15 ವರ್ಷದಲ್ಲಿ ರಾಜ್ಯವೂ ಜಗತ್ತಿನಲ್ಲೇ ಮದ್ಯಪಾನದಲ್ಲಿ ಪ್ರಥಮಸ್ಥಾನಕ್ಕೆ ಬರಲಿದೆ.ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ,

ಮುಂದಿನ 15 ವರ್ಷದಲ್ಲಿ ಈ ರಾಜ್ಯವೂ ಜಗತ್ತಿನಲ್ಲೇ ಮದ್ಯಪಾನದಲ್ಲಿ ಪ್ರಥಮಸ್ಥಾನಕ್ಕೆ ಬರಲಿದೆ ಎಂದು ವಿಷಾದ ವ್ಯಕ್ತಪಡಿಸಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ .    

ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ  ವೀರಶೈವ ರು ಹಾಗೂ ಸರ್ವಜನಾಂಗದವರು ಸಮಿತಿ ವತಿಯಿಂದ ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ .ತ್ರಿವಿಧ ದಾಸೋಹಿ ಲಿಂಗೈಕ  ಪರಜಪೂಜ್ಯ ಡಾ.ಶಿವಕುಮಾರಸ್ವಾಮಿಜೀರವರ ಪುಣ್ಯಸ್ಮರಣೆ  ಕಾರ್ಯಕ್ರಮವನ್ನು ಕನಕಪುರ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ.ಶ್ರೀಗಳ ಇನ್ನೂ ನಮ್ಮ ಮನಸ್ಸಿನಲ್ಲಿ ಇದ್ದು ಅವರು ಅಮರರಾಗಿರುತ್ತಾರೆ. ಶ್ರೀಗಳ ಜೊತೆಗೆ ಯೋದ ಗುರು ರವರ ನೆನಪು ಮಾಡಿಕೊಳ್ಳುತ್ತಿರುವುದು ಮಳವಳ್ಳಿ ಜನರ ದೊಡ್ಡಗುಣವನ್ನು ತೋರಿಸುತ್ತದೆ.  ಅದರಲ್ಲೂ ಎಲ್ಲಾ ಸಮಾಜ ಮುಖಂಡರಗಳನ್ನು ಒಂದೇ ವೇದಿಕೆಯಲ್ಲಿ  ಸೇರಿಸಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಮುಡುಕನಪುರ ಮಠ ಷಡಕ್ಷರ ಮಹಾಸ್ವಾಮೀಜಿ ನಡೆದಾಡುವ ದೇವರು  ಶ್ರೀಗಳ ಮೇಲೆ  ಗೌರವವಿದ್ದರೆ ರಾಜ್ಯದಲ್ಲಿ ಮದ್ಯಪಾನ ರದ್ದು ಪಡಿಸಿ ಎಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿಕೊಂಡರು .ಈಗ ರಾಜ್ಯದಲ್ಲಿ ಮದ್ಯಪಾನ ವನ್ನು ಮಾಡುವವರು ಕೇವಲ  ಶೇ 30 ರಷ್ಟು ಇದ್ದರೂ ಮುಂದಿನ ದಿನಗಳಲ್ಲಿ ಶೇ 70 ರಷ್ಠು  ಮಂದಿ  ಮದ್ಯಪಾನಗಳಾಗುವ ಸಾಧ್ಯತೆವಿದೆ ರಾಜ್ಯಸರ್ಕಾರಕ್ಕೆ ಮದ್ಯಪಾನ ದಿಂದ ಆದಾಯ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇದರಿಂದ ಜನರ ಮೇಲೆ ಯಾವರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು  ಸರ್ಕಾರ  ಅರ್ಥ ಮಾಡಿಕೊಳ್ಳಬೇಕು.    ಮದ್ಯಪಾನ ಮುಕ್ತ ಮಾಡಲು ಮಳವಳ್ಳಿ ಯಿಂದ ಹೋರಾಟ ನಡೆಸುವಂತೆ ಕರೆ ನೀಡಿದರು.       

ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾಸೋಹ  ಹಾಗೂ  ಇದೇ ಸಂದರ್ಭದಲ್ಲಿ ಸಾಲು ಮರನಾಗರಾಜು ರವರ ನೇತೃತ್ವದಲ್ಲಿ   ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ 111  ಸಸಿಗಳನ್ನು  ವೇದಿಕೆಯಲ್ಲಿದ್ದ ಗಣ್ಯರ ಮೂಲಕ ವಿತರಿಸಿದರು. ವೇದಿಕೆಯಲ್ಲಿ ಹಿಂದೂ .ಮುಸ್ಲಿಂ.ಕೈಸ್ತ ಜನಾಂಗದ ಗುರುಗಳು  ಸೇರಿದಂತೆ  ತಾಲ್ಲೂಕಿನ ಮಠಾದೀಶರು ಇದ್ದರು.

 

Share this article

About Author

Madhu
Leave a comment

Write your comments

Visitors Counter

336186
Today
Yesterday
This Week
This Month
Last Month
All days
611
951
2305
2076
14750
336186

Your IP: 216.73.216.24
2025-09-03 12:18

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles