ಈ ದಿನ ದಿ. 01/08/2019 ರಂದು ಸಂಜೆ ಕಿಕ್ಕೇರಿ ಪೊಲೀಸ್ ಠಾಣೆ ಸರಹದ್ದಿನ ಮಂದಗೆರೆ ಗ್ರಾಮದ ಹೇಮಾವತಿ ಹೊಳೆ ದಡದಲ್ಲಿ ಒಂದು ಅಪರಿಚಿತ ಹುಡುಗಿ ಶವ ದೊರೆತಿದ್ದು ಹೆಸರು ವಿಳಾಸ ದೊರೆತಿರುವುದಿಲ್ಲ. ನಂತರ ಅಪರಿಚಿತ ಹುಡುಗಿ ಹೆಸರು ಮತ್ತು ವಿಳಾಸ ಪತ್ತೆ ಸಂಬಂಧ ಮಾಹಿತಿ ಸಂಗ್ರಹಿಸಲಾಗಿ ಸದರಿ ಹುಡುಗಿಯ ಹೆಸರು ರಂಜಿತ ಡಾ/ಆಫ್ ನಾಗರಾಜು, 16 ವರ್ಷ, ಹೊಳೆ ನರಸೀಪುರ ಸರ್ಕಾರಿ ಬಾಲಕಿಯರ ಕಾಲೇಜು ಇಲ್ಲಿ ಪ್ರಥಮ ಪಿಯುಸಿ ವ್ಯಾಸಂಗ, ವಾಸಃ ನಾರಾಯಣ್ ರವರ ಬಾಡಿಗೆ ಮನೆ, ವಡ್ಡರಗುಡಿ ಗ್ರಾಮ, ಅಕ್ಕಿ ಹೆಬ್ಬಾಳು ಹೋಃ, ಕೆ.ಆರ್.ಪೇಟೆ ತಾಃ ಎಂದು ತಿಳಿದು ಬಂದಿರುತ್ತದೆ. ಸದರಿ ಹುಡುಗಿಗೆ ತಂದೆ ನಾಗರಾಜು, ತಾಯಿ ಜವರಮ್ಮ, ಮಾನಸ ಮತ್ತು ಕಾವೇರಿ ಎಂಬ ಇಬ್ಬರು ಅಕ್ಕಂದಿರು ಇರುತ್ತಾರೆ ಎಂದು ಮಾಹಿತಿ ತಿಳಿದು ಬಂದಿರುತ್ತದೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಸಮೀಪದ ವಡ್ಡರಗುಡಿ ಗ್ರಾಮದ ಯುವತಿ ಎಂದು ತಿಳಿದು ಬಂದಿದೆ ಆತ್ಮಹತ್ಯೆಗೆ ಯಾವ ಕಾರಣ ತಿಳಿದು ಬಂದಿರಿವುದಿಲ್ಲ