ಇತ್ತೀಚಿಗಿನ ಸುದ್ದಿಗಳು

ಸುದ್ದಿಜಾಲ

ಸುದ್ದಿಜಾಲ

Rate this item
(0 votes)

ಗ್ರಾಮ ಪಂಚಾಯಿತಿಯ ನೂತನ ಅದ್ಯಕ್ಷರಾಗಿ ರಾಮನಹಳ್ಳಿ ಶುಭಾರವೀಂದ್ರ ಆಯ್ಕೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಮಹಿಳೆ ಅದ್ಯಕ್ಷರ ಸ್ಥಾನ ತೆರವು ಆಗಿದ್ದ ಕಾರಣ ಇಂದು ಚುನಾವಣೆ ನಿಗಧಿಯಾಗಿತ್ತು.

ಚುನಾವಣೆ ಶುಭ ರವೀಂದ್ರ ರವರನ್ನು ವರತುಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಶುಭಾ ರವೀಂದ್ರ ರವನ್ನು ಅವಿರೋಧವಾಗಿ ಅದ್ಯಕ್ಷರು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಶುಭಾರವೀಂದ್ರ ರವರ ಬೆಂಬಲಿಗರು ಅದ್ಯಕ್ಷರಾದ ಇನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಮ ಪಂಚಾಯತಿ ಉಪಾದ್ಯಕ್ಷ ಮಾಣಿಕನಹಳ್ಳಿ ಕೃಷ್ಣೇಗೌಡ, ಸದಸ್ಯರಾದ ಶೆಟ್ಟಹಳ್ಳಿ ಕೃಷ್ಣೇಗೌಡ, ಸಿದ್ದಾಪುರ ನಾರಾಯಣ್, ಕೃಷ್ಣಾಪುರ ಗಿರೀಶ್, ಕಾರಿಗನಹಳ್ಳಿ ಜಯರಾಮು, ಮತ್ತು ಮಹಿಳಾ ಸದಸ್ಯರುಗಳು ನೂತನ ಅದ್ಯಕ್ಷರಿಗೆ ಶುಭಕೋರಿದರು.

ವರುಣನ ಕೋಪವು ಕೇರಳದಲ್ಲಿ 76 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಸುಮಾರು 2.87 ಲಕ್ಷ ಜನರು ರಾಜ್ಯದಾದ್ಯಂತ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಐವತ್ತೆಂಟು ಜನರು ಕಾಣೆಯಾಗಿದ್ದಾರೆ, ಅವರಲ್ಲಿ 50 ಮಂದಿ ಮಲಪ್ಪುರಂನಲ್ಲಿದ್ದಾರೆ,

ಆಗಸ್ಟ್ 8 ರಿಂದ ಕೇರಳದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಪ್ರವಾಹದಿಂದ ಇದುವರೆಗೆ 42 ಜನರು ಸಾವನ್ನಪ್ಪಿದ್ದಾರೆ

'ಪ್ರವಾಹ ಪೀಡಿತ ರಾಜ್ಯಗಳನ್ನು ಬೆಂಬಲಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

“ಇದು ವಯನಾಡಕ್ಕೆ ಮಾತ್ರವಲ್ಲ, ಕೇರಳ ಮತ್ತು ಇತರ ಕೆಲವು ದಕ್ಷಿಣ ರಾಜ್ಯಗಳಿಗೂ ಒಂದು ದುರಂತ. ಕೇಂದ್ರ ಸರ್ಕಾರವು ಈ ರಾಜ್ಯಗಳ ಜನರನ್ನು ಗಮನ ಹರಿಸಬೇಕು ಮತ್ತು ಪರಿಹಾರ ಬೆಂಬಲಿಸಬೇಕು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು.


ಕರ್ನಾಟಕ ಸಿಎಂ ಬಿ.ಎಸ್.ಯಡಿಯುರಪ್ಪ ದಕ್ಷಿಣ ಕನ್ನಡದ ಬೆಲ್ತಂಗಡಿ ಭೇಟಿ ನೀಡಿ ಅಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

"ಜಿಲ್ಲೆಯ ಪ್ರವಾಹದಲ್ಲಿ ಐದು ಸೇತುವೆಗಳು ಮತ್ತು 300 ಮನೆಗಳು ಹಾನಿಗೊಳಗಾದ ಅಥವಾ ಸಂಪೂರ್ಣವಾಗಿ ನಾಶವಾಗಿವೆ. ಈ ಕುಟುಂಬಗಳಿಗೆ ತಲಾ 5 ಲಕ್ಷ ರೂ. ತುರ್ತು ಪರಿಹಾರವಾಗಿ ಸಂತ್ರಸ್ತರಿಗೆ 10,000 ರೂ. ವಿತರಿಸಲಾಗುವುದು ”ಎಂದು ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.

ಕರ್ನಾಟಕದ ಬೆಳಗಾವಿಯಲ್ಲಿ ಪ್ರವಾಹ ಪೀಡಿತ ರಾಯ್ ಭಾಗ್ ತಾಲ್ಲೂಕಿನ ಮನೆಯ ಛಾಾವಣಿಯಲ್ಲಿ ಮೊಸಳೆಯನ್ನು ಗುರುತಿಸಲಾಗಿದೆ.

ಕರ್ನಾಟಕ ಪ್ರವಾಹದಲ್ಲಿ ಸೋಮವಾರ ಸಾವನ್ನಪ್ಪಿದವರ ಸಂಖ್ಯೆ 42 ಕ್ಕೆ ಏರಿದೆ. ಕನಿಷ್ಠ 12 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಈವರೆಗೆ ಸುಮಾರು 5.8 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ ಸೋಮವಾರ ಬಲವಾದ ನೀರಿನ ಪ್ರವಾಹದಿಂದಾಗಿ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರವಾಹ ರಕ್ಷಣಾ ತಂಡದ ಕನಿಷ್ಠ ನಾಲ್ವರು ಸದಸ್ಯರು ಕೊಚ್ಚಿಹೋಗಿದ್ದು, ಓರ್ವ ಸದಸ್ಯನನ್ನು ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಅನ್ನು ಬಳಸಿ ಅವರನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಕಾರವಾರ ಬಳಿಯ ಭೂಕುಸಿತದಿಂದಾಗಿ ಕರ್ನಾಟಕದ ಎಲ್ಲಾ ಕೊಂಕಣ ರೈಲ್ವೆಯ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

Rate this item
(0 votes)

ಸಂತೇಬಾಚಹಳ್ಳಿ : ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂತೇಬಾಚಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

ಮಸೀದಿ ಆವರಣದಿಂದ ಸಾಮೂಹಿಕ ಮೆರವಣೆಗೆ ಹೊರಟ ಮುಸಲ್ಮಾನ್ ಬಾಂಧವರು ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರು ಇರುವ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪರಸ್ಪರ ಬಕ್ರೀದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಜಲಾ ಪ್ರವಾಹದಿಂದ ನಲುಗುತ್ತಿರುವ ನಾಡಿನ ಜನರನ್ನು ರಕ್ಷಿಸಬೇಕು. ಮುಂದೆ ಯಾವುದೇ ಅನಾಹುತ ಸಂಭವಿಸದಿರಲೆಂದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಸಲ್ಮಾನ್ ಬಾಂಧವರು ಬಕ್ರೀದ್ ಶುಭಾಶಯ ಕೋರಿದರು.

Last modified on 12/08/2019
Rate this item
(0 votes)

ಹೇಮಾವತಿ ನದಿಯ ನಡದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬವನ್ನು ಹೇಮಾವತಿ ನದಿಯ ಪ್ರವಾಹದ ಭೀತಿಯ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು ಸ್ಥಳಾಂತರಗೊಳಿಸಿದರು...ಹೇಮಾವತಿ ನದಿಗೆ 1,0008ಸಾವಿರ ಕ್ಯೂಸೆಕ್ಸ್ ನೀರನ್ನು ಗೊರೂರು ಜಲಾಶಯದಿಂದ ಹರಿಯಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಯಿತು...

ಈ ದಿನ ಮಂಡ್ಯ ಜಿಲ್ಲಾಧಿಕಾರಿಗಳಾದ ಶ್ರೀ ವೆಂಕಟೇಶ್ ಅವರು ಕಿಕ್ಕೇರಿ ಪೊಲೀಸ್ ಠಾಣಾ ಸರಹದ್ದಿನ ಮಂದಗೆರೆ ಹಾಗೂ ಸುತ್ತಮುತ್ತಲ ಗ್ರಾಮದ ಹೇಮಾವತಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ‌ ನೀಡಿ ವೀಕ್ಷಣೆ ಮಾಡಿ ಗೊರೂರು ಅಣೆಕಟ್ಟೆಯಿಂದ ಸುಮಾರು 1 ಲಕ್ಷ ಕ್ಯೂಸೆಕ್ಸ್ ಕ್ಕಿಂತ ಅಧಿಕ ನೀರನ್ನು ಹೇಮಾವತಿ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜಾನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗಮಂಗಲ ಉಪ ವಿಭಾಗದ ಡಿ.ವೈ.ಎಸ್. ಪಿ ರವರಾದ ಶ್ರೀ ‌ವಿಶ್ವನಾಥ್ ರವರು, ಕಿಕ್ಕೇರಿ‌ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀ ಚಂದ್ರಶೇಖರ್ ರವರು ಹಾಜರಿದ್ದರು.

Last modified on 10/08/2019
Rate this item
(1 Vote)

ಸತತವಾಗಿ ಸುರಿಯುತ್ತಿರುವ ಮಳೆಗೆ ಧರೆಗೆ ಉರುಳಿದ ಮನೆ...

ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದ ಜಯಲಕ್ಷ್ಮಿ ಎಂಬುವವರಿಗೆ ಸೇರಿದ ಮನೆ...

ಸತತವಾಗಿ ಮಳೆ ಸುರಿಯುತ್ತಿರವ ಮಳೆಗೆ ಮನೆ ಗೊಡೆ ಕುಸಿದು ಪರಿಣಾಮ ಮನೆಯಲ್ಲಿ ಇದ್ದ ರಾಗಿ ಅಕ್ಕಿ ದಿನಸಿ ಮತ್ತು ಅಡುಗೆ ಪಾತ್ರೆ ಗಳು ಹಾಳಗಿವೆ..

ಮನೆಯಲ್ಲಿ ತಾಯಿ ಮಗಳು ಇಬ್ಬರೆ ಇದ್ದರು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ...


ಅಕ್ಕಪಕ್ಕದ ಮನೆಯವರು ಕೂಡಲೇ ಸಹಾಯ ಮಾಡಿ ತಾಯಿ ಮತ್ತು ಮಗಳನ್ನು ರಕ್ಷಿಸಿದ್ದಾರೆ..

ಇವರು ಅದಿಕರ್ನಾಟಕ ಜನಾಂಗಕ್ಕೆ ಸೇರಿದ್ದ ಇವರ ಗಂಡ ಅನಾರೋಗ್ಯದ ಕಾರಣ ತಿರಿಹೊಗಿದ್ದು ,ಇವರ ಸಹಾಯ ಮಾಡಲು ಯಾರು ಇಲ್ಲದ ಕಾರಣ ತಾಲೂಕು ಅಡಳಿತ ಇತ್ತ ಗಮನಹರಿಸಿ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು..

Last modified on 10/08/2019
Rate this item
(0 votes)

ಪತ್ನಿ ಶೀಲ ಶಂಕಿಸಿ ತಲೆ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ... ಪಾಂಡವಪುರ ಪಟ್ಟಣದ ಉರ್ದು ಸರ್ಕಾರಿ ಶಾಲೆ ಬಳಿ ನಡೆದಿರೋ ಘಟನೆ... ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಗಳ (33) ಹತ್ಯೆಗೊಳಗಾದ ಗೃಹಿಣಿ....

ಆರೋಪಿ ಪತಿ ನಾರಾಯಣ (40) ಎಂಬಾತನನ್ನು ಬಂಧಿಸಿರುವ ಪೊಲೀಸರು...

ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಲಗಿದ್ದ ವೇಳೆ ಗುಂಡು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಪತಿ...

ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಂಗಳ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೃಹಿಣಿ ಕೊನೆಯುಸಿರು...

ಗೃಹಿಣಿ ಸಹೋದರನಿಂದ ಪೊಲೀಸರಿಗೆ ದೂರು...ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ...

Last modified on 10/08/2019
Rate this item
(0 votes)

ಪಟ್ಟಣದ ಪುರಸಭಾ ಮುಖ್ಯ ಅಧಿಕಾರಿಯಾದ ಸತೀಶ್ ಕುಮಾರ್ ಅವರ ನೇತೃತ್ವದಲ್ಲಿ ಅಂಗಡಿಗಳು ಮೇಲೆ ದಾಳಿ 220 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ ..

ನಂತರ ಮಾತನಾಡಿದ ಸತೀಶ್ ಕುಮಾರ್ ಅವರು ಬೆಳಿಗ್ಗೆ ಎರಡು ಅಂಗಡಿಯ ಮೇಲೆ ದಾಳಿ ಮಾಡಿದ್ದೇವೆ . ಪರಿಸರ ಹಾಳಾಗುತ್ತಿದ್ದು ದಿನನಿತ್ಯ ಪ್ಲಾಸ್ಟಿಕನ್ನು ಬಳಕೆಯಿಂದ ಹಲವಾರು ಕಾಯಿಲೆಗಳು ಬರುತ್ತಿದ್ದು , ದಿನೇ ದಿನೆ ಮಳೆ ಬರುತ್ತಿದ್ದು ಪ್ಲಾಸ್ಟಿಕ್ ಬಳಕೆಯಿಂದ ಮಲೇರಿಯಾ ಕಾಯಿಲೆಗಳು ಉಂಟಾಗುತ್ತದೆ , ಪರಿಸರ ಸಮೃದ್ಧಿ ಅಧಿಕಾರಿಯಾದ ರಕ್ಷಿತ್, ಆರೋಗ್ಯ ನಿರೀಕ್ಷಕರಾದ ನರಸಿಂಹಯ್ಯ H.R, ಹಾಗೂ ಪುರಸಭ ಸಿಬ್ಬಂದಿಗಳ ಸಮ್ಮುಖದಲ್ಲಿ ಆಲೆ ಕಳೆದ ಎರಡು ದಿನಗಳಿಂದಲೂ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಂಡಿದ್ದೇವೆ  ಪೊಲೀಸ್ ಅಧಿಕಾರಿಗಳ ಸಹಾಯದಿಂದ ಸಮುದಾಯ ಭವನದ ಮೇಲೆ ದಾಳಿ ಮಾಡಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ ಎಂದು ಮನವಿಯನ್ನು ಮಾಡಿದರು

Last modified on 10/08/2019
Rate this item
(0 votes)

ಮಳವಳ್ಳಿ: ಬೆನುಮನಹಳ್ಳಿ ಕುಮಾರ್ ಹತ್ಯೆ ಮಸುವ ಮುನ್ನವೇ ಮತ್ತೆ ಪುಂಡರ ಅಟ್ಟಹಾಸ ಮರುಕಳಿಸಿದ್ದು ಹಾಡುಹಗಲೇ ನಾಲ್ವರು ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ್ನು ಲಾಂಗ್ ನಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ. ಹಲಗೂರು ಗ್ರಾಮದಲ್ಲಿ ನಡೆದಿದೆ

ರಾಮನಗರಜಿಲ್ಲೆಯ ಕನಕಪುರ ತಾಲ್ಲೂಕು ದಾಳಿಂಬ ಗ್ರಾಮ ರಾಮು (30) ಕೊಲೆಯಾದ ವ್ಯಕ್ತಿ

ಹಲಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಿಕೆ ಪ್ರಾವಿಷನ್ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ
ಕಳೆದ ಮೂರು ದಿನಗಳ ಹಿಂದೆ ಬಾರ್ ಯೊಂದರಲ್ಲಿ ಬೆನುಮನಹಳ್ಳಿ ಕುಮಾರ್ ಹತ್ಯೆಯ ಆರೋಪಿ ಕೀರ್ತಿ ಹಾಗೂ ಮೃತ ರಾಮು ನಡುವೆ ಜಗಳವಾಗಿ ಕೀರ್ತಿ ಮೇಲೆ ನಡೆಸಿದ್ದು, ಕೀರ್ತಿ ಆಸ್ವತ್ರೆಗೆ ಸೇರಿದ್ದು ಅಸ್ವತ್ರೆಯಲ್ಲೇ ಆಸ್ಪತ್ರೆಯಲ್ಲಿ ಸ್ಕೆಚ್ ಹಾಕಿ ಪ್ರಮೋದ ಹಾಗೂ ಸ್ನೇಹಿತರು ಸೇರಿ ಮುಖಕ್ಕೆ ಬಟ್ಟೆಕಟ್ಟಿಕೊಂಡು, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬಿ.ಕೆ ಪ್ರಾವಿಜನ್ ಸ್ಟೋರ್ ನ ಒಳಕ್ಕೆ ಲಾಂಗ್ ನೊಂದಿಗೆ ಅಂಗಡಿಯಲ್ಲಿದ್ದ ರಾಮು ವಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ
ಬೆಂಗಳೂರಿನಿಂದ ಬಂದು ನಾಲ್ವರು ದುಷ್ಕರ್ಮಿಗಳ ಮರಣಾತಿಂಕ ಹಲ್ಲೆ ನಡೆಸಿದ್ದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಗೆ ಸಾಗಿಸುವ ಮಧ್ಯೆ ಮಾರ್ಗದಲ್ಲಿ ಸಾವನ್ನಿಪ್ಪಿದ್ದ ಎನ್ನಲಾಗಿದೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಹಿಡಲಾಗಿದೆ

ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Page 5 of 42

Visitors Counter

222507
Today
Yesterday
This Week
This Month
Last Month
All days
293
251
1762
5612
4244
222507

Your IP: 3.138.114.38
2024-04-26 20:17

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles