ನೂರಾ ಎಂಟು ಆಂಬುಲೆನ್ಸ್ ವಾಹನವು ನೂರಾ ಎಂಟು ಸಮಸ್ಯೆಗಳಿಂದ ಬಳಲುತ್ತಿದೆ,ನೂರಾ ಎಂಟು ಆಂಬ್ಯುಲೆನ್ಸ್ ವಾಹನದ ನಾಲ್ಕು ಚಕ್ರ ಮತ್ತು ಸ್ಟೆಪ್ನಿ ಸಂಪೂರ್ಣವಾಗಿ ಸವೆದು ಸವೆದು ಚಿಪ್ ಆಗಿವೆ, ಈ ಆಂಬ್ಯುಲೆನ್ಸ್ ವಾಹನವು ಸಂಪೂರ್ಣವಾಗಿ ಹಳೆಯದಾಗಿದ್ದು ಪ್ರತಿನಿತ್ಯ ಈ ವಾಹನವನ್ನು ತಳ್ಳಿಕೊಂಡು ಸ್ಟಾರ್ಟ್ ಮಾಡಬೇಕಾಗಿದೆ,ಕಾರಣ ಈ ಆಂಬುಲೆನ್ಸ್ ವಾಹನಕ್ಕೆ ಬ್ಯಾಟರಿ ಇರುವುದಿಲ್ಲ, ಪಂಕ್ಚರ್ ಆದರೆ ಇರುವ ಟೈರನ್ನು ಬದಲಾಯಿಸಲು ವಾಹನದಲ್ಲಿ ಜಾಕ್ ಮತ್ತು ಬದಲಿ ಟೈರ್ ಕೂಡ ಇರುವುದಿಲ್ಲ, ಪ್ರತಿನಿತ್ಯ ವಾಹನದಲ್ಲಿ ರೋಗಿಗಳನ್ನು ಸಾಗಿಸುವಾಗ ಅಲ್ಲಲ್ಲೇ ರಸ್ತೆ ಮಧ್ಯೆ ಹಲವು ಬಾರಿ ಕೆಟ್ಟು ನಿಂತಿದ ಕಾರಣ ಈ ವಾಹನದ ಇಂಜಿನ್ ತುಂಬಾ ಹಳೆಯದಾಗಿದ್ದು, ಬಸರಾಳು ಹೋಬಳಿ ಕೇಂದ್ರವು ಸುತ್ತಮುತ್ತಲ ಐವತ್ತು ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ ಇಲ್ಲಿ ಕಾರ್ಯ ನಿರ್ವಹಿಸುವ ಈ ಆಂಬ್ಯುಲೆನ್ಸ್ ನಂಬಿಕೊಂಡು ರೋಗಿಗಳು ಹೈರಾಣಾಗಿದ್ದಾರೆ.
ರೋಗಿಗಳನ್ನು ಸಾಗಿಸುವ ವಾಹನವೇ ರೋಗಗ್ರಸ್ಥತವಾಗಿದೆ, ಈ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳಾದ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯರು ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂಸರ್ಕಾರಿ ಅಧಿಕಾರಿಗಳು,ತಮ್ಮ ನಿರ್ಲಕ್ಷ್ಯ ಮನೋ ಭಾವನೆಯನ್ನು ತೊರೆದು ಬಸರಾಳು ಕೇಂದ್ರಕ್ಕೆ ನೂತನ ಆಂಬುಲೆನ್ಸ್ ಒಂದನ್ನು ಒದಗಿಸುವ ಕಡೆ ಗಮನ ಹರಿಸುವರೇಕಾದು ನೋಡೋಣ