ಮಂಡ್ಯ
ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪೂಣ್ಯಕ್ಷೇತ್ರ ಗೋವುಗಳ ರಕ್ಷಕ ಭೃಗುಮಹರ್ಷಿಗಳ ತಪೋಭೂಮಿ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ರಾಜ್ಯಾದ್ಯಂತ ಭಕ್ತರು ಆಗಮಿಸಿದರು.ರಥೋತ್ಸವದ ಅಂಗವಾಗಿ ಶ್ರೀ ಕಲ್ಯಾಣವೆಂಕಟರಮಣಸ್ವಾಮಿ ಗೆ ಬೆಳಿಗ್ಗೆಯಿಂದಲೇ ಗಂಧದ ನೈವೇಧ್ಯ, ಹಾಲಿನ ಅಭಿಷೇಕ, ಅರಿಸಿನ ಕುಂಕುಮ ಅಭಿಷೇಕ ಸೇರಿದಂತೆ ಹಲವು ವಿಷೇಶ ಅಭಿಷೇಕಗಳನ್ನು ಮಾಡಿ ಹೋಮ ಹವನಗಳನ್ನು ನೆರವೇರಿದವು. ರಥೋತ್ಸವದ ಹಿನ್ನಲೆ ರಥವನ್ನು ವಿವಿಧ ಫಲಪುಷ್ಪಲಂಕಾರ, ತಳಿರು ತೋರಣಗಳಿಂದ ಅಲಂಕರಿಸಿಲಾಗಿತ್ತು.ಶಾಸಕ ನಾರಾಯಣಗೌಡ ಅವರ ಗೈರುಹಾಜರಿಯಲ್ಲಿ, ಶ್ರೀ ರಥದಲ್ಲಿ ವಿರಾಜಮಾನರಾಗಿ ಅಲಂಕೃತವಾಗಿದ್ದ ಶ್ರೀ ಕಲ್ಯಾಣವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ವಿಶೇಷ ಪೂಜೆ ಸಲ್ಲಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ದಂಪತಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದಿಂದ ಚಾಲನೆಗೊಂಡ ರಥೋತ್ಸವ ರಥ ಬೀದಿಯಲ್ಲಿ ಸಂಚರಿಸಿತು. ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹಣ್ಣು, ಜವನ ಎಸೆದು ದೇವರ ಕೃಪೆಗೆ ಪಾತ್ರರಾದರು.ಉಘೇ ಗೋವಿಂದ... ಉಘೇ ವೆಂಕಟರಮಣ...ಉಘೇ ಗೋವಿಂದ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.ನಂತರ ಮಧ್ಯಾಹ್ನ 4 ಗಂಟೆಗೆ ಎರಡನೇ ಬಾರಿಗೆ ರಥವನ್ನು ನೆರದಿದ್ದ ಭಕ್ತರು ಎಳೆದರು. ನಂತರ ರಥವು ಉತ್ಸವ ಮೂತರ್ಿಯೊಂದಿಗೆ ಸುಸೂತ್ರವಾಗಿ ಸ್ವಸ್ಥಾನಕ್ಕೆ ಮರುಳಿತು.ನೆರದಿದ್ದ ಸಾವಿರಾರು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಹರಕೆ ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಮೊರೆಯಿಟ್ಟರು.ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ರಥೋತ್ಸವಕ್ಕೆ ಆಗಮಿಸಿ ತೇರಿಗೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಮೆರೆದರು. ಹೇಮಗಿರಿಯಲ್ಲಿ ನಡೆಯುವ ರಥೋತ್ಸವದಲ್ಲಿ ನವ ದಂಪತಿಗಳು ಪಾಲ್ಗೋಂಡು ಹಣ್ಣು ದವನ ಎಸೆಯುವುದು ವಾಡಿಕೆ. ಹಾಗೇ ಮಾಡಿದರೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು.
ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು, ಸಮಾಜಸೇವಕರಾದ ಕೆ.ಎಸ್.ರಾಮೇಗೌಡ, ಶಬರಿಬುಕ್ ಹೌಸ್ ಮಾಲೀಕ ಕೆ.ವಿ.ರಾಮೇಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ರಾಜಶ್ವನಿರೀಕ್ಷಕಿ ಚಂದ್ರಕಲಾ ಪ್ರಕಾಶ್, ಪ್ರಧಾನ ಅರ್ಚಕ ರಾಮಭಟ್ಟ, ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಆನಂದೇಗೌಡ, , ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರವಿರೆಡ್ಡಿ, ಬಂಡಿಹೊಳೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಮಾಜಿಅಧ್ಯಕ್ಷ ಶೇಷಾಧ್ರಿ,ಕಾಯಿ ಮಂಜೇಗೌಡ ಸೇರಿದಂತೆ ಸೇರಿದಂತೆ ಹಲವು ಮುಖಂಡರ ಪೂಜೆಯಲ್ಲಿ ಪಾಳ್ಗೊಂಡಿದ್ದರು.
ಜಾತ್ರೆಯಲ್ಲಿ ತಮ್ಮ ಅತ್ಯುತ್ತಮವಾದ ರಾಸುಗಳೊಂದಿಗೆ ಆಗಮಿಸಿ ದನಗಳ ಜಾತ್ರೆಯ ಸೌಂದರ್ಯವು ಇಮ್ಮಡಿಗೊಳ್ಳುವಂತೆ ಮಾಡಿದ್ದ ರಾಸುಗಳ ಮಾಲೀಕರಿಗೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪ್ರಾಯೋಜಕತ್ವದಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ವಿತರಿಸಲಾಯಿತು.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸವಿತ ಸಮಾಜಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಆಡಳಿತ ವತಿಯಿಂದ ಸವಿತ ಸಮಾಜಮಹರ್ಷಿ ಜಯಂತಿಯನ್ನು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ತಹಸೀಲ್ದಾರ್ ಚಂದ್ರಮೌಳಿ ಉದ್ಘಾಟಿಸಿ, ನಂತರ ಮಾತನಾಡಿ ಸರ್ಕಾರವು ಎಲ್ಲಾ ಜನಾಂಗವನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಸವಿತ ಸಮಾಜದ ಮಹರ್ಷಿ ಜಯಂತಿ ಯನ್ನು ಆಚರಿಸಲಾಗುತ್ತಿದೆ. ಮಹರ್ಷಿಗಳ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಹೋಗಬೇಕು ಎಂದರು. ಚುನಾವಣೆ ಹತ್ತಿರ ಬರುತ್ತಿದ್ದು ಅದಕ್ಕಾಗಿ ಈ ಬಾರಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಮುಂದಿನ ವರ್ಷ ನಿಮ್ಮ ಸಹಕಾರದಿಂದ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದರು. ಸವಿತ ಸಮಾಜದವರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮ ದಲ್ಲಿ ಸವಿತ ಸಮಾಜ ತಾಲ್ಲೂಕು ಅಧ್ಯಕ್ಷ ರಮೇಶ , ಕುನ್ನಯ್ಯ, ಸುಬ್ಬಣ್ಣ ಸೇರಿದಂತೆ ಸವಿತ ಸಮಾಜ ಮುಖಂಡರು ಉಪಸ್ಥಿತಿ ದ್ದರು.
ಕೋರಮಂಡಲ್ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿ.ಜೆ.ರವಿ, ಉಪಾಧ್ಯಕ್ಷರಾಗಿ ಎಚ್.ಎಮ್ ಶಿವರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ಆರ್.ಪೇಟೆ: ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ನೌಕರರ ವಿವಿಧ- ಉದ್ದೇಶ ಸಹಕಾರ ಸಂಘಧ ಈ ಹಿಂದಿನ ಆಡಳಿತ ಮಂಡಳಿ ಅಧಿಕಾರಾವಧಿ ಮುಗಿದ ಬಳಿಕ ನೂತನ ಆಡಳಿತ ಮಂಡಳಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ನಿರ್ದೇಶಕರನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾಗಿರುವ ವಿ.ಜೆ ರವಿ ಅಧ್ಯಕ್ಷ ಸ್ಥಾನಕ್ಕೆ, ಮುಖ್ಯ ಇಂಜಿನಿಯರ್ ಎಚ್.ಎಮ್ ಶಿವರಾಮ್ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ವಿ.ಜೆ.ರವಿ ಅವರನ್ನು ಅಧ್ಯಕ್ಷರಾಗಿ, ಎಚ್.ಎಮ್ ಶಿವರಾಮ್ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಘೋಷಿಸಿದ್ದಾರೆ.ನಿರ್ದೇಶಕರಾದ ಕಬ್ಬು ವಿಭಾಗದ ಮುಖ್ಯಸ್ಥ ಬಾಬುರಾಜು, ಕಬ್ಬು ಸಾಗಾಣಿಕೆ ವಾಹನಗಳ ನಿಯಂತ್ರಣಾಧಿಕಾರಿ ಮಾಕವಳ್ಳಿ ಪುಟ್ಟೇಗೌಡ, ಎಚ್.ಆರ್.ಮಂಜುನಾಥ್, ಕೆಮಿಷ್ಟ್ ನಾಗರಾಜು ಸೇರಿದಂತೆ ಎಲ್ಲಾ ನಿರ್ದೇಶಕರು , ಕಾರ್ಖಾನೆಯ ನೌಕರರ ವರ್ಗ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಹಳ್ಳದ ಗಣೇಶನ ಗುಡಿಯಲ್ಲಿ ರಾತ್ರಿ ಕಳ್ಳತನ ಬೆಲೆ ಬಾಳುವ ಗಂಟೆಗಳು,ಹುಂಡಿಯ ಹಣ,ಇತರೆ ವಸ್ತುಗಳ ಕಳ್ಳತನ.
ಮಂಡ್ಯ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ಗವಿ ರಂಗನಾಥ ಸ್ವಾಮಿ ಅರಣ್ಯ ಪ್ರದೇಶದಲ್ಲಿ ಇರುವ ಗಣಪತಿ ದೇವಸ್ಥಾನಕ್ಕೆ ರಾತ್ರಿ ಕಳ್ಳರು ಕೈಚಳಕ ತೊರಿ ಗಣೇಶ ನ ಹುಂಡಿ ಮತ್ತು ಗಂಟೆಗಳು ಮತ್ತು ಪೂಜಾ ತಟ್ಟೆ ಮತ್ತಿತರ ವಸ್ತುಗಳನ್ನು ಕದ್ದು ಪರರಾರಿಯಾಗಿದ್ದರೆ ಇ ದೇವಲಯಕ್ಕೆ ಇದಕ್ಕೂ ಮೊದಲು ಒಂದು ಬಾರಿ ಕಳ್ಳತನ ನಡೆದಿತ್ತು. ಈ ದೇವಾಲಯ ಅರಣ್ಯ ಪ್ರದೇಶದಲ್ಲಿ ಇದ್ದು ಜನಸಂದಣಿ ಕಡಿಮೆ ಇರುವುದು ಕಳ್ಳತನ ನೆಡಯುವುದಕ್ಕೆ ಕಾರಣ. ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನ ಬಳಿಯು ಕಳ್ಳತನ ನೆಡೆದಿದ್ದರು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆ.ಹೊಸ ಕಟ್ಟಡ ಕ್ಕಾಗಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಆಗ್ರಹ.
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಈ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ತೊಳಸಿ, ಮಾದಿಹಳ್ಳಿ, ಬಸವನಹಳ್ಳಿ, ಬೂವನಹಳ್ಳಿ ಮರಿನಹೊಸರು, ಊಗಿನಹಳ್ಳಿ, ಬಸವನಹಳ್ಳಿ ಗಂಗೇನಹಳ್ಳಿ, ವಡರಳ್ಳಿ, ಇನ್ನೂ ಅಲವು ಗ್ರಾಮಗಳು ಸೇರುತ್ತವೆ. ಗ್ರಾಮ ಪಂಚಾಯತಿಯಲ್ಲಿ ಒಟ್ಟು 16 ಸದಸ್ಯರು ಇದ್ದು ಇಂದು ನಿಗದಿಯಾದ ಸಾಮಾನ್ಯ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಮಾತನಾಡಿ ಸಭೆಯಲ್ಲಿ ಕೂರಲು ಜಾಗವಿಲ್ಲದೆ ನಿಂತು ಸಭೆ ನೆಡೆಸುವ ಸಂದರ್ಭ ಎದುರಾಗಿದೆ.ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ಮನವಿ ಮಾಡಿದರು.ಸಭೆಗೆ ಬಂದಿದ್ದಾ ಗ್ರಾಮಸ್ಥರು ಸದಸ್ಯರಿಗೆ ಜಾಗವಿಲ್ಲ ಇನ್ಯ ಸಾಮಾನ್ಯ ಜನಕ್ಕೆ ಜಾಗವಿನ್ನೆಲ್ಲಿ ಎಂಬ ಮಾತು ಕೇಳಿಬಂತು.
ಮಳವಳ್ಳಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಮಳವಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಕುಂದೂರುಮೂರ್ತಿರವರು 115 ಮತಗಳ ಅಂತರದಿಂದ ಗೆಲ್ಲುವ ಸಾಧಿಸಿದ್ದಾರೆ.
ಮಳವಳ್ಳಿ: ರಾಜ್ಯದ ಅಖಿಲಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿಯೂ ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ 20 ಕಾರ್ಯನಿರ್ವಾಹಕ ಸದಸ್ಯರ ಆಯ್ಕೆಗಾಗಿ ಚುನಾವಣೆಯನ್ನು ಫೆಬ್ರವರಿ 10 ರಂದು ನಿಗಧಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾರ್ಯನಿರ್ವಾಹಕ ಸದಸ್ಯರು ಅವಿರೋಧವಾಗಿ ಹೋಬಳಿವಾರು 20 ಸದಸ್ಯರನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರ ಆಯ್ಕೆಯಲ್ಲಿ ಒಮ್ಮತ ಬಾರದ ಕಾರಣ. ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತು. ಈ ಚುನಾವಣೆಯೂ ವೀರಶೈವ ಜನಾಂಗದ ಚುನಾವಣೆಯಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ವಾಗಿ ಮಾರ್ಪಾಡಾಗಿ ಸ್ಪರ್ದೆ ನಡೆಯಿತು ಕಾಂಗ್ರೆಸ್ ಬೆಂಬಲಿತರಾಗಿ ಕುಂದೂರು ಮೂರ್ತಿ ಹಾಗೂ ಜೆಡಿಎಸ್ ಬೆಂಬಲಿತರಾಗಿ ಚಿಕ್ಕಮೂಲಗೂಡು ಪುಟ್ಟಬುದ್ದಿ ರವರು ಸ್ಪರ್ಧೆ ನಡೆಯಿತು. ಅಂತೆಯೇ ಇಂದು ನಿಗಧಿಯಂತೆ ಚುನಾವಣೆ ನಡೆಯಿತು ಒಟ್ಟು 875 ಸದಸ್ಯರಿದ್ದು ಬೆಳಿಗ್ಗೆ 8 ಗಂಟೆಯಿಂದಲೇ ವಿಧಾನಸಭಾ ಚುನಾವಣಾ ರೀತಿ ಈ ಚುನಾವಣೆ ಬಿರುಸಿನಿಂದ ಸರದಿ ಸಾಲಿನಲ್ಲಿ ನಿಂತು ಸದಸ್ಯರು ಅದರಲ್ಲೂ ಬಿಜಿಪುರ ಹೊರಮಠದ ಚಂದ್ರಶೇಖರಸ್ವಾಮಿಜೀ, ಹಾಗೂ ಸರಗೂರು ಮಠದ ಶ್ರೀಬಸವರಾಜೇಂದ್ರಸ್ವಾಮಿಗಳ ಸಹ ಮತದಾನ ಮಾಡಿದರು.ಕೊನೆಯಲ್ಲಿ 875 ಮತ ಗಳ ಪೈಕಿ 670 ಮಂದಿ ಮತ ಚಲಾಯಿಸಿದ್ದರು ಅದರಲ್ಲಿ 11 ಮತ ತಿರಸ್ಕಾರವಾಗಿದ್ದು ಉಳಿದ 659 ಮತಗಳಲ್ಲಿ 387 ಮತಗಳನ್ನು ಕುಂದೂರು ಮೂರ್ತಿ ಪಡೆದರೆ ಚಿಕ್ಕಮೂಲಗೂಡು ಪುಟ್ಟಬುದ್ದಿ 272 ಮತಗಳನ್ನುಪಡೆದಿದ್ದು ಕುಂದೂರುಮೂರ್ತಿ ರವರು 115 ಮತಗಳ ಅಂತರದಿಂದ ಗೆಲವು ಸಾಧಿಸಿದರು.ಗೆಲುವು ಸಾಧಿಸಿದ ಕುಂದೂರು ಮೂರ್ತಿಗೆ ವೀರಶೈವ ಮುಖಂಡರುಗಳು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ.
ಮಳವಳ್ಳಿ: ಮಳವಳ್ಳಿ ಪಟ್ಟಣದ ಕೋಟೆಯ ತ್ಯಾಗರಾಜ ರಸ್ತೆಯಲ್ಲಿರುವ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಂಸ್ಥಾನ ಪೀಠದ ಶಾಖಾ ಮಠವಾದ ಶ್ರೀ ಶಂಕರ ಮಠದ ಆವರಣದಲ್ಲಿ ಪುನರುಜ್ಜೀವನಗೊಳಿಸಿರುವ ಶ್ರೀ ಶಂಕರ ಬಸವೇಶ್ವರಸ್ವಾಮಿ ದೇವಾಲಯವನ್ನು ಮತ್ತು ಭಕ್ತ ಮಹಾಶಯರ ಹಾಗೂ ದಾನಿಗಳ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ಶಂಕರ ಮಠದ ಕಟ್ಟಡವನ್ನು ಧನಗೂರು ಮಠದ ಶ್ರೀ ಷ ಬ್ರ ಶ್ರೀ ಮುಮ್ಮಡಿ ಷಡಕ್ಷರದೇಶಿಕೇಂದ್ರ ಶಿವಾಚಾರ್ಯಸ್ವಾಮಿಗಳವರ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದಲ್ಲದೆ ಶಂಕರ ಮಠದ ಆವರಣದಲ್ಲಿ ಹೋಮಹವನವನ್ನು ನಡೆಸಲಾಯಿತು ಪ್ರಾತ:ಕಾಲ ಮೂರ್ತಿ ಪ್ರತಿಷ್ಠಾಪನೆ ಕಲಶಾರೋಹಣ ಕಾರ್ಯಕ್ರಮನಡೆಸಲಾಯಿತು ಕೆ.ಎಂ ದೊಡ್ಡಿ ಶಿವಪಾರ್ವತಿ ಮಹಿಳೆಯರ ತಂಡದಿಂಧ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆಸಲ್ಲಿಸಿದರು ಆಗಮಿಸಿದ ಭಕ್ತರಿಗೆ ಮಠವತಿಯಿಂದ ಪ್ರಸಾದವಿನಿಯೋಗ ಮಾಡಲಾಗಿತ್ತು.
ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಮಳವಳ್ಳಿಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಆಚರಿಸಲಾಯಿತು.
ಮಳವಳ್ಳಿ: ಮಳವಳ್ಳಿ ಪಟ್ಟಣದ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮ ದಲ್ಲಿ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್ ರವರು ಮಾತನಾಡಿ ಜಂತುಹುಳು ಮನುಷ್ಯನನ್ನು ಹೇಗೆ ಕಾಡುತ್ತದೆ ಎಂಬ ಬಗ್ಗೆ ತಿಳಿಸಿಕೊಟ್ಟರು. ಇನ್ನೂ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಮಾತನಾಡಿ , ಸಣ್ಣ ಮಕ್ಕಳಿಂದ 19 ವರ್ಷದೊಳಗೆ ಮಕ್ಕಳಿಗೆ ಜಂತುಹುಳು ನಿವಾರಣೆ ಗೆ ವರ್ಷಕ್ಕೆ ಎರಡು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಅದಕ್ಕಾಗಿ ದೇಶವ್ಯಾಪ್ತಿ ಫೆಬ್ರವರಿ ಹಾಗೂ ಆಕ್ಟೋಬರ್ ತಿಂಗಳನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಆಚರಸಲಾಗುತ್ತಿದೆ. ಈ ಹಿಂದೆ ಬಯಲು ಶೌಚಾಲಯ ದಿಂದ ಜಂತುಹಳು ಮನುಷ್ಯನನ್ನು ಬೇಗ ಅವರಿಸಿಕೊಳ್ಳುತ್ತಿತ್ತು. ಇಂದಿನಿಂದ ಆರು ದಿನಗಳ ಕಾಲ ಈ ಜಂತುಹುಳು ನಿವಾರಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ತೆರಳಿ ಮಾತ್ರೆಗಳನ್ನು ಉಚಿತವಾಗಿ ನೀಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣಾಧಿಕಾರಿ ವೀರಣ್ಣಗೌಡ ,ಕಾಲೇಜ ಸಿಬ್ಬಂದಿ ಮತ್ತು ಮಕ್ಕಳು ಸೇರಿದಂತೆ ಮತ್ತಿತ್ತರು ಹಾಜರಿದ್ದರು.