ಮಂಡ್ಯ

Rate this item
(0 votes)

ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವ. ದೇವರ ಉತ್ಸವಮೂರ್ತಿಗೆ ಹೆಗಲುಕೊಟ್ಟು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದ ಶಾಸಕ ಡಾ.ನಾರಾಯಣಗೌಡ. ಮುಗಿಲು ಮುಟ್ಟಿದ ಜಯಘೋಷಗಳು.ಗರುಡಪಕ್ಷಿಯಿಂದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರದಕ್ಷಿಣೆ.

ಕೃಷ್ಣರಾಜಪೇಟೆ : ತಾಲ್ಲೂಕಿನ ಪುರಾಣ ಪ್ರಸಿದ್ಧ ಅಕ್ಕಿಹೆಬ್ಬಾಳು ಗ್ರಾಮದ ಗ್ರಾಮದೇವತೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.ಮಧ್ಯಾಹ್ನ 1ಗಂಟೆಗೆ ಸರಿಯಾಗಿ ಗರುಡ ಪಕ್ಷಿಯು ಆಗಸದಲ್ಲಿ ಕಾಣಿಸಿಕೊಂಡು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ವಿಪ್ರ ಬಾಂಧವರು ಉಘೇ ನರಸಿಂಹ.ಉಘೇ ಗೋವಿಂದ. ಗೋವಿಂದ ಎಂಬ ಜಯಘೋಷಗಳನ್ನು ಕೂಗುತ್ತಿದ್ದರು. ಭಕ್ತಿಯ ಪರಾಕಾಷ್ಠೆಯು ಮುಗಿಲು ಮುಟ್ಟಿತ್ತು.

ಶಾಸಕ ಡಾ.ನಾರಾಯಣಗೌಡ ಮತ್ತು ತಹಶೀಲ್ದಾರ್ ಎಂ.ಶಿವಮೂರ್ತಿ ಶ್ರೀಲಕ್ಷ್ಮೀನರಸಿಂಹಸ್ವಾಮಿಯವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಸದ್ಬಕ್ತರಂತೆ ಹೆಗಲಮೇಲೆ ಹೊತ್ತು ಮೆರೆದಿದ್ದು ವಿಶೇಷವಾಗಿತ್ತು.  ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಕೃತಾರ್ಥರಾದರು.ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಹೇಮಾವತಿ ಹೊನ್ನಾರು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರ ನೇತೃತ್ವದಲ್ಲಿ ಬಿಗಿಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜು, ತಾಲ್ಲೂಕು ಪಂಚಾಯತ ಸದಸ್ಯೆ ವಿನುತಾಸುರೇಶ್, ಮಾಜಿಸದಸ್ಯೆ ರೇಣುಕಾಕಿಟ್ಟು, ಸ್ಥಳೀಯ ಮುಖಂಡರಾದ ಎ.ಆರ್.ರಘು, ಎ.ಎಸ್.ನಾಗರಾಜು, ಜಿ.ಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಉದ್ಯೋಗಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕಿ ಮೇನಕಾದೇವಿ ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು.

Last modified on 22/02/2019
Rate this item
(0 votes)

ಮುಂದಿನ 15 ವರ್ಷದಲ್ಲಿ ಈ ರಾಜ್ಯವೂ ಜಗತ್ತಿನಲ್ಲೇ ಮದ್ಯಪಾನದಲ್ಲಿ ಪ್ರಥಮಸ್ಥಾನಕ್ಕೆ ಬರಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ .    

ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ  ವೀರಶೈವ ರು ಹಾಗೂ ಸರ್ವಜನಾಂಗದವರು ಸಮಿತಿ ವತಿಯಿಂದ ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ .ತ್ರಿವಿಧ ದಾಸೋಹಿ ಲಿಂಗೈಕ  ಪರಜಪೂಜ್ಯ ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ  ಕಾರ್ಯಕ್ರಮವನ್ನು ಕನಕಪುರ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ.ಶ್ರೀಗಳ ಇನ್ನೂ ನಮ್ಮ ಮನಸ್ಸಿನಲ್ಲಿ ಇದ್ದು ಅವರು ಅಮರರಾಗಿರುತ್ತಾರೆ. ಶ್ರೀಗಳ ಜೊತೆಗೆ ಯೋದ ಗುರು ರವರ ನೆನಪು ಮಾಡಿಕೊಳ್ಳುತ್ತಿರುವುದು ಮಳವಳ್ಳಿ ಜನರ ದೊಡ್ಡಗುಣವನ್ನು ತೋರಿಸುತ್ತದೆ.  ಅದರಲ್ಲೂ ಎಲ್ಲಾ ಸಮಾಜ ಮುಖಂಡರಗಳನ್ನು ಒಂದೇ ವೇದಿಕೆಯಲ್ಲಿ  ಸೇರಿಸಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ ನಡೆದಾಡುವ ದೇವರು  ಶ್ರೀಗಳ ಮೇಲೆ  ಗೌರವವಿದ್ದರೆ ರಾಜ್ಯದಲ್ಲಿ ಮದ್ಯಪಾನ ರದ್ದು ಪಡಿಸಿ ಎಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿಕೊಂಡರು .ಈಗ ರಾಜ್ಯದಲ್ಲಿ ಮದ್ಯಪಾನ ವನ್ನು ಮಾಡುವವರು ಕೇವಲ  ಶೇ 30 ರಷ್ಟು ಇದ್ದರೂ ಮುಂದಿನ ದಿನಗಳಲ್ಲಿ ಶೇ 70 ರಷ್ಠು  ಮಂದಿ  ಮದ್ಯಪಾನಗಳಾಗುವ ಸಾಧ್ಯತೆವಿದೆ ರಾಜ್ಯಸರ್ಕಾರಕ್ಕೆ ಮದ್ಯಪಾನ ದಿಂದ ಆದಾಯ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇದರಿಂದ ಜನರ ಮೇಲೆ ಯಾವರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು  ಸರ್ಕಾರ  ಅರ್ಥ ಮಾಡಿಕೊಳ್ಳಬೇಕು.    ಮದ್ಯಪಾನ ಮುಕ್ತ ಮಾಡಲು ಮಳವಳ್ಳಿ ಯಿಂದ ಹೋರಾಟ ನಡೆಸುವಂತೆ ಕರೆ ನೀಡಿದರು.       

ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾಸೋಹ  ಹಾಗೂ  ಇದೇ ಸಂದರ್ಭದಲ್ಲಿ ಸಾಲು ಮರನಾಗರಾಜು ರವರ ನೇತೃತ್ವದಲ್ಲಿ   ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ 111  ಸಸಿಗಳನ್ನು  ವೇದಿಕೆಯಲ್ಲಿದ್ದ ಗಣ್ಯರ ಮೂಲಕ ವಿತರಿಸಿದರು. ವೇದಿಕೆಯಲ್ಲಿ ಹಿಂದೂ .ಮುಸ್ಲಿಂ.ಕೈಸ್ತ ಜನಾಂಗದ ಗುರುಗಳು  ಸೇರಿದಂತೆ  ತಾಲ್ಲೂಕಿನ ಮಠಾದೀಶರು ಇದ್ದರು.

 

Last modified on 22/02/2019
Rate this item
(0 votes)

ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ.ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ.

ಕೆ.ಆರ್.ಪೇಟೆ:ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿ ಗ್ರಾಮದ ಯುವಕರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ನಡೆದಾಡುವ ದೇವರು ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ ಹಾಗೂ ಕರ್ನಾಟದ ಒಬ್ಬ ಯೋಧ ಸೇರಿ 42 ಜನ ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳ ಭಾವಚಿತ್ರ ಹಾಗೂ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕಿನ ಕೆ.ಎಂ ದೊಡ್ಡಿ ಕಾಲೋನಿಯ ಗುಡಗೇರಿಯ ಗುರು(33)ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿ.ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಯಶವಂತ್ ಜಮ್ಮುವಿನ ಪುಲ್ವಾಮಾ ಪ್ರದೇಶದಲ್ಲಿ ಉಗ್ರರ ದಾಳಿಗೆ ಸಿಆರ್‌ಪಿಎಫ್‌ನ 42 ಯೋಧರು ಹುತಾತ್ಮರಾಗಿರುವುದು ಬಹಳ ವಿಷಾದನೀಯ. ಭಾರತ ದೇಶದಲ್ಲಿ ಪುನಃ ಆತಂಕಕಾರಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಪಾಪಿ ಪಾಕಿಸ್ತಾನದ ಕೆಟ್ಟ ಕೃತ್ಯವನ್ನು ಖಂಡಿಸಿ ಭಾರತ ಸರ್ಕಾರವು ಉಗ್ರರ ಸಂಹಾರಕ್ಕೆ ಮುಂದಾಗುವ ಮೂಲಕ ಜಮ್ಮುಕಾಶ್ಮೀರದಲ್ಲಿ ಶಾಂತಿ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ನಂತರ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು

 ಕಾರ್ಯಕ್ರಮ ದಲ್ಲಿ ಸಂಘದ ಅಧ್ಯಕ್ಷ ಯಶವಂತ್ .ಲಕ್ಷ್ಮೀಷ್, ಶಿವರಾಜು. ನವೀನ್ .ವಿನಯ್. ಮಂಜು .ನಾಗೇಶ್. ರವಿ. ಪಾಪಣ್ಣ. ಸತ್ಯಣ್ಣ. ಹಾಗೂ ಅಪ್ಪನಹಳ್ಳಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು

Rate this item
(0 votes)

ತಾಲ್ಲೂಕಿನ ಹೆಮ್ಮೆಯ ಮಗನಿಗೆ ಒಲಿದ ಅಂತರ ರಾಷ್ಟ್ರೀಯ ಪ್ರಶಸ್ತಿ.ತಾಲ್ಲೂಕಿನ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ

ಕೃಷ್ಣರಾಜಪೇಟೆ: ತಾಲ್ಲೂಕಿನ ಹೆಮ್ಮೆಯ ಮಗ ಅಂಬಿಗರಹಳ್ಳಿಯ ಡಾ.ಅಂ.ಚಿ. ಸಣ್ಣಸ್ವಾಮಿಗೌಡರಿಗೆ ಲಭಿಸಿದ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಲಭಿಸಿದೇ. ಫೆಬ್ರವರಿ 23 ರಂದು ಸಿಂಗಾಪುರ್ ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭ.ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಹಾಗೂ ಪರಮಪೂಜ್ಯ ಶ್ರೀ. ಶ್ರೀ. ಶ್ರೀ. ನಿರ್ಮಲಾನಂದನಾಥ ಸ್ವಾಮಿಗಳಿಂದ ಪ್ರಶಸ್ತಿ ಸ್ವೀಕಾರ.ಸಾಮಾನ್ಯ ರೈತನ ಮಗನಾಗಿ, ಶಿಕ್ಷಕನಾಗಿ ಸಂಘಟನೆಯ ಮೂಲಕ ರಾಜ್ಯ.ರಾಷ್ಟ್ರೀಯ.ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ತಾಲ್ಲೂಕಿನ ಹೆಮ್ಮೆಯ ಪುತ್ರ.ಸರ್ಕಾರಿ ನೌಕರರ ಭವನ.ಸರ್ಕಾರಿ ನೌಕರರಿಗೆ ನಿವೇಶನ ನೀಡಿಕೆ.ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಸ್ಥಾಪನೆ.ಗ್ರಾಜುಯೇಟ್ ಕೋ.ಆಪರೇಟಿವ್ ಸೊಸೈಟಿ ಸ್ಥಾಪನೆ.ಮಂಡ್ಯ ಮತ್ತು ಮೈಸೂರಿನ ಹಲವು ಸಂಘಸಂಸ್ಥೆಗಳ ಮುಖ್ಯಸ್ಥರಾಗಿ. ಸಲಹೆಗಾರರಾಗಿ.ಮಾರ್ಗದರ್ಶಕರಾಗಿ ಸೇವೆನಿವೃತ್ತಿ ನಂತರವೂ ದಣಿವರಿಯದ ದಂಡನಾಯಕ ನಂತೆ ಕಾರ್ಯ ನಿರ್ವಹಣೆ.

 

Rate this item
(0 votes)

 ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ.ಅಭಿವೃದ್ಧಿಯೇ ಮೂಲಮಂತ್ರ.ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧ .ಶಾಸಕ ಸ್ಥಾನ ತಾಲ್ಲೂಕಿನ ಪ್ರಜ್ಞಾವಂತ ನಾಗರೀಕರು, ಜೆಡಿಎಸ್ ಕಾರ್ಯಕರ್ತರು ನೀಡಿದ ಅಭಿಮಾನದ ಕೊಡುಗೆ.ಶಾಸಕ. ನಾರಾಯಣಗೌಡ.

ಕೃಷ್ಣರಾಜಪೇಟೆ: ತಾಲ್ಲೂಕಿನ ಹಿರಳಹಳ್ಳಿ, ಹಾದನೂರು ಮತ್ತು ಮುರುಕನಹಳ್ಳಿ ಗ್ರಾಮಗಳಲ್ಲಿ ಶಾಸಕ ಡಾ.ನಾರಾಯಣಗೌಡ ಅವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜಾ ಕಾರ್ಯಕ್ರಮ. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿರುವ ನಾನು ತಾಲೂಕನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೇನೆ. ಸರ್ಕಾರವು ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ನೀಡದಿರುವುದು ಬೇಸರ ತಂದಿದೆ. ಆದರೆ ತಾಲ್ಲೂಕಿನ ಜನತೆಯ ಕಲ್ಯಾಣಕ್ಕೆ ಯಾವುದೇವ ಹೋರಾಟಕ್ಕೆ ಬದ್ಧನಿದ್ದೇನೆ.ಕಾಡಿಬೇಡಿಯಾದರೂ ಅಭಿವೃದ್ಧಿಗೆ ಅನುದಾನ ತರುತ್ತೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ತಾ.ಪಂ ಸದಸ್ಯ ವಿಜಯಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಸ್ವಾಮಿಗೌಡ ಮತ್ತಿತರರು ಭಾಗವಹಿಸಿದ್ದರು.

 

Last modified on 19/02/2019
Rate this item
(0 votes)

  ನಿಗೂಢ ಕಾಯಿಲೆಯಿಂದ  ಕಳೆದ ಒಂದು ವಾರದಿಂದ ಒಂದೇ ಮನೆಯ  25 ಕ್ಕೂ ಹೆಚ್ಚು ಮೇಕೆಗಳ ಸಾವು ಕಂಗಾಲಾಗಿರುವ  ರೈತ ಕುಟುಂಬ.  

ಮಳವಳ್ಳಿ:ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ  ನಾರಾಯಣ ಎಂಬುವವರಿಗೂ ಸೇರಿದ ಮೇಕೆಗಳು ಸಾಯುತ್ತಿದ್ದು. ಪಶು ವೈದ್ಯಾಧಿಕಾರಿಗಳಿಗೆ  ಸವಾಲಾಯಾಗಿರುವ ಕಾಯಿಲೆ ಇದ್ದಾಗಿದ್ದು  ಪ್ರತಿನಿತ್ಯ 2 ರಿಂದ 3 ಮೇಕೆಗಳು ಸಾಯುತ್ತಿದೆ ಇದರಿಂದಲೇ ಜೀವನ ಸಾಗಿಸುತ್ತಿದ್ದ  ಕಳೆದ ವಾರದಿಂದ   ಸಾಕಷ್ಟು ನಷ್ಷವಾಗಿದ್ದು   ಪರಿಹಾರಕ್ಕೆ ಆಗ್ರಹ  ಪಡಿಸಿದ್ದಾರೆ .  ಸ್ಥಳಕ್ಕೆ ಮಂಡ್ಯ ಜಿಲ್ಲಾ ಪಶು ಸಂಗೋಪನೆ ಇಲಾಖೆ  ಉಪನಿರ್ದೇಶಕ.  ಡಾ ಪದ್ಮನಾಭ,  ಮಂಡ್ಯ ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಸಹಾಯಕ ನಿರ್ದೇಶಕ  ಡಾ.ಸಿ ವೀರಭದ್ರಯ್ಯ  ಜಿ.ಪಂ ಸದಸ್ಯೆ ಸುಷ್ಮಾರಾಜು , ತಾ.ಪಂ ಅಧ್ಯಕ್ಷ ನಾಗೇಶ್ , ತಾ.ಪಂಸದಸ್ಯ ಪುಟ್ಟಸ್ವಾಮಿ ಬೇಟಿ  ಪರಿಶೀಲನೆ . ಇದು  ಮೈಕಾಪ್ಲಾಸ್ಮ ಎಂಬ ‌ಕಾಯಿಲೆ ಎಂದು  ದೃಡ ಪಡಿಸಿದ ಉಪ ನಿರ್ದೇಶಕ  ಜಿಲ್ಲೆಯಲ್ಲೇ ಪ್ರಥಮವಾಗಿ ಹಬ್ಬಿದ ಕಾಯಿಲೆ  ಈ ಕಾಯಿಲೆ ಬಂದರೆ ಉಳಿಯುವುದು ಅಸಾಧ್ಯ  ಎಂದ  ಉಪನಿರ್ದೇಶಕ  ಡಾ.ಪದ್ಮನಾಭ  ತಿಳಿಸಿದರು. ಈಗಲೇ ಈ ಕಾಯಿಲೆ ಹರಡದಂತೆ  ಅಗತ್ಯ ಕ್ರಮ ಗೊಳ್ಳಲಾಗುವುದು ಎಂದು ತಿಳಿಸಿದರು ಇನ್ನೂ ಜಿ.ಪಂ ಸದಸ್ಯೆ ಸುಷ್ಮಾ ರಾಜು  ಮಾತನಾಡಿ .ಕೂಡಲೇ  ಪರಿಹಾರ ನೀಡಲು  ಜಿ.ಪಂ ಸಭೆಯಲ್ಲಿ ಚರ್ಚೆ ಮಾಡುವುದಾಗಿ ತಿಳಿಸಿದರು  ಕಂಗಾಲಾಯಾಗಿದ್ದ ರೈತನಿಗೆ  ತಾ.ಪಂ ಅಧ್ಯಕ್ಷ ನಾಗೇಶ. ಸಾಂತ್ವನ ಹೇಳಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿ  ಈ ಕಾಯಿಲೆ ಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು  ಮತ್ತಷ್ಟು ಹರಡದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು ತಾ.ಪಂ ಸದಸ್ಯ ಪುಟ್ಟಸ್ವಾಮಿ  ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ . ಸೇರಿದಂತೆ  ಬೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿದರು.

 

Rate this item
(0 votes)

ಮಳವಳ್ಳಿ ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ.

ಮಳವಳ್ಳಿ: ಸಾಲಭಾದೆ ತಾಳಲಾರದೇ ನೇಣು ಬಿಗಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕರಲಕಟ್ಟೆ ಗ್ರಾಮದಲ್ಲಿ ನೆಡೆದಿದೆ. ಮುತ್ತುರಾಜು 35 ವರ್ಷ ಮೃತಪಟ್ಟ ದುರ್ದೈವಿ. ಈತ ಸುಮಾರು ನಾಲ್ಕು ಎಕರೆ ಜಮೀನನ್ನು ಹೊಂದಿದ್ದರು. ವ್ಯವಸಾಯ ಮಾಡುವ ಸಲುವಾಗಿ ಭತ್ತ,ಬಾಳೆ, ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಬ್ಯಾಂಕಿನಿಂದ ಮೂರು ಲಕ್ಷ ಸಾಲ ಮಾಡಿ ಬೇಸಾಯ ಮಾಡಿದ್ದರು, ತಾನು ಬೆಳೆದ ಬೆಳೆಗೆ ಬೆಲೆ ಸಿಗಲಿಲ್ಲವಾದ್ದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ. ಪಡೆದ ಸಾಲಕ್ಕೆ ಬಡ್ಡಿ ಸಹ ಪಾವತಿಸಲಾಗುತ್ತಿಲ್ಲ, ಎ ಮನನೊಂದು ತಮ್ಮ ಜಮೀನಿನ ಬಳಿ ನೇಣು ಬಿಗಿದು ಸಾವನ್ನಪ್ಪಿದ್ದಾನೆ.ಮೃತರಿಗೆ ತಾಯಿ, ಪತ್ನಿ ಪುಟ್ಟಲಕ್ಷ್ಮಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಬಿ.ಎಸ್. ಶಿವರುದ್ರ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು.

Rate this item
(0 votes)

ಶಿಕ್ಷಣ ಜ್ಞಾನದ ಬೆಳಕಿನ ಶಕ್ತಿ ಶಿಕ್ಷಣಕ್ಕೆ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಶಕ್ತಿಯಿದೆ.ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು.ಶಾಸಕ ಡಾ.ನಾರಾಯಣಗೌಡ.

ಕೃಷ್ಣರಾಜಪೇಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಕೆ.ಕಾಳೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನೂತನವಾಗಿ ನಿರ್ಮಿಸಿರುವ ಒಂದೂವರೆ ಕೋಟಿ ರೂ ವೆಚ್ಚದ ಹೈಟೆಕ್ ಶಾಲಾ ಕಟ್ಟಡವನ್ನು ಲೋಕಾರ್ಪಣೆ ಮಾಡಿ ನಂತರ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ಮಲ್ಲಿಗೆಸಿರಿ ಬಿಡುಗಡೆ ಮಾಡಿದ ಶಾಸಕ ನಾರಾಯಣಗೌಡರು. ನಂತರ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತರಾಗಬೇಕು.ಶಿಕ್ಷಣಕ್ಕೆ ಸಾಮಾಜಿಕ ಅಸಮಾನತೆಗಳನ್ನು ಹೊಡೆದೋಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಶಕ್ತಿಯಿಂದ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ. ಕ್ಷೇತ್ರದ ಶಾಸಕನಾಗಿ ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣದ ಅನುಷ್ಠಾನಕ್ಕೆ ಒತ್ತು ನೀಡಿದ್ದೇನೆ. ಮಕ್ಕಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಗುರಿಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದು.ಶಾಸಕ ನಾರಾಯಣಗೌಡ ಕರೆ ನೀಡಿದರು.

ಜಿಲ್ಲಾ ಪಂಚಾಯತ ಎಂಜಿನಿಯರ್ ಉಪವಿಭಾಗದ ಎಇಇ ಬಸವರಾಜು, ಪ್ರಥಮದರ್ಜೆ ಗುತ್ತಿಗೆದಾರ ಅರಳಕುಪ್ಪೆ ಮೋಹನ್, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ.ಎಸ್.ಕೃಷ್ಣಮೂರ್ತಿ, ಸದಸ್ಯರಾದ ಡಾ.ಕೆ.ಎಸ್.ರಾಜೇಶ್, ಅಗ್ರಹಾರಬಾಚಹಳ್ಳಿ ನಾಗೇಶ್, ಕಾಲೇಜಿನ ಹಿರಿಯ ಉಪನ್ಯಾಸಕರಾದ ಕರೀಗೌಡ, ಮಧುಕರ್, ಅನುರಾಧ, ಚಂದ್ರಶೇಖರ್, ಸತ್ಯನಾರಾಯಣ, ಗ್ರಂಥಪಾಲಕ ಶಂಭೂ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


 

 

Last modified on 18/02/2019
Page 13 of 34

Visitors Counter

222947
Today
Yesterday
This Week
This Month
Last Month
All days
129
163
292
6052
4244
222947

Your IP: 3.144.127.232
2024-04-29 06:33

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles