ಮಳವಳ್ಳಿ: 35 ವರ್ಷದ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಹುಲ್ಲಂಬಳ್ಳಿ ಗ್ರಾಮದ ಬಳಿ ನಡೆದಿದೆ.
ಟಿ.ನರಸೀಪುರಕ್ಕೆ ತೆರಳುವ ಮುಖ್ಯರಸ್ತೆ ಬದಿಯಲ್ಲಿ ಮೃತದೇಹದ ಮೇಲೆ ಒಕ್ಕಣೆ ಮಾಡಿದ ರಾಗಿ ಸಂಡು ಸುರಿದು ಹೋಗಿದ್ದು. ರಸ್ತೆಬದಿಯಲ್ಲಿ ಮೃತಳ ವೇಲ್ ಸಹ ಇದ್ದು , ಇದಲ್ಲದೆ ಶವದ ಪಕ್ಕ ಎರಡು ಕಲ್ಲುಗಳನ್ನು ಸಹ ಇಟ್ಟಿದ್ದು, ಯಾವರೀತಿ ನಡೆದಿದೆ ಎಂಬ ಸತ್ಯಾಂಶ ಪೊಲೀಸರ ತನಿಖೆಯಿಂದಲೇ ಹೊರಬೀಳಬೇಕಾಗಿದೆ . ಈ ಹಿಂದೆ ಚಿಕ್ಕಬಾಗಿಲು ಗ್ರಾಮದಲ್ಲಿ ವ್ಯಕ್ತಿನೊಬ್ಬನ ತಲೆಕಡಿದು ಪೊಲೀಸ್ ಠಾಣೆ ಗೆ ಬಂದಿದ್ದ ಆರೋಪಿಯ ಗ್ರಾಮದ ಪಕ್ಕದ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದ್ದು, ಬೆಳಕವಾಡಿ ಪೊಲೀಸ ಸಬ್ ಇನ್ಸ್ ಪೆಕ್ಟರ್ ಉಮಾವತಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ