Article content
ಯುವತಿಯ ಕೈ ಕಾಲು ಕಟ್ಟಿ ಕೆರೆಗೆ ಎಸೆದು ಕೊಲೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರು ಕೆರೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ.
ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಅಂತ ಸುತ್ತಾಡಿ ಕೇವಲ 15 ವರ್ಷಕ್ಕೆ ಪ್ರಿಯತಮನೊಂದಿಗೆ ಬೆಂಗಳೂರಿಗೆ ಓಡಿ ಹೋಗಿ ಮದುವೆಯಾದ ನಾಲ್ಕೇ ವರ್ಷಕ್ಕೆ ಅವನನ್ನು ಬಿಟ್ಟು ಬೇರೆಯವನ ಜೊತೆ ಸಂಸಾರ ನೆಡೆಸುತ್ತಿದ್ದ ಯುವತಿಯೊಬ್ಬಳನ್ನು ಕೈ ಕಾಲು ಕಟ್ಟಿ ಕೆರೆಗೆ ಎಸೆದು ಕೊಲೆ ಮಾಡಿರೋ ಘಟನೆ ನೆಡೆದಿದೆ. ಬಾಳಿ ಬದುಕಬೇಕಾದ ಆ ಯುವತಿ ಕೊಲೆಯಾಗಿದ್ದಾದ್ರೂ ಯಾಕೆ ಅಂತೀರಾ ಈ ಸ್ಟೋರಿ ನೋಡಿ .
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ವಳಗೇರ ಸೋಮನಹಳ್ಳಿಯಲ್ಲಿ 20 ವರ್ಷದ ಪುಷ್ಪ ಎಂಬ ಯುವತಿ ಕೊಲೆಯಾಗಿದ್ದು, ದಿಂಡಗೂರು ಕೆರೆಯಲ್ಲಿ ಶವ ಪತ್ತೆಯಾಗಿದೆ. ಅಕ್ರಮ ಸಂಬಂಧ ಆರೋಪ ಹಿನ್ನೆಲೆಯಲ್ಲಿ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಕುತ್ತಿಗೆ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕೆರೆಯಲ್ಲಿ ಶವವನ್ನು ಎಸೆದಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ಮೃತದೇಹವನ್ನ ಹೊರತೆಗೆದಿದ್ದಾರೆ. ಮಣಿ ಎಂಬುವರೊಂದಿಗೆ ಸಪ್ತಪದಿ ತುಳಿದಿದ್ದ ಪುಪ್ಪಾ, ಬೆಂಗಳೂರಿನ ಆಟೋ ಚಾಲಕ ರಾಜೇಶ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೆ, ಗಂಡನಿಂದ ಬೇರ್ಪಟ್ಟು ರಾಜೇಶ್ ನೊಂದಿಗೆ ಸಂಸಾರ ನಡೆಸುತ್ತಿದ್ದಳು ಎನ್ನಲಾಗ್ತಿದೆ.
3 ದಿನಗಳ ಹಿಂದೆ ಪುಷ್ಪಾಳ ಕೊಲೆ ಮಾಡಿ ದಿಂಡಗೂರು ಕೆರೆಗೆ ಎಸದಿರುವ ಶಂಕೆ ವ್ಯಕ್ತವಾಗಿದೆ. ಈಕೆಯ ಗಂಡ ಮತ್ತು ಅವರ ಕುಟುಂಬಸ್ಥರನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇತ್ತ ಮೃತಳ ಪೋಷಕರು ರಾಜೇಶ್ ಮತ್ತು ಆತನ ಕುಟುಂಬದ ಮೇಲೆ ಕೊಲೆ ಆರೋಪ ಮಾಡಿದ್ದು,ಮೊದಲು ಮದುವೆಯಾಗಿದ್ದ ಗಂಡ ಮಣಿಯ ಮೇಲು ಅನುಮಾನ ವ್ಯಕ್ತಪಡಿಸಿದ್ದು, ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದ ಈಕೆಯನ್ನು ಸ್ವಗ್ರಾಮಕ್ಕೆ ತಂದು ಕೊಲೆ ಮಾಡಿರೋರು ಯಾರು ಮತ್ತು ಅಂತಹ ದ್ವೇಷ ಇದ್ದಿದ್ದಾದ್ರೂ ಯಾರಿಗೆ..? ಬಾಳಿ ಬದುಕಬೇಕಾದ ಈಕೆಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾದ್ರೂ ಯಾರು ಎಂಬುದು ಪೊಲೀಸ್ ತನಿಖೆಯಿಂದಷ್ಟೆ ಎಲ್ಲವೂ ಬಯಲಾಗಬೇಕಿದೆ.
About Author
Leave a comment
Write your comments