ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದಲ್ಲಿ ವಿಚ್ಛೇದನ ಪಡೆಯಲು ಮುಂದಾದ ಹೆಂಡತಿಯ ಮೇಲಿನ ಸಿಟ್ಟಿಗೆ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಅಳಿಯ ಬೀಸಿದ ಮಚ್ಚಿನೇಟಿಗೆ ಮಾವ ಪ್ರಕಾಶ್ (55) ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಪ್ರಾಣಬಿಟ್ಟರೆ, ಪತ್ನಿ 28 ವರ್ಷದ ದಿವ್ಯ ಸ್ಥತಿ ಚಿಂತಾಜನಕವಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಘಟನೆ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ್ದನ್ನು ಕಂಡು ನಂದೀಶ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಹಾಡ ಹಗಲೇ ನಡು ರಸ್ತೆಯಲ್ಲೇ ಇಬ್ಬರ ಮೇಲೆ ಮನ ಬಂದಂತೆ ಮಚ್ಚು ಬೀಸಿದ್ದಾನೆ. ಇಂತಹ ರಾಕ್ಷಸ ಕೃತ್ಯವೆಸಗಿರು ಈತ ಚನ್ನರಾಯಪಟ್ಟಣ ತಾಲ್ಲೂಕಿನ ಎಲಿಯೂರು ಗ್ರಾಮದವನು. ಸುಮಾರು 12 ವರ್ಷದ ಹಿಂದೆ ತನ್ನದೇ ಊರಿನವಳಾದ ಪಕ್ಕದ ಮನೆಯ ದಿವ್ಯಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ.ಗಂಡ ಹೆಂಡತಿ ಅಂದಿನಿಂದಲೂ ಚನ್ನಾಗಿಯೇ ಬದುಕು ಸಾಗಿಸುತ್ತಿದ್ದರು ಇವರಿಗೆ ನಾಲ್ಕನೇ ತರಗತಿಯ ಹೆಣ್ಣು, ಎರಡನೇ ತರಗತಿ ಓರ್ವ ಮಗನಿದ್ದಾನೆ.
ಸಂಸಾರದಲ್ಲಿ ಅನೇಕ ಬಾರಿ ಮನಸ್ತಾಪ ಉಂಟಾಗಿತ್ತು. ಕಳೆದ ಒಂದು ವಾರದ ಹಿಂದೆ ಜಗಳ ತಾರಕಕ್ಕೇರಿತ್ತು. ಪದೇ ಪದೇ ಜಗಳವಾಗುತ್ತಿದೆ ನಮ್ಮಿಬ್ಬರ ನಡುವೆ ಸಂಸಾರನಡೆಸುವುದು ಸಾಧ್ಯವಿಲ್ಲ ಎಂದು ದಿವ್ಯಾ ನಿರ್ಧರಿಸಿ ತವರು ಮನೆಗೆ ಬಂದಿದ್ದಾಳೆ.ಇಂದು ದಿವ್ಯಾ ತನ್ನ ತಂದೆಯೊಂದಿದೆ ಚನ್ನರಾಯಪಟ್ಟಣಕ್ಕೆ ತೆರಳಿ ತನ್ನ ಪತಿಯಿಂದ ವಿಚ್ಛೇದನ ಕೊಡಿಸಿ ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿಸಿಕೊಡಿ ಎಂದು ವಕೀಲರ ಕಛೇರಿಗೆ ತೆರಳಿದ್ದಾಳೆ. ಇ ಸಂದರ್ಭದಲ್ಲಿ ಬಂದ ಪತಿ ಮನಬಂದಂತೆ ಅಲ್ಲೆ ನೆಡಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.