದಂತೆ ಆಲಂಬಾಡಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Last modified on 22/02/2019
Rate this item
(0 votes)

ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ  ಇಟ್ಟಿದ್ದ  ಅನ್ನಭಾಗ್ಯದ ಅಕ್ಕಿ ತಹಸೀಲ್ದಾರ್ ದಾಳಿ ನಡೆಸಿ 32 ಕ್ವಿಂಟ್ವಾಲ್ ಅಕ್ಕಿ ವಶ.

ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ  ಇಟ್ಟಿದ್ದ  ಅನ್ನಭಾಗ್ಯದ  32 ಕ್ವಿಂಟ್ವಾಲ್ ಅಕ್ಕಿ  ಬೆಳ್ಳಂಬೆಳಿಗ್ಗೆ   ತಹಸೀಲ್ದಾರ್ ಚಂದ್ರಮೌಳಿ ನೇತೃತ್ವದಲ್ಲಿ     ನಿಖರ ಮಾಹಿತಿ ಮೇರೆಗೆ  ದಾಳಿ ನಡೆಸಿ    ಅಕ್ರಮವಾಗಿ ಶೇಖರಿಸಿಟ್ಟದ್ದ  68 ಮೂಟೆಯ 32 ಕ್ವಿಂಟಾಲ್  ವಶಕ್ಕೆ ಪಡೆದುಕೊಂಡಿದ್ದು.  ಮೇಲ್ನೋಟಕ್ಕೆ ಪಡಿತರ ಅಕ್ಕಿಯಾಗಿದ್ದು, ಅಕ್ಕಿ ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ  ತಹಸೀಲ್ದಾರ್ ಚಂದ್ರಮೌಳಿ ತಿಳಿಸಿದ್ದಾರೆ. ನಂತರ ಪಡಿತರ  ಮತ್ತು ಆಹಾರ ಇಲಾಖೆ  ಆಹಾರ ನಿರೀಕ್ಷಕ  ಕೃಷ್ಣಪ್ಪ ರವರು  ಅಕ್ಕಿಯನ್ನು ವಾಹನದೊಂದಿಗೆ  ಪೊಲೀಸರ ವಶಕ್ಕೆ ನೀಡಿ ದೂರು ನೀಡಿದ್ದಾರೆ ಎನ್ನಲಾಗಿದೆ.  ಈ ಸಂಬಂದ  ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ.

 

Last modified on 22/02/2019
Rate this item
(0 votes)

 ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಜಯಘೋಷಗಳ ನಡುವೆ ಅದ್ದೂರಿಯಾಗಿ ನಡೆಯಿತು.

ಕೆ.ಆರ್.ಪೇಟೆ: ತಾಲ್ಲೂಕಿನ ಶರಣಶ್ರದ್ಧಾ ಕೇಂದ್ರವಾದ ಪವಾಡಪುರುಷ ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತ ಸಮಾಧಿಯಾ ಗದ್ದುಗೆಯಿರುವ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.ಕೆಂಗೇರಿ ಬಂಡೇಮಠದ ಶ್ರೀ ನಿತ್ಯಾನಂದ ಸ್ವಾಮೀಜಿಗಳು, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಕಾಪನಹಳ್ಳಿ ಗವಿಮಠದ ನೂತನಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳು ಶ್ರೀ ರಥದಲ್ಲಿ ವಿರಾಜಮಾನರಾಗಿದ್ದ ಸ್ವತಂತ್ರ ಸಿದ್ಧಲಿಂಗೇಶ್ವರರ ಉತ್ಸವಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಹಾರನಹಳ್ಳಿ ಕೋಡಿಮಠದ ಡಾ.ಶ್ರೀ ಸದಾಶಿವ ರಾಜೇಂದ್ರ ಶಿವಯೋಗಿಗಳ ಸಹಯೋಗದಲ್ಲಿ ಜಾತ್ರೆಗೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಶ್ರೀಮಠದ ಭಕ್ತರ ಎರಡು ಗುಂಪುಗಳ ನಡುವಿನ ಭಕ್ತರ ನಡುವೆ ಗಲಾಟೆ ಗದ್ದಲ ನಡೆಯಬಹುದೆನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಗ್ರಾಮಾಂತರ ಪೋಲಿಸರು ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ರಾಜ್ಯ ಬಿಜೆಪಿ ಮುಖಂಡ ಸಿಂದಘಟ್ಟ ಅರವಿಂದ್, ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಕೃಷ್ಣೇಗೌಡ, ಮುಖಂಡರಾದ ಬಳ್ಳೇಕೆರೆ ವರದರಾಜೇಗೌಡ, ವಿ.ಡಿ.ದೇವೇಗೌಡ, ತೋಟಪ್ಪಶೆಟ್ಟಿ, ದೊದ್ದನಕಟ್ಟೆ ಪಾಂಡು, ಮನು-ಶರತ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 

Last modified on 22/02/2019
Rate this item
(0 votes)

  ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರನ್ನು ಮಚ್ಚು ಲಾಂಗ್ ಗಳಿಂದ ಕೊಚ್ಚಿಕೊಲೆ 

ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದ ಗ್ರಾಪಂ ಸದಸ್ಯ ತಿಮ್ಮೇಗೌಡ (೫೦) ಕೊಲೆಯಾಗಿರುವ ವ್ಯಕ್ತಿ. ಸೋಮವಾರ ಮಧ್ಯರಾತ್ರಿ ಗ್ರಾಮದಲ್ಲಿ ಗ್ರಾಮದೇವತೆ ದೇವಿರಮ್ಮನ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಾಲ್ವರು ಕೃತ್ಯ ನಡೆಸಿದ್ದಾರೆ. ಅದೇಗ್ರಾಮದ ದೇವೇಗೌಡ, ಯೋಗೇಗೌಡ, ಪುತ್ರ ಮಧನ್, ಕುಮಾರ್, ಚಂದು ಅವರಿಂದ ಕೃತ್ಯ ನಡೆಸಿರುವ ಆರೋಪಿಗಳು.ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಗಿರೀಗೌಡ ಪುತ್ರ ಗೌತಮ್, ವಿನಾಯಕ, ಮಹೇಶ್ ಅವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಘಟನೆ.ಮೃತ ವ್ಯಕ್ತಿ ತಿಮ್ಮೇಗೌಡ ದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.ಸ್ಥಳಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

Last modified on 22/02/2019
Rate this item
(0 votes)

ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವ.

ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿಯ ಸವಿತಾ ಸಮಾಜ ಕಲಾವಿದರ ಸಂಘದ ವತಿಯಿಂದ ಶ್ರೀ ಪುರಂದರದಾಸರು ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವವು ಪಟ್ಟಣದ ಕುರುವಿನಶೆಟ್ಟಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಾದಸ್ವರದೊಂದಿಗೆ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಯವರ ಬಾವಚಿತ್ರವನ್ನು ಮೆರವಣಿಗೆ ನೆಡೆಯಿತು.ನಂತರ ಸ್ವಾಮಿಜಿಯ ಬಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸ್ಥಳಿಯ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು.

ಈ‌ ಸಂದರ್ಭದಲ್ಲಿ ಸಂಘದ ಗೌರವದ್ಯಕ್ಷ ಕೃಷ್ಣಮೂರ್ತಿ, ಅದ್ಯಕ್ಷ ಮಂಜು, ಉಪಾದ್ಯಕ್ಷ ಸುರೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮನು ಸೇರಿದಂತೆ ನೂರಾರು ಕಲಾವಿಧರು ಭಾಗವಹಿಸಿದ್ದರು.

Last modified on 22/02/2019
Page 12 of 34

Visitors Counter

222916
Today
Yesterday
This Week
This Month
Last Month
All days
98
163
261
6021
4244
222916

Your IP: 3.144.113.197
2024-04-29 02:48

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles