ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ ಇಟ್ಟಿದ್ದ ಅನ್ನಭಾಗ್ಯದ ಅಕ್ಕಿ ತಹಸೀಲ್ದಾರ್ ದಾಳಿ ನಡೆಸಿ 32 ಕ್ವಿಂಟ್ವಾಲ್ ಅಕ್ಕಿ ವಶ.
ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಗ್ರಾಮದ ರೈಸ್ ಮಿಲ್ ಯೊಂದರಲ್ಲಿ ಅಕ್ರಮವಾಗಿ ಇಟ್ಟಿದ್ದ ಅನ್ನಭಾಗ್ಯದ 32 ಕ್ವಿಂಟ್ವಾಲ್ ಅಕ್ಕಿ ಬೆಳ್ಳಂಬೆಳಿಗ್ಗೆ ತಹಸೀಲ್ದಾರ್ ಚಂದ್ರಮೌಳಿ ನೇತೃತ್ವದಲ್ಲಿ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಶೇಖರಿಸಿಟ್ಟದ್ದ 68 ಮೂಟೆಯ 32 ಕ್ವಿಂಟಾಲ್ ವಶಕ್ಕೆ ಪಡೆದುಕೊಂಡಿದ್ದು. ಮೇಲ್ನೋಟಕ್ಕೆ ಪಡಿತರ ಅಕ್ಕಿಯಾಗಿದ್ದು, ಅಕ್ಕಿ ಪರಿಶೀಲನೆ ನಂತರ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಚಂದ್ರಮೌಳಿ ತಿಳಿಸಿದ್ದಾರೆ. ನಂತರ ಪಡಿತರ ಮತ್ತು ಆಹಾರ ಇಲಾಖೆ ಆಹಾರ ನಿರೀಕ್ಷಕ ಕೃಷ್ಣಪ್ಪ ರವರು ಅಕ್ಕಿಯನ್ನು ವಾಹನದೊಂದಿಗೆ ಪೊಲೀಸರ ವಶಕ್ಕೆ ನೀಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂದ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ.