ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಜಯಕರ್ನಾಟಕ ಸಂಘಟನೆ ವತಿಯಿಂದ ಸಿಹಿಹಂಚುವ ಮೂಲಕ ಸಂಭ್ರಮಾಚರಣೆ.
ಮಳವಳ್ಳಿ: ಪಟ್ಟಣದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ನಮ್ಮಭಾರತೀಯ ಸೈನಿಕರು ಪ್ರತಿದಾಳಿ ಉಗ್ರರನ್ನು ಮಟ್ಟಹಾಕಿದ್ದಕ್ಕೆ ಸಂಭ್ರಮಾಚರಣೆ ಮಾಡಲಾಯಿತು. ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ದಿ. ಯೋಧಗುರು ರವರ ಭಾವಚಿತ್ರವಿಟ್ಟು ಭಾರತ್ ಮಾತೆಗೆ ಜೈಕಾರ ಹಾಗೂ ಪ್ರದಾನಿ ಮೋದಿ ರವರ ದಿಟ್ಟ ನಿರ್ದಾರಕ್ಕೆ ಸಲಾಮ್ ಹೊಡೆದರು . ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೆಹಬೂಬ್ ಪಾಷ ಮಾತನಾಡಿ, ದೇಶದ 125 ಕೋಟಿ ಜನರು ಒಗ್ಗಾಟಿನ ದೇಶವನ್ನು ಉಳಿಸಿಕೊಳ್ಳುತ್ತೇವೆ. ಪಾಕಿಸ್ತಾನ ನಮ್ಮದೇಶವನ್ನು ಕೆಣಕಿದರೆ ಪಾಕಿಸ್ತಾನವನ್ನು ಸಂಪೂರ್ಣ ನಾಶ ಪಡಿಸುವುದಾಗಿ ಎಚ್ಚರಿಸಿದರು . ಇನ್ನೂ ತಾಲ್ಲೂಕು ಅಧ್ಯಕ್ಷ ರಮೇಶ, ಮಾತನಾಡಿ, ದೇಶ ವನ್ನು ಕಾಯುತ್ತಿರುವ ನಮ್ಮ ಯೋದರಿಗೆ ನಮ್ಮಸಲಾಮ್ ಪಾಕಿಸ್ತಾನದ ಉಗ್ರರ ಯಾವುದೇ ಮುನ್ಸೂಚನೆ ನೀಡದೆ ನಮ್ಮ ಯೋದರನ್ನು ಬಲಿ ತೆಗೆದುಕೊಂಡು ಇದಕ್ಕೆ ಪ್ರತಿಕಾರವಾಗಿ ನಮ್ಮಯೋದರು 450 ಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಿದ್ದಾರೆ. ಇದಲ್ಲದೆ ನಮ್ಮ ಪ್ರದಾನ ಮಂತ್ರಿ ನರೇಂದ್ರಮೋದಿರವರ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಹಿಹಂಚುವ ಮೂಲಕ ಸಂಭ್ರಮ ಪಟ್ಟರು .
ಈ ಸಂಧರ್ಬದಲ್ಲಿ ಉಪಾಧ್ಯಕ್ಷ ರಾದ ಕಲ್ಲೇಶ್, ವೆಂಕಟೇಶ್, ಚಂದ್ರಶೇಖರ್, ತಾಲ್ಲೂಕು ಕಾರ್ಯದರ್ಶಿ ಗುರುಸಿದ್ದಯ್ಯ, ಪ್ರಧಾನಕಾರ್ಯದರ್ಶಿ,ತೇಜೇಂದ್ರಕುಮಾರ್, ಪ್ರಸನ್ನ, ಪ್ರದೀಪ್ , ತಾಲ್ಲೂಕು ಯುವಜೆಡಿಎಸ್ ಅಧ್ಯಕ್ಷ ಶ್ರೀಧರ್, ರಾಜು ಸಂಚಾಲಕ ಶಶಿ, ಮುಹಿನ್ ಶರೀಷ್ , ಆಟೋಘಟಕದ ಎಲ್ಲಾ ಸದಸ್ಯರು ಹಾಜರಿದ್ದರು.