ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿ . ಮಳವಳ್ಳಿ ಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ

ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿ . ಮಳವಳ್ಳಿ ಯಲ್ಲಿ ಕಾರ್ಯಕರ್ತರ ಪಟಾಕಿ ಸಿಡಿಸಿ ಸಂಭ್ರಮ .

ಮಳವಳ್ಳಿ:  ಜೆಡಿಎಸ್ ನ 9 ಶಾಸಕರಿಗೆ ನಿಗಮ ಮಂಡಳಿಗಳಿಗೆ  ನೇಮಕ ಮಾಡಿದ ಹಿನ್ನೆಲೆ. ಮಳವಳ್ಳಿ ಕ್ಷೇತ್ರದ ಶಾಸಕ‌ ಡಾ.ಕೆ ಅನ್ನದಾನಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾದ  ಹಿನ್ನಲೆಯಲ್ಲಿ ಮಳವಳ್ಳಿ ಪಟ್ಟಣದ ಅನಂತಾ ರಾಂ ವೃತ್ತ ದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಇದೇ ಸಂದರ್ಭದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರನ್ನು ಕಾರ್ಯಕರ್ತರು ಹಾರ ಹಾಕಿ ಸಿಹಿ ತಿನ್ನಿಸುವ ಮೂಲಕ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಶಾಸಕ ಡಾ. ಕೆ ಅನ್ನದಾನಿ ಮಾತನಾಡಿ, ಮಾಧ್ಯಮ ಮೂಲಕ  ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ರಾಗಿ ನೇಮಕ ವಾಗಿರುವ ಬಗ್ಗೆ  ತಿಳಿದಿದ್ದು ,ಈ ಕ್ಷೇತ್ರ ಸಾಕಷ್ಟು ಹಿಂದುಳಿದ ತಾಲ್ಲೂಕಾಗಿದೆ ಇದಲ್ಲದೆ ನೀರಾವರಿಯಲ್ಲೂ  ಸಾಕಷ್ಟು ಹಿಂದುಳಿದ್ದಿದ್ದು. ಈ ಹಿನ್ನಲೆಯಲ್ಲಿ ನಾಳೆ ಜಿಲ್ಲೆಯಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ದಲ್ಲಿ ಜಿಲ್ಲೆಗೆ ಹೆಚ್ಚು ಅದರಲ್ಲೂ ಮಳವಳ್ಳಿ ಕ್ಷೇತ್ರಕ್ಕೆ ನೀಡಿದ್ದು, ಮುಖ್ಯಮಂತ್ರಿ ಗೆ ಅಭಿನಂದನೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ  ಹಿಂದುಳಿದ ತಾಲ್ಲೂಕುಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.

ಉಳಿದ ಜೆಡಿಎಸ್ ಶಾಸಕರು:  ಶಿವಲಿಂಗೇಗೌಡ - ಗೃಹಮಂಡಳಿ ,ಸತ್ಯನಾರಾಯಣ-ರಾಜ್ಯ ರಸ್ತೆಸಾರಿಗೆ ನಿಗಮ ,ಗೌರಿಶಂಕರ್-ಎಂಎಸ್ಐಎಲ್ ,ನಾಗನಗೌಡ- ಕೊಳಗೇರಿ ಮಂಡಳಿ ,ವೆಂಕಟಪ್ಪನಾಯಕ - ಪ್ರವಾಸೋದ್ಯಮ ಮಹದೇವ್ - ಕೈಗಾರಿಕಾ ನಿಗಮ ,ಅನ್ನದಾನಿ - ಅರಸು ಅಭಿವೃದ್ಧಿ ನಿಗಮ ,ಜಪ್ರೂಲ್ ಖಾನ್ - ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ,ನಿಸರ್ಗ ನಾರಾಯಣಸ್ವಾಮಿ - ವಿಮಾನ ನಿಲ್ದಾಣ ಪ್ರಾಧಿಕಾರ

 

 

Share this article

About Author

Madhu
Leave a comment

Write your comments

Visitors Counter

336086
Today
Yesterday
This Week
This Month
Last Month
All days
511
951
2205
1976
14750
336086

Your IP: 216.73.216.24
2025-09-03 10:38

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles