ಕುಡಿದು ಕಬ್ಬಿನ ಲಾರಿಯನ್ನು ಚಾಲನೆ ಮಾಡಿ ಎಮ್ಮೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಎಮ್ಮೆ ಸಾವನ್ನಪ್ಪಿದ ಘಟನೆ ಕುಪ್ಪಳ್ಳಿಯಲ್ಲಿ ನಡೆದಿದೆ.
ಮಂಡ್ಯ: ಕೃಷ್ಣರಾಜಪೇಟೆ ತಾಲೂಕಿನ ಕುಪ್ಪಳ್ಳಿ ಕೆರೆ ಬಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ತುಂಬಿಕೊಂಡು ಹೋಗುತ್ತಿದ್ದು ,ಅತಿಯಾಗಿ ಕಬ್ಬನ್ನು ತುಂಬಿಕೊಂಡು ಮತ್ತು ಮದ್ಯಪಾನ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಅಕ್ಕಪಕ್ಕದ ಸಾರ್ವಜನಿಕರು ತಿಳಿಸಿದ್ದಾರೆ .ಮೂಡ್ನಲ್ಲಿ ಗ್ರಾಮದ ಚಾಲಕನಾದ ನಾಗೇಶ್ ಅಲಿಯಾಸ್ (ಬೆಂಕಿ ) ಎಂದು ತಿಳಿದು ಬಂದಿದೆ .
ಲಾರಿ ಮಾಲೀಕರಾದ ಕುರುಬಳ್ಳಿ ಪ್ರತಾಪ್ ಗೆ ಸೇರಿದ ಲಾರಿ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ .