ನಾಲೆಗಳಲ್ಲಿ ನೀರು ಬಿಟ್ಟರೆ ಸಾಲದು ಅದು ಸರಿಯಾಗಿ ಹರಿಯುತ್ತಿದೆಯೆ ಎಂದು ರಾತ್ರಿ ವೇಳೆ ಗಸ್ತು ಮಾಡಿ ಎಂದ ಸಚಿವರು.

ನಾಲೆಗಳಲ್ಲಿ ನೀರು ಬಿಟ್ಟರೆ ಸಾಲದು ಅದು ಸರಿಯಾಗಿ ಹರಿಯುತ್ತಿದೆಯೆ ಎಂದು ರಾತ್ರಿ ವೇಳೆ ಗಸ್ತು ಮಾಡಬೇಕೆಂದು ಶಾಸಕ ಡಾ.ಕೆ ಅನ್ನದಾನಿ ಅಧಿಕಾರಿಗಳಿಗೆ ಸೂಚಿಸಿದರು.       ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಾಗೇಪುರ ಗೇಟ್ ಬಳಿ ಇರುವ ಕೆ.ಆರ್.ಎಸ್.ಎಂ ಮತ್ತು ಎಂಐಪಿ ವಿಭಾಗ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ  ಕಚೇರಿಯಲ್ಲಿ ಶಾಸಕ ಡಾ.ಅನ್ನದಾನಿರವರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರ ಸಭೆಯಲ್ಲಿ ಮಾತ‌ನಾಡಿ, ರಾತ್ರಿಗಸ್ತು ವೇಳೆಯಲ್ಲಿ  ಪೊಲೀಸ್ ಸೆಕ್ಯೂರಿಟಿ  ಬೇಕಾದರೆ ತೆಗೆದುಕೊಳ್ಳಿ ಎಂದರು.  ಇನ್ನೂ  ಸತ್ತೇಗಾಲದಿಂದ ಇಗ್ಗಲೂರು ಗ್ರಾಮದವರೆಗೂ 450 ಕೋಟಿ ರೂ ರಾಮನಗರ ಜಿಲ್ಲೆಗೆ ಕುಡಿಯುವ ನೀರು ಯೋಜನೆಯಾಗುತ್ತಿದೆ ಅದಕ್ಕೆ ನಮ್ಮ ತಾಲ್ಲೂಕಿನ ಜನರಿಗೆ ನೀರು ತಲುಪುವ ವ್ಯವಸ್ಥೆಯ ಯೋಜನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ಎಲ್ಲಾನಾಲೆಗಳಿಗೂ ಹರಿದು ಈ ಬಾರಿ  ರೈತರ ಬೆಳೆಯನ್ನು ಬೆಳೆಯುವುದಕ್ಕೆ ನೀರು ನೀಡಬೇಕು  ಅದಲ್ಲದೆ  ರೈತರಿಗೂ ಬೆಳೆ ಬೆಳೆಯುವ ಬಗ್ಗೆ  ಮನವರಿಕೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಮುಗಿದ ಬಳಿಕ ಆಗಸನಪುರ, ಹುಸ್ಕೂರು ಬಳಿ ನಾಲೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲಾಯಿತು.   ಕಾವೇರಿ ನೀರಾವರಿ ನಿಗಮದ ಇಇ ರಾಮಕೃಷ್ಣ, ಜಿ.ಪಂ ಸದಸ್ಯ ರವಿ,  ಸಿದ್ದರಾಜು ಸೇರಿದಂತೆ ಎಲ್ಲಾ ಸಬ್ ಡಿವಿಜನ್ ನ ಇಂಜಿನಿಯರ್ ಗಳು ಹಾಜರಿದ್ದರು.

Share this article

About Author

Madhu
Leave a comment

Write your comments

Visitors Counter

307700
Today
Yesterday
This Week
This Month
Last Month
All days
321
440
1999
761
11219
307700

Your IP: 216.73.216.110
2025-07-02 06:51

Last posts

ನಮ್ಮ ಬಗ್ಗೆ

 

 ಸುದ್ದಿಜಾಲ 
  ಮಧು ಕುಮಾರ್. ಎನ್. ಎಂ.
  ಕೆ.ಆರ್.ಪೇಟೆ .ಮಂಡ್ಯ 571436

ಚಂದಾದಾರರಾಗಿ

Subscribe Suddijaala.com and receive newsletter with updated news and articles