Super User

Super User

ಮಳವಳ್ಳಿ: ಬೆನುಮನಹಳ್ಳಿ ಕುಮಾರ್ ಹತ್ಯೆ ಮಸುವ ಮುನ್ನವೇ ಮತ್ತೆ ಪುಂಡರ ಅಟ್ಟಹಾಸ ಮರುಕಳಿಸಿದ್ದು ಹಾಡುಹಗಲೇ ನಾಲ್ವರು ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ್ನು ಲಾಂಗ್ ನಿಂದ ಕೊಚ್ಚಿ ಭೀಕರ ಕೊಲೆ ಮಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ. ಹಲಗೂರು ಗ್ರಾಮದಲ್ಲಿ ನಡೆದಿದೆ

ರಾಮನಗರಜಿಲ್ಲೆಯ ಕನಕಪುರ ತಾಲ್ಲೂಕು ದಾಳಿಂಬ ಗ್ರಾಮ ರಾಮು (30) ಕೊಲೆಯಾದ ವ್ಯಕ್ತಿ

ಹಲಗೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಿಕೆ ಪ್ರಾವಿಷನ್ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ
ಕಳೆದ ಮೂರು ದಿನಗಳ ಹಿಂದೆ ಬಾರ್ ಯೊಂದರಲ್ಲಿ ಬೆನುಮನಹಳ್ಳಿ ಕುಮಾರ್ ಹತ್ಯೆಯ ಆರೋಪಿ ಕೀರ್ತಿ ಹಾಗೂ ಮೃತ ರಾಮು ನಡುವೆ ಜಗಳವಾಗಿ ಕೀರ್ತಿ ಮೇಲೆ ನಡೆಸಿದ್ದು, ಕೀರ್ತಿ ಆಸ್ವತ್ರೆಗೆ ಸೇರಿದ್ದು ಅಸ್ವತ್ರೆಯಲ್ಲೇ ಆಸ್ಪತ್ರೆಯಲ್ಲಿ ಸ್ಕೆಚ್ ಹಾಕಿ ಪ್ರಮೋದ ಹಾಗೂ ಸ್ನೇಹಿತರು ಸೇರಿ ಮುಖಕ್ಕೆ ಬಟ್ಟೆಕಟ್ಟಿಕೊಂಡು, ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬಿ.ಕೆ ಪ್ರಾವಿಜನ್ ಸ್ಟೋರ್ ನ ಒಳಕ್ಕೆ ಲಾಂಗ್ ನೊಂದಿಗೆ ಅಂಗಡಿಯಲ್ಲಿದ್ದ ರಾಮು ವಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು ಎನ್ನಲಾಗಿದೆ
ಬೆಂಗಳೂರಿನಿಂದ ಬಂದು ನಾಲ್ವರು ದುಷ್ಕರ್ಮಿಗಳ ಮರಣಾತಿಂಕ ಹಲ್ಲೆ ನಡೆಸಿದ್ದು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಗೆ ಸಾಗಿಸುವ ಮಧ್ಯೆ ಮಾರ್ಗದಲ್ಲಿ ಸಾವನ್ನಿಪ್ಪಿದ್ದ ಎನ್ನಲಾಗಿದೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರದಲ್ಲಿ ಹಿಡಲಾಗಿದೆ

ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

ಡೆಂಗ್ಯೂ ಜ್ವರಕ್ಕೆ ಅಗಸರಹಳ್ಳಿ ಗ್ರಾಮದ ಶಾಲಾ ಬಾಲಕಿ ಸಾವು, ಮತ್ತೊಬ್ಬ ಬಾಲಕಿ ತೀವ್ರ ಅಸ್ವಸ್ಥ... ಬಲಿ....ಅಗಸರಹಳ್ಳಿ ಗ್ರಾಮದ ರವಿಕುಮಾರ್ ರಾಣಿ ದಂಪತಿಗಳ ಪುತ್ರಿ ಕೆ.ಆರ್.ಪೇಟೆ ಪಟ್ಟಣದ ಪ್ರಿಯದರ್ಶಿನಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾವತಿ(7) ಮೃತ ದುರ್ದೈವಿಯಾಗಿದ್ದಾರೆ... ಈಕೆಯ ಸಹೋದರಿ ಪ್ರೇರಣ(5)ಕೂಡ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್ ಎಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಹೇಮಾವತಿ ಮತ್ತು ಪ್ರೇರಣಾ ಸಹೋದರಿಯರು ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಅಪೋಲೋ ಆಸ್ಪತ್ರೆಯಲ್ಲಿ ಸ್ಥಳಾಂತರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಹೇಮಾವತಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆ ಈಕೆಯ ಸಹೋದರಿ ತೀವ್ರವಾಗಿ ಅಸ್ವಸ್ಥರಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಅಗಸರಹಳ್ಳಿ ಗ್ರಾಮದಲ್ಲಿ ಆತಂಕವು ಮನೆ ಮಾಡಿದೆ..

ಸಾಲದ ಬಾಧೆ ತಾಳಲಾರದೆ ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ಹೊರವಲಯದ ತೋಟಗಾರಿಕೆ ಫಾರಂ ಬಳಿ ಪ್ರಗತಿಪರ ರೈತ ಎಂ.ಆರ್.ಯೋಗೇಶ್ (45)ನೇಣಿಗೆ ಶರಣು... ಕೃಷ್ಣರಾಜಪೇಟೆ ತಾಲ್ಲೂಕಿನ ಮುರುಕನಹಳ್ಳಿ ಗ್ರಾಮದ ರಾಮೇಗೌಡರ ಪುತ್ರನಾದ ಯೋಗೇಶ್ ಕೃಷಿ ಚಟುವಟಿಕೆಗಳಿಗೆ ಹಾಗೂ ತಮ್ಮ ಮಗಳ ಮದುವೆಗೆ 10ಲಕ್ಷರೂಪಾಯಿಗಳಿಗೂ ಹೆಚ್ಚಿನ ಸಾಲ ಮಾಡಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ಮುಂಜಾನೆ ಎದ್ದು ಜಮೀನಿಗೆ ಹೋದಾಗ ಮನನೊಂದಿದ್ದ ಯೋಗೇಶ್ ಅಲ್ಲಿಯೇ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಗ್ರಾಮಾಂತರ ಠಾಣೆಯ ಪೋಲಿಸರಿಗೆ ಗ್ರಾಮದ ಮುಖಂಡ ಸುದ್ಧಿಯನ್ನು ಮುಟ್ಟಿಸಿದ್ದು ಸಬ್ ಇನ್ಸ್ ಪೆಕ್ಟರ್ ಆನಂದೇಗೌಡ ಸ್ಥಳಕ್ಜೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ... ಮೃತರ ಬಂಧುಗಳ ಆಕ್ರಂಧನವು ಮುಗಿಲು ಮುಟ್ಟಿದೆ....

ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸಧ್ಯದಲ್ಲಿಯೇ ನಡೆಯಲಿರುವ ಉಪಚುನಾವಣೆಯಲ್ಲಿ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಹೋರಾಟ ನೀಡಲಾಗುವುದು... ದೇಶದ ಅತೀ ದೊಡ್ಡ 3ನೇ ಪಕ್ಷವಾಗಿರುವ ಬಿ.ಎಸ್.ಪಿ ಅಭ್ಯರ್ಥಿಯನ್ನು ತಾಲ್ಲೂಕಿನ ಪ್ರಜ್ಞಾವಂತ ಮತದಾರರು ಗೆಲ್ಲಿಸಿ ಆಶೀರ್ವದಿಸಬೇಕು ಎಂದು ರಾಜ್ಯ ಬಿಎಸ್ ಪಿ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ಮನವಿ ಮಾಡಿದರು...ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಅಕ್ಕ ಮಾಯಾವತಿ ಅವರು ಬೆಂಬಲಿಸಿದ್ದರು. ಬದಲಾಗಿರುವ ರಾಜಕಾರಣದಿಂದಾಗಿ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಎಲ್ಲಾ 17ಸ್ಥಾನಗಳಲ್ಲಿಯೂ ಬಿಎಸ್ ಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹೋರಾಟ ನೀಡಲಾಗುವುದು ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನಡೆಯುವುದು ಶತಸಿದ್ಧವಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆಯ ಕಡೆಗೆ ಗಮನಹರಿಸಿ ಆನೆಯ ಗುರುತಿಗೆ ಭರ್ಜರಿ ಗೆಲುವು ತಂದುಕೊಡಬೇಕು ಎಂದು ಕೃಷ್ಣಮೂರ್ತಿ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಎಸ್ ಪಿ ಮುಖಂಡರಾದ ಹರಿಹರಪುರ ಶಿವಕುಮಾರ್, ಚಿಕ್ಕಗಾಡಿಗನಹಳ್ಳಿ ಚೆಲುವರಾಜು, ಬಸ್ತಿ ಪ್ರದೀಪ ಮತ್ತಿತರರು ಉಪಸ್ಥಿತರಿದ್ದರು....

ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ನಡೆದಿರುವ ಗುಂಡೇಗೌಡ ಲಲಿತಮ್ಮ ದಂಪತಿಗಳ ಕೊಲೆ ಪ್ರಕರಣದಲ್ಲಿ ಪಕ್ಕದ ಮನೆಯವನಾದ ಒಬ್ಬರಾದ ಯೋಗೇಶ್ ಅವರಿಂದ ಮಾತ್ರ ಈ ಜೋಡಿಕೊಲೆ ನಡೆದಿಲ್ಲ ಯೋಗೇಶ್ ಅವರೊಂದಿಗೆ ಹಲವಾರು ಜನರು ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಹಾಗೂ ಅನುಮಾನವಿದ್ದು ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಿ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯನ್ನು ವಿಧಿಸಬೇಕು ಎಂದು ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಅವರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿ ಕೆಲಕಾಲ ದಿಗ್ಬಂಧನ ವಿಧಿಸಿ ಆಕ್ರೋಶ ವ್ಯಕ್ತಪಡಿಸಿದರು... ಯೋಗೇಶ್ ಒಬ್ಬ ಅಮಾಯಕನಾಗಿದ್ದು ಈತನೊಬ್ಬನೇ ವಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ..ಕೊಲೆಯಾಗಿರುವ ದಂಪತಿಗಳ ಬಳಿಯಿದ್ದ ಒಡವೆಗಳು ಮತ್ತು ಹಣವೂ ಕಾಣುತ್ತಿಲ್ಲ. ಆದ್ದರಿಂದ ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ನಡೆಸಲು ಮುಂದಾದಾಗ ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಗ್ರಾಮಸ್ಥರನ್ನು ಸಮಾಧಾನಪಡಿಸಿ ಹದಿನೈದು ದಿನಗಳಲ್ಲಿ ಜೋಡಿಕೊಲೆ ಪ್ರಕರಣದ ಸಂಪೂರ್ಣ ವಿವರವನ್ನು ನೀಡುತ್ತಾರೆ, ಸಹಕರಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಗ್ರಾಮಸ್ಥರು ಕೈಬಿಟ್ಟರು...

ರಾಯಸಮುದ್ರ ಗ್ರಾಮದಲ್ಲಿ ಗುಂಡೇಗೌಡ ಲಲಿತಮ್ಮ ದಂಪತಿಗಳ   ಜೋಡಿಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ...  ಕೃಷ್ಣರಾಜಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ಗುಂಡಣ್ಣ ಲಲಿತಮ್ಮ ದಂಪತಿಗಳನ್ನು ಹತ್ಯೆಮಾಡಿ ತಲೆಮರೆಸಿಕೊಂಡಿದ್ದ ಪಕ್ಕದ ಮನೆಯ ವಾಸಿಯೇ ಆದ ಬೋರೇಗೌಡರ ಮಗ ಯೋಗೇಶನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಲೆಗೆ ಮತ್ತು ಮುಖಕ್ಕೆ ಹೊಡೆದು ಹತ್ಯೆಮಾಡಿರುವುದಾಗಿ ಯೋಗೇಶ ಒಪ್ಪಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು‌. ಜೋಡಿಕೊಲೆ ಹತ್ಯೆ ಆರೋಪಿಯನ್ನು ಎಎಸ್ ಪಿ ಬಲರಾಮೇಗೌಡ, ಡಿವೈಎಸ್ ಪಿ ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್, ಅಪರಾಧ ಪತ್ತೆ ಸಿಬ್ಬಂಧಿಗಳಾದ ಹೆಚ್.ಪ್ರಕಾಶ್, ಬಿ.ಎಸ್.ಚಂದ್ರಶೇಖರ್, ಬಸವರಾಜು, ಪ್ರಶಾಂತಕುಮಾರ್, ರಘು, ಗುರುಪ್ರಸಾದ್, ಚಾಲಕರಾದ ಮಂಜುನಾಥ ಮತ್ತು ವಾಸು ಭಾಗವಹಿಸಿದ್ದರು. ಜೋಡಿಕೊಲೆ ಆರೋಪಿಯನ್ನು ಪತ್ತೆಹಚ್ಚಿದ ಕೆ.ಆರ್.ಪೇಟೆ ಪೋಲಿಸರ ತಂಡವನ್ನು ಎಸ್ ಪಿ ಶಿವಪ್ರಕಾಶ್ ದೇವರಾಜ್ ಅಭಿನಂದಿಸಿದ್ದಾರೆ...

ತಮ್ಮ ಚಿತ್ರಗಳ ಮೂಲಕ ಮುಟ್ಟಿನ ಆರೋಗ್ಯ ಮತ್ತು ಮಹಿಳೆಯರ ನೈರ್ಮಲ್ಯದಂತಹ ವಿಷಯಗಳ ಬಗ್ಗೆ ವ್ಯವಹರಿಸಿದ ಅಕ್ಷಯ್ ಕುಮಾರ್ ಈಗ ಲಿಂಗ ಆಧಾರಿತ ಸಮಾನತೆಯ ಅಗತ್ಯವನ್ನು ಒತ್ತಿಹೇಳಲು ಅವರು ನಮಗೆ ಕೆಲವು ನಿಜ ಜೀವನದ ಉದಾಹರಣೆಗಳನ್ನು ನೀಡುತ್ತಾರೆ.

"ಒಬ್ಬ ಮಹಿಳೆ ತನ್ನ ಮನೆ, ಕಾರ್ಪೊರೇಟ್ ಹಣಕಾಸು ಮತ್ತು ನಮ್ಮ ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುತ್ತಾಳೆ. ಅವರು ಈ ಹಿಂದೆ ರಕ್ಷಣಾ ಸಚಿವಾಲಯದಲ್ಲಿದ್ದರು. ಬದಲಾವಣೆ ಆಗುತ್ತಿದೆ" ಎಂದು ನಟ ತಮ್ಮ ಮುಂಬರುವ ಚಿತ್ರ ಮಿಷನ್ ಮಂಗಲ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಅಂತೆಯೇ, ಮಿಷನ್ ಮಂಗಲ್ ಮಂಗಳಕ್ಕೆ ಉಪಗ್ರಹವನ್ನು ಕಳುಹಿಸುವ ಉದ್ದೇಶದಿಂದ ಐದು ಮಹಿಳಾ ವಿಜ್ಞಾನಿಗಳ ಹೋರಾಟಗಳನ್ನು ವಿವರಿಸುತ್ತದೆ. ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ಕೀರ್ತಿ ಕುಲ್ಹಾರಿ ಮತ್ತು ನಿತ್ಯಾ ಮೆನನ್ ಗೆ ಪಾತ್ರಗಳನ್ನು ಪ್ರಬಂಧಿಸಲಾಗಿದೆ

ಆದರೆ, ಮಿಷನ್ ಮಂಗಲ್ ಅವರನ್ನು 'ಮಹಿಳಾ ಆಧಾರಿತ' ಚಿತ್ರ ಎಂದು ಕರೆಯಲು ಅಕ್ಷಯ್ ಸಿದ್ಧರಿಲ್ಲ. "ಯಾರಾದರೂ (ಚಲನಚಿತ್ರ) ಮಹಿಳಾ-ಆಧಾರಿತ ವಿಷಯ ಎಂದು ಹೇಳಿದಾಗ ನನಗೆ ಕಿರಿಕಿರಿ ಉಂಟಾಗುತ್ತದೆ. ಮಹಿಳೆಯರು ಆಧಾರಿತರು ಎಂದರೇನು? ನಾವು ಸಮಾನರಾಗಿದ್ದರೆ, ಪುರುಷ-ಆಧಾರಿತ ಅಥವಾ ಸ್ತ್ರೀ-ಆಧಾರಿತ ಯಾವುದೂ ಇರಬಾರದು, ಅದು ಇರಬೇಕು ಕೇವಲ ಚಿತ್ರವಾಗಿರಿ. ಅದನ್ನೇ ನಾನು ಭಾವಿಸುತ್ತೇನೆ "ಎಂದು ಅವರು ಹೇಳಿದರು.

ಅಕ್ಷಯ್ ವಿಷಯವನ್ನು ಆಯ್ಕೆ ಮಾಡುವ ಹಿಂದಿನ ಉದ್ದೇಶವನ್ನೂ ಬಹಿರಂಗಪಡಿಸಿದರು. "ನಾನು ಈ ಚಿತ್ರವನ್ನು ಮುಖ್ಯವಾಗಿ ಮಕ್ಕಳಿಗಾಗಿ ಮಾಡಿದ್ದೇನೆ ಆದ್ದರಿಂದ ಅವರು ವಿಜ್ಞಾನಿಗಳಾಗಲು ಪ್ರೋತ್ಸಾಹಿಸುತ್ತಾರೆ. ವಿಜ್ಞಾನಿ ವೃತ್ತಿಯಾಗಿ ಹೆಚ್ಚು ಇಷ್ಟವಾಗುವುದಿಲ್ಲ, ಆದರೆ ಇಸ್ರೊ ಚಂದ್ರಯಾನವನ್ನು ಪ್ರಾರಂಭಿಸಿದ ನಂತರ, ವಿಜ್ಞಾನಿಗಳ ಅಗತ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಜನರು ಹೆಚ್ಚು ಜಾಗೃತರಾಗುತ್ತಿದ್ದಾರೆ. ಇದು ಎಷ್ಟು ದೊಡ್ಡ ವೃತ್ತಿಯಾಗಿದೆ ಎಂಬುದನ್ನು ಈ ಚಿತ್ರ ತಿಳಿಸುತ್ತದೆ ಎಂದು ಭಾವಿಸುತ್ತೇವೆ "ಎಂದು ಚಿತ್ರದಲ್ಲಿ ವಿಜ್ಞಾನಿ ಪಾತ್ರದಲ್ಲಿ ನಟಿಸಿರುವ ನಟ ಹೇಳಿದರು.

ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಅಗತ್ಯತೆಯ ಬಗ್ಗೆ ಖಿಲಾಡಿ ತಾರೆ ಮಾತನಾಡಿದರು. "ನನ್ನ ಬಾಲ್ಯದಿಂದಲೇ, ಹುಡುಗಿ ಪುರುಷ ಪ್ರಾಬಲ್ಯದ ವೃತ್ತಿಗಳು ಎಂಬ ನೆಪದಲ್ಲಿ ವಿಜ್ಞಾನಿ ಅಥವಾ ಎಂಜಿನಿಯರ್ ಆಗಬೇಕೆಂದು ಆಶಿಸಿದರೆ ಹೆಣ್ಣನ್ನು ನಿರುತ್ಸಾಹಗೊಳಿಸುವ ಪೋಷಕರನ್ನು ನಾನು ನೋಡಿದ್ದೇನೆ. ಬದಲಾಗಿ, ಅವರು ಮಗುವನ್ನು ವೈದ್ಯರು ಅಥವಾ ದಾದಿಯಾಗಲು ಪ್ರೋತ್ಸಾಹಿಸುತ್ತಾರೆ ಅಥವಾ ಯಾವುದೇ ಮಹಿಳಾ ಪ್ರಾಬಲ್ಯದ ವೃತ್ತಿಯನ್ನು ಆರಿಸಿ. ನಮ್ಮ ಇತಿಹಾಸ ಪುಸ್ತಕಗಳು ಸಹ ಮಹಿಳೆಯರ ಕಥೆಗಳನ್ನು ಹೇಳುವುದಿಲ್ಲ, ಬದಲಿಗೆ ಅವು ಹೆಚ್ಚಾಗಿ ಪುರುಷರ ಮೇಲೆ ಒತ್ತು ನೀಡುತ್ತವೆ. ಇದನ್ನು ಬದಲಾಯಿಸುವ ಸಮಯ ಬಂದಿದೆ ಮತ್ತು ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ.

ಜಗನ್ ಶಕ್ತಿ ನಿರ್ದೇಶನದ ಮಿಷನ್ ಮಂಗಲ್ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ

ಸೆಲೆಬ್ರಿಟಿಗಳು ಸ್ತನ್ಯಪಾನ: ಸ್ಟೇಸಿ ಸೊಲೊಮನ್ ನಿಂದ ಆಮಿ ಶುಮರ್ ವರೆಗೆ, ಪ್ರಸಿದ್ಧ ತಾಯಂದಿರು ತಮ್ಮ ಮಕ್ಕಳನ್ನು ಮೊಲೆಹಾಲನ್ನು ಕೊಟ್ಟು ಪೋಷಿಸುತ್ತಿದ್ದಾರೆ

ಹಿಲರಿ ಡಫ್ (ಎಡ) ಮತ್ತು ಸ್ಟೇಸಿ ಸೊಲೊಮನ್ ಇಬ್ಬರೂ ಸ್ತನ್ಯಪಾನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನಾವು ವಿಶ್ವ ಸ್ತನ್ಯಪಾನ ವಾರದ ಮಧ್ಯದಲ್ಲಿದ್ದೇವೆ, ಅದು ಈ ವರ್ಷ ಆಗಸ್ಟ್ 1-7 ರಿಂದ ಬರುತ್ತದೆ. ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಪ್ರಪಂಚದಾದ್ಯಂತದ ಶಿಶುಗಳ ಆರೋಗ್ಯವನ್ನು ಸುಧಾರಿಸಲು ಇದು ಜಾಗೃತಿ ವಾರವಾಗಿದೆ.

ವಿ.ಸೂ: ಸ್ತನ್ಯಪಾನವು ನಂತರದ ಜೀವನದಲ್ಲಿ ಮಕ್ಕಳಿಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಾಬೀತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆರು ತಿಂಗಳ ವಯಸ್ಸಿನ ಶಿಶುಗಳಿಗೆ ವಿಶೇಷ ಸ್ತನ್ಯಪಾನವನ್ನು ಶಿಫಾರಸು ಮಾಡಲಾಗಿದೆ - ಮತ್ತು“ಸೂಕ್ತವಾದ ಪೂರಕ ಆಹಾರಗಳೊಂದಿಗೆ ಶಿಶುಗಳಿಗೆ ಎರಡು ವರ್ಷ ತುಂಬುವವರೆಗೆ ಮೊಲೆ ಹಾಲನ್ನು ಕೊಡಬೇಕಾಗಿದೆ..

ಸೊಹ್ರಾಬುದ್ದೀನ್ ಪ್ರಕರಣ: ಎಲ್ಲಾ 38 ಆರೋಪಿ ಪೊಲೀಸರ ಖುಲಾಸೆ, ಆದೇಶವನ್ನು ಪ್ರಶ್ನಿಸಿ ‘ಸ್ಟೇಜ್’ ಎನ್‌ಕೌಂಟರ್ ಪ್ರಕರಣದ ಸಾಕ್ಷಿ ಮುಂಬೈ ಹೈಕೋರ್ಟ್‌ಗೆ ಮೊರೆ. ಎಚ್‌ಸಿ ಆದೇಶ ಮೀಸಲು.

ಮುಂಬೈ: ಗುಜರಾತ್ ಮತ್ತು ರಾಜಸ್ಥಾನದ ಎಲ್ಲಾ 38 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸುವುದನ್ನು ಪ್ರಶ್ನಿಸಿ ಕೋರಿ ಸೊಹ್ರಾಬುದ್ದೀನ್ ಶೇಖ್, ಅವರ ಪತ್ನಿ ಕಸುವರ್ ಬಿ ಮತ್ತು ಸಹವರ್ತಿ ತುಳಸಿರಾಮ್ ಪ್ರಜಾಪತಿ ಅವರ ‘ಸ್ಟೇಜ್’ ಎನ್‌ಕೌಂಟರ್ ಪ್ರಕರಣದ ಸಾಕ್ಷಿ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಕೆಳ ನ್ಯಾಯಾಲಯದ ಅಂತಿಮ ತೀರ್ಪನ್ನು ಸಾಕ್ಷಿ ‘ನ್ಯಾಯದ ಅಪಹಾಸ್ಯ’ ಎಂದು ಹೆಸರಿಸಿದ್ದಾರೆ.

ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ನ ಎಲ್ಲಾ ಸ್ಮರಣೆಯನ್ನು ಮುಚ್ಚಿಹಾಕುವ ಪ್ರಯತ್ನಗಳ ಹೊರತಾಗಿಯೂ, ವಿಚಾರಣೆಗಳು ಮುಂದುವರೆದಿದ್ದರೂ, ಈ ಪ್ರಕರಣವು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಇತರರೊಂದಿಗೆ ಕಾಡುತ್ತಲೇ ಇರುತ್ತದೆ. ಮುಂಬೈನ ವಿಶೇಷ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನ್ಯಾಯಾಲಯದ ಮುಂದೆ ಇತ್ತೀಚಿನ ನಿಕ್ಷೇಪಗಳು - ಅಮಿತ್ ಶಾ ಮತ್ತು ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ನಡುವಿನ ಸಂಬಂಧವನ್ನು ಮತ್ತೊಮ್ಮೆ ಸ್ಥಾಪಿಸಿದೆ.

ಆಗಸ್ಟ್ 6 ರಿಂದ ಅಯೋಧ್ಯೆ ವಿಚಾರಣೆ: ಸಿಜೆಐ ಗೊಗೊಯ್ ನವೆಂಬರ್‌ನಲ್ಲಿ ನಿವೃತ್ತಿಯಾಗುವುದರೊಂದಿಗೆ, ವಿವಾದದ ಆರಂಭಿಕ ಪರಿಹಾರಕ್ಕೆ ಹೆಚ್ಚಿನ ಅವಕಾಶಗಳು

Page 5 of 10

Visitors Counter

224346
Today
Yesterday
This Week
This Month
Last Month
All days
365
382
1691
747
6704
224346

Your IP: 3.16.69.143
2024-05-02 21:55

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles