ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರೋಧಿಸಿ ರೈತ ಮಹಿಳಾ,ಕೂಲಿಕಾರ ,ಕಾರ್ಮಿಕರ ಜಾಥ ನಡೆಸಲಾಯಿತು.

ಮಳವಳ್ಳಿಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರೋಧಿಸಿ ರೈತ ಮಹಿಳಾ,ಕೂಲಿಕಾರ ,ಕಾರ್ಮಿಕರ ಜಾಥ ನಡೆಸಲಾಯಿತು.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ವಿರೋಧಿಸಿ  ಕರ್ನಾಟಕ ಪ್ರಾಂತ ರೈತ ಸಂಘ, ಎಐಡಿಟ್ಯೂ ಎ , ಸಿಐಟಿಯು, ಡಿವೈಎಫ್ ಐ , ಎಸ್ಎಫ್ ಐ ಸಂಘಟನೆಗಳ ವತಿಯಿಂದ ರೈತ, ಮಹಿಳಾ ,ಕೂಲಿಕಾರ, ಕಾರ್ಮಿಕರ ಜಾಥ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ ಉದ್ಘಾಟಿಸಿ ಮಾತನಾಡಿ , ರೈತ ವಿರೋದಿಗಳಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಜಾಗೃತಿ ಮೂಡಿಸಲು ಆಗಸ್ಟ್ 9 ರಂದು ಜೈಲ್ ಭರೋ ಚಳುವಳಿ ಅಂಗವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ವಿನ ಜಾಥ ನಡೆಸಲಾಗುವುದು , ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿದ ಸರ್ಕಾರಗಳ ವಿರುದ್ಧ  ರೈತ, ಕಾರ್ಮಿಕರು , ಕೂಲಿಕಾರರು ,  ಹೋರಾಟ ಮಾಡುತ್ತಿದ್ದು, ಸೆ 5 ರಂದು  ಪಾರ್ಲಿಮೆಂಟ್ ಚಲೋ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಎಲ್ಲಾ ರೈತರು ಜೊತೆಗೂಡಿ ಬೃಹತ್ ಚಲೋ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಕಾರ್ಯಕ್ರಮ ದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್, ಸುನೀತಾ, ಮಂಜುಳ, ಗುರುಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು.

 

Share this article

About Author

Madhu
Leave a comment

Write your comments

Visitors Counter

285274
Today
Yesterday
This Week
This Month
Last Month
All days
259
219
1647
4716
3051
285274

Your IP: 18.216.147.211
2025-05-09 13:26

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles