ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲೂಕಿನ ಹೊಸ ಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಮ್ಮ ಕರ್ನಾಟಕ ಜನಸೈನ್ಯ(ರಿ) ವತಿಯಿಂದ ಉಚಿತವಾಗಿ ಮಕ್ಕಳಿಗೆ ನೋಟ್ ಬುಕ್,ಸ್ಕೂಲ್ ಬ್ಯಾಗ್ ಮತ್ತು ಪೆನ್ಸಿಲ್ ಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ರಾಜ್ಯದ್ಯಕ್ಷರಾದ ನರಸಿಮಯ್ಯ ನವರು ಮಾತನಾಡಿ ಹಣದಿಂದ ವಿದ್ಯೆಯನ್ನು ಕೊಳ್ಳಲು ಆಗುವುದಿಲ್ಲ ಬಡ ಮಕ್ಕಳಿಗೆ ಶಿಕ್ಷಣ ಪಡೆಯಲು ತೊಂದರೆ ಇದೆ ಮತ್ತು ಒದುವ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇರುವುದಿಲ್ಲ ಆದರದಿಂದ ನಮ್ಮ ಕೈಲಾದ
ಸಹಾಯ ಮಾಡುತ್ತಿದ್ದೆವೆ ಎಂದರು.
ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜನಸೈನ್ಯ ಸಂಸ್ಥಾಪಕರು ,ರಾಜ್ಯ ಅಧ್ಯಕ್ಷರಾದ ನರಸಿಮಯ್ಯ ,ಮಾಧ್ಯಮ ಘಟಕ ಅಧ್ಯಕ್ಷರೂ ಪ್ರಶಾಂತ್ ಗೌಡ ಮತ್ತು ನೆಲಮಂಗಲ ಅಧ್ಯಕ್ಷರಾದ ನವೀನ ವಾಜರಹಳ್ಳಿ ಉಪಸ್ಥಿತರಿದ್ದರು