Print this page

ಇಂಜಿನಿಯರ್ ಕಾಲೇಜು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯ

ಪರೀಕ್ಷೆಯಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದ ಕಾರಣಕ್ಕೆ ಮನನೊಂದ  ನಾಗಮಂಗಲ ಬಿಜಿಎಸ್ ಇಂಜಿನಿಯರ್

ಕಾಲೇಜು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ  ಶರಣಾದ ಘಟನೆ ನಡೆದಿದೆ.  ನಾಗಮಂಗಲ ತಾಲ್ಲೂಕು ಬೆಳ್ಳೂರಿನ ಬಿಜಿಎಸ್ ಇಂಜಿನಿಯರ್ ಕಾಲೇಜಿನ  ಅಂತಿಮ ವರ್ಷದ ವಿದ್ಯಾರ್ಥಿನಿ ಕಾವ್ಯಶ್ರೀ ಬಿಜಿಎಸ್ ಬಾಲಕೀಯರ ಹಾಸ್ಟೆಲ್ ನ ಕೊಠಡಿಯೊಂದರಲ್ಲಿ ಪ್ಯಾನ್ ಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೆ ಆರ್ ಪೇಟೆ ತಾಲ್ಲೂಕಿನ ಶೀಳ ನೆರೆ ಹೋಬಳಿ  ಮರಡಹಳ್ಳಿ ಗ್ರಾಮದ ಜಯರಾಮೇಗೌಡ ಎಂಬುವರ ಪುತ್ರಿಯಾದ ಕಾವ್ಯಶ್ರೀ 

  ಬೆಳ್ಳೂರಿನ ಬಿಜಿಎಸ್ ಇಂಜಿನೀಯರ್ ಕಾಲೇಜಿನಲ್ಲಿ   ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು ಸೋಮವಾರ ನಡೆದ ಪರೀಕ್ಷಯೊಂದರಲ್ಲಿ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದಳು. ಇದರಿಂದ ಮಂಗಳವಾರ ನಡೆಯುತ್ತಿದ್ದ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ ಇದರಿಂದ ಮನನೊಂದ ವಿದ್ಯಾರ್ಥಿನಿ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಈ ಸಂಬಂದ ಬೆಳ್ಳೂರು ಠಾಣೆ ಪೋಲಿಸರು ಸ್ಥಳಕ್ಕೆ ಬೇಟಿ ಕೊಟ್ಟು ಪ್ರಕರಣ ದಾಖಲಿಸಿಕೊಂಡು  ಮುಂದಿನ ಕ್ರಮ ವಹಿಸಿದ್ದಾರೆ.

Last modified on 19/07/2018

Share this article

About Author

Super User