ಮಳವಳ್ಳಿಯ ಹೆಬ್ಬಕವಾಡಿ ಸುತ್ತಕಟ್ಟೆಯಲ್ಲಿ ಚಿರತೆ ಶವ ಪತ್ತೆ.ಈ ಚಿರತೆ ಶವ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಹಾದು ಬರುವ ಕೆ.ಆರ್.ಎಸ್ ನ ನೀರಿನ ವಿಸಿ ನಾಲೆಯಲ್ಲಿ ಚಿರತೆ ಶವ ಹರಿದು ಬಂದಿದ್ದು. ಇದನ್ನು ನೋಡಲು ಸಾರ್ವಜನಿಕರು ಮುಗಿಬಿದ್ದ ದೃಶ್ಯ ಕಂಡುಬಂತು. ಈಗಾಗಲೇ ಕೊಡುಗು ಜಿಲ್ಲೆ ಮಳೆರಾಯ ಆರ್ಭಟ ಹೆಚ್ಚಾಗಿದ ಹಿನ್ನೆಲೆಯಲ್ಲಿ ಹಲವು ಅನುಮಾನ ಮೂಡಿದ್ದು, ಈ ಚಿರತೆ ಶವ ಎಲ್ಲಿಂದ ಬಂತು ಎಂಬುದು ನಿಗೂಢವಾಗಿದೆ. ಒಟ್ಟಿನಲ್ಲಿ ಒಂದು ಕಾಡುಪ್ರಾಣಿ ಬಲಿಯನ್ನು ಕಾವೇರಿ ನೀರು ತೆಗೆದುಕೊಂಡಿತೆ ಅಥವಾ ಜನರೇ ಸಾಯಿಸಿ ಹಾಕಿದರೆ ಇಲ್ಲ ನೀರು ಕುಡಿಯಲು ಬಂದು ಆಯತಪ್ಪಿ ನಾಲೆಗೆ ಬಿತ್ತೆ ಎಂಬ ಪ್ರಶ್ನೆಗೆ ಚಿರತೆ ಮರಣೋತ್ತರ ಪರೀಕ್ಷೆ ಯಿಂದಲೇ ತಿಳಿದುಬರಬೇಕಾಗಿದೆ.