Madhu
ಗೊರವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ಇನ್ನೂ ಬಾರದ ಅಧಿಕಾರಿಗಳು,ಚಿರತೆ ಸೆರೆ ಹಿಡಿಯಲು ಕ್ರಮಕೈಗೊಂಡಿಲ್ಲಾ ಎಂದು ಗ್ರಾಮಸ್ಥರ ಕಿಡಿ.
ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ನೆನ್ನೆ ದಾಳಿಮಾಡಿದ ಚಿರತೆ ಇಂದು ಸಹ ಅದೆ ಹಸುವನ್ನು ಎಳೆದುಕೊಂಡು ಹೋಗಿ ತಿಂದ ಘಟನೆ ನೆಡದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಗೊರವಿ ಗ್ರಾಮದಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಹಸುವನ್ನು ತಿಂದ ಘಟನೆ ನೆನ್ನೆ ನಡೆದಿತ್ತು. ಅದರೆ ರಾತ್ರಿ ಕೂಡಾ ಚಿರತೆ ಅಲ್ಲೆ ಇದ್ದ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ನಂತರ ತಿಂದಿದೆ.
ನೆನ್ನೆ ಸಂಜೆ ವರೆಗೂ ಅಲ್ಲೆ ಕಾದುಕುಳಿತ್ತಿದ್ದ ಗ್ರಾಮಸ್ಥರು ಅರಣ್ಯದಿಕಾರಿಗಳು ಬಾರದ ಹಿನ್ನೆಲೆ ಮನೆಗೆ ತೆರಳಿದರು. ನಂತರ ಬೆಳ್ಳಿಗೆ ನೋಡಿದರೆ ಮತ್ತೆ ಚಿರತೆ ಹಸುವಿನ ದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೊಗಿ ನಂತರ ಕತ್ತಿನ ಭಾಗವನ್ನು ತಿಂದು ಹಾಕಿದೆ ಇದರಿಂದ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಮನೆಮಾಡಿದೆ.
ಕೇವಲ ಬಂದು ನೋಡಿಕೊಂಡು ಹೊದ ಅಧಿಕಾರಿಗಳು ಚಿರತೆ ಹಿಡಿಯುವ ಯಾವುದೇ ಬೋನ್ ಕೂಡಾ ಅಳವಡಿಸಿಲ್ಲ ಕೇಳಿದರೆ ನಾಳೆ ಅಳವಡಿಸುತ್ತೆವೆ ಎಂದು ಉತ್ತರ ನೀಡುತ್ತಾರೆ.ಅದರೆ ಇಂದು ಹಸುವಿಗೆ ಹಾದ ಪರಿಸ್ಥಿತಿ ನಾಳೆ ಯಾರಾದರೂ ಗ್ರಾಮಸ್ಥರ ಅಥವಾ ಮಕ್ಕಳ ಮೇಲೆ ಚಿರತೆ ಅಲ್ಲೆ ಮಾಡಿದ್ದಾರೆ ಎನು ಗತಿ ಎಂದು ಗ್ರಾಮಸ್ಥರ ಭಯ ವ್ಯಕ್ತಪಡಿಸಿದ್ದಾರೆ.
ಕೂಡಲೆ ಚಿರತೆಯನ್ನು ಸೆರೆಹಿಡಿಯದಿದ್ದರೆ ತಾಲ್ಲೂಕಿನ ಅರಣ್ಯ ಇಲಾಖೆಯ ಕಛೇರಿಗೆ ಮುತ್ತಿಗೆ ಹಾಕುತ್ತವೆ ಎಂದು ಅಧಿಕಾರಿಗಳು ಮೇಲೆ ಅಕ್ರೊಸ ವ್ಯಕ್ತಪಡಿಸಿದ್ದಾರೆ.ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.
ನಾಳೆ ದೇಶವ್ಯಾಪಿ ಬಂದ್!! ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತ.
ನಾಳೆ ದೇಶವ್ಯಾಪಿ ಬಂದ್ ,ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ.
ಬೆಂಗಳೂರು : ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ -2017 ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಾಳೆ ದೇಶವ್ಯಾಪಿ ಬಂದ್ಗೆ ಕರೆ ನೀಡಿವೆ. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಹಲವು ಸಾರಿಗೆ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿರುವುದರಿಂದ ನಾಳೆ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು-ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ನಾಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಿದೆ.ಎಐಆರ್ಟಿಡಬ್ಲ್ಯುಎಫ್, ಎನ್ಎಫ್ಐಆರ್ಟಿಡಬ್ಲ್ಯು, ಎಚ್ಎಂಎಸ್, ಟಿಯುಸಿಐ, ಕೇಂದ್ರ ಕಾರ್ಮಿಕ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು, ರಾಜ್ಯದಲ್ಲೂ ಹತ್ತಾರು ಸಂಘಟನೆಗಳು ಜಂಟಿಯಾಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಸೂದೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತದೆ.
ಮಸೂದೆಗೆ ವಿರೋಧ ಏಕೆ?:
- ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2107 ಯೂ ರಸ್ತೆ ಸಂಚಾರ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ವಿಪರೀತ ದಂಡ ವಿಧಿಸುತ್ತದೆ.
- “ರಸ್ತೆ ಸುರಕ್ಷತೆ ಮತ್ತು ಅಪಘಾತಗಳನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶಕ್ಕಿಂತ ವಿಪರೀತ ದಂಡ ವಸೂಲಿ ಮಾಡುವ ಸಲುವಾಗಿ ಮಸೂದೆ ಜಾರಿಗೆ ತಂದು, ಬಡ ಸಾರಿಗೆ ಕಾರ್ಮಿಕರ ಜೀವನದ ಮೇಲೆ ಕೇಂದ್ರ ಸರ್ಕಾರ ಬರೆ ಎಳೆಯುತ್ತಿದೆ,” ಎಂಬುದು ಸಾರಿಗೆ ಕಾರ್ಮಿಕ ಸಂಘಟನೆಗಳ ಪ್ರಮುಖ ವಿರೋಧವಾಗಿದೆ.
ಮಸೂದೆಯಲ್ಲಿನ ಪ್ರಸ್ತಾವಿತ ದಂಡ, ಯಾವುದಕ್ಕೆ ಎಷ್ಟು?: ಸಾಮಾನ್ಯ ತಪ್ಪಿಗೆ ಈಗ ಇರುವ 100 ರೂ.ನಿಂದ 500ರಿಂದ 1,500 ರೂ.ವರೆಗೆ ದಂಡ ,ರಸ್ತೆ ನಿಯಂತ್ರಣ ನಿಯಮಗಳ ಉಲ್ಲಂಘನೆಗೆ 100 ರೂ.ಯಿಂದ 500ರಿಂದ 1000 ರೂ.ವರೆಗೆ ದಂಡ.ಅಧಿಕಾರಿಗಳ ಆದೇಶ ಪಾಲಿಸದೆ ಇರುವುದಕ್ಕೆ 500 ರೂ.ಯಿಂದ 2000 ರೂ.ವರೆಗೆ ದಂಡ.ಅತಿ ವೇಗ ಚಾಲನೆಗೆ 400 ರೂ.ನಿಂದ 1000 ರೂ.ವರೆಗೆ ದಂಡ.ಪರ್ಮಿಟ್ ಇಲ್ಲದ ವಾಹನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ದಂಡ
ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.
ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.ಖಾಸಗಿ ಶಾಲೆಗಳು ಯಥಾಸ್ಥಿತಿಯಾಗಿ ನಡೆಯಲಿವೆ ಎಂದು ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಮೂಡಿದೆ. ಮಸೂದೆಗೆ ವಿರೋಧವಿದ್ದರೂ ಬಂದ್ ನಲ್ಲಿ ಪಾಲ್ಗೊಳ್ಳದೇ ಇರದಂತೆ ಎಐಟಿಯುಸಿ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಎಐಟಿಯುಸಿ ಸಂಘಟನೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೆಲ ಬಿಎಂಟಿಸಿ ಬಸ್ ಗಳು ರಸ್ತೆಗಳಿಯೋ ಸಾಧ್ಯತೆ ಇದೆ.ಓಲಾ, ಊಬರ್, ಅಸಂಘಟಿತ ಆಟೋ ನೌಕರರಷ್ಟೇ ಬೆಂಬಲ ನೀಡಲಿದ್ದು, ಸಂಘಟಿತ ಆಟೋ ನೌಕರರು ಕೂಡ ಬೆಂಬಲ ವಾಪಸ್ ಪಡೆದಿದ್ದಾರೆ. ಮೇಘ ಮೇರು ಕ್ಯಾಬ್ ಗಳ ಬೆಂಬಲ ನೀಡಿದ್ದು, ಮೊದಲೇ ಬುಕಿಂಗ್ ಆಗಿರೋ ಕ್ಯಾಬ್ಗಳು ಸೇವೆ ನೀಡಲಿವೆ.
ಇತರೆ ಸಾಮಾಜಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಿದ ರೀತಿಯಲ್ಲಿ ಸಾರಿಗೆ ಕ್ಷೇತ್ರವನ್ನು ದೇಶಿ ಮತ್ತು ವಿದೇಶಿ ಕಾರ್ಪೊರೇಟ್ ಕಂಪನಿಗಳಿಗೆ ವರ್ಗಾಹಿಸಲು ಕೇಂದ್ರ ಸರ್ಕಾರ ಈ ಮಸೂದೆ ಜಾರಿಗೆ ಮುಂದಾಗಿದೆ. ರಾಷ್ಟ್ರೀಯ ಸಾರಿಗೆ ನೀತಿ ಎಂಬ ಹೊಸ ಅಂಶವನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ ಇದರಿಂದ ವಾಹನಗಳ ಪರ್ಮಿಟ್ ನೀಡುವಿಕೆ, ರಾಜ್ಯಗಳ ಸಾರಿಗೆ ನೀತಿ-ನಿರೂಪಣೆ, ತೆರಿಗೆ ಸಂಗ್ರಹ ಮುಂತಾದ ವಿಷಯಗಳಲ್ಲಿ ರಾಜ್ಯದ ಅಧಿಕಾರ ಸಂಪೂರ್ಣ ಕೇಂದ್ರದ ಪಾಲಾಗಲಿದೆ,” ಎಂಬುದು ಸಾರಿಗೆ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ.
ಅಧಿಕಾರ ಸ್ವೀಕರಿಸಿದ ದಿನವೇ ಸಭೆಗೆ ಗೈರಾದ ಅಧಿಕಾರಿಗಳಿಗೆ ತಾರಟೆ ತೆಗೆದುಕೊಂಡ ತಹಶಿಲ್ದಾರ್ ಶಿವ ಮೂರ್ತಿ.
ಮಳವಳ್ಳಿ ತಾಲ್ಲೂಕಿನ ಸಂಚಾರಿ ಮಾಹಿತಿ ಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿದರು.
ಕೃಷಿ ಅಭಿಯಾನ ಅನುಷ್ಠಾನ ಸಮಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಮಗ್ರ ಕೃಷಿ ಅಭಿಯಾನ 2018 ಸಂಚಾರಿ ಮಾಹಿತಿಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಚಾರಿ ಮಾಹಿತಿ ಕೃಷಿರಥಕ್ಕೆ ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿ ನಂತರ ಮಾತನಾಡಿ, ರೈತರು ಬೆಳೆಯುವ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಮುಖ್ಯಮಂತ್ರಿ ಕುಮಾರಣ್ಣ ರವರು ರೈತರ ಬಗ್ಗೆ ಅಪಾರ ಕಾಳಜಿವಿದ್ದು, ರೈತರಿಗಾಗಿ ಹಲವು ಯೋಜನೆಗಳನ್ನು ತರಲು ಹೊರಟಿದ್ದಾರೆ. ಈಗಾಗಲೇ ಕೃಷಿ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ತಲುಪಬೇಕು ಈ ನಿಟ್ಟಿನಲ್ಲಿ ರಥವನ್ನು ಗ್ರಾಮಗಳಿಗೆ ಬೇಟಿ ಕೃಷಿ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅರಿವು ಮೂಡಿಸಲಾಗುವುದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಮಕ್ಕಳು ಕಳಸ ಹೊತ್ತು ಮೆರವಣಿಗೆ ಹಾಗೂ ಪೂಜಾ ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು ಇದು ಪಟ್ಟಣದ ಮೂಲಕ ಬುಗತಹಳ್ಳಿ,ಟಿ ಕಾಗೇಪುರ, ನೆಲಮಾಕನಹಳ್ಳಿ, ನೆಲ್ಲೂರು ಮೂಲಕ ಮಾರೇಹಳ್ಳಿ, ವಾಸ್ತವ್ಯ ಹೂಡಲಿದೆ. ಈ ಬಾರಿ ಕಸಭಾ ರೈತರಿಗೆ ಎರಡು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ 8 ರಂದು ಎಪಿಎಂಸಿ ಆವರಣ ಹೋಬಳಿ ಮಟ್ಟದ ವೇದಿಕೆ ಕಾರ್ಯಕ್ರಮ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಸಲಾಗುವುದು ತಾಲ್ಲೂಕಿನ ಎಲ್ಲಾ ರೈತರು ಆಗಮಿಸುವಂತೆ ಶಾಸಕರು ಮನವಿಮಾಡಿಕೊಂಡರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್. ಎನ್ ವಿಶ್ವಾಸ್, ಸದಸ್ಯ ನಟೇಶ್, ಜಿ.ಪಂ ಸದಸ್ಯ ಹಾಗೂ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರವಿ, ತಹಸೀಲ್ದಾರ್ ದಿನೇಶ್ ಚಂದ್, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ,ಕೃಷಿ ಸಹಾಯ ನಿರ್ದೇಶಕ ಪರಮೇಶ್, ಅಧಿಕಾರಿ ರಮೇಶ್, ಸೇರಿದಂತೆ ಮತ್ತಿತ್ತರರು ಇದ್ದರು.
ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನೆ.
ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ದುರಸ್ತಿ ಕಾಮಗಾರಿಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ಮತ್ತು ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆ ಮತ್ತು ಸಂಘಟನೆಗಳಿಂದ ಪ್ರತಿಭಟನೆ .ಒಂದೇ ಕಾಮಗಾರಿ ಎರಡು ಕಡೆಗಳಿಂದ ಹಣ ಬಿಡುಗಡೆ ಮಾಡಿರುವ ಆರೋಪ.ಮಕ್ಕಳ ಪೋಷಕರಿಂದ ಸಹ ಹಣ ವಸೂಲಿ ಮಾಡಿರುವ ಆರೋಪ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ.ಒಟ್ಟು ಐದು ಲಕ್ಷದ ಐವತ್ತು ಸಾವಿರ ರೂಪಾಯಿ ದುರ್ಬಳಕೆ ಮಾಡಿಕೊಂಡದ್ದಾರೆ ಎಂದು ಸಮಾಜ ಸೇವಕ ಹೆಚ್ ಬಿ ಮಂಜುನಾಥ್ ನೇರವಾಗಿ ಆರೋಪ ಮಾಡಿದರು.ಅವರ ಏಕಾಂಗಿಯಾದ ಹೋರಾಟಕ್ಕೆ ಜಯ ಕರ್ನಾಟಕ, ಅಟೊ ಚಾಲಕರು ಮತ್ತು ಇನ್ನಿತರ ಸಂಘಟನೆಗಳು ಬೆಂಬಲ ನೀಡಿವೆ.ಅಕ್ರಮವಾಗಿ ಹಣ ದುರುಪಯೋಗ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಂತಿಯುತ ದರಣಿ ಮಾಡಿದರು.ಅ ವ್ಯಕ್ತಿ ಗಳ ಮೇಲೆ ಕ್ರಮಜರುಗಿಸತ್ತಾರ ಕಾದು ನೋಡಬೇಕಿದೆ.
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿಲ್ಲದ ಚಿರತೆದಾಳಿ ಮತ್ತೊಂದು ಹಸು ಬಲಿ
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಿಲ್ಲದ ಚಿರತೆದಾಳಿ ಹಸುವನ್ನು ತಿಂದ ಚಿರತೆ...
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಗೊರವಿಯಲ್ಲಿ ಘಟನೆ.ಗೊರವಿ ಗ್ರಾಮದ ಹರಿಗೌಡರ ಮಗ ಬಲರಾಮೇಗೌಡರಿಗೇ ಸೇರಿದ ಹಸುವನ್ನು ತಿಂದು ಹಾಕಿರುವ ಚಿರತೆ.ಇವರು ತೋಟದ ಮನೆಯಲ್ಲಿ ವಾಸಮಾಡುತ್ತಿದ್ದು ಹಸುವನ್ನು ಹೊರಭಾಗದಲ್ಲಿ ಕಟ್ಟಿಹಾಕ್ಕಿದ್ದರು.ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಚಿರತೆ ಕೂಗುವ ದ್ವನಿ ಕೇಳಿ ಭಯಬೀತರಾಗಿ ಮಲಗಿದ್ದಾರೆ. ಬೆಳ್ಳಿಗೆ ನೋಡಿದರೆ ಹಸುವನ್ನು ತಿಂದು ಹಾಕಿರುವ ಚಿರತೆ ,ರಾತ್ರಿ ಮನೆಯಿಂದ ಹಸುವನ್ನು ಎಳೆದ್ಯೊದಿರುವ ಚಿರತೆ ಜಮೀನಿನ ಪಕ್ಕದಲ್ಲಿ ಹಸುವನ್ನು ತಿಂದು ಹಾಕಿದೆ.
ಗ್ರಾಮಸ್ಥರಲ್ಲಿ ಭಯದವಾತವರಣ ಚಿರತೆಯನ್ನು ಸೇರೆ ಹೀಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಇನ್ನೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯಧಿಕಾರಿಗಳು.ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಪ್ಪಗಿನ ದಟ್ಟವಾದ ಕೂದಲಿಗಾಗಿ ಇಲ್ಲಿದೆ ಸುಲಭವಾದ ಮನೆ ಮದ್ದು
ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ .
ದಟ್ಟವಾದ ಕಪ್ಪಗಿನ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸೂ ಕೂಡ ಉದ್ದನೆಯ ದಪ್ಪನೆಯ ಕೂದಲನ್ನು ಪಡೆಯುವುದಾಗಿದೆ. ಹೊಳಪಿನ ಕೂದಲು ಪಡೆಯ ಬೇಕೆಂದು ಎಲ್ಲ ಹೆಂಗಸರೂ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬರುವ ವಿಧ ವಿಧ ಕೇಶ ತೈಲಗಳು ಆಯುರ್ವೇದಿಕ್ ಮನೆ ಮದ್ದುಗಳನ್ನು ಬಳಸಿ ದಪ್ಪನೆಯ ಕೂದಲು ಪಡೆಯುವ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ ಎಷ್ಟೇ ಕರಾಮತ್ತು ಮಾಡಿದರೂ ಧೂಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕೂದಲು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತದೆ.
ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಂದಿನ ಹೆಚ್ಚಿನ ಮಹಿಳೆಯರು ಒಳಗಾಗುತ್ತಿದ್ದಾರೆ. ಅದರಲ್ಲೂ ಒಣ ಕೂದಲು ಪ್ರತಿಯೊಬ್ಬ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು ವಾತಾವರಣದಲ್ಲಿರುವ ಧೂಳು, ರಾಸಾಯನಿಕಗಳಿಂದ ಈ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿದೆ. ಸೂರ್ಯನ ಬಿಸಿಲಿಗೆ ಹೆಚ್ಚು ಓಡಾಡುವುದು, ರಾಸಾಯನಿಕಗಳ ಬಳಕೆ, ರಾಸಾಯನಿಕ ಪರಿಕರಗಳಾದ ಸ್ಟ್ರೇಟನರ್, ಕೂದಲು ಒಣಗಿಸುವ ಯಂತ್ರ, ಕೂದಲನ್ನು ನೇರವಾಗಿಸುವ ಇಲ್ಲವೇ ಗುಂಗುರಾಗಿಸುವ ಯಂತ್ರಗಳ ಬಳಕೆ ಇದರಿಂದ ಕೂದಲು ಬೇಗನೇ ಹಾನಿಗೆ ಒಳಗಾಗುತ್ತದೆ. ಕಚೇರಿಗೆ ಹೋಗುತ್ತಿರುವ ಸ್ತ್ರೀಯರಾಗಿದ್ದಲ್ಲಿ ಯಾವಾಗಲೂ ಕೂದಲಿಗೆ ಪೋಷಣೆ ಮಾಡುವುದು ಕಷ್ಟದ ಕೆಲಸವೇ. ಅದಾಗ್ಯೂ ವಾರಾಂತ್ಯದಲ್ಲಿ ನಿಮ್ಮ ಕೂದಲಿನ ಪೋಷಣೆಗಾಗಿ ನೀವು ಸಮಯವನ್ನು ವಿನಿಯೋಗಿಸಬೇಕು.
ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಹೇರ್ ಪ್ಯಾಕ್ ನಿಮ್ಮ ಒಣ ಮತ್ತು ಶುಷ್ಕ ಕೂದಲಿನ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಲಿದೆ. ಬಾಳೆಹಣ್ಣು ಮತ್ತು ಲಿಂಬೆ ಬೆರೆಸಿ ಮಾಡುವ ಈ ಹೇರ್ ಪ್ಯಾಕ್ ಸಾಕಷ್ಟು ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ಗಳನ್ನು ಒಳಗೊಂಡಿದ್ದು ನಿಮ್ಮ ಕೂದಲನ್ನು ನಯ ಮತ್ತು ಮೃದುವಾಗಿಸುತ್ತದೆ. ಈ ಎರಡೂ ಸಾಮಾಗ್ರಿಗಳನ್ನು ಬಳಸಿಕೊಂಡು ಅತ್ಯದ್ಭುತವಾದ ಹೇರ್ ಮಾಸ್ಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.
ಬೇಕಾಗಿರುವ ಸಾಮಾಗ್ರಿಗಳೇನು?
1 ಬಾಳೆಹಣ್ಣು
1 ಲಿಂಬೆ
1 ಚಮಚ ತೆಂಗಿನೆಣ್ಣೆ
ಸಿದ್ಧಪಡಿಸುವುದು ಹೇಗೆ?
ಮೊದಲಿಗೆ ಬಾಳೆಹಣ್ಣನ್ನು ಮೃದುವಾಗಿಸಿ ಪೇಸ್ಟ್ ತಯಾರಿಸಿಕೊಳ್ಳ
ಇದಕ್ಕೆ ಲಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ
ಈ ಮಿಶ್ರಣಕ್ಕೆ ತೆಂಗಿನೆಣ್ಣೆಯನ್ನು ಸೇರಿಸಿ
ತೆಂಗಿನೆಣ್ಣೆ ಗಟ್ಟಿಯಾಗಿದ್ದರೆ ಅದನ್ನು ಬಿಸಿ ಮಾಡಿಕೊಂಡು ದ್ರವರೂಪವನ್ನಾಗಿ ಮಾಡಿ.
ಹಚ್ಚುವುದು ಹೇಗೆ?
1. ಮೊದಲಿಗೆ ಕೂದಲನ್ನು ದೈನಂದಿನ ಶಾಂಪೂ ಬಳಸಿ ತೊಳೆದುಕೊಳ್ಳಿ
2. ಈಗ ಕೂದಲನ್ನು ಭಾಗಗಳನ್ನಾಗಿ ಮಾಡಿಕೊಂಡು ಕೂದಲಿನ ಬುಡದಿಂದ ತುದಿಯವರೆಗೆ ಮಾಸ್ಕ್ ಹಚ್ಚಿ
3. 45 ನಿಮಿಷಗಳ ಕಾಲ ಹಾಗೆಯೇ ಬಿಡಿ
4. ಶವರ್ ಕ್ಯಾಪ್ ಬಳಸಿಕೊಂಡು ಕೂದಲನ್ನು ಕವರ್ ಮಾಡಿ
5. 45 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ
6. ವಾರದಲ್ಲಿ 2-3 ಬಾರಿ ಈ ಮಾಸ್ಕ್ ಹಚ್ಚಿಕೊಂಡು ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ.
ಬಾಳೆಹಣ್ಣಿನ ಪ್ರಯೋಜನ
ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ. ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಕೂಡ ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಬಾಳೆಹಣ್ಣು, ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ವಿಷಯದಲ್ಲೂ ತಾನೂ ಏನು ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದೆ! ಹೌದು, ಬಾಳೆಹಣ್ಣಿನಿಂದ ಕೂಡ ಕೂದಲು ಹಾಗೂ ತ್ವಚೆಯ ಸೌಂದರ್ಯವನ್ನು ವೃದ್ಧಿಸಬಹುದು... ಕೂದಲು ಉತ್ತಮವಾಗಿ ಬೆಳೆಯಲು ಬಾಳೆಹಣ್ಣು ಸಹಕಾರಿಯಾಗಲಿದೆ. ಕೂದಲಿನ ಸೀಳು ತುದಿಯನ್ನು ನಿವಾರಿಸಿ ನಿಮ್ಮ ಕೂದಲನ್ನು ರೇಷ್ಮೆಯಂತೆ ಮೃದುವಾಗಿಸಲಿದೆ. ವಿಟಮಿನ್ ಎ, ಸಿ ಮತ್ತು ಇ ಬಾಳೆಹಣ್ಣಿನಲ್ಲಿದ್ದು 75% ನೀರನ್ನು ಬಾಳೆಹಣ್ಣು ಹೊಂದಿದೆ. ಇದು ಉತ್ಕರ್ಷಣ ನಿರೋಧಿ ಅಂಶಗಳಿಂದ ಸಮೃದ್ಧವಾಗಿದ್ದು ಪೊಟಾಶಿಯಂ ಅನ್ನು ಒಳಗೊಂಡಿದೆ. ನೀವು ನಿಯಮಿತವಾಗಿ ಬಾಳೆಹಣ್ಣನ್ನು ಕೂದಲಿಗೆ ಹಚ್ಚಿಕೊಂಡರೆ ನಿಮ್ಮ ಕೂದಲು ನಯವಾಗಿ ನುಣುಪಾಗುತ್ತದೆ.
ತೆಂಗಿನೆಣ್ಣೆಯ ಪ್ರಯೋಜನ
ನಮಗೆಲ್ಲರಿಗೂ ಗೊತ್ತಿರುವ ಹಾಗೆ ತಲತಲಾಂತರದಿಂದ ನಮ್ಮ ದೇಶದ ಹೆಂಗಸರು ತೆಂಗಿನೆಣ್ಣೆ ಮೇಲೆ ವಿಶ್ವಾಸವಿಟ್ಟು ಸೌಂದರ್ಯ ಸಾಧನವಾಗಿ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶದವರೂ ಕೂಡ ಇದರ ಬಳಕೆಯನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ನಮ್ಮಲ್ಲಿ ಹುಟ್ಟಿದಾಗಿನಿಂದ ಇದರ ಬಳಕೆಯನ್ನು ಕಾಣುತ್ತಾ ಬಂದಿದ್ದೇವೆ. ಪ್ರತಿಯೊಬ್ಬ ಭಾರತೀಯನ ಮನೆಯಲ್ಲೂ ಒಂದು ಜಾರಿನಲ್ಲಿ ಕೊಬ್ಬರಿ ಎಣ್ಣೆಯು ಅವಶ್ಯವಾಗಿ ಕಂಡು ಬರುತ್ತದೆ. ಅದರಲ್ಲಿಯೂ ಹೆಚ್ಚಿನ ಕೂದಲಿಗೆ ಸಂಬಂಧಿತ ಸಮಸ್ಯೆಗಳಿಗೆ ತೆಂಗಿನೆಣ್ಣೆ ಉಪಯೋಗಕಾರಿ. ಇದು ಲ್ಯಾರಿಕ್ ಆ್ಯಸಿಡ್ ಅನ್ನು ಒಳಗೊಂಡಿದ್ದು ತಲೆಹೊಟ್ಟನ್ನು ನಿವಾರಿಸುತ್ತದೆ. ಇದು ಕೂದಲು ಬೆಳವಣಿಗೆಗೆ ಮಾಡಲು ಸಹಕಾರಿಯಾಗಿದೆ. ಮತ್ತು ಕೂದಲನ್ನು ಗಟ್ಟಿಯಾಗಿಸಿ ಕೂದಲಿಗೆ ಕಾಂತಿಯನ್ನು ನೀಡುತ್ತದೆ.
ಲಿಂಬೆ ರಸದ ಪ್ರಯೋಜನ
ನೈಸರ್ಗಿಕವಾಗಿ ದೊರೆಯುವ ತರಕಾರಿ ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ತರಕಾರಿ ಹಣ್ಣುಗಳ ದಿನನಿತ್ಯದ ಸೇವನೆಯಿಂದ ನಮಗೆ ಲಾಭವೇ ಹೆಚ್ಚು ಹೊರತು ನಷ್ಟವಲ್ಲ. ಇಂದು ನಾವು ಹೇಳಹೊರಟಿರುವ ಅಂತಹ ತರಕಾರಿ ಹಣ್ಣು ಲಿಂಬೆ ಹಣ್ಣಾಗಿದೆ. ಇದು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಅನ್ನು ಲಿಂಬೆಯು ಪಡೆದುಕೊಂಡಿದ್ದು ಕೊಲಜನ್ ಉತ್ಪಾದನೆಯು ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ. ಇದು ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಎಂದೆನಿಸಿದ್ದು ಯಾವುದೇ ರೀತಿಯ ತಲೆ ತುರಿಕೆ ಇಲ್ಲವೇ ತಲೆಹೊಟ್ಟನ್ನು ನಿವಾರಿಸುತ್ತದೆ. ನಿಮ್ಮ ತಲೆಬುಡವು ಒಮ್ಮೊಮ್ಮೆ ಹೆಚ್ಚುವರಿ ಎಣ್ಣೆಯನ್ನು ಉತ್ಪಾದಿಸುತ್ತದೆ. ಲಿಂಬೆ ರಸ ಈ ಎಣ್ಣೆ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸುತ್ತದೆ.
ನಿಮ್ಮ ಕೂದಲಿಗೆ ಈ ಮಾಸ್ಕ್ನಿಂದ ಪ್ರಯೋಜನವೇನು?
ಬಾಳೆಹಣ್ಣು ಮತ್ತು ಲಿಂಬೆಯ ಮಾಸ್ಕ್ ಯಾವುದೇ ರೀತಿಯ ಕೂದಲಿನ ಹಾನಿಯನ್ನು ತಡೆಯುತ್ತದೆ ಮತ್ತು ಕೂದಲಿಗೆ ಪೋಷಣೆಯನ್ನು ಮಾಡಿ ಹೆಚ್ಚುವರಿಯಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದ ಆ್ಯಮಿನೊ ಆ್ಯಸಿಡ್ನ ಸಹಾಯದಿಂದ ಕೂದಲಿನ ಬೆಳವಣಿಗೆಯನ್ನು ಇದು ನಿಯಂತ್ರಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ತಲೆಗೂದಲಿನ ನೆರೆತದಂತಹ ಸಮಸ್ಯೆಯಿಂದ ಕೂಡ ಈ ಹೇರ್ ಪ್ಯಾಕ್ ರಕ್ಷಣೆಯನ್ನು ನೀಡುತ್ತದೆ.
ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ಮಳವಳ್ಳಿಯ ಬಂಡೂರು ಗ್ರಾಮಪಂಚಾಯಿತಿ ಹಾಗೂ ನರೇಗಾ ಕೂಲಿಗಾರರ ತಂಡ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಹಾಗೂ ಗಟ್ಟಿಕೊಪ್ಪಲು ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ. ನಾಗರಾಜು ಉದ್ಘಾಟಿಸಿದರು ನಂತರ ಪಿಡಿಒ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಗಳನ್ನು ಪ್ರತಿಯೊಬ್ಬರು ಕಟ್ಟಿಸಿಕೊಳ್ಳುವಂತೆ ತಿಳಿಸಿದ ಅವರು ಗ್ರಾಮದ ಪ್ರತಿಯೊಬ್ಬರು ಮನೆ ಮುಂದೆ ಸ್ವಚ್ಚತೆ ಮಾಡಿಕೊಳ್ಳಬೇಕು ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಹಲವು ಕೂಲಿ ಕೆಲಸಗಳನ್ನು ಮಾಡಿದರೆ ಹಣವನ್ನು ನೀಡುತ್ತೇವೆ ಎಂದರು.ಕಾರ್ಯಕ್ರಮ ದಲ್ಲಿ ಕೂಲಿಕಾರರ ಸಂಘದ ಅಧ್ಯಕ್ಷ ಶಿವಮಲ್ಲಯ್ಯ, ಮಹದೇವಮ್ಮ. ಸೇರಿದಂತೆ ಮತ್ತಿತ್ತರರು ಇದ್ದರು.
ಸಾವಿನಲ್ಲೂ ಒಂದಾದ ಆದರ್ಶ ದಂಪತಿಗಳು
ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಅಪರೂಪದ ಒಂದು ಘಟನೆ ನೆಡೆದಿದೆ. ಏನೆಂದರೆ ಪ್ರೀತಿಸುವ ಪ್ರೇಮಿಗಳ ಕೆಲವೊಮ್ಮೆ ಒಟ್ಟಾಗಿ ಮರಣಹೊಂದಿದ ಪ್ರಕರಣಗಳನ್ನು ನೊಡಿರುತ್ತೆವೆ .ಅದರೆ ಇಲ್ಲಿ ತಮ್ಮ ಜೀವನದಲ್ಲಿ ಕಷ್ಟ ಸುಖ ಗಳಲ್ಲಿ ಜೊತೆಯಾಗಿ ಬಾಳಿದ ಆದರ್ಶದಂಪತಿಗಳು ಸಾವಿನ್ನಲು ಸಹ ಜೊತೆಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು
ಗ್ರಾಮದ ಹೊಂಬೇಗೌಡ(65) ಮಂಜಮ್ಮ(55) ಸಾವಿನಲ್ಲೂ ಒಂದಾದ ದಂಪತಿಗಳು.ಕಳೆದ ರಾತ್ರಿ 1 ಗಂಟೆ ಸಮಯದಲ್ಲಿ ಹೊಂಬೇಗೌಡ ರವರಿಗೆ ಹೊಟ್ಟೆನೋವು ಕಾಣಿಸಿಕೊಂಡು ತಕ್ಷಣ ಹೊಂಬೇಗೌಡರನ್ನ ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಕುಟುಂಬದವರು, ಈ ವೇಳೆ ಬಾಯಾರಿಕೆಯಿಂದ ನೀರು ಕೇಳಿದ ಹೊಂಬೇಗೌಡರವರಿಗೆ ಪತ್ನಿಮಂಜಮ್ಮ ನೀರು ಕುಡಿಸಿದತಕ್ಷಣ ಪ್ರಾಣ ಪಕ್ಷಿ ಹಾರಿಹೋಗಿದ್ದು, , ಇದನ್ನು ನೋಡಿದ ಆತನ ಪತ್ನಿ ಮಂಜಮ್ಮ ಸಹ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇಸಾವನ್ನಪ್ಪಿದಾಳೆ.
ಈ ವೇಳೆ ಮಾರ್ಗ ಮಧ್ಯದಲ್ಲೇ ಹೊಂಬೇಗೌಡ ಸಾವು. ಪತಿ ಸತ್ತ ಐದೇ ನಿಮಿಷದಲ್ಲಿ ಪತ್ನಿ ಮಂಜಮ್ಮನೂ ಸಾವು.ಆದರ್ಶ ದಂಪತಿಗಳ ಸಾವಿನಿಂದ ಕಣ್ಣೀರು ಹಾಕುತ್ತಿರುವ ಕುಟುಂಬ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಡೆದ ಘಟನೆ
ಮದುವೆ ಅನ್ನುವ ಋಣಾನುಬಂಧ ಎನ್ನುತ್ತಾರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಸಾವಿನಲ್ಲೂ ಒಂದಾದ ದಂಪತಿಗಳ ಆತ್ಮಕ್ಕೆ ಶಾಂತಿಯನ್ನು ಅ ಭಗವಂತ ಕರುಣಿಸಲಿ .
ಸಮಾಧಿಗಳ ಮಧ್ಯೆ ವಿಚಿತ್ರವಾಗಿ ಹುಟ್ಟು ಹಬ್ಬಆಚರಣೆ
ಮೂಡ ನಂಬಿಕೆಯನ್ನು ತೂಲಗೀಸಬೇಕೆಂದು ವಿಚಿತ್ರವಾಗಿ ಹಬ್ಬ ಆಚರಣೆ
ನೀವು ಹುಟ್ಟು ಹಬ್ಬವನ್ನು ಹೊಟೇಲ್, ಪ್ಯಾಲೇಸ್, 5ಸ್ಟಾರ್ ಹೊಟೇಲ್ , ಇಲ್ಲವೇ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಆಚರಣೆ ಮಾಡುವುದು ನೋಡಿರ್ತಿರಾ ಅದರೆ ಇಲ್ಲೊಬ್ಬರೂ ತಮ್ಮ ಹುಟ್ಟು ಹಬ್ಬವನ್ನು ವಿಚಿತ್ರವಾಗಿ ಸ್ಮಶಾನದಲ್ಲಿ ಸಮಾಧಿಗಳ ಮಧ್ಯೆ ಅಚರಿಸಿಕೊಂಡಿದ್ದಾರೆ
ವಿಜಯಪುರದ ಸಿಂದಗಿ ತಾಲೂಕೀನ ಮಲಘಾಣ ಗ್ರಾಮದ ಶರಣು ಬರಗಾಲ್ ಏಂಬ ವ್ಯಕ್ತಿ ಮೂಡನಂಬಿಕೆಯನ್ನೂ ತೊಲಗೀಸಲು ತನ್ನ ಹುಟ್ಟು ಹಬ್ಬವನ್ನ ಸುಡುಗಾಡು ( ಸ್ಮಶಾನ) ದಲ್ಲಿ ಆಚರಿಸಿಕೊಂಡಿದ್ದಾನೆ.ಈ ಕಾರ್ಯಕ್ರಮದಲ್ಲಿ ಸಿಂದಗಿ ತಾಲೂಕಿನ ದಲಿತ ಮುಖಂಡರು ಹಾಗೂ ಮಲಘಾಣ ತಾಲೂಕು ಪಂಚಾಯತ್ ಸದಸ್ಯರಾದ ಶಾಂತಗೌಡ ಬಾಗವಹಿಸಿದ್ದರು.
ನಮ್ಮ ದೇಶದಲ್ಲಿ ಮೂಡ ನಂಬಿಕೆಯನ್ನು ತೂಲಗೀಸಬೇಕೆಂಬುದು ಸ್ಮಶಾನದಲ್ಲಿಯೆ ಅಡುಗೆ ಮಾಡಿ ಊಟ ಮಾಡಿದರು.