ಅಸಿಡಿಟಿ ಇಂದ ನಿಮ್ಮ ಹೊಟ್ಟೆ ಬೆಂಕಿತರ ಉರಿಯುತ್ತಿದೆಯೆ ಇಲ್ಲಿ ಸುಲಭವಾದ ಪರಿಹಾರ

ಅಸಿಡಿಟಿ ಜಾಸ್ತಿ ಆಗಿ ಎದೆ ಬೆಂಕಿಯ ತರ  ಉರೀತಿದೆ ಅನ್ನೋರು ಈ ಮನೆಮದ್ದನ್ನು ಬಳಸಿ ಪರಿಹಾರ ಕಂಡ್ಕೊಳ್ಳಿ 

ಬಾದಾಮಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಗಿನ ಜಾವ ತಿಂಡಿಗೆ ಮುಂಚೆ ತಿನ್ನಬೇಕು ಹೀಗೆ ಎರಡರಿಂದ ಮೂರು ಬೀಜ ತಿಂದರೆ ಆಸಿಡಿಟಿ ಯಿಂದ ಮುಕ್ತಿ ಹೊಂದಬಹುದು.

 ಸಣ್ಣ ಹೋಳು ನಿಂಬೆಹಣ್ಣು ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಊಟಕ್ಕೆ ಮುಂಚೆ ಸೇವನೆ ಮಾಡಿ.

ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಅದರ ರಸವನ್ನು ಸೇವಿಸಿ.

ಎಲೆಕೋಸನ್ನು ಸಣ್ಣದಾಗಿ ಕತ್ತರಿಸಿ ಪಲ್ಯ ಮಾಡಿಕೊಂಡು ಸೇವಿಸಿ ಅಥವಾ ಚೆನ್ನಾಗಿ ರುಬ್ಬಿಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಸಹ ಸೇವಿಸಬಹುದು.

 ಊಟದ ನಂತರ ಸಣ್ಣ ತುಂಡು ಬೆಲ್ಲವನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ ಇದು ಸಹ ಅಸಿಡಿಟಿಯನ್ನು ನಿಯಂತ್ರಿಸಿ ಎದೆಉರಿಯನ್ನು ತಪ್ಪಿಸುತ್ತದೆ .

ಕೊತ್ತಂಬರಿ ಬೀಜ – 5 ಚಮಚ , ಮೆಂತ್ಯ 1 ಚಮಚ , ಲವಂಗದ ಎಲೆ 1 ದೊಡ್ಡ , ಜೀರಿಗೆ – ½ ಚಮಚ, ಸಾಸಿವೆ – ½ ಚಮಚ , ದಾಲ್ಚಿನ್ನಿ 1- ಅರ್ಧ ಅಂಗುಲ ಕಡ್ಡಿ , ಲವಂಗ – 5 , ಅರಿಶಿನ – 2 ಚಮಚ , ಅರಿಶಿನವನ್ನು ಬಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಪುಡಿ ಮಾಡಿಕೊಳ್ಳಬೇಕು ಇದನ್ನು ಸ್ವಲ್ಪ ಉಪ್ಪು ಸೇರಿಸಿ ನೀರಿನೊಂದಿಗೆ ಅಥವಾ ಹಣ್ಣುಗಳ ಮೇಲೆ ಬೆರೆಸಿ ತಿನ್ನಬಹುದು.

ಒಂದು ಲೋಟ ನೀರಿಗೆ ಅರ್ಧ ಚಮಚ ವಿನೆಗರನ್ನು ಊಟ ಆದ ನಂತರ ಸೇವಿಸಿ.

ಆಗಾಗ ಎಳನೀರನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.

ಎರಡು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುಡಿಸಿ ಈ ನೀರನ್ನು ಕುಡಿಯುತ್ತಾ ಬನ್ನಿ ಇದು ಸಹ ಅಸಿಡಿಟಿಯನ್ನು ತಪ್ಪಿಸುತ್ತದೆ.

 

Last modified on 19/07/2018

Share this article

About Author

Super User
Leave a comment

Write your comments

Visitors Counter

289880
Today
Yesterday
This Week
This Month
Last Month
All days
136
166
1412
9322
3051
289880

Your IP: 216.73.216.52
2025-05-22 08:32

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles