ವೃದನ ಮೇಲೆ ಚಿರತೆ ದಾಳಿ ಗಂಭೀರ ಗಾಯ.ಅಧಿಕಾರಿಗಳು ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.

ಸಂತೇಬಾಚಹಳ್ಳಿ ಹೋಬಳಿಯ ಸೊಮೇನಹಳ್ಳಿ ಗ್ರಾಮದಲ್ಲಿ ವೃದನ ಮೇಲೆ ಚಿರತೆ ದಾಳಿ ಗಂಭೀರ ಗಾಯ.ಅರಣ್ಯ ಇಲಾಖೆಯ ಅಧಿಕಾರಿಗಳು ವಿರುದ್ಧ ಕಿಡಿಕಾರಿದ ಗ್ರಾಮಸ್ಥರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ಸೋಮೇನಹಳ್ಳಿ ಗ್ರಾಮದ ಶಿವಣ್ಣ (೬೨) ಎಂಬ ವೃದನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗಾಳಾಗಿದ್ಧು ತುಂಬ ರಕ್ತಸ್ರಾವ ವಾಗಿದ್ದು ತಾಲ್ಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ .ರವಿ ಮತ್ತು ಶಿವಣ್ಣ ಎಂಬ ಇಬ್ಬರೂ ರೈತರು ತಮ್ಮ ಜಮೀನಲ್ಲಿ ಮೇಕೆ ಮೆಯುಸುತ್ತಿದ್ದಾಗ ಮೇಕೆಗಳ ಮೇಲೆ ಎರಡು ಚಿರತೆಗಳು ದಾಳಿಮಾಡಿದ್ದು ರವಿ ತಕ್ಷಣ ಮಚ್ಚಿನಿಂದ ಹೊಡೆಯಲು ಹೋದಾಗ ರವಿ ಮೇಲೆ ಎರಗಿದ ಚಿರತೆ ಕೈಮತ್ತು ಕಾಲುಗಳಿಗೆ ಪರಚಿ ಹೊಡಿಹೊಗಿದೆ ಇನ್ನೊಂದು ಚಿರತೆ ಅಲ್ಲೆ ಪಕ್ಕ ಪಕ್ಕದಲ್ಲಿ ಇದ್ದ ವೃದ ಶಿವಣ್ಣನ ಮೇಲೆ ಎರಗಿ ಕಾಲು ಕುತ್ತಿಗೆ ಕೈ ತೊಡೆಯ ಭಾಗಕ್ಕೆ ಹಲ್ಲೆಮಾಡಿ ವೃದನನ್ನು ಎಳೆದುಕೊಂಡು ಹೊಗತ್ತಿದ್ದಾಗ ಪಕ್ಕದಲ್ಲಿ ಇದ್ದ ರವಿ ಅಕ್ಕಪಕ್ಕದ ಜನರನ್ನು ಕೂಗಿ ಕರೆದು ಚಿರತೆಯನ್ನು ದೊಣ್ಣೆ ಮತ್ತು ಮಚ್ಚುಗಳಿಂದ ಎದುರಿಸಿ ಹೊಡಿಸಿದ್ದಾರೆ ನಂತರ ವೃದನನ್ನು ಅಂಬೂಲೆನ್ಸ್ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರೆ ಇನ್ನಾದರೂ ಎಚ್ಚೆತ್ತು ಕೊಳ್ಳುತ್ತಾ ಅರಣ್ಣ ಇಲಾಖೆ ಇಷ್ಟು ದಿನ ದನಕರುಗಳ ಮೇಲೆ ಹಲ್ಲೆ ಮಾಡುತ್ತಿದ್ದ ಚಿರತೆಗಳು ಇಂದು ನರಮಾನವರ ಮೇಲೆ ಹಲ್ಲೆಗೆ ಮುಂದಾಗಿ .ಚಿರತೆ ಗಳನ್ನು ಹಿಡಿಯುವ ಅರಣ್ಯ ಅಧಿಕಾರಿಗಳು ಕ್ರಮ ಕೈಗೋಳತ್ತಾರ ಕಾದು ನೊಡಬೇಕಿದೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ದನಕರುಗಳ ಮೇಲೆ ದಾಳಿ ಮಾಡಿದರು ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ

Share this article

About Author

Madhu
Leave a comment

Write your comments

Visitors Counter

307577
Today
Yesterday
This Week
This Month
Last Month
All days
198
440
1876
638
11219
307577

Your IP: 216.73.216.110
2025-07-02 03:48

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles