ಕರ್ನಾಟಕ ಪ್ರಾಂತ ರೈತ ಸಂಘ.ಜನವಾದಿ ಮಹಿಳಾ. ಸಂಘಟನೆ .ಎಸ್.ಎಫ್.ಐ.ಸಂಘಟನೆ ಗಳಿಂದ ಪ್ರತಿಭಟನೆ

ಸಂವಿಧಾನ ಪ್ರತಿಯನ್ನ ಸುಟ್ಟು ಹಾಕಿದ ಸಂಘಪರಿವಾರದ ನೀಚ ಕೃತ್ಯವನ್ನ ಖಂಡಿಸಿ. ಪ್ರಾಂತ ರೈತ ಸಂಘ.ಜನವಾದಿ ಮಹಿಳಾ ಸಂಘಟನೆ.ಎಸ್.ಎಫ್.ಐ.ನಿಂದ ಪ್ರತಿಭಟನೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಸಂಘಪರಿವಾರದ ನೀಚರು ಮೀಸಲಾತಿ ವಿರೋದಿಗಳು ದೇಶದ ಘನತೆಗೆ ನಮ್ಮ ಸಂವಿಧಾನವು ಒಂದು ಕಾರಣವಾಗಿರುವ ಸಂವಿಧಾನವನ್ನು ಸುಟ್ಟು ಹಾಕಿರುವ ಕ್ರಮವನ್ನು ಖಂಡಿಸಿ.ಮಳವಳ್ಳಿ ಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ.ಜನವಾದಿ ಮಹಿಳಾ. ಸಂಘಟನೆ .ಎಸ್.ಎಫ್.ಐ.ಸಂಘಟನೆ ಗಳಿಂದ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಮಾತನಾಡಿ ದೇಶದಲ್ಲಿ ಕೋಮುವಾದಿ .ಪುರೋಹಿತ ಶಾಹಿ ಹಾಗೂ ಮನುವಾದಿಗಳ ಕೊಳಕು ಮನಸ್ಥಿತಿಯ ನೀಚವ್ಯಕ್ತಿಗಳಿಂದ ಸಂವಿಧಾನದತ್ತ ಹಕ್ಕುಗಳನ್ನು ಮೊಟಕುಗೊಳಿಸಿ. ವರ್ಣಾಶ್ರಮ ಪದ್ದತಿಯ ಗುಲಾಮಗಿರಿಯ ವ್ಯವಸ್ಥೆಯನ್ನ ತರಲು ಯತ್ನಿಸುತ್ತಿದ್ದಾರೆ ಅದರ ಭಾಗವಾಗಿ ದೆಹಲಿಯಲ್ಲಿ ಮೀಸಲಾತಿ ವಿರೋದಿ ಹೋರಾಟದಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಅಂಬೇಡ್ಕರ್ ಗೆ ದಿಕ್ಕಾರ ಕೂಗಿ ಈ ದೇಶದ ಘನತೆಗೆ ಮತ್ತು ಜನತೆಗೆ ಅಪಮಾನ ಗೊಳಿಸಿದ್ದಾರೆ ಅದ್ದರಿಂದ ಈ ಮನುಷ್ಯ ವಿರೋದಿ RSS ,Bjp ಯ ದುಷ್ ಕೃತ್ಯವನ್ನು ಪ್ರಜ್ಞಾವಂತರು ಖಂಡಿಸಬೇಕು. ಎಂದರು ಆಹಾರದ ಹಕ್ಕಿನ ಮೇಲೆ ಧಾಳಿ. ಆಯ್ಕೆಯ ಹಕ್ಕು ಅಬಿವ್ಯಕ್ತಿ ಸ್ವಾತಂತ್ರ್ಯ. ದಾರ್ಮಿಕ ಹಕ್ಕು.ಧಾಳಿ ನಡೆಸಿ ದೇಶದ ಸೌಹಾರ್ದ ತೆಯನ್ನು ಹಾಳು ಮಾಡುತ್ತಿದ್ದಾರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಜನತೆಗೆ ರಕ್ಷಣೆ ಸಿಗುತ್ತಿಲ್ಲ ಮೋದಿಯೊಬ್ಬ ಜನ ವಿರೋಧಿ ಎಂದು ಆರೋಪಿಸಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾದ್ಯಕ್ಷರಾದ ದೇವಿ ಮಾತನಾಡಿ ದೇಶದಲ್ಲಿ ಮಹಿಳೆಯರು. ವಿದ್ಯಾರ್ಥಿಗಳು. ಹಾಗೂ ಮಕ್ಕಳು ಸೇರಿದಂತೆ ವಿಪರೀತ ಅತ್ಯಾಚಾರ. ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ.ರಾಜ್ಯದಲ್ಲಿ ಮಾಲೂರು .ಹಾವೇರಿ. ಬಾಗಲಕೋಟೆ ಮುಂತಾದಡೆ ಇಂತಹ ಘಟನೆಗಳು ನಡೆದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ .ಪ್ರತಿಯೊಬ್ಬ ನಾಗರಿಕನಿಗೆ ರಕ್ಷಣೆ ನೀಡುವುದರ ಬದಲು ಅಳುವ ಸರ್ಕಾರಗಳು ಅಪರಾಧಿಗಳ ರಕ್ಷಣೆಗೆ ನಿಂತಿದ್ದಾರೆ ಇಂತಹ ನೀತಿಗಳ ವಿರೋದಿಸಿ ಕೋಮುವಾದಿ ಸರ್ಕಾರ ವನ್ನ ಕಿತ್ತೆಸದು ಜನತೆಯನ್ನು ರಕ್ಷಿಸಬೇಕೆಂದರು.

ಪ್ರತಿಭಟನೆ ಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಸುಶೀಲಾ ಸನೀತಾ. ಪ್ರಮೀಳಾ. ಪದ್ಮಾ ಪ್ರಾಂತ ರೈತ ಸಂಘದ ಎಂ.ಡಿ.ಶಂಕರ್.ಜಯಲಕ್ಷ್ಮಿ. ಎಸ್ ಎಫ್ ಎಫ್ ನ ನಿವೇದಿತ . ಚಿನ್ಮಯಿ ಪೂಜಾ ಆಶಾ ಸಿ.ಐ.ಟಿ.ಯು ತಿಮ್ಮೇಗೌಡ. ಸಾಹಿತಿಗಳಾದ ಎಂ.ಬಸಪ್ಪ. ವಕೀಲರಾದ ತೇಜಸ್ವಿನಿ ಭಾಗವಹಿಸಿದ್ದರು.

Share this article

About Author

Madhu
Leave a comment

Write your comments

Visitors Counter

336160
Today
Yesterday
This Week
This Month
Last Month
All days
585
951
2279
2050
14750
336160

Your IP: 216.73.216.24
2025-09-03 12:10

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles