ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಸಿಗರೇಟ್ ಕೊಳ್ಳುವ ನೆಪದಲ್ಲಿ ಅಂಗಡಿಗೆ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ಇಂದು ರಾತ್ರಿ ಸುಮಾರು 8.45 ಗಂಟೆ ಸಮಯದಲ್ಲಿ ನಡೆದಿದೆ.
ಬಡಾವಣೆಯ ಹೇಮಗಿರಿ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದ ಶಿಕ್ಷಕ ಎಂ.ಎಸ್. ಮಹಾದೇವಪ್ಪ ಅವರ ಪತ್ನಿ ಜಗದಾಂಬ ಎಂಬುವರು ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ.
ಘಟನೆ ವಿವರ: ದುಷ್ಕರ್ಮಿಗಳಿಬ್ಬರ ಪೈಕಿ ಒಬ್ಬ ಸಿಗರೇಟ್ ಕೊಂಡು ಅಲ್ಲಿಯೇ ಸೇದುತ್ತಾ ಬೈಕ್ ಪಕ್ಕದಲ್ಲಿ ಮಾತಾಡುತ್ತಾ ನಿಂತಿದ್ದರು. ಆಗ ರಾತ್ರಿಯಾಯಿತೆಂದು ಜಗದಾಂಬ ಅವರು ಅಂಗಡಿಯ ಹೊರಗೆ ಇದ್ದ ಸಾಮಾನುಗಳನ್ನು ಒಳಗಡೆಗೆ ಜೋಡಿ ಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಕತ್ತಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್ ಮೂಲಕ ಸಾದುಗೋನಹಳ್ಳಿ ಮಾರ್ಗವಾಗಿ ಪರಾರಿಯಾಗಿದ್ದಾರೆ . ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಬೇಟಿ ನೀಡಿ ಆರೋಪಿಗಳ ಚಹರೆಯನ್ನು ಪಡೆದು ಪತ್ತೆಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.
ಘಟನೆಯ ಸಂಬಂಧ ಸರ ಕಳೆದುಕೊಂಡಿರುವ ಜಗದಾಂಬ ಮಹಾದೇವಪ್ಪ ಅವರು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last modified on 19/07/2018