ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಮ್ಮ ಶಂಕರೇಗೌಡ ಮತ್ತು ಅವರ ಪುತ್ರರಾದ ಮೊಟ್ಟೆಮಂಜು ಅವರು ಒಂದುಲಕ್ಷದ ಒಂದು ಸಾವಿರ ರೂ ಹಣವನ್ನು ವಯಕ್ತಿಕ ದೇಣಿಗೆಯಾಗಿ ನೀಡಿದರು.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಮ್ಮ ಶಂಕರೇಗೌಡ ಮತ್ತು ಅವರ ಪುತ್ರರಾದ ಮೊಟ್ಟೆಮಂಜು ಅವರು ಕೊಡಗು ನೆರೆ ಸಂತ್ರಸ್ತರಿಗೆ ಒಂದುಲಕ್ಷದ ಒಂದು ಸಾವಿರ ರೂ ಹಣವನ್ನು ವಯಕ್ತಿಕ ದೇಣಿಗೆಯಾಗಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ದೇವಮ್ಮ ಅವರು ಗ್ರಾಮದೇವತೆ ಹಬ್ಬವನ್ನು ಮಾಡಲು ಸಂಗ್ರಹಿಸಿ ಇಟ್ಟಿದ್ದ ಒಂದುಲಕ್ಷದ ಒಂದು ಸಾರವಿರ ರೂ ಹಣವನ್ನು ಕೊಡಗು ಸಂತ್ರಸ್ತರ ಪರಿಹಾರ ನಿಧಿಗೆ ತಹಶೀಲ್ದಾರ್ ಲಕ್ಷ್ಮೀಕಾಂತ್ ಅವರಿಗೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಜಾನಕೀರಾಂ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ, ಬಿಇಓ ಎಸ್.ರೇವಣ್ಣ ಮತ್ತಿತರರು ಭಾಗವಹಿಸಿದ್ದರು.