ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಗೂಡ್ಸ್ ಲಾರಿ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ವಾಕಿಂಗ್ ಹೋಗುತ್ತಿದ್ದ ಪಾದಚಾರಿಗೆ ಹಿಂದಿನಿಂದ ಅತೀ ವೇಗವಾಗಿ ಬಂದ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತ ಪಟ್ಟಿದ್ದಾರೆ . ಪಟ್ಟಣದ ಕೋಟೆ ನಿವಾಸಿ ರಾಮಚಂದ್ರ(55) ಮೃತಪಟ್ಟ ದುದೈವಿ . ಸಂಜೆ ವೇಳೆಯಲ್ಲಿ ಮೈಸೂರು ಮಳವಳ್ಳಿ ರಸ್ತೆಯಲ್ಲಿ ಶಾಂತಿಕಾಲೇಜು ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಪಾದಚಾರಿ ರಾಮಚಂದ್ರಗೆ ಡಿಕ್ಕಿಹೊಡೆದುಕೊಂಡು ಗೂಡ್ಸ್ ವಾಹನದೊಂದಿಗೆ ಚಾಲಕ ಪರಾರಿ ಯಾಗಿದ್ದಾನೆ .ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.