ಮತ್ತೆ 'ಹುಚ್ಚಾ' ವೆಂಕಟ್​​ ರಂಪಾಟ... ಮಂಡ್ಯ ಜನರಿಂದ ಬಿತ್ತು ಗೂಸಾ!

ಮತ್ತೆ 'ಹುಚ್ಚಾ' ವೆಂಕಟ್​​ ರಂಪಾಟ... ಮಂಡ್ಯ ಜನರಿಂದ ಬಿತ್ತು ಗೂಸಾ!

ಹುಚ್ಚ ವೆಂಕಟ್ ಮಂಡ್ಯದಲ್ಲಿ ಮತ್ತೆ ತನ್ನ ರಂಪಾಟ ಮುಂದುವರಿಸಿದ್ದು ,ಸಾರ್ವಜನಿಕರಿಂದ ಗೂಸಾ ತಿಂದಿದ್ದಾನೆ.
ಮಂಡ್ಯ: ನಟ ಹುಚ್ಚ ವೆಂಕಟ್ ಪುಂಡಾಟ ಇಂದೂ ಮುಂದುವರೆದಿದ್ದು, ನಗರ ಹೊರವಲಯದ ಹೋಟೆಲ್ ಮುಂಭಾಗ ಹುಚ್ಚಾಟ ಮುಂದುವರೆಸಿ ಕಾರಿನ ಗಾಜು ಪುಡಿಪುಡಿ ಮಾಡಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ.ಮಂಡ್ಯದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ಮುಂಭಾಗ ಘಟನೆ‌ ನಡೆದಿದ್ದು, ಹೋಟೆಲ್ ಮುಂಭಾಗ ನಿಂತಿದ್ದ ಕಾರ್ ಮೇಲೆ ಕಲ್ಲು ಎತ್ತು ಹಾಕಿ ಹುಚ್ಚಾಟ ಮುಂದುವರೆಸಿದ್ದಾನೆ. ಪಾಂಡವಪುರ, ಕೊಡುಗು, ಮೈಸೂರಿನಲ್ಲಿ ರಂಪಾಟ ನಡೆಸಿ ಇದೀಗ ಮತ್ತೆ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್​ನಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.ಹುಚ್ಚ ವೆಂಕಟ್​ಗೆ ಮಂಡ್ಯ ಜನರಿಂದ ಗೂಸಾಇಂದು ಬೆಳಗ್ಗೆ ಹೋಟೆಲ್ ಮುಂಭಾಗ ಮತ್ತೆ ಪುಂಡಾಟ ಮಾಡಿ ಕಾರಿನ ಗಾಜು ಒಡೆದು ರಂಪಾಟ ಮಾಡಿದ್ದರಿಂದ ಸ್ಥಳೀಯರು, ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹುಚ್ಚ ವೆಂಕಟ್ ರಕ್ಷಣೆ ಮಾಡಿ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

Share this article

About Author

Super User
Leave a comment

Write your comments

Visitors Counter

223013
Today
Yesterday
This Week
This Month
Last Month
All days
195
163
358
6118
4244
223013

Your IP: 3.138.174.95
2024-04-29 10:20

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles