ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ ಬಡ ಮಹಿಳೆ ಮನೆಯಲ್ಲೇ ವಿಶ್ರಾಂತಿ ಶಾಲೆಯಿಂದಲು ಸಹ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲಾ.
ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಬಳ್ಳೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಬುಧವಾರ ಸಾಂಬಾರ್ ಕುಕ್ಕರ್ ಸಿಡಿದು ಅಡುಗೆ ತಯಾರಕಿ ಸುಜಾತ(೪೨) ಮೈ ಮೇಲೆ ಬಿದ್ದು ಇವರ ಕೈ, ಎದೆ, ಹೊಟ್ಟೆ, ಕಾಲು ಸಂಪೂರ್ಣ ದೇಹ ಸುಟ್ಟಿದೆ ಅಂದು ಶಾಲೆಯಲ್ಲಿ ಮುಖ್ಯ ಶಿಕ್ಷಕರಿಲ್ಲದ ಕಾರಣ, ಸಹ ಅಡುಗೆ ತಯಾರಕರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಇವರ ಆಸ್ಪತ್ರೆ ಖರ್ಚಿಗೆ ಪರದಾಡುವ ಪರಿಸ್ಥಿತಿ ಇದೆ ಇವರು ಬಡ ರೈತ ಕುಟುಂಬದ ಮಹಿಳೆಯಾಗಿದ್ದು ಚಿಕಿತ್ಸೆ ಪಡೆಯಲು ಇವರ ಬಳಿ ಹಣವಿಲ್ಲಾ ಆದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ.
ಬಡ ಕುಟುಂಬದ ಮಹಿಳೆ ಆದರಿಂದ ಆಸ್ಪತ್ರೆ ಖರ್ಚಿಗೆ ಪರದಾಡುತ್ತಿದ್ದಾರೆ.ಒಮ್ಮೆಯೂ ತಾಲ್ಲೂಕು ಶಿಕ್ಷಣಾದಿಕಾರಿಗಳು ಕೂಡ ಮಹಿಳೆ ನೋಡಲು ತೆರಳಿಲ್ಲ.ಶಾಲೆ ವತಿಯಿಂದ ಯಾವುದೇ ಆಸ್ಪತ್ರೆ ವೆಚ್ಚವನ್ನು ನೀಡಿಲ್ಲ.ಸರ್ಕಾರದಿಂದ ಹಣ ಸಹಾಯದ ನಿರೀಕ್ಷೆಯಲ್ಲಿರುವ ಬಡ ಮಹಿಳೆ.