ಹುತಾತ್ಮ ಯೋಧರ ಪುಣ್ಯ ಸ್ಮರಣೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ.
ಮಳವಳ್ಳಿ: ಇತ್ತೀಚಿಗೆ ಜಮ್ಮು ಕಾಶ್ಮೀರದ ಬಳಿ 48 ಯೋಧ ಹುತಾತ್ಮ ರಲ್ಲಿ ಮಂಡ್ಯ ಜಿಲ್ಲೆ ಯ ಗುಡಿಗೆರೆ ಗ್ರಾಮದ ಹೆಚ್ ಗುರು ರವರ 11 ದಿನದ ಕಾರ್ಯವನ್ನು ಮಡಿವಾಳ ಜನಾಂಗದವತಿಯಿಂದ ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತ ದಲ್ಲಿ ನಡೆಸಲಾಯಿತು .ಗುರು ರವರು ಆತ್ಮಕ್ಕೆ ಶಾಂತಿಕೋರಿ ಮೌನ ಅಚರಣೆ ಮಾಡಿ ನಂತರ ಸಾರ್ವಜನಿಕ ರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಮಡಿವಾಳ ಜನಾಂಗ ಸಂಘದ ಅಧ್ಯಕ್ಷ ಪ್ರಸನ್ನ ಮಾತನಾಡಿ , ನಮ್ಮ ಜಿಲ್ಲೆಯವರು ದೇಶ ಕ್ಕಾಗಿ ಪ್ರಾಣತ್ಯಾಗ ಮಾಡಿದ್ದು , ಜಿಲ್ಲೆಯ ಪ್ರತಿಯೊಬ್ಬರು ಇವರಂತೆ ಆದರ್ಶವನ್ನು ರೂಡಿಸಿಕೊಳ್ಳುವಂತೆ ಕರೆ ನೀಡಿದರು . ಇದೇ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಸಿಹಿ ಹಂಚುವ ಜೊತೆಗೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು .
ಕಾರ್ಯಕ್ರಮ ದಲ್ಲಿ ಪುರಸಭೆ ಸದಸ್ಯ ಕೃಷ್ಣ,, ಸಿದ್ದಾಪ್ಪಾಜಿ, ಶಿವಶಂಕರ, ಮರಿಸ್ವಾಮಿ, ಶಿವಲಿಂಗು ಸೇರಿದಂತೆ ಮತ್ತಿತ್ತರು ಇದ್ದರು.