ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆ.

ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ.

ಕೆ.ಆರ್.ಪೇಟೆ:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಅದ್ಯಕ್ಷ ಜಯರಾಮುರವರ ನೇತೃತ್ವದಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ನೂರಾರು ಎನ್.ಪಿ.ಎಸ್ ನೌಕರರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.ಸಂಘದ ಕಛೇರಿ ಯಿಂದ ಹೊರಟು ನಂತರ ತಾಲ್ಲೂಕು ಕಛೇರಿ ತಲುಪಿ ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅದ್ಯಕ್ಷ ಜಯರಾಮು ನೂತನ ಪಿಂಚಣಿ ವ್ಯವಸ್ಥೆಯಲ್ಲಿ ಹಲವಾರು ಲೋಪದೋಷಗಳು ಇದ್ದು ಅದು ನೌಕರರಿಗೆ ಮಾರಕವಾಗಿ ಪರಿಣಮಿಸಿದೆ. ಹೀಗೆ ನೌಕರರಿಗೆ ತೊಂದರೆಯಾಗಿರುವ ಈ ವ್ಯವಸ್ಥೆಯನ್ನು ಈ ಕೂಡಲೇ ಕೈ ಬಿಟ್ಟು 2006 ರ  ಹಿಂದಿನ ಹಿಂದಿನ ವ್ಯವಸ್ಥೆಯನ್ನು ಜಾರಿಗೆ ತಂದು ನೌಕರರು ಉತ್ತಮ ವಾತಾವರಣದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದರು. ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಈ ಕೂಡಲೇ ಅತ್ಯಂತ ಗಂಭೀರವಾದ ಈ ವಿಷಯದಲ್ಲಿ ಉತ್ತಮ ನಿರ್ದಾರ ಕೈಗೊಳ್ಳಬೇಕು ಎಂದು ಸರ್ಕಾರಿ ನೌಕರರ ಪದಾಧಿಕಾರಿಗಳು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪದ್ಮೇಶ್. ಖಜಾಂಚಿ ವೆಂಕಟೇಶ್. ತಾ. ಪ್ರಾ.ಶಾಶಿ ಸಂಘದ ಅದ್ಯಕ್ಷ ಶಿವರಾಮೇಗೌಡ.ಕಾರ್ಯದರ್ಶಿ ರವಿಕುಮಾರ್. ಮೋಹನ್ ಕುಮಾರಿ ಪೂರ್ಣ ಚಂದ್ರ ತೇಜಸ್ವಿ ಗ್ರಾ.ಶಿ.ಸಂಘ ದ ಜಿಲ್ಲಾದ್ಯಕ್ಷ  ಹೇಮಣ್ಣ.ಉಪನ್ಯಾಸಕರ ಸಂಘದ ಅದ್ಯಕ್ಷ ಗಿರೀಶ್. ಪದವೀಧರ ಶ.ಸಂ ಅದ್ಯಕ್ಷ ಮಹೇಶ್.ಕಾರ್ಯದರ್ಶಿ ಧನೇಂದ್ರಗೌಡ.ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ.ಸೇರಿದಂತೆ ನೂರಾರು ಸಂಖ್ಯೆಯ ಎನ್.ಪಿ.ಎಸ್.ನೌಕರರು ಹಾಜರಿದ್ದರು.

 

Share this article

About Author

Madhu
Leave a comment

Write your comments

Visitors Counter

307237
Today
Yesterday
This Week
This Month
Last Month
All days
298
936
1536
298
11219
307237

Your IP: 216.73.216.204
2025-07-01 21:08

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles