ಬೇಬಿ ಬೆಟ್ಟದ ಶ್ರೀ ಸದಾಶಿವ ಸ್ವಾಮೀಜಿ ಹೃದಯಘಾತದಿಂದ ಸಾವು. ಬೆಂಗಳೂರಿನ ಭಕ್ತರ ನಿವಾಸದಲ್ಲಿ 60 ವರ್ಷದ ಶ್ರೀ ಸದಾಶಿವ ಸ್ವಾಮೀಜಿ ಹೃದಯಘಾತದಿಂದ ಸಾವು.ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಶ್ರೀ ರಾಮಯೋಗೇಶ್ವರ ಮಠದ ಸ್ವಾಮೀಜಿ.ಬೆಂಗಳೂರಿನಲ್ಲಿ ಭಕ್ತರ ಕುಟುಂಬಸ್ಥರ ವಿವಾಹಕ್ಕೆಂದು ಸ್ವಾಮೀಜಿ ತೆರಳಿದ್ದರು.ಕಳೆದ ರಾತ್ರಿ ಬೆಂಗಳೂರಿಗೆ ತೆರಳಿ ವಿವಾಹದಲ್ಲಿ ಪಾಲ್ಗೊಂಡು, ರಾತ್ರಿ ಭಕ್ತರ ಮನೆಯಲ್ಲಿ ಮಲಗಿದ್ದರು.ಭಕ್ತರ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ 5 ಗಂಟೆಗೆ ಪೂಜೆಗೆಂದು ಎದ್ದೇಳಿಸಿದಾಗ ಶ್ರೀ ಸದಾಶಿವ ಸ್ವಾಮೀಜಿ ಮರಣ ಹೊಂದಿದ್ದರು.ಬೆಂಗಳೂರು ಸ್ಥಳಕ್ಕೆ ಬೇಬಿಬೆಟ್ಟದ ಕಿರಿಯ ಸ್ವಾಮೀಜಿ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ಭೇಟಿ.ಮಠದ ಅಪಾರ ಭಕ್ತರಲ್ಲಿ ನೋವು.
Last modified on 19/07/2018