ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿರವರು ಚಾಲನೆ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮ ಸೇರಿದಂತೆ ಹಲವು ಹಳ್ಳಿಗಳ ಸಾರಿಗೆ ಸಂಪರ್ಕಕ್ಕೆ ಶಾಸಕ ಡಾ.ಕೆ ಅನ್ನದಾನಿ ರವರು ಚಾಲನೆ ನೀಡಿ. ನಂತರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ರವರು ನೇತೃತ್ವದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ , ಈಗಾಗಲೇ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರವರ ಜೊತೆ ಚರ್ಚೆ ನಡೆಸಿದ್ದು, ಮಳವಳ್ಳಿ ತಾಲ್ಲೂಕು ಹಿಂದುಳಿದ ತಾಲ್ಲೂಕು ಆದುದ್ದರಿಂದ ಪ್ರತಿ ಹಳ್ಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತವಾಗಿ ಇಂದು ದುಗ್ಗನಹಳ್ಳಿ , ಹಂಚಿಪುರ, ಕೋರೆಗಾಲ, ಮಾರ್ಗವಾಗಿ ಬರಲಿದೆ, ನಂತರ ಹಂತ ಹಂತವಾಗಿ ಕಲ್ಪಿಸಲಾಗುವುದು. ಸಾರಿಗೆ ಬಸ್ ಎಂದರೆ ನಮ್ಮ ಬಸ್ ಎಂದು ಸಾರ್ವಜನಿಕರು ತಿಳಿದುಕೊಂಡು ಸಾರಿಗೆ ಈಗಾಗಲೇ 500 ಕೋಟಿ ನಷ್ಠದಲ್ಲಿದ್ದು ಸಾರ್ವಜನಿಕರು ಸಹ ಸಾರಿಗೆ ಇಲಾಖೆಗೆ ಆದಾಯ ಬರುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಶಾಂತಕುಮಾರ್, ದುಗ್ಗನಹಳ್ಳಿನಾಗರಾಜು, ಹನುಮಂತ, ಸೇರಿದಂತೆ ಮತ್ತಿತ್ತರರು ಇದ್ದರು