ಮೈಸೂರು ದಸರ ನೆನಪಿಸುವ ರೀತಿ ಮಳವಳ್ಳಿ ಪಟ್ಟಣದ ನಾಡಹಬ್ಬವಾದ ಸಿಡಿಹಬ್ಬದ ಸಂಭ್ರಮ.

ಮಳವಳ್ಳಿ ನಾಡಹಬ್ಬ ಸಿಡಿಹಬ್ಬ ಮೈಸೂರು ದಸರ ನೆನಪಿಸುವ ರೀತಿ ಸಡಗರ ಸಂಭ್ರಮದಿಂದ ನಡೆಯಿತು.

ಮಳವಳ್ಳಿ: ಮಳವಳ್ಳಿ ಪಟ್ಟಣದ ನಾಡಹಬ್ಬವಾದ ಸಿಡಿಹಬ್ಬ ಅದ್ದೂರಿ ಹಾಗೂ ಸಡಗರದಿಂದ ಮೈಸೂರು ದಸರ ನೆನಪಿಸುವ ರೀತಿ ನಡೆಯಿತು. ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ನಡೆದ ಸಿಡಿಹಬ್ಬವೂ ಪಟ್ಟಣದ ಎಲ್ಲಾ ಮುಖ್ಯರಸ್ತೆ ವಿದ್ಯುತ್ ಅಲಂಕಾರ ಮಾಡಿದ್ದು  ನೋಡಲು ಮೈಸೂರು ದಸರಾ ನಡೆಯುತ್ತಿದೆಯೋ ಏನೋ ಎನ್ನುವ ರೀತಿ  ಪಟ್ಟಣ ಕಂಗಲಿಸುತ್ತಿತ್ತು. ಇನ್ನೂ  ಶುಕ್ರವಾರ. ಮಧ್ಯಾಹ್ನ. 2ಗಂಟೆ ಗೆ ತಮ್ಮಡಹಳ್ಳಿ ಗ್ರಾಮ ನಾಡಗೌಡ ಮನೆತನದಿಂದ ಸಿಡಿಹಬ್ಬ ದ ಕೊಂಡಕ್ಕೆ ಮೊದಲ ಸೌದೆ ಕೊಡುವ ಪದ್ದತಿ ಈಗಲೂ ರೂಡಿಯಲ್ಲಿದ್ದು  ಅವರು ಜೋಡಿಎತ್ತುಗಳಲ್ಲಿ ನೋಗ ಕಟ್ಟಿಕೊಂಡು ಅದಕ್ಕೆ ಸೌದೆ ಕಟ್ಟಿ ಪೂಜೆ ಸಲ್ಲಿಸಿ ನಂತರ ಅವರ ಹಿಂದೆ ನೂರಾರು ಜೋಡಿ ಎತ್ತುಗಳಲ್ಲಿ  ತಮ್ಮಡಹಳ್ಳಿ ಯಿಂದ ಅಂಚೆದೊಡ್ಡಿ, ಕ್ಯಾತೇಗೌಡನದೊಡ್ಡಿ, ಮೂಲಕ  ಪೇಟೆ ಬೀದಿಗೆ ತಲುಪಿ ಅಲ್ಲಿ ಸೌದೆ ಒತ್ತು ತಂದು ಜೋಡಿ ಎತ್ತುಗಳಿಗೆ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸುತ್ತಾರೆ ಅಲ್ಲಿಗೆ ಎಲ್ಲಾ ಕೋಮಿನ ಮುಖಂಡರು ಗಳು ಬಂದು ಡೋಳ್ಳು ವಾದ್ಯ ದೊಂದಿಗೆ  ಮೆರವಣಿಗೆ ಮೂಲಕ‌ ಪಟ್ಟಲದಮ್ಮ ದೇವಸ್ಥಾನಕ್ಕೆ ತಲುಪಿ ಅಲ್ಲಿ ಕೊಂಡಕ್ಕೆ ಸಿದ್ದಪಡಿಸಿದ ಹಳ್ಳಕ್ಕೆ ಹಾಕಲಾಗುವುದು.

ನಂತರ ಪೇಟೆ ಬೀದಿಯ ಒಕ್ಕಲಿಗ ಜನಾಂಗದವದರು ರಾತ್ರಿ 8 ಗಂಟೆಗೆ ಮಹಿಳೆಯರು ದಬ್ಬಿಟ್ಟು ಆರತಿಯೊಂದಿಗೆ ಹಾಗೂ ಹರಕೆ ಹೊತ್ತ ಮಹಿಳೆಯರು ಬಾಯಿಬೀಗವನ್ನು ಹಾಕಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದೇ ರೀತಿ ಕ್ರಮವಾಗಿ  ಸಿದ್ದಾರ್ಥನಗರದ ಜನರು  ನಂತರ ಕೀರ್ತಿ ನಗರ , ಗಂಗಾಮಂತ ಜನಾಂಗದವರು, ಅನಂತರ ಆಶೋಕನಗರ ಕೊನೆಗೆ ಬಸವಲಿಂಗಪ್ಪನಗರ  ಜನಾಂಗದವರು  ಸರದಿಯಂತೆ  ಮೆರವಣಿಗೆ ಮೂಲಕ ಪೂಜೆಸಲ್ಲಿಸಿದರು. ಈ ಮಧ್ಯೆ ಗಂಗಾಮತ ಜನಾಂಗದವರು ತೆರಳುವಾಗ ಮನುಷ್ಯನ ಪ್ರತಿಬಿಂಬ ಗೊಂಬೆಯನ್ನು ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಕೋಟೆಯ ಪಟೇಲ್ ಚಿಣ್ಣೇಗೌಡ ಮನೆಯಮುಂದೆ ನಿಂತಿರುವ  108 ಅಡಿಯ ಒಂದೇ ಮರ ಅದು ತಾಮರಸಮರ ಎಂಬ ಜಾತಿ ಮರಕ್ಕೆ ಸಿಡಿರಣ್ಣ ನನ್ನು ಬಲೂನ್ ನಿಂದ ಸಿಂಗರಸಿ  ಅದು ಕೋಟೆಯ ಬೀದಿಗಳಲ್ಲಿ ಸಂಚಾರ ಮಾಡಿ ನಂತರ ಪೇಟೆ ಹಾಗೂ ಗಂಗಾ ಮತ ಬೀದಿಯ ಮೂಲಕ.  ಸಿಡಿ ಹೊತ್ತ ರಥ ಪಟ್ಟಲದಮ್ಮ ದೇವಸ್ಥಾನದ ಬಳಿ ಬರುತ್ತಿದ್ದಂತೆ  ಹರಕೆ ಹೊತ್ತ ಭಕ್ತರು ಕೊಂಡವನ್ನು ಹಾಯ್ದ ಹರಕೆ ತಿರಿಸಿದರು. 

ಈ ಸಂದರ್ಭದಲ್ಲಿ ಶಾಸಕ ಡಾ.ಅನ್ನದಾನಿ , ತಹಸೀಲ್ದಾರ್ ಚಂದ್ರಮೌಳಿ  ಸೇರಿದಂತೆ ಅನೇಕ ಮುಖಂಡರು ಇದ್ದರು.

 

Share this article

About Author

Madhu
Leave a comment

Write your comments

Visitors Counter

336285
Today
Yesterday
This Week
This Month
Last Month
All days
710
951
2404
2175
14750
336285

Your IP: 216.73.216.24
2025-09-03 14:14

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles