ಕೆ ಆರ್ ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಮುಖ್ಯರಸ್ತೆಯ ಕತ್ತರಘಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಪಕ್ಕದ ನೇರಲಕಟ್ಟೆ ಕೆರೆಯೊಳಗೆ ಉರುಳಿ ಬಿದ್ದರುವ ಘಟನೆ ತಡರಾತ್ರಿ ನೆಡೆದಿದೆ.
ಕುರ್ನೆನಹಳ್ಳಿಯ ನವೀನ ಕುಮಾರ್ ಎಂಬುವವರು ನಿನ್ನೆ ರಾತ್ರಿ ೧೦ಗಂಟೆ ಸಮಯದಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಕತ್ತರಘಟ್ಟದ ಬಳಿ ಇರುವ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಟ್ಟೆಯೊಳಗಿನ ಹಳ್ಳಕ್ಕೆ ಉರುಳಿ ಬಿದ್ದಿದೆ.
ಕೊಮ್ಮೆನಹಳ್ಳಿ ಗ್ರಾಮದ ಜಗದೀಶ್ ಎಂಬುವವರು ಅದೇ ಮಾರ್ಗವಾಗಿ ಮೋಟಾರು ಬೈಕಿನಲ್ಲಿ ಹೊಗತ್ತಿದ್ದು ಕೆರೆಗೆ ಬಿದ್ದಿದ್ದ ಕಾರನ್ನು ಕಂಡು ನೀರಿನಲ್ಲಿ ಇಳಿದು ಕಾರು ಚಾಲಕ ನವೀನ್ ಕುಮಾರ್ ನನ್ನು ರಕ್ಷಣೆ ಮಾಡಿ ಪಟ್ಟಣದ ಆಸ್ಪತ್ರೆಗ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಸಣ್ಣಪುಟ್ಟ ಗಾಯಗಾಳಗಿದ್ದು ಯಾವುದೆ ಪ್ರಾಣಹಾನಿಯಗಿಲ್ಲ.
Last modified on 19/07/2018