ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ ಮಳವಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.
ಮಳವಳ್ಳಿ: ಪಟ್ಟಣದ ಡಾ.ಬಿ ಆರ್ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ವೀರಯೋದ ದಿ.ಹೆಚ್ ಗುರು ಹಾಗೂ 48 ಯೋಧರಿಗೆ ಶ್ರದ್ಧಾಂಜಲಿ ಹಾಗೂ ಜಮ್ಮು ಕಾಶ್ಮೀರ ಕ್ಕೆ ಸಂವಿಧಾನ ದ 370 ರ ಅಧಿಸೂಚನೆ ಯಲ್ಲಿರುವ ವಿಶೇಷ ಸ್ಥಾನಮಾನ ವನ್ನು ರದ್ದು ಪಡಿಸುವಂತೆ ಮೌನ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಯಿಂದ ಹೊರಟ ಪ್ರತಿಭಟನಾಕಾರರು ಪ್ರಮುಖಬೀದಿಗಳಲ್ಲಿ ಮೌನ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ. ನಂತರ ಬೌದ್ಧ ಮಹಾಸಭಾ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಎಂ .ಎನ್ ಜಯರಾಜು ಮಾತನಾಡಿ, ಕೇಂದ್ರಸರ್ಕಾರವು ಸಂವಿಧಾನದ 370 ಅಧಿಸೂಚನೆ ಯಲ್ಲಿ ವಿಶೇಷ ಸ್ಥಾನ ಮಾನವನ್ನು ಜಾರಿಗೆ ತರುವಾಗ ಡಾ.ಬಿ.ಆರ್ ಅಂಬೇಡ್ಕರ್ ರವರು 70 ವರ್ಷಗಳ ಹಿಂದೆಯೇ ಮುಂದಿನ ದಿನಗಳಲ್ಲಿ ಈ ರೀತಿ ಆಗಬಹುದು ಅದಕ್ಕಾಗಿ ಈ ಅಧಿಸೂಚನೆ ಮಾಡಬಾರದು ಎಂದು ವಿರೋಧಿಸಿದರೂ ಸಹ ಅಂಬೇಡ್ಕರ್ ಮಾತಿಗೆ ಬೆಲೆ ಕೊಡದೆ ಈಗ ಈ ಪರಿಣಾಮ ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಕೂಡಲೇ ಸಂವಿಧಾನ 370 ಅಧಿಸೂಚನೆ ಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು ಶಿರೆಸ್ತೆದ್ದಾರ್ ಚನ್ನವೀರಭದ್ರಯ್ಯ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ ದುಗ್ಗನಹಳ್ಳಿನಾಗರಾಜು, ಡಾ.ಪ್ರಸಾದ ಬೌದ್ಧ ಮಹಾಸಭಾದ ಅಧ್ಯಕ್ಷ ರಾಚಯ್ಯ, ಪುರಸಭೆ ಸದಸ್ಯ ಮಹೇಶ್, ಸಾಹಿತಿ ಮ.ಸಿ ನಾರಾಯಣ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವನಂಜು, ಮಂಚಯ್ಯ, ದೊಡ್ಡಬೂವಳ್ಳಿ ನಾಗರಾಜು ಸೇರಿದಂತೆ ಮತ್ತಿತ್ತರು ಇದ್ದರು.