ಬಾದಾಮಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಗಿನ ಜಾವ ತಿಂಡಿಗೆ ಮುಂಚೆ ತಿನ್ನಬೇಕು ಹೀಗೆ ಎರಡರಿಂದ ಮೂರು ಬೀಜ ತಿಂದರೆ ಆಸಿಡಿಟಿ ಯಿಂದ ಮುಕ್ತಿ ಹೊಂದಬಹುದು.
ಸಣ್ಣ ಹೋಳು ನಿಂಬೆಹಣ್ಣು ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಊಟಕ್ಕೆ ಮುಂಚೆ ಸೇವನೆ ಮಾಡಿ.
ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಅದರ ರಸವನ್ನು ಸೇವಿಸಿ.
ಎಲೆಕೋಸನ್ನು ಸಣ್ಣದಾಗಿ ಕತ್ತರಿಸಿ ಪಲ್ಯ ಮಾಡಿಕೊಂಡು ಸೇವಿಸಿ ಅಥವಾ ಚೆನ್ನಾಗಿ ರುಬ್ಬಿಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಸಹ ಸೇವಿಸಬಹುದು.
ಊಟದ ನಂತರ ಸಣ್ಣ ತುಂಡು ಬೆಲ್ಲವನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಿ ಇದು ಸಹ ಅಸಿಡಿಟಿಯನ್ನು ನಿಯಂತ್ರಿಸಿ ಎದೆಉರಿಯನ್ನು ತಪ್ಪಿಸುತ್ತದೆ .
ಕೊತ್ತಂಬರಿ ಬೀಜ – 5 ಚಮಚ , ಮೆಂತ್ಯ 1 ಚಮಚ , ಲವಂಗದ ಎಲೆ 1 ದೊಡ್ಡ , ಜೀರಿಗೆ – ½ ಚಮಚ, ಸಾಸಿವೆ – ½ ಚಮಚ , ದಾಲ್ಚಿನ್ನಿ 1- ಅರ್ಧ ಅಂಗುಲ ಕಡ್ಡಿ , ಲವಂಗ – 5 , ಅರಿಶಿನ – 2 ಚಮಚ , ಅರಿಶಿನವನ್ನು ಬಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಪುಡಿ ಮಾಡಿಕೊಳ್ಳಬೇಕು ಇದನ್ನು ಸ್ವಲ್ಪ ಉಪ್ಪು ಸೇರಿಸಿ ನೀರಿನೊಂದಿಗೆ ಅಥವಾ ಹಣ್ಣುಗಳ ಮೇಲೆ ಬೆರೆಸಿ ತಿನ್ನಬಹುದು.
ಒಂದು ಲೋಟ ನೀರಿಗೆ ಅರ್ಧ ಚಮಚ ವಿನೆಗರನ್ನು ಊಟ ಆದ ನಂತರ ಸೇವಿಸಿ.
ಆಗಾಗ ಎಳನೀರನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ.
ಎರಡು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುಡಿಸಿ ಈ ನೀರನ್ನು ಕುಡಿಯುತ್ತಾ ಬನ್ನಿ ಇದು ಸಹ ಅಸಿಡಿಟಿಯನ್ನು ತಪ್ಪಿಸುತ್ತದೆ.
Last modified on 19/07/2018