Madhu

Madhu

ಮೊದಲ ಹಂತದ ಐಪಿಎಲ್ ಟೂರ್ನಿ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿ
 

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಏ.18(14 ಲೋಕಸಭೆ ಸ್ಥಾನ)ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಏ.23(14 ಲೋಕಸಭೆ ಸ್ಥಾನ)ರಂದು ನಡೆಯಲಿದೆ. ಈ ದಿನಾಂಕಗಳನ್ನು ಹೊರತು ಪಡಿಸಿ ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಲಿದೆ. ಸದ್ಯ ಬಿಡುಗಡೆಯಾಗಿರುವ ಐಪಿಎಲ್ ವೇಳಾಪಟ್ಟಿ ಪ್ರಕಾರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸಲಿದೆ.

IPL Schedule 2019
Match No Match Day Date Match Time (IST) Venue
1 Saturday 23 March 2019 Chennai Super Kings vs Royal Challengers Bangalore 20:00 Chennai
2 Sunday 24 March 2019 Kolkata Knight Riders vs Sunrisers Hyderabad 16:00 Kolkata
3 Sunday 24 March 2019 Mumbai Indians vs Delhi Capitals 20:00 Mumbai
4 Monday 25 March 2019 Rajasthan Royals vs Kings XI Punjab 20:00 Jaipur
5 Tuesday 26 March 2019 Delhi Capitals vs Chennai Super Kings 20:00 Delhi
6 Wednesday 27 March 2019 Kolkata Knight Riders vs Kings XI Punjab 20:00 Kolkata
7 Thursday 28 March 2019 Royal Challengers Bangalore vs Mumbai Indians 20:00 Bengaluru
8 Friday 29 March 2019 Sunrisers Hyderabad vs Rajasthan Royals 20:00 Hyderabad
9 Saturday 30 March 2019 Kings XI Punjab vs Mumbai Indians 16:00 Mohali
10 Saturday 30 March 2019 Delhi Capitals vs Kolkata Knight Riders 20:00 Delhi
11 Sunday 30 March 2019 Sunrisers Hyderabad vs Royal Challengers Bangalore 16:00 Hyderabad
12 Sunday 31 March 2019 Chennai Super Kings vs Rajasthan Royals 20:00 Chennai
13 Monday 1 April 2019 Kings XI Punjab vs Delhi Capitals 20:00 Mohali
14 Tuesday 2 April 2019 Rajasthan Royals vs Royal Challengers Bangalore 20:00 Jaipur
15 Wednesday 3 April 2019 Mumbai Indians vs Chennai Super Kings 20:00 Mumbai
16 Thursday 4 April 2019 Delhi Capitals vs Sunrisers Hyderabad 20:00 Delhi
17 Friday 5 April 2019 Royal Challengers Bangalore vs Kolkata Knight Riders 20:00 Bengaluru
18 Saturday 6 April 2019 Chennai Super Kings vs Kings XI Punjab 16:00 Chennai
19 Saturday 6 April 2019 Sunrisers Hyderabad vs Mumbai Indians 20:00 Hyderabad
20 Sunday 7 April 2019 Royal Challengers Bangalore vs Delhi Capitals 16:00 Bengaluru
21 Sunday 7 April 2019 Rajasthan Royals vs Kolkata Knight Riders 20:00 Jaipur
22 Monday 8 April 2019 Kings XI Punjab vs Sunrisers Hyderabad 20:00 Mohali
23 Tuesday 9 April 2019 Chennai Super Kings vs Kolkata Knight Riders 20:00 Chennai
24 Wednesday 10 April 2019 Mumbai Indians vs Kings XI Punjab 20:00 Mumbai
25 Thursday 11 April 2019 Rajasthan Royals vs Chennai Super Kings 20:00 Jaipur
26 Friday 12 April 2019 Kolkata Knight Riders vs Delhi Capitals 20:00 Kolkata
27 Saturday 13 April 2019 Mumbai Indians vs Rajasthan Royals 16:00 Mumbai
28 Saturday 13 April 2019 Kings XI Punjab vs Royal Challengers Bangalore 20:00 Mohali
29 Sunday 14 April 2019 Kolkata Knight Riders vs Chennai Super Kings 16:00 Kolkata
30 Sunday 14 April 2019 Sunrisers Hyderabad vs Delhi Capitals 20:00 Hyderabad
31 Monday 15 April 2019 Mumbai Indians vs Royal Challengers Bangalore 20:00 Mumbai
32 Tuesday 16 April 2019 Kings XI Punjab vs Rajasthan Royals 20:00 Mohali
33 Wednesday 17 April 2019 Sunrisers Hyderabad vs Chennai Super Kings 20:00 Hyderabad
34 Thursday 18 April 2019 Delhi Capitals vs Mumbai Indians 20:00 Delhi
35 Friday 19 April 2019 Kolkata Knight Riders vs Royal Challengers Bangalore 20:00 Kolkata
36 Saturday 20 April 2019 Rajasthan Royals vs Mumbai Indians 16:00 Jaipur
37 Saturday 20 April 2019 Delhi Capitals vs Kings XI Punjab 20:00 Delhi
38 Sunday 21 April 2019 Sunrisers Hyderabad vs Kolkata Knight Riders 16:00 Hyderabad
39 Sunday 21 April 2019 Royal Challengers Bangalore vs Chennai Super Kings 20:00 Bengaluru
40 Monday 22 April 2019 Rajasthan Royals vs Delhi Capitals 20:00 Jaipur
41 Tuesday 23 April 2019 Chennai Super Kings vs Sunrisers Hyderabad 20:00 Chennai
42 Wednesday 24 April 2019 Royal Challengers Bangalore vs Kings XI Punjab 20:00 Bengaluru
43 Thursday 25 April 2019 Kolkata Knight Riders vs Rajasthan Royals 20:00 Kolkata
44 Friday 26 April 2019 Chennai Super Kings vs Mumbai Indians 20:00 Chennai
45 Saturday 27 April 2019 Rajasthan Royals vs Sunrisers Hyderabad 16:00 Jaipur
46 Sunday 28 April 2019 Delhi Capitals vs Royal Challengers Bangalore 20:00 Delhi
47 Sunday 28 April 2019 Kolkata Knight Riders vs Mumbai Indians 20:00 Kolkata
48 Monday 29 April 2019 Sunrisers Hyderabad vs Kings XI Punjab 20:00 Hyderabad
49 Tuesday 30 April 2019 Royal Challengers Bangalore vs Rajasthan Royals 20:00 Bengaluru
50 Wednesday 1 May 2019 Chennai Super Kings vs Delhi Capitals 20:00 Chennai
51 Thursday 2 May 2019 Mumbai Indians vs Sunrisers Hyderabad 20:00 Mumbai
52 Friday 3 May 2019 Kings XI Punjab vs Kolkata Knight Riders 20:00 Mohali
53 Saturday 4 May 2019 Delhi Capitals vs Rajasthan Royals 16:00 Delhi
54 Saturday 4 May 2019 Royal Challengers Bangalore vs Sunrisers Hyderabad 20:00 Bengaluru
55 Sunday 5 May 2019 Kings XI Punjab vs Chennai Super Kings 16:00 Mohali
56 Sunday 5 May 2019 Mumbai Indians vs Kolkata Knight Riders 20:00 Mumbai

 ಚಲನಚಿತ್ರ ಮಂಡಳಿಯವರು ಗೌರವದಿಂದ ಮನೆಯಲಿರಬೇಕು, ಅದನ್ನ ಬಿಟ್ಟು ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕೆ ಮಾಡಿದರೇ ನಿಮ್ಮ ಆಸ್ತಿ, ಅಂತಸ್ತು ಸೇರಿದಂತೆ ಎಲ್ಲವನ್ನೂ ತನಿಖೆ ಮಾಡಿಸುತ್ತೇವೆ ಎಂದು ಶಾಸಕ ನಾರಾಯಣಗೌಡ..ನಟ ದರ್ಶನ್, ಯಶ್ ಸೇರಿದಂತೆ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ನಟ, ನಿಮರ್ಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೆ.ಆರ್.ಪೇಟೆ: ಪಟ್ಟಣದ ಶಾಸಕರ ನಿವಾಸದ ಬಳಿ ಮೈದಾನದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಅಂಬರೀಷ್ ಪರವಾಗಿ ನಿಲ್ಲುವ ಎಲ್ಲಾ ಚಲನಚಿತ್ರಕ್ಕೆ ಸಂಬಂಧಿಸಿ ಎಲ್ಲಾ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದರು.ನಮ್ಮ ದೇವೇಗೌಡರು, ಕುಮಾರಣ್ಣನ ಬಗ್ಗೆ ಟೀಕಿಸುವ ಚಲನಚಿತ್ರ ನಟರಿಗೆ ತಕ್ಕ ಪಾಠ ಕಲಿಸುತ್ತೇವೆ, ಅದನ್ನು ಶೀಘ್ರದಲ್ಲಿ ತೋರಿಸುತ್ತೇವೆ. ಅವರಿಗೆ ರಾಜಕಾರಣ ಬಗ್ಗೆ ಮಾತನಾಡೋಕೆ ಏನು ಹಕ್ಕಿದೆ. ಅವರ ಕೊಡುಗೆ ಏನಿದೆ. ಅವರಿಗೂ ರಾಜಕರಣಕ್ಕೂ ಸಂಬಂಧವಿಲ್ಲ. ಗೌರವದಲ್ಲಿ ಮನೆಲ್ಲಿದ್ದು, ಸಿನಿಮಾ ತೆಗೆಯಿರಿ. ನಮ್ಮ ರಾಜಕಾರಣಕ್ಕೆ ಮಧ್ಯಪ್ರವೇಶಿಸಿಬೇಡಿ. ಅಂಬರೀಷ್ಣ್ಣನ ಬಗ್ಗೆ ಗೌರವವಿದೆ. ಅವರನ್ನು ನಮ್ಮ ಜಿಲ್ಲೆಯವರು ಹೇಗೆ ಬೆಳಸಬೇಕಿತ್ತು, ಹಾಗೆ ನಾವು ಬೆಳಿಸಿದ್ದೇವಿ. ನಿಮ್ಮಿಂದ ನಾವು ಕಲಿಯುವುದು ಏನಿಲ್ಲ ಎಂದು ಚಲನಚಿತ್ರ ಮಂಡಳಿಯವರಿಗೆ ಎಚ್ಚರಿಕೆ ನೀಡಿದರು.

ಮತ್ತೊಮ್ಮೆ ದೇಶದ ಪ್ರಧಾನಿಯಾಗೋ ಅವಕಾಶ ನಮ್ಮ ಮಣ್ಣಿನ ಮಗ ದೇವೇಗೌಡರಿಗೆ ಬಂದಿದೆ. ಹಾಗಾಗಿ ಈ ಬಾರಿ ಜಿಲ್ಲೆಯ ಲೋಕಸಭೆ ಅಭ್ಯತರ್ಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಅದು ನಮ್ಮ ತಾಲೂಕಿನಲ್ಲಿಯೇ ಹೆಚ್ಚು ಅಂತರ ನೀಡಬೇಕು. ಜಿಲ್ಲೆಯ ಎಲ್ಲಾ ನಾಯಕರು ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿ ಅಭ್ಯಥರ್ಿ ಮಾಡಿದ್ದೇವೆ. ಇದು ಕುಮಾರಸ್ವಾಮಿಗೆ ಇಷ್ಟವಿರಲಿಲ್ಲ. ನಮ್ಮೆಲ್ಲರ ಒತ್ತಡದಿಂದ ಒಪ್ಪಿದ್ದಾರೆ ಎಂದು ತಿಳಿಸಿದರು.

ದೇವೇಗೌಡರ ಕುಟುಂಬದ ಬಳಿ ನಮ್ಮ ಬಗ್ಗೆ ಇಲ್ಲಸ್ಲಲದ ಆರೋಪವನ್ನು ನಮ್ಮ ಕ್ಷೇತ್ರದ ಮುಖಂಡರು ಮಾಡುತ್ತಾರೆ. ದೇವೇಗೌಡರು, ಅವರ ಕುಟುಂಬದ ಸದಸ್ಯರು ನನಗೆ ಹೊಡೆದರು ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದೇವೇಗೌಡರ ಕುಟುಂಬದ ಸದಸ್ಯ, ದೇವೇಗೌಡರ ಮನೆ ಚಾಡಿ ಹೇಳುವವರ ಮನೆ, ದೇವೇಗೌಡರ ಫೋಟೋ ಕೂಡ ಇಲ್ಲ. ತಾಲುಕಿನಲ್ಲಿ ದೇವೇಗೌಡರನ್ನು ಪ್ರತಿದಿನ ಪೂಜಿಸುವವನು ನಾನು ಎಂದು ಶಾಸಕ ನಾರಾಯಣಗೌಡ ಹೇಳಿದರು.

ಬಿಡುತ್ತೇನೆ ಎಂದು ಸುಳ್ಳು ಸುದ್ದಿಯನ್ನು ಕ್ಷೇತ್ರದಲ್ಲಿ ಹಬ್ಬಿಸುತ್ತಿದ್ದಾರೆ. ನನ್ನ ಶರೀರದಲ್ಲಿ ರಕ್ತ ಇರುವರೆಗೂ ಪಕ್ಷವನ್ನು ಬಿಡುವ ಪ್ರಶ್ನೆಯಿಲ್ಲ. ಅವುಗಳಿಗೆ ಜನ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ರಾಜ್ಯ ನಾಯಕರು ಮೈತ್ರಿ ಅಭ್ಯಥರ್ಿಯನ್ನು ಗೆಲ್ಲಿಸುವ ಸಲುವಾಗಿ ಜಿಲ್ಲೆಗೆ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, ಸ್ಥಳೀಯ ನಾಯಕರು ಸ್ವತಂತ್ರ ಅಭ್ಯಥರ್ಿ ಸುಮಲತಾ ಪರ ನಿಲ್ಲುತ್ತಿದ್ದಾರೆ. ಅವರು ಇನ್ನೆರಡು ದಿನ ಹಾರಾಡತ್ತಾರೆ ಬಳಿಕ ಮೂಲೆ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದರು.

ಸಬೆಯಲ್ಲಿ ತಾಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡ, ಜಿಪಂ ಸದಸ್ಯ ಎಚ್.ಟಿ.ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ್, ಮುಖಂಡ ಶ್ರೀನಿವಾಸ್, ತಾಪಂ ಮಾಜಿ ಉಪಾಧ್ಯಕ್ಷ ಜಾನಕೀರಾಮ್, ಸ್ಥಾಯಿಸಮಿತಿ ಅಧ್ಯಕ್ಷ ರಾಜು, ತಾಪಂ ಸದಸ್ಯ ವಿಜಯಕುಮಾರ್, ಮೋಹನ್, ಎಪಿಎಂಸಿ ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯರಾದ ಸಂತೋಷ್, ಹೇ ಮಂತ್ಕುಂಆರ್, ದಿನೇಶ್, ನಾಗರಾಜು ಸೇರಿದಂತೆ ಹಲವರಿದ್ದರು.


 
ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು.ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ.ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 
 
ಮದ್ದೂರಿನ‌ ಹೊಳೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಅನಿತಾ ಕುಮಾರಸ್ವಾಮಿ, ೪ ನೇ ವಾರದ ಹರಿಕೆ ಪೂಜೆ ನೆರವೇರಿಸಿದರು. ಮಗನ ರಾಜಕೀಯ ಭವಿಷ್ಯ ಮತ್ತು ಚುನಾವಣೆ ಗೆಲುವಿಗಾಗಿ ೫ ಮಂಗಳವಾರದ ಪೂಜೆಯ ಹರಕೆ ಕಟ್ಟಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ, ದೇವೇಗೌಡ್ರೇ ಸ್ಟಾರ್ ಪ್ರಚಾರಕರು. ಮಂಡ್ಯ ಜನ ಅವ್ರನ್ನೇ ಇಷ್ಟಪಡ್ತಾರೆ, ನಿಖಿಲ್​ಗೆ ಇಲ್ಲಿನ ಜನರ ಆಶೀರ್ವಾದ ಇದೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. ಅದೇ ನಿಖಿಲ್ ಗೆಲುವಿಗೆ ಸಹಕಾರವಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರ ಬೆಂಬಲವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಪಕ್ಷದ್ರೋಹಿಗಳಿಗೆ ಆ ಪಕ್ಷದ ಮುಖಂಡರು ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು. ದೇವೇಗೌಡರು ಬಹುತೇಕ ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಅನಿತಾ ಕುಮಾರಸ್ವಾಮಿ ಇದೇ ವೇಳೆ ಹೇಳಿದರು. ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಸಂಜೆ ನಿಗದಿಯಾಗುತ್ತೆ. ಪ್ರಚಾರ ಶುರು ಮಾಡಿದ್ದೀವಿ, ಇಂದು ಮಳವಳ್ಳಿಯಲ್ಲಿ ನಿಖಿಲ್ ಪ್ರಚಾರ ಮಾಡ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು. 


 




ಸಂಕಲ್ಪ ಮಾಡಿ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಪೂಜಿಸಿದರೇ  ಸಾಕು. ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ನೆರವೇರಿಸಿಕೊಡುತ್ತಾನೆ ಭೂವರಹನಾಥ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗಂಜಿಗೆರೆ ಸಮೀಪದ ಭೂವರಹನಾಥ ಕಲ್ಲಹಳ್ಳಿಯಲ್ಲಿ ಹೇಮಾವತಿ ನದಿ ದಡೆಯಲ್ಲಿ ಭೂವರಹನಾಥಸ್ವಾಮಿ ನೆಲೆನಿಂತಿದ್ದಾನೆ. ಭೂವರಹನ ದೇಹ ಮನುಷ್ಯನದು, ಮುಖ ಪ್ರಾಣಿಯದಾಗಿದೆ. ಅಜಾನುಬಾವಾಗಿರುವ ಭೂವರಹ ಭಕ್ತರು ಕಷ್ಟ ಆಲಿಸಿ, ಕ್ಷಣಾರ್ಧದಲ್ಲಿ ದೂರಮಾಡತ್ತಾನೆ, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಮದುವೆ ಆಗದವರಿಗೆ ಮದುವೆ ಭಾಗ್ಯ, ಮನೆಕಟ್ಟೆದವರಿಗೆ ಮನೆ ಕಟ್ಟುವ ಶಕ್ತಿ ಸೇರಿದಂತೆ ಸಕಲ ಕಷ್ಟಗಳನ್ನು ದೂರಮಾಡಿ ಇಷ್ಠಾರ್ಥಗಳನ್ನು ಸಿದ್ಧಿಸುತ್ತದೆ. ದೇವಸ್ಥಾನದ ಪಕ್ಕದಲ್ಲಿ ನದಿಯಿದೆ. ಇಲ್ಲಿ ಜ್ಯೋತಷ್ಯದಲ್ಲಿ ಹೇಳಿರುವಂತೆ ರಾಹು, ಕೇತು ದೋಷಗಳು ನಿವಾರಣೆ ಆಗುತ್ತವೆ. ಯಾವ ವ್ಯಕ್ತಿ ದೋಷಗಳಿಂದ ಬಳಲುತ್ತಿರುತ್ತಾನೆ, ಆತ ದೇವಸ್ಥಾನದಲ್ಲಿ ಸಂಕಲ್ಪ ಮಾಡಿಸಿ ಕರಿ ಉದ್ದಿನ ಕಾಳನ್ನು ನದಿ ಎದರು ನಿಂತು ಮೈಮೇಲಿಂದ 17 ಬಾರಿ ನಿವ್ವಳಿಸಿ(ದೃಷ್ಟಿ ತಕ್ಕೊಂಡು) ನದಿಗೆ ಹಾಕಿ, ದೇವಸ್ಥಾನವನ್ನು 11 ಪ್ರದಕ್ಷಿಣೆ ಹಾಕಿದ ನಂತರ ದೋಷ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಭೂಮಿಗೆ ಸಂಬಂಧಿಸಿದ ಮನೆ ಕಟ್ಟಲಾಗದಿರುವುದು, ನಿವೇಶನ ಖರೀದಿಗೆ, ಜಮೀನು ಖರೀದಿ, ನ್ಯಾಯಾಲಯದಲ್ಲಿ ಜಮೀನು ಸಂಬಂಧ ತೊಂದರೆ ಅನುಭವಿಸುತ್ತಿರುವವರು ಇಲ್ಲಿಗೆ ಬಂದು ಇಲ್ಲಿನ ಮಣ್ಣನ್ನು ಅರಿಸಿನ ಬಟ್ಟೆಯಲ್ಲಿ ಹಾಖಿಕೊಂಡು ಮಣ್ಣಿಗೆ ದೇವರನ್ನು ಆಹ್ವಾನೆ ಮಾಡಿಸಿಕೊಂಡು ಮನೆಯಲ್ಲಿಟ್ಟು ಪೂಜೆ ಸಲ್ಲಿಸಿ ಭೂಮಿ ಸಮಸ್ಯೆ ನಿವಾರಣೆ ಆದ ಮೇಲೆ ದೇವರಿಗೆ ಹರಿಕೆ ತೀರಿಸಿ ಬಂದು ಮನೆಯಲ್ಲಿರುವ ತುಳಿಸಿ ಗಿಡಕ್ಕೆ ಮಣ್ಣನ್ನು ವಿಸಜರ್ಿಸುತ್ತಾರೆ.ಭೂಮಿ ಕಾರ್ಯಕ್ಕೆ ನಿವಿಘ್ರ್ನವಾಗಿ ಏನೇ ಸಂಕಲ್ಪ ಮಾಡಿದರೇ ನೆರವೇರಿಸಿಕೊಡುತ್ತಾನೆ. ಇಲ್ಲಿ ಪೂಜಿಸಿ ಒಂದು ಮಣ್ಣಿನ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ಕಟ್ಟುವ ಜಾಗದ ಈಶಾನ್ಯ ಮೂಲೆಗೆ ಕಟ್ಟುವುದರಿಂದ ಮನೆ ಬೇಗ ನಿಮರ್ಾಣಗೊಳ್ಳತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ದೇವಸ್ಥಾನದ ದರ್ಶನ ಪಡೆದ ಭಕ್ತರಿಗೆ ವೈಬ್ರೇಷನ್ ಅನುಭವ ಆಗುತ್ತದೆ. ಇದು ದೇವರು ಇರುವುದಕ್ಕೆ ಸಾಕ್ಷಿ ಎನ್ನುತ್ತಾರೆ. ಇಲ್ಲಿನ ಭಕ್ತರು.

ಸ್ಥಳ ಪುರಾಣ : ದೇವಸ್ಥಾನದ ಪಕ್ಕದಲ್ಲಿರುವ ನದಿಗೆ ಹಿಂದೆ ಪ್ರಹಾವ ಬರುತ್ತದೆ. ಈ ಪ್ರದೇಶ ಜಲಾವೃತಗೊಂಡು ಇಲ್ಲಿನ ಜನರು ಊರನ್ನು ಖಾಲಿ ಮಾಡುತ್ತಾರೆ. ಆದರೇ ದೇವರು ಮಾತ್ರ ಉಳಿಯುತ್ತಾನೆ. ತನ್ನ ಶಕ್ತಿಯಿಂದ ನೀರಿಂದ ಎದ್ದು ಬಂದು ಭೂಮಿಯ ಮೇಲೆ ನೆಲೆ ನಿಲ್ಲುತ್ತಾನೆ. ಪ್ರವಾಹ ನಿಂತ ನಂತರ ಕಣ್ಮರೆ ಆಗುತ್ತಾನೆ. ಗಿಡ, ಮರ ಬೆಳೆದು ಕಾಡಾಗುತ್ತದೆ. ವಿಷ್ಣವರ್ಧನನ ಮಗ ವೀರ ಬಲ್ಲಾಳ ಭೇಟೆಗೆಂದು ಇಲ್ಲಿಗೆ ಬರುತ್ತಾನೆ. ಇವನ ಭೇಟೆ ನಾಯಿಗಳು ಮೊಲಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇಲ್ಲಿ ದಿಣ್ಣೆ ಕಾಣುತ್ತದೆ. ಅಲ್ಲಿ ಮೊಲಗಳು ಉಗ್ರ ಸ್ವರೂಪ ತಾಳಿ ಭೇಟೆ ನಾಯಿಗಳನ್ನ ಬೆನ್ನಟ್ಟಿ ಹೊಡಿಸಿ ಕಳಿಸುತ್ತವೆ. ಆಗ ವೀರಬಲ್ಲಾಳನಿಗೆ ಅಲ್ಲಿ ಏನೋ ದೈವ ಶಕ್ತಿಯಿದೆ ಎಂದು ಅರಿತು ಆ ಜಾಗವನ್ನು ಅಗೆಸುತ್ತಾನೆ. ಆಗ ಅಲ್ಲಿ ಮನುಷ್ಯ ದೇಹ, ಪ್ರಾಣಿ ಮುಖ ಇರುವ ಬರಹನಾಥನ ವಿಗ್ರಹ ಸಿಗುತ್ತದೆ. ಆತ ಅಲ್ಲೇ ದೇವಸ್ಥಾನ ಕಟ್ಟಿಸಿ ವರಹನಾಥಸ್ವಾಮಿಗೆ ಪೂಜೆ ಶುರು ಮಾಡಿಸಿದನಂತೆ.

ಈ ದೇವಸ್ತಾನವನ್ನು 2500 ವರ್ಷಗಳ ಹಿಂದೆ ಗೌತಮ ಋಷಿಗಳು ಮಾಡಿದ್ದಾರೆ. ಭೂವರಹನ ಮೂತರ್ಿಯ ಎಡೆತೊಡೆಯ ಮೇಲೆ ಭೂದೇವಿ ಕುಳಿತ್ತಿದ್ದಾಳೆ. ಹಸ್ತದಲ್ಲಿ ಕಮಲದ ಹೂವಿದೆ. ಮಧ್ಯೆ ಸುದರ್ಶನ ಚಕ್ರವಿದ್ದು, ಏಕಶಿಲೆಯ ಸಾಲಿಗ್ರಾಮ ಶಿಲೆಯಾಗಿದೆ. ಪಾದದಿಂದ ಕಿರೀಟ 15 ಅಡಿ, ಪೀಠ 3 ಅಡಿಯಿದೆ. ಹಿಂದೆ ವಿಜಯನಗರದ ಸಾಮ್ರಾಜ್ಯದ ರಾಜರು ಸ್ವಾಮಿಯ ಶಕ್ತಿ ಅರಿತು, ರಾಜ ಲಾಂಛನವನ್ನಾಗಿ ಮಾಡಿಕೊಂಡಿದ್ದರು. ರಾಜರ ಗುರುಗಳ, ಋಷಿಗಳ ಮಾತಿನಂತೆ ಲಾಂಚನವನ್ನ, ಆ ಸಮಯದಲ್ಲಿ ನಾಣ್ಯದ ಮೇಲೆ ವರಹನಾಥನ ಚುಹ್ನೆ ಹಾಕುತ್ತಿದ್ದರು. ಅಲ್ಲದೆ ನಾಣ್ಯವನ್ನು ವರಹ ಎಂದು ಕರೆಯುತ್ತಿದ್ದರು ಎಂಬ ಇತಿಹಾಸವಿದೆ.

ಭೂವರಹ ಅಂದರೇ ಭೂಮಿಯ ಒಡೆಯ.ಭೂಮಿಯ ಮೇಲೆ ಇರುವ ಸಕಲ ಕಷ್ಟಗಳನ್ನು ನಿವಾರಣೆ ಮಾಡಿ ಭಕ್ತರನ್ನ ಕಾಪಾಡುತ್ತಿರುವ ಭೂವರಹನಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅರಿದು ಬರುತ್ತಿದ್ದಾರೆ. ಅಮಾವಸೆಯಲ್ಲಿ ಪೂಜೆ ಸಲ್ಲಿಸಿದರೇ ಹೆಚ್ಚಿನ ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಅಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ.

ಅಕಾಲಿಕ ಮರಣ ಹೊಂದಿದ ಗುತ್ತಿಗೆದಾರ ಎಂ ಎಸ್ ಕೃಷ್ಣ (ಭಗವಾನ್ಎಲೆಕ್ಟ್ರಿಕಲ್ಸ್) ರವರ ಪತ್ನಿ ಶಶಿಕಲಾ ರವರಿಗೆ ಗುತ್ತಿಗೆದಾರರ ಸಂಘದ ಕೇಂದ್ರ ಕರ್ಯಾಕಾರಿಣಿ ಸಮಿತಿ ಸದಸ್ಯರಾದ ಕೆಂಪರಾಜು.ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ವಿತರಣೆ ಮಾಡಿದರು.

ಮಂಡ್ಯ : ತಾಲ್ಲೂಕಿನ  ಶ್ರೀ ಭಗವಾನ್ಎಲೆಕ್ಟ್ರಿಕಲ್ಸ್ ನ ಎಂ.ಎಸ್.ಕೃಷ್ಣ ರವರು ಅಕಾಲಿಕವಾಗಿ ಮೃತಪಟ್ಟಿದ್ದರು ಇವರ ಕುಟುಂಬಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದ್ಯಸರಾದ ಕೆಂಪರಾಜು .ಎನ್ ಮಳವಳ್ಳಿ ರವರು ಎಂ.ಎಸ್.ಕೃಷ್ಣ ರವರ ಮರಣ ಪರಿಹಾರ ಚೆಕ್ ನ್ನು ಅವರ ಪತ್ನಿಯಾದ ಶಶಿಕಲಾ ರವರಿಗೆ ರಾಗಿಮುದ್ದನ ಹಳ್ಳಿಯ ಅವರ ಮನೆಯೆಲ್ಲಿ   ಕೆಂದ್ರ ಸಮಿತಿಯ ಸದಸ್ಯರಾದ ಸಂಪತ್ ಕುಮಾರ್ ಸಲಹಾಸಮಿತಿ ಸದಸ್ಯರಾದ ದೇವಿಪ್ರಸಾದ್ ತಾಲ್ಲೂಕು ಅಧ್ಯಕ್ಷ ರಾದ ರಾಜು HS, ಕಾರ್ಯದರ್ಶಿ ರಮೇಶ್ SG, ಮಂಡ್ಯ ಜಿಲ್ಲೆಯ ಪದಾಧಿಕಾರಿಗಳು ಮತ್ತು  ತಾಲ್ಲೂಕಿನ ಗುತ್ತಿಗೆದಾರರ ಸಮ್ಮುಖದಲ್ಲಿ ಕೆಂಪರಾಜ .ಎನ್ ಮಳವಳ್ಳಿ ರವರು ಪರಿಹಾರದ ಚೆಕ್ ಅನ್ನು ಅವರ ಪತ್ನಿ ಶಶಿಕಲಾ ರವರಿಗೆ ವಿತರಣೆ ಮಾಡಿದರು.

 

ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರಪ್ರೇಮಿ, ಕರ್ನಾಟಕದ ಸಾಲು ಮರದ ತಿಮ್ಮಕ್ಕ ಸೇರಿದಂತೆ 54 ಗಣ್ಯರಿಗೆ 2019ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಧಾನ ಮಾಡಿದ್ದಾರೆ. ಈ ಹಿಂದೆ ಮಾರ್ಚ್ 11ರಂದು ವಿವಿಧ ಕ್ಷೇತ್ರದಲ್ಲಿ ಸಾಧಿಸಿದ 56 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಗೌರವಿಸಿದ್ದರು. ಸಮಾಜ ಸೇವೆ ಮಾಡಿದಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕರವರಿಗೆ ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ.

107 ನೇ ವಯಸ್ಸಿನ ಕರ್ನಾಟಕದ ಶ್ರೀಮತಿ ತಿಮ್ಮಕ್ಕರವರು ಒಬ್ಬ ಪರಿಸರವಾದಿ ಹಾಗೂ ತನ್ನ ಹಳ್ಳಿಯಾದ ಹುಲಿಕಲ್‍ನಿಂದ ಕುದೂರುವರೆಗಿನ 4 ಕಿ.ಮೀ ಹೆದ್ದಾರಿಯ ಉದ್ದಗಲಕ್ಕೂ ಆಲದ ಮರಗಳನ್ನು ನೆಟ್ಟು ಹೆಸರುವಾಸಿಯಾಗಿದ್ದಾರೆ.ಪರಿಸರದ ಮೇಲೆ ತಮಗಿರುವ ಪ್ರೀತಿಯಿಂದ ರಸ್ತೆ ಬದಿಗಳಲ್ಲಿ ಮರಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ನೀರುಣಿಸಿ ಪೋಷಿಸಿ ತಿಮ್ಮಕ್ಕನವರು ವೃಕ್ಷಮಾತೆಯಾದವರು. ಸಾಲುಮರದ ತಿಮ್ಮಕ್ಕ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಸಾರಿದ ವೃಕ್ಷಮಾತೆ. ಇದೇ ಕಾರಣಕ್ಕೆ ಅವರು ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದಿದ್ದಾರೆ.ಆದ್ರೆ ಇಳಿಯ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ. ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ಬಿಬಿಸಿ 2016 ರಲ್ಲಿ ಜಗತ್ತಿನ ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೂಡ ಸಾಲು ಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.

 
 

 

 ಮೇಲುಕೋಟೆ ಚಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ಸುಮಲತಾ ಅಂಬರೀಶ್ ಅಬ್ಬರದ ಪ್ರಚಾರ.
 
ಹೌದು, ಪಾಂಡವಪುರ ತಾಲೂಕಿನ ಮೇಲುಕೋಟೆಗೆ ತಮ್ಮ ಬೆಂಬಲಿಗರ ಜೊತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಚಾರ ಮಾಡಿದರು. ತೆರೆದ ವಾಹನದಲ್ಲಿ ರೋಡ್ ಶೋ ಮಾಡಿದ ಸುಮಲತಾ, ಮೇಲುಕೋಟೆ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಿದರು. ಇದೇ ಸಂದರ್ಭದಲ್ಲಿ ಮೇಲುಕೋಟೆ ಗ್ರಾಮಸ್ಥರು ಸುಮಲತಾ ಅಂಬರೀಶ್​ಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಿದರು.ನಂತರ ಮಾತನಾಡಿದ ಅವರು, ಸ್ಪರ್ಧೆಯ ದಿನಾಂಕವನ್ನು ಮಾರ್ಚ್ 18ರಂದು ಹೇಳುತ್ತೇನೆ. ಕೈ ಪಕ್ಷ ನನಗೆ ಮೋಸ ಮಾಡ್ತಿಲ್ಲ, ಪಕ್ಷಕ್ಕೆ ಮೋಸ ಆಗ್ತಿದೆ. ಕಾರ್ಯಕರ್ತರಿಗೆ ಮೋಸ ಆಗ್ತಿದೆ ಎಂದರು. ನಾನು ಎಂದು ಕೈ ಮುಖಂಡರು ಇಲ್ಲದಿದ್ರು ಒಂಟಿ ಅಲ್ಲ. ನನ್ನ ಜೊತೆ ಜನ ಇದ್ದಾರೆ. ಅಂಬಿ ಸಂಪಾದನೆ ಮಾಡಿದ ಈ ಜನರನ್ನು ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು. 

ನಿಖಿಲ್ ಸ್ಪರ್ಧೆಯಿಂದ ಲಕ್ಷ್ಮಿ ಅಶ್ವಿನ್ ಗೌಡರಿಗೆ ಅನ್ಯಾಯವಾಗಿಲ್ಲ.ಐಆರ್‍ಎಸ್‍ನಿಂದ ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅವರು ತಮ್ಮ ವೃತ್ತಿಗೆ ಮರಳುತ್ತಿದ್ದಾರೆ..ಸಿಎಂ 

ಮಂಡ್ಯ: ಮಂಡ್ಯದ ಅಧಿಕೃತ ಅಭ್ಯರ್ಥಿ  ಘೋಷಿಸಲು ಆಯೋಜನೆಗೊಂಡಿದ್ದ ಸಮಾವೇಶದಲ್ಲಿ ಮಾತನಾಡುತ್ತ, ನಾನು ಹುಟ್ಟಿದ್ದು ಹಾಸನದಲ್ಲಿ. ರಾಜಕೀಯವಾಗಿ ನನಗೆ ಜನ್ಮ ಕೊಟ್ಟಿದ್ದು ರಾಮನಗರದ ಜನತೆ. ರಾಜಕೀಯವಾಗಿ ನನ್ನನ್ನು ಹೆಮ್ಮರವಾಗಿ ಬೆಳೆಸಿದ್ದು ಮಂಡ್ಯದ ಜನತೆ. ಈ ಜನತೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಎಂದು ತಿಳಿಸಿ.ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿ ನಿಖಿಲ್‍ಗೆ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಹೆಚ್ಚಿನ ಜನರಿಗೆ ಹಿಂದಿನ ವಿಷಯ ಗೊತ್ತಿಲ್ಲ. ಮಳವಳ್ಳಿಯ ಜೆಡಿಎಸ್ ಅಧ್ಯಕ್ಷ ಕೆಂಚಪ್ಪನವರ ಪುತ್ರಿ, ನಾಗಮಂಗಲದ ಸೊಸೆ ಲಕ್ಷ್ಮಿ ಅಶ್ವಿನ್ ಗೌಡ ವಿಧಾನಸಭಾ ಚುನಾವಣಾ ಅಭ್ಯರ್ಥಿ ಆಗಬೇಕೆಂದು ಭೇಟಿ ಮಾಡಿದ್ದರು. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮೊದಲ ಭೇಟಿಯಲ್ಲಿ ಮನವಿ ಮಾಡಿಕೊಂಡಿದ್ದರು. ಅಲ್ಲಿಂದಲೇ ನಮ್ಮ ಪರಿಚಯವಾಗಿತ್ತು ಎಂದರು.

ದೇವೇಗೌಡರ ಕುಟುಂಬ ಲಕ್ಷ್ಮಿ ಅಶ್ವಿನ್ ಗೌಡರಿಗೆ ಮೋಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ದೇವರನ್ನು ನಂಬಿಕೊಂಡು ಬದುಕುವ ಜೀವಿಗಳು. ಲಕ್ಷ್ಮಿ ಅವರ ಪತಿ ಐಆರ್‍ಎಸ್ ಅಧಿಕಾರಿಯಾಗಿದ್ದು, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವಂತಹ ಕೆಲ ಸುದ್ದಿಗಳು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ವಯಂ ನಿವೃತ್ತಿ ಪಡೆದಿದ್ದ ಲಕ್ಷ್ಮಿ ಅಶ್ವಿನ್ ಗೌಡ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗಲು ಇಚ್ಛಿಸಿದ್ದಾರೆ. ಕಳೆದ ವಾರ ದೆಹಲಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಕೆಲಸಕ್ಕೆ ಸೇರಬೇಕೆಂದು ಕೇಳುತ್ತಿದ್ದು, ಅವಕಾಶ ನೀಡಿ ಎಂದು ಕೇಳಿಕೊಂಡಿದ್ದೇನೆ. ಆರು ತಿಂಗಳ ಹಿಂದೆ ನಾಲ್ಕು ವರ್ಷದ ಅವಧಿಗೆ ಲಕ್ಷ್ಮಿ ಅಶ್ವಿನ್ ಗೌಡರನ್ನು ನೇಮಿಸಲು ಪಕ್ಷ ಮುಂದಾಗಿತ್ತು. ರಾಜಕೀಯ ಅನುಭವದ ಆಗಬೇಕಾದ್ರೆ ಎಂಎಲ್‍ಸಿ ಗೆ ಅರ್ಜಿ ಸಲ್ಲಿಸಲು ತಂಗಿಗೆ ಹೇಳಿದ್ದಂತೆ ಸಲಹೆ ನೀಡಿದ್ದೆ. ನಮ್ಮ ಕುಟುಂಬದಿಂದ ಯಾವ ಮಹಿಳೆಗೂ ಅನ್ಯಾಯವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ ಎರಡೂವರೆ ತಿಂಗಳಿನಿಂದ ಮಾಧ್ಯಮಗಳಲ್ಲಿ ಸುದ್ದಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿದೆ. ಮಂಡ್ಯದಲ್ಲಿಯೇ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತೆ ಅಂದುಕೊಂಡಿರಲಿಲ್ಲ. ನಿಖಿಲ್ ಕುಮಾರಸ್ವಾಮಿಯನ್ನು ಉಪಚುನಾವಣೆ ನಿಲ್ಲಿಸಬೇಕೆಂದು ರವೀಂದ್ರ ಶ್ರೀಕಂಠಯ್ಯ ಎಂದು ಹೇಳಿದಾಗ ನನಗೆ ಒಂದು ಕ್ಷಣ ನಡುಕ ಉಂಟಾಯಿತು. ಇಂದು ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸಬೇಕೆಂಬ ಮನಸ್ಸು ನನಗಿರಲಿಲ್ಲ. ಆದ್ರೆ ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಚುನಾವಣೆಗೆ ನಿಂತಿದ್ದಾನೆ. ಮಾಧ್ಯಮಗಳಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಮಂಡ್ಯ ಕ್ಷೇತ್ರದ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

ಪ್ರಥಮ ಮಹಿಳಾ ಜಗದ್ಗುರು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ(74) ಲಿಂಗೈಕ್ಯ.

ಬೆಂಗಳೂರು:  ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ(74) ಇಂದು ಲಿಂಗೈಕ್ಯರಾಗಿದ್ದಾರೆ.ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾತೆ ಮಹಾದೇವಿ ಮಾರ್ಚ್ 13, 1946ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ರತ್ನ ಆಗಿದ್ದು, ದೀಕ್ಷೆ ಪಡೆದ ಬಳಿಕ ಮಾತೆ ಮಹಾದೇವಿ ಎಂದು ಗುರುತಿಸಿಕೊಂಡಿದ್ದರು.ಮಾತೆ ಮಹಾದೇವಿ ಗುರು ಲಿಂಗಾನಂದ ಅವರಿಂದ ಪ್ರಭಾವಿತರಾಗಿ ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಇವರನ್ನು ಪ್ರಥಮ ಮಹಿಳಾ ಜಗದ್ಗುರು ಎಂದು ಭಕ್ತರು ಗುರುತಿಸಿದ್ದಾರೆ.

 

ಸಾಲಬಾಧೆ ತಾಳಲಾರದೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ.ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ.

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಸಾಲಬಾಧೆ ಖಾಸಗಿ ಬ್ಯಾಂಕುಗಳು ಕಿರುಕುಳ ಹಿಂಸೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ .ಡಿಂಕಾ ಗ್ರಾಮದಲ್ಲಿ ವಾಸ ಮಾಡಿಕೊಂಡು ಕೂಲಿ ಮಾಡುತ್ತಿದ್ದ ಶಿವಕುಮಾರ್ ಇವರ ಹೆಂಡತಿಯಾದ ರುದ್ರಮ್ಮ (53) ನೇಣು ಬಿಗಿದುಕೊಂಡು ಸಾವಿಗೀಡಾದ ದುರ್ದೈವಿ.ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ , ಸೇರಿದಂತೆ ಸಾಲ ಮಾಡಿದ್ದರು.

ಘಟನೆಯ ವಿವರ :
ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ರುದ್ರಮ್ಮ ಗ್ರಾಮಶಕ್ತಿ ಬ್ಯಾಂಕ್ ನಲ್ಲಿ 50 ಸಾವಿರ , ಫ್ಯೂಚರ್ ಪ್ರವೇಟ್ ಲಿಮಿಟೆಡ್ 50 ಸಾವಿರ, ಮತ್ತು ಕೈ ಸಾಲ 2ಲಕ್ಷ ಸಾಲ ಮಾಡಿದ್ದರು. ಕೂಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಜೀವನ ಮಾಡುವುದಕ್ಕೆ ಸಾಲದೆ ಮಾಡಿದ ಸಾಲ ತೀರಿಸಲು ಕಷ್ಟವಾದ ಪರಿಸ್ಥಿತಿಯಲ್ಲಿ  ಜೀವನ ಸಾಗಿಸುತ್ತಿದ್ದು. ಖಾಸಗಿ ಬ್ಯಾಂಕ್  ಫ್ಯೂಚರ್ ಪ್ರವೇಟ್ ಲಿಮಿಟೆಡ್ ಮತ್ತು ಗ್ರಾಮಶಕ್ತಿ ಬ್ಯಾಂಕಿನ ಸಿಬ್ಬಂದಿ ಗಳು ದಿನನಿತ್ಯ ಮನೆಯ ಬಳಿ ಬಂದು  ಕಿರುಕುಳ ಕೊಡುತ್ತಿದ್ದರು .ಸಾಲ ತೀರಿಸುವುದಾಗಿ ರುದ್ರಮ್ಮ ಹೇಳಿ ಸ್ವಲ್ಪ ದಿನಗಳ ಕಾಲಾವಕಾಶ ಕೇಳಿದರು. ಕೇಳದೆ ಬ್ಯಾಂಕಿನವರು ದಿನ ನಿತ್ಯ ಮನೆ ಹತ್ತಿರ ಮತ್ತು ಕೆಲಸ ಮಾಡುತ್ತಿರುವ ಹೊಲದ ಹತ್ತಿರ ಬಂದು ಕಿರುಕುಳ ಕೊಡುತ್ತಿದ್ದರೂ ಕಿರುಕುಳದ ಹಿಂಸೆಯನ್ನು ತಾಳಲಾರದೆ ಇಂದು ಬೆಳಿಗ್ಗೆ 12 ಗಂಟೆಯಲ್ಲಿ ತಮ್ಮ ಜಮೀನಿನ ಬಳಿ ಹೋಗಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.ತುಂಬಾ ಕಡು ಬಡವರಾಗಿದ್ದು ರುದ್ರಮ್ಮನ ಮಗನಾದ ಮಲ್ಲಿಕಾರ್ಜುನ ಘಟನೆಯ ಮಾಹಿತಿಯನ್ನು ತಿಳಿಸಿದ್ದಾರೆ .ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Page 4 of 28

Visitors Counter

220286
Today
Yesterday
This Week
This Month
Last Month
All days
4
274
1903
3391
4244
220286

Your IP: 3.129.45.92
2024-04-19 02:17

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles